ಹರಿದರೂ ಒಂದಾಗುವ ಟಿಶ್ಯೂ ಕಾಗದ
Team Udayavani, Oct 3, 2019, 9:41 AM IST
ನೀವು ಇದನ್ನು ಗಮನಿಸಿದ್ದೀರಾ? ಜಾದೂಗಾರ ವೇದಿಕೆ ಮೇಲೆ ಬಂದು ಒಂದು ಟಿಶ್ಯೂ ಕಾಗದವನ್ನು ತೋರಿಸುತ್ತಾನೆ. ಅದನ್ನು ಹರಿದು, ಉಂಡೆಯ ಥರ ಮಾಡಿ ಎಡಗೈಯಲ್ಲಿ ಹಿಡಿದುಕೊಂಡಿರುತ್ತಾನೆ. ನಂತರ ಪೆನ್ನನ್ನು ತೆಗೆದು ಆ ಕಾಗದದ ಉಂಡೆಯ ಮೇಲೆ ಒಂದೆರಡು ಸಲ ಮೆಲ್ಲಗೆ ಹೊಡೆದಂತೆ ನಟಿಸುತ್ತಾನೆ. ಈಗ ಉಂಡೆಯನ್ನು ಬಿಡಿಸಿ ತೋರಿಸಿದರೆ ಟಿಶ್ಯೂ ಕಾಗದ ಮೊದಲಿದ್ದಂತೆ ಜೋಡಿಸಲ್ಪಟ್ಟಿರುತ್ತದೆ! ಇದರ ಹಿಂದೆ ಜೋರಾದ ಚಪ್ಪಾಳೆಗಳು ಬೀಳುತ್ತದೆ. ಹಾಗಾದರೆ ಜಾದೂಗಾರನಿಗೆ ಇದು ಹೇಗೆ ಸಾಧ್ಯ ಆಯಿತು?
ರಹಸ್ಯ
ಪೆನ್ನನ್ನು ನಿಮ್ಮ ಪ್ಯಾಂಟಿನ ಬಲ ಭಾಗದ ಜೇಬಿನಲ್ಲಿ ಮೊದಲೇ ಇಟ್ಟುಕೊಂಡಿರಬೇಕು. ನೀವು ಪ್ರದರ್ಶನಕ್ಕೆ ಮೊದಲು ಇಡೀ ಟಿಶ್ಯೂ ಪೇಪರಿನ ಉಂಡೆಯನ್ನು ಮಾಡಿ ತನ್ನ ಬಲಗೈಯಲ್ಲಿ ಬೆರಳುಗಳ ಮರೆಯಲ್ಲಿ ಹಿಡಿದುಕೊಂಡಿರಬೇಕು. ನಂತರ ಜೇಬಿನಿಂದ ಒಂದು ಟಿಶ್ಯೂ ಪೇಪರನ್ನು ತೆಗೆದು, ಬಿಡಿಸಿ ತೋರಿಸಿ, ಹರಿದು ಉಂಡೆ ಮಾಡಿ. ಇದನ್ನು ಮಾಡುತ್ತಿರಬೇಕಾದರೆ ಬಲಗೈಯಲ್ಲಿ ಮರೆ ಮಾಡಿದ ಪೇಪರ್ ಉಂಡೆ ಪ್ರೇಕ್ಷಕರಿಗೆ ಕಾಣಬಾರದು; ಗೊತ್ತಿರಲಿ. ಹಾಗೇನೆ, ನಿಮ್ಮ ಕೈಯ ಚಲನೆ ಸಹಜವಾಗಿರಬೇಕು. ಹರಿದ ಟಿಶ್ಯೂ ಉಂಡೆಯನ್ನು ಬಲಗೈಯ ಬೆರಳುಗಳ ತುದಿಯಲ್ಲಿ ಹಿಡಿದು ಪ್ರೇಕ್ಷಕರಿಗೆ ತೋರಿಸಿ.
ಇಲ್ಲಿಂದ ಮುಂದಕ್ಕೆ ನೀವು ಕೈಚಳಕವನ್ನು ಬಹಳ ಚಾತುರ್ಯದಿಂದ ನಿಭಾಯಿಸಬೇಕಾಗುತ್ತದೆ. ಹರಿದ ಉಂಡೆಯನ್ನು ಬಲಗೈಯ ಬೆರಳುಗಳ ಮರೆಯಲ್ಲಿ ಹಿಡಿದು ಇಡೀ ಟಿಶ್ಯೂನ ಉಂಡೆಯನ್ನು ಎಡಗೈಗೆ ವರ್ಗಾಯಿಸಬೇಕು. ಇಷ್ಟು ಮಾಡಿದರೆ ಮುಂದಿನ ಕೆಲಸ ಸಲೀಸು. ಪೆನ್ನನ್ನು ತೆಗೆಯುವ ನೆಪದಲ್ಲಿ ಜೇಬಿಗೆ ಕೈ ಹಾಕುವಾಗ ಬಲಗೈಯಲ್ಲಿರುವ ಹರಿದ ಪೇಪರ್ ಉಂಡೆಯನ್ನು ಜೇಬಲ್ಲೇ ಬಿಟ್ಟು ಪೆನ್ನನ್ನು ಹೊರ ತೆಗೆಯಿರಿ. ಪೆನ್ನನ್ನು ಎಡಗೈಯಲ್ಲಿರುವ ಪೇಪರ್ ಉಂಡೆಯ ಮೇಲೆ ಹೊಡೆಯಿರಿ. ಉಂಡೆ ಪೇಪರನ್ನು ಬಿಡಿಸಿದರೆ ಇಡೀ ಪೇಪರ್?
ಉದಯ್ ಜಾದೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ