ಪೊಲೀಸರಿಗೆ ಕರೆ ಮಾಡಿ ಪಿಜ್ಜಾ ತಂದುಕೊಡ್ತೀರಾ? ಮೊಬೈಲ್ ರೀಜಾರ್ಜ್ ಮಾಡ್ತೀರಾ? ಕೇಳ್ತಾರೆ!
ದಿಲ್ಲಿ ಪೊಲೀಸ್ ಹೆಲ್ಪ್ ಲೈನ್ ಗೆ ಕಿಡಿಗೇಡಿಗಳ ಕಾಟ
Team Udayavani, Sep 17, 2019, 6:00 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಜನರಿಗೆ ಉಪಯೋಗವಾಗಲಿ, ತುರ್ತು ಸಂದರ್ಭದಲ್ಲಿ ನೆರವಿಗೆ ಅಂತ ಪೊಲೀಸ್ ಹೆಲ್ಪ್ ಲೈನ್ ಅಂತ ಶುರುಮಾಡಿದ್ರೆ. ಈಗ ಪೊಲೀಸರಿಗೆ ಕೆಟ್ಟ ಕರೆಗಳಿಂದ ಸಾಕು ಸಾಕಾಗಿ ಹೋಗಿದೆ. ಇಂಥದ್ದೊಂದು ವಿಚಿತ್ರ ಸಮಸ್ಯೆಗೆ ಸಿಲುಕಿದ್ದು ದಿಲ್ಲಿ ಪೊಲೀಸರು.
ದಿಲ್ಲಿ ರೈಲ್ವೇ ನಿಲ್ದಾಣದಲ್ಲಿ ಹೆಲ್ಪ್ ಲೈನ್ ಶುರುಮಾಡಿದ್ದು, ಇದಕ್ಕೆ ಶೇ.80ರಷ್ಟು ಕರೆಗಳು ಮೊಬೈಲ್ ರೀಜಾರ್ಜ್ ಮಾಡಿಕೊಡಿ, ಇಂಟರ್ನೆಟ್ ಪ್ಯಾಕ್ ಖಾಲಿಯಾಗಿದೆ, ಪಿಜ್ಜಾ, ಬರ್ಗರ್ ತಂದ್ಕೊಡ್ತೀರಾ? ಸಿಮ್ ಲಾಕ್ ಆಗಿದೆ ಎನ್ನುವ ದೂರುಗಳೇ ಇರುತ್ತವಂತೆ.
ನಿತ್ಯ 200ರಷ್ಟು ಕರೆಗಳು ಬಂದರೆ ಅವುಗಳಲ್ಲಿ ಶೇ.80ರಷ್ಟು ಕರೆಗಳು ಅನಪೇಕ್ಷಿತ ಕರೆಗಳೇ. ಇದರಿಂದ ನೈಜ ದೂರಿನ ಕರೆಗಳಿಗೆ ಸ್ಪಂದಿಸುವುದು ಸವಾಲಾಗಿದೆ. ಅಷ್ಟೇ ಅಲ್ಲದೇ ಅನಪೇಕ್ಷಿತ ಕರೆಗಳಿಗೆ ಉತ್ತರಿಸುವುದೂ ಒಂದು ಸವಾಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೀಗೆ ಕೆಟ್ಟ, ಕೀಟಲೆ ಕರೆಗಳು ಗುರುಗ್ರಾಮ, ಗಾಜಿಯಾಬಾದ್ ಗಳಿಂದ ಹೆಚ್ಚಾಗಿ ಬರುತ್ತವಂತೆ. ಗ್ರಾಹಕರ ಸೇವಾ ಕೇಂದ್ರವಾದ್ದರಿಂದ ಅಲ್ಲಿನ ಸಿಬಂದಿ ಶಾಂತಚಿತ್ತರಾಗಿಯೇ ಕರೆಗಳಿಗೆ ಪ್ರತಿಕ್ರಿಯೆ ನೀಡಿ ಅವರ ಬೇಡಿಕೆಗಳನ್ನು ನಿರಾಕರಿಸುತ್ತಿದ್ದಾರಂತೆ. ಇದರಿಂದ ಪ್ರಯಾಣಿಕರ ದೂರುಗಳು ವಿಶೇಷವಾಗಿ ಕಳವು, ನಿಲ್ದಾಣದಲ್ಲಿ ಸಮಸ್ಯೆ, ಜಗಳ, ಕ್ರಿಮಿನಲ್ ಅಪರಾಧಗಳು ನಡೆದಾಗ ಕರೆಗಳು ಸ್ವೀಕರಿಸುವುದು ನಿಧಾನವಾಗುತ್ತಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!