ಪ್ರತಿನಿಧಿ ನೇಮಿಸಿ ವಿವಾದಕ್ಕೆ ಗುರಿಯಾದ ಸಂಸದ ಸನ್ನಿ ದೇವಲ್, ವ್ಯಾಪಕ ಟೀಕೆ
Team Udayavani, Jul 2, 2019, 4:04 PM IST
ಹೊಸದಿಲ್ಲಿ : ಲೋಕಸಭೆಗೆ ಹೊಸದಾಗಿ ಚುನಾಯಿತರಾಗಿರುವ ಬಿಜೆಪಿ ಸಂಸದ ಸನ್ನಿ ದೇವಲ್ ಅವರು ತನ್ನ ಗುರುದಾಸ್ಪುರ ಸಂಸದೀಯ ಕ್ಷೇತ್ರದ ಸಕಲ ಸಂಗತಿ, ಸಮಸ್ಯೆಗಳನ್ನು ನಿಭಾಯಿಸಲು ತನ್ನ ಪ್ರತಿನಿಧಿಯೊಬ್ಬರನ್ನು ನೇಮಿಸಿರುವುದು ವ್ಯಾಪಕ ವಿವಾದ, ಟೀಕೆ, ಖಂಡನೆಗೆ ಅವಕಾಶ ಮಾಡಿಕೊಟ್ಟಿದೆ.
ಚಿತ್ರನಟನಾಗಿದ್ದು ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಸನ್ನಿ ದೇವಲ್ ತಮ್ಮ ಅಧಿಕೃತ ಲೆಟರ್ ಹೆಡ್ ನಲ್ಲಿ ಕಳೆದ ಜೂನ್ 26ರಂದು ಬರೆದಿರುವ ಪತ್ರದಲ್ಲಿ ಹೀಗೆ ಹೇಳಿದ್ದಾರೆ :
“ನನ್ನ ಗುರುದಾಸ್ಪುರ ಸಂಸದೀಯ ಕ್ಷೇತ್ರದ ಸಕಲ ಸಭೆಗಳಲ್ಲಿ ನನ್ನ ಪರವಾಗಿ ಭಾಗವಹಿಸಲು, ಮತ್ತು ಕ್ಷೇತ್ರದ ಯಾವತ್ತೂ ಸಂಗತಿಗಳು ಮತ್ತು ಸಮಸ್ಯೆಗಳನ್ನು ನಿಭಾಯಿಸಿ ಕೆಲಸ ಕಾರ್ಯ ಕೈಗೊಳ್ಳಲು, ನಾನು ಈ ಮೂಲಕ ಪಂಜಾಬ್ ನ ಮೊಹಾಲಿ ಜಿಲ್ಲೆಯ ಪಲಹೇರಿ ಗ್ರಾಮದ ನಿವಾಸಿ, ಸುಪೀಂದರ್ ಸಿಂಗ್ ಅವರ ಪುತ್ರ ಗುರುಪ್ರೀತ್ ಸಿಂಗ್ ಪಲಹೇರಿ ಅವರನ್ನು ನನ್ನ ಪ್ರತಿನಿಧಿಯಾಗಿ, ನೇಮಿಸಿದ್ದೇನೆ’.
ಸನ್ನಿ ದೇವಲ್ ಅವರ ಈ ಪ್ರತಿನಿಧಿ ನೇಮಕಾತಿ ಪತ್ರ ಬಹಿರಂಗವಾಗುತ್ತಲೇ ಕಾಂಗ್ರೆಸ್ ಪಕ್ಷ ಅವರನ್ನು ಕಟವಾಗಿ ಟೀಕಿಸಿದೆ.
‘ದೇವಲ್ ಅವರನ್ನು ಮತದಾರರು ಆಯ್ಕೆ ಮಾಡಿರುವುದು ಕೇವಲ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕಾಗಿ ಎಂಬುದೀಗ ಸಾಬೀತಾಗಿದೆ. ಮಾರ್ಕೆಟಿಂಗ್ ತತ್ವ ಪ್ರಕಾರ ಗ್ರಾಹಕ ಯಾವತ್ತೂ ಸರಿ; ಅಂತೆಯೇ ಪ್ರಜಾಸತ್ತೆಯಲ್ಲಿ ಮತದಾರನೇ ಸರಿ; ಇದನ್ನು ಈಗ ಎಲ್ಲರೂ ಒಪ್ಪಬೇಕಾಗುತ್ತದೆ. ಮತದಾರರು ಸನ್ನಿ ದೇವಲ್ ಅವರಿಂದ, ಸೆಲ್ಫಿ ಬಿಟ್ಟರೆ ಬೇರೇನನ್ನೂ ಬಯಸಿರಲಿಲ್ಲ ಎಂಬುದೀಗ ಸ್ಪಷ್ಟವಾಗಿದೆ’ ಎಂದು ಕಾಂಗ್ರೆಸ್ ನಾಯಕ ಸುನೀಲ್ ಜಾಖಡ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ
Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ
ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ಮುಖಂಡೆ