ಮಗಳನ್ನು ನೋಡಲೆಂದು ತೆರಳುತ್ತಿದ್ದವರು ಅಪಘಾತಕ್ಕೆ ಬಲಿಯಾದರು
Team Udayavani, Sep 2, 2019, 2:27 PM IST
ಸುಳ್ಯ: ಇಂದು ಮುಂಜಾನೆ ಕೌಡಿಚಾರ್ ಮಡ್ಯಂಗಳದಲ್ಲಿ ಕಾರು ಹೆದ್ದಾರಿ ಪಕ್ಕದ ಕೆರೆಗೆ ಉರುಳಿ ದುರಂತ ಅಂತ್ಯ ಕಂಡ ಅಶೋಕ್ ನಿಡ್ಯಮಲೆ ಕುಟುಂಬ ಮೂಡಬಿದಿರೆಯಲ್ಲಿ ಓದುತ್ತಿರುವ ತಮ್ಮ ಹಿರಿಮಗಳನ್ನು ಕಾಣಲೆಂದು ಹೋಗುತ್ತಿದ್ದರೆಂದು ತಿಳಿದುಬಂದಿದೆ.
ಭಾಗಮಂಡಲದ ನಿಡ್ಯಮಲೆಯವರಾದ ಅಶೋಕ್ ಮಡಿಕೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದಾರೆ. ಅವರ ಪತ್ನಿ ಶ್ರೀಮತಿ ಹೇಮಲತ ಅವರು ಶುಂಠಿಕೊಪ್ಪದಲ್ಲಿ ಶಿಕ್ಷಕಿಯಾಗಿರುವುದರಿಂದ ಅಶೋಕ್ ಕುಟುಂಬ ಶುಂಠಿಕೊಪ್ಪದಲ್ಲೇ ಮನೆ ಮಾಡಿ ನೆಲೆಸಿತ್ತು.
ಅಶೋಕ್ ದಂಪತಿಯ ಹಿರಿಯ ಪುತ್ರಿ ಪ್ರಕೃತಿ ಎನ್.ಎ. ಮೂಡಬಿದ್ರೆಯಲ್ಲಿ ಕಾಲೇಜು ವ್ಯಾಸಾಂಗ ಮಾಡುತ್ತಿದ್ದರು. ಇಂದು ಗಣೇಶ ಚತುರ್ಥಿ ಪ್ರಯುಕ್ತ ರಜೆ ಇದ್ದ ಕಾರಣ ಮಗಳನ್ನು ಕಾಣಲೆಂದು ಅಶೋಕ್ ದಂಪತಿ ತಮ್ಮ ಇನ್ನಿಬ್ಬರು ಮಕ್ಕಳ ಸಹಿತ ಮೂಡಬಿದಿರೆಗೆ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು, ದಾರಿಮಧ್ಯೆ ಮಡ್ಯಂಗಳದಲ್ಲಿ ಕಾದಿದ್ದ ಜವರಾಯ ನಾಲ್ವರನ್ನೂ ಸೆಳೆದೊಯ್ದಿದ್ದಾನೆ.
ಹೆದ್ದಾರಿ ಇಲಾಖೆ ಮತ್ತು ಸ್ಥಳೀಯಾಡಳಿತದ ನಿರ್ಲಕ್ಷ್ಯಕ್ಕೆ ನಾಲ್ಕು ಅಮಾಯಕ ಜೀವಗಳು ಬಲಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya Pradesh; ರಾಹುಲ್ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ!
Kodaikanal – Ooty ಪ್ರವಾಸಕ್ಕೆ ಇ-ಪಾಸ್ ಕಡ್ಡಾಯ: ಹೈಕೋರ್ಟ್
Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್ ಚರ್ಚೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
Fazal ur Rehman; ಭಾರತ ಸೂಪರ್ಪವರ್, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ