ಬಾಳೆ ಸುಗ್ಗಿ


Team Udayavani, Oct 14, 2019, 5:00 AM IST

BANNAN

ನೀರಿನ ಕೊರತೆ, ವಿದ್ಯುತ್‌ ಸಮಸ್ಯೆಯನ್ನು ಮೀರಿ ಬಿಸಿಲ ನಾಡಿನ ರೈತ ಕಲ್ಲಪ್ಪನವರು ಕಡಿಮೆ ಖರ್ಚಿನಲ್ಲಿ 2500 ಬಾಳೆ ಸಸಿಗಳನ್ನು ಬೆಳೆದಿದ್ದಾರೆ.

ಒಂದು ಕಡೆ ಬರಗಾಲ, ಇನ್ನೊಂದು ಕಡೆ ನೀರಿನ ತೇವಾಂಶ ಕಡಿಮೆಯಾಗಿ ಒಣಗಿದ ಬೆಳೆಗಳು, ಬತ್ತಿದ ನದಿ… ಇಂಥ ಸಂದಿಗ್ಧ ಸ್ಥಿತಿಯಲ್ಲಿ ರೈತರೊಬ್ಬರು ಕೊಳವೆ ಬಾವಿ ಮತ್ತು ನೈಸರ್ಗಿಕ ಕೃಷಿ ವಿಧಾನಗಳನ್ನು ಬಳಸಿಕೊಂಡು 2 ಎಕರೆಯಲ್ಲಿ ಸಮೃದ್ಧವಾಗಿ ಬಾಳೆ ಬೆಳೆದಿದ್ದಾರೆ. ಅವರೇ, ಕಲಬುರ್ಗಿ ಜಿಲ್ಲೆಯ ಅಫ‌ಜಲಪುರ ತಾಲೂಕಿನ ಹಿಂಚಗೇರಿ ಗ್ರಾಮದವರಾದ ಕಲ್ಲಪ್ಪ ಈರಪ್ಪ ಮೇತ್ರಿ.

ಇವರು ತಮ್ಮ ಹೊಲದಲ್ಲಿ ಕೊಳವೆ ಬಾವಿ ಕೊರೆಸಿ ಅದರಿಂದ ನೀರನ್ನು ಹರಿ ಬಿಟ್ಟು 2 ಎಕರೆಯಲ್ಲಿ ಸುಮಾರು 2500 ಜಿ- 9 ತಳಿಯ ಬಾಳೆಯನ್ನು ಬೆಳೆದಿದ್ದಾರೆ. ನದಿ ನೀರಿನ ಕೊರತೆ ಮತ್ತು ವಿದ್ಯುತ್‌ ಸಮಸ್ಯೆಯ ನಡುವೆಯೂ, ಕಡಿಮೆ ಖರ್ಚಿನಲ್ಲಿ ಸಮೃದ್ಧವಾಗಿ ಬಾಳೆ ಬೆಳೆದು ತೋರಿಸಿದ್ದಾರೆ.

ಸಾವಯವ ಕೃಷಿ ಪದ್ಧತಿ ಅಳವಡಿಕೆ
ಸಾವಯುವ ಕೃಷಿ ಪದ್ಧತಿಯಲ್ಲಿ ಬಾಳೆ ಸಸಿ ನಾಟಿ ಮಾಡಲು ಗುಂಡಿ ತೆಗೆಸಿ, ಪ್ರತಿ ಗುಂಡಿಗೆ ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರ ಹಾಕಿಸಿದರು. ಒಂದು ಸಸಿಗೆ 14 ರೂ. ನಂತೆ 2500 ಸಸಿಗಳನ್ನು ತಂದು ನಾಟಿ ಮಾಡಿದರು. ನಾಟಿ ಮಾಡಿದಾಗ ಆಗಸ್ಟ್‌ ತಿಂಗಳು. ಮುಂದೆ ಮೂರು ತಿಂಗಳಿಗೊಮ್ಮೆ ಸಸಿ ಬುಡಕ್ಕೆ ಒಂದು ಬುಟ್ಟಿ ಮೇಲ್ಗೊಬ್ಬರ ಪೂರೈಸಿದರು. ವಾರಕ್ಕೆ ಒಂದು ಬಾರಿಯಂತೆ ಪ್ರತಿ ಬಾಳೆ ಗಿಡಕ್ಕೆ ನೀರು ಒದಗಿಸಿದರು.
ನಾಟಿ ಮಾಡಿದ್ದ 2500 ಸಸಿಗಳಲ್ಲಿ ಸುಮಾರು 2000ಕ್ಕೂ ಹೆಚ್ಚು ಗಿಡಗಳು ಉತ್ತಮ ಗೊನೆ ಬಿಟ್ಟಿವೆ. ಒಂದು ಬಾಳೆ ಗೊನೆ 10ರಿಂದ 13 ಹಣಿಗೆಗಳನ್ನು ಹಾಕಿದ್ದು ಸುಮಾರು 25ರಿಂದ 30 ಕೆಜಿಯಷ್ಟು ತೂಗುತ್ತವೆ.

ಖರ್ಚು ವೆಚ್ಚ ಮತ್ತು ಲಾಭ
ಆರಂಭದಲ್ಲಿ ಗುಂಡಿ ತೋಡಿ ಗೊಬ್ಬರ ಹಾಕಲು, ಸಸಿ ಖರೀದಿ… ಹೀಗೆ ಎಲ್ಲ ಸೇರಿ ಎರಡು ಎಕರೆಗೆ 1.50 ರಿಂದ 2 ಲಕ್ಷ ರೂ ಖರ್ಚಾಗಿದೆ. ಸದ್ಯ ಕಟಾವಿಗೆ ಬಂದಿರುವ ಬಾಳೆ, ಈಗಿರುವ ಮಾರುಕಟ್ಟೆಯ ಬೆಲೆಯಂತೆ ಕೆ.ಜಿಗೆ 10 ರೂಪಾಯಿಂತೆ ಒಂದು ಗಿಡ 25 ಕೆ.ಜಿ ಬರುತ್ತದೆ. ಹಾಗಾಗಿ ಒಂದು ಬಾಳೆ ಗಿಡಕ್ಕೆ 250 ರೂ. ಬೆಲೆ ಸಿಗುತ್ತದೆ. ಅಂದರೆ 2000 ಬಾಳೆ ಗಿಡಗಳಿಗೆ ಒಟ್ಟು 5 ಲಕ್ಷ ಬೆಲೆ ದೊರೆಯುತ್ತದೆ. ಇದರಲ್ಲಿ ರೈತನಿಗೆ ಸುಮಾರು 2 ರಿಂದ 3 ಲಕ್ಷ ಲಾಭಾಂಶ ದೊರಕುವುದು. ಇದು ಮೊದಲನೇ ಬೆಳೆಯಾಗಿದ್ದು, ಎರಡನೆಯ ಬೆಳೆಗೆ ಇನ್ನೂ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ ಕಲ್ಲಪ್ಪನವರು.

ನಾನು ಈ ಹಿಂದೆ, ಕೇವಲ ತೊಗರಿ ಮತ್ತು ಕಬ್ಬು ಬೆಳೆಯುತ್ತಿದ್ದೆ. ಇದರಿಂದ ಹೆಚ್ಚೇನೂ ಲಾಭ ಆಗುತ್ತಿರಲಿಲ್ಲ, ಹಾಗಾಗಿ ಬಾಳೆ ನೆಡಲು ನಿರ್ಧರಿಸಿದೆ. ಕೊಳವೆ ಬಾವಿ ನೀರು ಸಾಕಷ್ಟು ಸಿಕ್ಕಿದ್ದರಿಂದಾಗಿ ಬೆಳೆ ಸಮೃದ್ಧವಾಗಿ ಬಂದಿದೆ.
– ಕಲ್ಲಪ್ಪ ಮೇತ್ರಿ, ರೈತ

– ಮಲ್ಲಿಕಾರ್ಜುನ, ಹಿಂಚಗೇರಿ

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.