ಅಡಿಕೆ ನಿಷೇಧದ ಬಗ್ಗೆ ಬೆಳೆಗಾರರು ಯಾವುದೇ ಗೊಂದಲ ಪಡಬೇಕಾಗಿಲ್ಲ : ನಳಿನ್

ವಿಟ್ಲ : ಬಿಜೆಪಿ ಕಾರ್ಯಕರ್ತರಿಗೆ, ಪೇಜ್ ಪ್ರಮುಖರಿಗೆ, ಮತದಾರ ಬಾಂಧವರಿಗೆ ಅಭಿನಂದನೆ

Team Udayavani, Jul 14, 2019, 4:57 PM IST

bjp

ವಿಟ್ಲ: ಸಮ್ಮಾನ ಅಭಿನಂದನೆಗಳು ಕಾರ್ಯಕರ್ತರಿಗೆ ಸಲ್ಲಬೇಕಾಗಿದ್ದು, ಅವರ ಪರಿಶ್ರಮದ ಫಲವಾಗಿ ನಮ್ಮ ವಿಜಯವಾಗಿದೆ. ಭ್ರಷ್ಟಾಚಾರದಿಂದ ಬೇಸತ್ತಿದ್ದ ಮತದಾರರು ಮೋದಿಯವರನ್ನು ಆಯ್ಕೆ ಮಾಡಿದ್ದಾರೆ. ವಿಸ್ತಾರವಾದ ಆಡಳಿತ ವ್ಯವಸ್ಥೆಯಲ್ಲಿ ಲೋಕಸಭಾ ಸದಸ್ಯನ ಇತಿ ಮಿತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ಅಡಿಕೆ ನಿಷೇಧದ ಬಗ್ಗೆ ಬೆಳೆಗಾರರು ಯಾವುದೇ ಗೊಂದಲ ಪಡಬೇಕಾಗಿಲ್ಲ. ಅಡಿಕೆ ಆಹಾರ ವಸ್ತು ಎಂದು ಘೋಷಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಅವರು ರವಿವಾರ ಭಾರತೀಯ ಜನತಾ ಪಾರ್ಟಿ ವಿಟ್ಲ ನಗರ ಸಮಿತಿ ವತಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ದುಡಿದ ಕಾರ್ಯಕರ್ತರಿಗೆ, ಕಾರ್ಯಕರ್ತರಿಗೆ, ಪೇಜ್ ಪ್ರಮುಖರಿಗೆ ಹಾಗೂ ಮತದಾರ ಬಾಂಧವರಿಗೆ ಏರ್ಪಡಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕ ಸರ್ಕಾರದ ಒಂದು ವರ್ಷದ ಆಡಳಿತ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡಿಲ್ಲ. ಕೇವಲ ಅಧಿಕಾರ ರಾಜಕಾರಣ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಬೊಕ್ಕಸದಲ್ಲಿ ಹಣವೂ ಇಲ್ಲದ ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್ ಶಾಸಕರಿಗೆ ಅವರ ನಾಯಕರ ಮೇಲೆಯೇ ವಿಶ್ವಾಸ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಒಂದು ತಿಂಗಳ ಒಳಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವುದು ನಿಶ್ಚಿತ ಎಂದು ಅವರು ಹೇಳಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ವ್ಯಕ್ತಿಗತ ಪ್ರತಿಷ್ಠೆಗಿಂತ ದೇಶದ ಹಿತ ಮುಖ್ಯ ಎಂಬುದನ್ನು ತಿಳಿಯಬೇಕು. 2019ನೇ ವರ್ಷ ಬಿಜೆಪಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನಗಳು. ದೇಶದ ಏಕತೆ, ಸಮಗ್ರತೆಗಾಗಿ ಕಾರ್ಯಕರ್ತರು ದುಡಿದು ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಿದ್ದಾರೆ. ಎಲ್ಲರ ವಿಕಾಸವನ್ನು ಬಯಸಿದ ಪ್ರಧಾನಿ, ಕಟ್ಟ ಕಡೆಯ ವ್ಯಕ್ತಿಗೂ ಅಗತ್ಯವಾದ ಯೋಜನೆಯನ್ನು ನೀಡಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಗೆ ತಂತ್ರ ಕುತಂತ್ರ ಮಾಡಿ ಅಧಿಕಾರ ಮಾಡುವ ಅಗತ್ಯವಿಲ್ಲ. ಸ್ವ ಇಚ್ಛೆಯಿಂದ ಬರುವವರವನ್ನು ಸ್ವಾಗತಿಸದೆ, ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಯಾಕೆಂದರೆ ನಾವು ಸನ್ಯಾಸಿಗಳಲ್ಲ. ಜನರ ಪ್ರೀತಿ ವಿಶ್ವಾಸವನ್ನು ಉಳಿಸಿ ಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ ಕುಮಾರಸ್ವಾಮಿ ಮತ್ತು ತಂಡಕ್ಕೆ ದುಡ್ಡು ಮಾಡಲೆಂದೇ ಅಧಿಕಾರದ ಬೇಕಾಗಿದೆ. ಬಿಜೆಪಿಗೆ ಅಂತಹ ಅಧಿಕಾರ ವ್ಯಾಮೋಹವಿಲ್ಲ. ಹಾಗೆಂದು ಪಕ್ಷಕ್ಕೆ ಬರುವವರನ್ನು ಸ್ವಾಗತಿಸದೆ ಸುಮ್ಮನೆ ಕೂರುವುದೂ ಇಲ್ಲ. ಕಾರ್ಯಕರ್ತರು ಬಿಜೆಪಿಯ ಆಧಾರ ಸ್ತಂಭಗಳಾಗಿದ್ದು, ಅವರ ಕಾರ್ಯ ಅಭಿನಂದನೀಯವಾದದ್ದು ಎಂದು ತಿಳಿಸಿದರು.

ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜೀವ ಭಂಡಾರಿ, ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಂತ ನಾಯ್ಕ ವಿಟ್ಲ, ಮಂಡಲ ಪ್ರಧಾನ ಕಾರ್ಯದರ್ಶಿ ಶಂಭು ಭಟ್, ಜಗನ್ನಾಥ ಸಾಲ್ಯಾನ್, ನಗರ ಸಮಿತಿ ಕಾರ್ಯದರ್ಶಿ ಉದಯಕುಮಾರ್ ಆಲಂಗಾರು, ವಿಟ್ಲ ಕಡಂಬು ಸಾಯಿಗಣೇಶ್ ಇಂಡೇನ್ ಗ್ಯಾಸ್ ಮಾಲಕ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಉಪಸ್ಥಿತರಿದ್ದರು.

ಪಕ್ಷದ ಹಿರಿಯ ಕಾರ್ಯಕರ್ತರಾದ ಸಂಕಪ್ಪ ಗೌಡ, ಜತ್ತಪ್ಪ ಗೌಡ ನಾಯ್ತೊಟ್ಟು, ವಿ.ರಮಾನಾಥ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು. ಪ್ರಧಾನ ಮಂತ್ರಿಗಳ ಉಜ್ವಲ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಯಿತು.18ನೇ ವಾರ್ಡಿನ ಪೇಜು ಪ್ರಮುಖರನ್ನು ಗೌರವಿಸಲಾಯಿತು. ದೇಶ ಪ್ರೇಮಿ ಇಬ್ರಾಹಿಂ ಮಾಮೇಶ್ವರ ಅವರ ಮೊಬೈಲ್ ಟೀ ಕ್ಯಾಂಟೀನ್‌ಗೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು.

ನಗರ ಸಮಿತಿ ಅಧ್ಯಕ್ಷ ಮೋಹನದಾಸ ಉಕ್ಕುಡ ಸ್ವಾಗತಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ ವಂದಿಸಿದರು. ಹರೀಶ್ ಕೆ. ನಿರೂಪಿಸಿದರು.

ಟಾಪ್ ನ್ಯೂಸ್

1-ewwe-wewqe

BJP-TMC ಭಾರೀ ಘರ್ಷಣೆ: ಬಿಜೆಪಿ ಮಹಿಳಾ ಕಾರ್ಯಕರ್ತೆ ಸಾವು

naksal (2)

Chhattisgarh;ಮತ್ತೆ ಏಳು ನಕ್ಸಲರ ಹತ್ಯೆ: 112ಕ್ಕೇರಿದ ಮೃತರ ಸಂಖ್ಯೆ

rahul gandhi

BJP ಸ್ತ್ರೀಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದೆ :ರಾಹುಲ್‌

kejriwal

AAP; ನನ್ನ ಅಪ್ಪ-ಅಮ್ಮನಿಗೇಕೆ ಹಿಂಸೆ ನೀಡುತ್ತಿರುವಿರಿ?: ಪ್ರಧಾನಿಗೆ ಕೇಜ್ರಿ ಪ್ರಶ್ನೆ

1-asasa

842 ರೈತರ ಆತ್ಮಹತ್ಯೆ: ಅಧ್ಯಯನಕ್ಕೆ ಮುಖ್ಯಮಂತ್ರಿ ಸೂಚನೆ

ಸಂಸದ ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿ: ಪ್ರಧಾನಿಗೆ ಸಿಎಂ ಮನವಿ

ಸಂಸದ ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿ: ಪ್ರಧಾನಿಗೆ ಸಿಎಂ ಮನವಿ

Minchu

Belagavi; ಸಿಡಿಲು ಬಡಿದು ಇಬ್ಬರು ಸಾವು: ಐವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-up

Uppinangady ಟ್ರಾಫಿಕ್‌ ಜಾಮ್‌ : 2 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ

ಬಿ.ಸಿ.ರೋಡುನಲ್ಲಿ ಕಳ್ಳತನಕ್ಕೆ ಬೀಳದ ಕಡಿವಾಣ; ಬಸ್ಸೇರುತ್ತಿದ್ದ ಮಹಿಳೆಯ  ಚಿನ್ನ ಕಳವು

ಬಿ.ಸಿ.ರೋಡುನಲ್ಲಿ ಕಳ್ಳತನಕ್ಕೆ ಬೀಳದ ಕಡಿವಾಣ; ಬಸ್ಸೇರುತ್ತಿದ್ದ ಮಹಿಳೆಯ ಚಿನ್ನ ಕಳವು

Heart attack: ಕೂಲಿ ಕಾರ್ಮಿಕನ ಸಾವಿನ ಕಾರಣ ಹೃದಯಾಘಾತ

Heart attack: ಕೂಲಿ ಕಾರ್ಮಿಕನ ಸಾವಿನ ಕಾರಣ ಹೃದಯಾಘಾತ

Arrested: ಶಿಬಾಜೆ ಬೇಟೆಗೆ ಯತ್ನ; ಮೂವರ ಬಂಧನ

Arrested: ಶಿಬಾಜೆ ಬೇಟೆಗೆ ಯತ್ನ; ಮೂವರ ಬಂಧನ

Sullia: ವಿದ್ಯಾರ್ಥಿನಿಗೆ ಕಿರುಕುಳ ಆರೋಪ

Sullia: ವಿದ್ಯಾರ್ಥಿನಿಗೆ ಕಿರುಕುಳ ಆರೋಪ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-ewwe-wewqe

BJP-TMC ಭಾರೀ ಘರ್ಷಣೆ: ಬಿಜೆಪಿ ಮಹಿಳಾ ಕಾರ್ಯಕರ್ತೆ ಸಾವು

gold

Gold ಬೆಲೆ ಪ್ರತೀ 10 ಗ್ರಾಂಗೆ 1,000 ರೂ.ನಷ್ಟು ಇಳಿಕೆ

naksal (2)

Chhattisgarh;ಮತ್ತೆ ಏಳು ನಕ್ಸಲರ ಹತ್ಯೆ: 112ಕ್ಕೇರಿದ ಮೃತರ ಸಂಖ್ಯೆ

rahul gandhi

BJP ಸ್ತ್ರೀಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದೆ :ರಾಹುಲ್‌

kejriwal

AAP; ನನ್ನ ಅಪ್ಪ-ಅಮ್ಮನಿಗೇಕೆ ಹಿಂಸೆ ನೀಡುತ್ತಿರುವಿರಿ?: ಪ್ರಧಾನಿಗೆ ಕೇಜ್ರಿ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.