ಭಾರತ ಬದಲಾಗಿದೆ, ಭೂಪಟವೂ ಬದಲಾಗಲಿದೆ: ಡಾ| ತೇಜಸ್ವಿನಿ ಗೌಡ


Team Udayavani, Sep 30, 2019, 5:00 AM IST

2909KDLM14PH

ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬದಲಾಗಿದೆ. ಭಾರತದ ಭೂಪಟವೂ ಬದಲಾಗಲಿದೆ. ಈ ಹಿಂದೆ ಮತಬ್ಯಾಂಕಿನ ತುಷ್ಟೀಕರಣಕ್ಕಾಗಿ ಭಾರತದ ಭೂಭಾಗಗಳನ್ನು ಮನಬಂದಂತೆ ಹಂಚಿದಂತೆ ಇನ್ನು ಮುಂದೆ ನಡೆಯುವುದಿಲ್ಲ. ನಮ್ಮ ದೇಶದ ಭೂಭಾಗಗಳು ನಮ್ಮ ಕೈಯಲ್ಲೇ ಇರಲಿವೆ ಎಂದು ವಿಧಾನ ಪರಿಷತ್‌ ಸದಸ್ಯೆ ಡಾ| ತೇಜಸ್ವಿನಿ ಗೌಡ ಹೇಳಿದರು.

ರವಿವಾರ ಇಲ್ಲಿನ ಹರಿಪ್ರಸಾದ್‌ ಹೋಟೆಲ್‌ನ ಅತಿಥಿ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನಡೆದ ಒಂದು ದೇಶ ಒಂದು ಸಂವಿಧಾನ; 370 ವಿಧಿ ರದ್ದತಿ ಕುರಿತು ಜಾಗೃತಿ ಅಭಿಯಾನದಲ್ಲಿ ಉಪನ್ಯಾಸ ನೀಡಿದರು.

ಭಾರತದ ಭಾಗಗಳನ್ನು ಚೀನಾ ಹಾಗೂ ಪಾಕ್‌ ಆಕ್ರಮಿಸಿಕೊಂಡಿವೆ. ನಮ್ಮ ಸೈನಿಕರ ಮೇಲೆ ನಮ್ಮವರೇ ಆಕ್ರಮಣ ಮಾಡುವಂತೆ ಪ್ರಚೋದಿಸುವಾಗ ಕೈಕಟ್ಟಿ ಕೂರುವುದು ಸಾಧ್ಯವೇ ಇಲ್ಲ. ಪಾಕ್‌ ನಮಗೆ ಸಮ ಅಲ್ಲ. ನಮಗೆ ಸವಾಲು ಚೀನಾ. ಆದ್ದರಿಂದ ರಾಜತಾಂತ್ರಿಕವಾಗಿ ಹೆಜ್ಜೆ ಇಡುವಾಗ ಪ್ರಪಂಚದ ಇತರ ರಾಷ್ಟ್ರಗಳ ಕಡೆಗೂ ಎಚ್ಚರಿಕೆ ಇರಬೇಕಾಗುತ್ತದೆ. ಈ ದೃಷ್ಟಿಯಲ್ಲಿ ಮೋದಿಯವರು ಹತ್ತಾರು ದೇಶ ಸುತ್ತಿದರು. ಇದರ ಫ‌ಲವಾಗಿ 54 ಇಸ್ಲಾಂ ರಾಷ್ಟ್ರಗಳು ನಮ್ಮ ಯೋಧ ಅಭಿನಂದನ್‌ ಸೆರೆ ಸಂದರ್ಭವೂ ಸೇರಿದಂತೆ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕಲು ಬೆಂಬಲ ನೀಡಿದವು. ನಮ್ಮ ತಾಳ್ಮೆಗೂ ಮಿತಿ ಇದೆ. ಕಣ್ಣೆದುರೇ ಇದ್ದರೂ ನಮ್ಮಲ್ಲಿ ಸಾಕಷ್ಟು ವ್ಯವಸ್ಥೆ ಇದ್ದರೂ ದಾಳಿ ಮಾಡಿದ ಶತ್ರು ದೇಶದವರನ್ನು ಕೊಲ್ಲು ಎನ್ನದ ಸರಕಾರ ನಮಗೆ ಬೇಕಾಗಿಲ್ಲ. ಆದ್ದರಿಂದ ಜನತೆ ನೀಡಿದ ಬಹುಮತವನ್ನು ಮೋದಿ ಸರಕಾರ ಜಾಣ್ಮೆಯಿಂದ ಬಳಸಿಕೊಂಡು ಚುನಾವಣಾ ಪ್ರಣಾಳಿಕೆಯನ್ನು ಈಡೇರಿಸಿದೆ ಎಂದರು.

ನಮ್ಮ ದೇಶದ ಜನರಿಗೇ ಜಮ್ಮುವಿನಲ್ಲಿ ಏನು ನಡೆಯುತ್ತದೆ, ಕಾಶ್ಮೀರದಲ್ಲಿ ವಾತಾವರಣ ಹೇಗೆ ಇದೆ ಎಂದು ಗೊತ್ತಿಲ್ಲ. 50 ಸಾವಿರ ದೇಗುಲಗಳನ್ನು ಜಮ್ಮು ಕಾಶ್ಮೀರದಲ್ಲಿ ಪುನಶ್ಚೇತನ ಮಾಡಲು ನಿರ್ಧರಿಸಲಾಗಿದೆ. ಅಷ್ಟೊಂದು ಪ್ರಮಾಣದ ದೇಗುಲಗಳು ಅಲ್ಲಿರುವುದೇ ತಿಳಿದಿಲ್ಲ. ಕೇವಲ ಬೆರಳೆಣಿಕೆಯ ಜನರ ಕೈಯಲ್ಲಿದ್ದ ಅಲ್ಲಿನ ಸಂಪನ್ಮೂಲ, ಸರಕಾರದಿಂದ ಬಿಡುಗಡೆಯಾದ ಅನುದಾನ ಕೆಲವರಿಗಷ್ಟೇ ಸೇರುತ್ತಿದ್ದುದು ಮುಂದಿನ ದಿನಗಳಲ್ಲಿ ಸಮಾನತಾ ನ್ಯಾಯವಾಗಲಿದೆ ಎಂದರು.

ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ ಶೆಟ್ಟಿ ಪ್ರಸ್ತಾವಿಸಿ, ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ದೇಶಧ್ವಜ ಸಾಧ್ಯವಿಲ್ಲ ಎಂದು ಹೇಳಿದ ಬಿಜೆಪಿ ಸಂಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ಸಾರ್ಥಕವಾಗಿದೆ ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಯಾನ ಉದ್ಘಾಟಿಸಿದರು.

ಅಭಿಯಾನ ಜಿಲ್ಲಾ ಸಹ ಸಂಚಾಲಕಿ ಪೂರ್ಣಿಮಾ ಎಸ್‌. ನಾಯಕ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಅಂಕದಕಟ್ಟೆ, ಭಾಸ್ಕರ ಬಿಲ್ಲವ ಉಪಸ್ಥಿತರಿದ್ದರು.
ಸದಾನಂದ ಬಳ್ಕೂರು ನಿರ್ವಹಿಸಿದರು.

ಟಾಪ್ ನ್ಯೂಸ್

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಬೈಕ್‌-ಸ್ಕೂಟರ್‌ ಢಿಕ್ಕಿ; ಗಾಯ

Udupi ಬೈಕ್‌-ಸ್ಕೂಟರ್‌ ಢಿಕ್ಕಿ; ಗಾಯ

Kundapura ಪ್ಲಾಸ್ಟಿಕ್‌ ಅಕ್ಕಿ ವದಂತಿಗೆ ಆಹಾರ ನಿರೀಕ್ಷಕರ ವಿವರಣೆ

Kundapura ಪ್ಲಾಸ್ಟಿಕ್‌ ಅಕ್ಕಿ ವದಂತಿಗೆ ಆಹಾರ ನಿರೀಕ್ಷಕರ ವಿವರಣೆ

ಬಕ್ರೀದ್‌: ಅನಧಿಕೃತ ಜಾನುವಾರು ವಧೆ, ಸಾಗಣೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ

Bakrid: ಅನಧಿಕೃತ ಜಾನುವಾರು ವಧೆ, ಸಾಗಣೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ

ಎಂಇಐಎಲ್‌ “ಇಂಡಿಯ 5000 ಅವಾರ್ಡ್ಸ್‌’ ಪುರಸ್ಕಾರಕ್ಕೆ ಆಯ್ಕೆ

Manipal ಎಂಇಐಎಲ್‌ “ಇಂಡಿಯಾ 5000 ಅವಾರ್ಡ್ಸ್‌’ ಪುರಸ್ಕಾರಕ್ಕೆ ಆಯ್ಕೆ

Udayavani Campaign-ನಮಗೆ ಬಸ್‌ ಬೇಕೇ ಬೇಕು: ಹೇಳಿ, ನಮ್ಮೂರಿಗೆ ಬಸ್‌ ಯಾಕೆ ಬರುವುದಿಲ್ಲ?

Udayavani Campaign-ನಮಗೆ ಬಸ್‌ ಬೇಕೇ ಬೇಕು: ಹೇಳಿ, ನಮ್ಮೂರಿಗೆ ಬಸ್‌ ಯಾಕೆ ಬರುವುದಿಲ್ಲ?

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.