ರೈತರಿಗೆ ಪ್ರಯೋಜನವಾಗದ ರಾಜ್ಯದ ಕೃಷಿ ಮಾರುಕಟ್ಟೆ ಸುಧಾರಣೆಗಳು : ಸಿಎಜಿ ವರದಿ


Team Udayavani, Oct 13, 2019, 11:48 PM IST

APMC-13-10

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಂಗಳೂರು: ರೈತರ ಅಭಿವೃದ್ಧಿಗೆ ಉಪಯುಕ್ತವಾಗಲೆಂದು ಕರ್ನಾಟಕ ಸರಕಾರ ಜಾರಿ ಮಾಡಿದ ಕೃಷಿ ಮಾರುಕಟ್ಟೆ ಸುಧಾರಣೆಗಳು ಗುರಿಯನ್ನು ತಲುಪುವಲ್ಲಿ  ಸೀಮಿತ ಯಶಸ್ಸು ಸಾಧಿಸಿದ್ದು, ವ್ಯಾಪಕ ಮಾರುಕಟ್ಟೆ ಅಭಾವ ಮತ್ತು ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಕೊರತೆ ಈ ಫ‌ಲಿತಾಂಶಕ್ಕೆ ಕಾರಣ ಎಂದು ಸಿಎಜಿ ವರದಿ ತಿಳಿಸಿದೆ.

ಪ್ರಾರಂಭದ ಹಂತದಲ್ಲಿ  ಸುಧಾರಣೆಗಳನ್ನು ಪ್ರಬಲವಾಗಿ ಅನುಷ್ಠಾನಗೊಳಿಸಬೇಕೆಂಬ ದೃಷ್ಟಿಯಿಂದ ಏಕೀಕೃತ ಮಾರುಕಟ್ಟೆ ವೇದಿಕೆಯನ್ನು (ಯುಎಂಪಿ) ಕಲ್ಪಿಸಿಕೊಟ್ಟ ಕರ್ನಾಟಕ ಸರಕಾರ, ಕೃಷಿ ಮಾರುಕಟ್ಟೆಯನ್ನು  ಅದರೊಂದಿಗೆ ವಿಲೀನಗೊಳಿಸಿತು. ಆ ಮೂಲಕ ನೇರವಾಗಿ ಕೃಷಿ ಮಾರುಕಟ್ಟೆಯಿಂದ ಸರಕುಗಳನ್ನು ಎಲೆಕ್ಟ್ರಾನಿಕ್‌ ಮಾರಾಟ ಪದ್ಧತಿಯಲ್ಲಿ ಮಾಡಲು ನಿರ್ಧರಿಸಲಾಗಿತ್ತು. 2014ರಲ್ಲಿ  ಕರ್ನಾಟಕ ಸರಕಾರ, ಎನ್‌.ಸಿ.ಡಿ.ಇ.ಎಕ್ಸ್‌. ಸ್ಪಾಟ್‌ ಎಕ್ಸ್‌ಚೇಂಜ್‌ ಜಂಟಿ ಸಹಭಾಗಿತ್ವದಲ್ಲಿ  ಎಸ್‌ಪಿವಿ ಹಾಗೂ ರಾಷ್ಟ್ರೀಯ ಇ-ಮಾರ್ಕೆಟ್‌ ಸರ್ವೀಸಸ್‌ (ಆರ್‌.ಎಂ.ಸ್‌.) ಅನ್ನು ರೈತರ ಅನುಕೂಲಕ್ಕಾಗಿ ಹೊರತಂದಿತ್ತು.

ಆದರೆ ಮಾರ್ಚ್‌ 2018 ರ ವರ್ಷಾಂತ್ಯಕ್ಕೆ ಕರ್ನಾಟಕದ ಆರ್ಥಿಕ ವಲಯದ ಕಾರ್ಯಕ್ಷಮತೆಯ ಗುಣಮಟ್ಟದ ಕುರಿತು ಸಿಎಜಿ ಸಮೀಕ್ಷೆ ನಡೆಸಿದ್ದು, ಏಕೀಕೃತ ಮಾರುಕಟ್ಟೆಯ ವಾಸ್ತವ ಸ್ಥಿತಿಯನ್ನು ಬಯಲು ಮಾಡಿದೆ.  ಯುಎಂಪಿಯನ್ನು ಪ್ರಮುಖ 160 ಮಂಡಿಗಳಲ್ಲಿ ಜಾರಿಗೊಳಿಸಲಾಗಿದ್ದರೂ, 352 ಕಿರು ಮಂಡಿಗಳನ್ನು ಕೈಬಿಡಲಾಗಿದೆ ಎಂದು ಬೊಟ್ಟು ಮಾಡಿದೆ. ಅಲ್ಲದೆ ನಿಗದಿ ಪಡಿಸಿದ ಸರಕುಗಳನ್ನು ಯುಎಂಪಿ ಮೂಲಕ ಮಾರಾಟ ಮಾಡದೇ ಒಂದೆರಡು ಸರಕುಗಳಿಗೆ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವರದಿ ಹೇಳಿದೆ.

ನಿಬಂಧನೆ ಉಲ್ಲಂಘನೆ
ಯುಎಂಪಿ ಮಾರುಕಟ್ಟೆಯಲ್ಲಿ  ಕೃಷಿ ಉತ್ಪನ್ನಗಳಿಗೆ ನಿರ್ದಿಷ್ಟ  ಬೆಲೆ ದೊರೆಯುತ್ತಿಲ್ಲ  ಎಂಬ ಅಂಶವನ್ನು ವರಿದಿ ಕಂಡುಕೊಂಡಿದ್ದು, ಮಾರುಕಟ್ಟೆ  ರೈತರ ಬೆಲೆಗಳಿಗೆ ನಿರ್ದಿಷ್ಟ ಬೆಲೆಯನ್ನು ಒದಗಿಸಿಕೊಡುವುದರಲ್ಲಿ  ವಿಫ‌ಲವಾಗಿದೆ. 2017-18ರಲ್ಲಿ  ಪ್ರಮುಖ 8 ಸರಕುಗಳಿಗಿದ್ದ ದರ ಎಂಎಸ್‌ಪಿ ಬೆಲೆಗಿಂತ ಕಡಿಮೆ ಇದೆ ಎಂದು ಸಿಎಜಿ ವರದಿ ತಿಳಿಸಿದೆ. ಇದಲ್ಲದೆ, ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸಿ 2014-18ರಲ್ಲಿ  ಶೇ.3.95 ಕೋಟಿ ವಹಿವಾಟು ಶುಲ್ಕವನ್ನು ಆರ್‌ಇಎಂಎಸ್‌ ಪಾವತಿಸಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ಉದ್ದೇಶಗಳು ಸಾಕಾರಗೊಂಡಿಲ್ಲ
ಕೃಷಿ ಮಂಡಿಗಳಲ್ಲಿ ನಡೆಯುತ್ತಿದ್ದ ಏಕಸ್ವಾಮ್ಯ ಪದ್ಧತಿಯನ್ನು ಕೊನೆಗೊಳಿಸುವುದು ಕೃಷಿ ಮಾರುಕಟ್ಟೆ ಸುಧಾರಣೆಗಳ ಪ್ರಮುಖ ಉದ್ದೇಶವಾಗಿದ್ದು, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ  ವಿಫ‌ಲವಾಗಿದೆ ಎಂಬ ಅಂಶವನ್ನು ಸಿಎಜಿ ಗಮನಿಸಿದೆ. ಸುಧಾರಣೆಯ ಪ್ರಮುಖ ಉದ್ದೇಶವನ್ನು ಅನುಸರಿಸದೇ ಖಾಸಗಿ ಮಾರುಕಟ್ಟೆ  ಮಾರಾಟಗಾರರಿಗೆ ಪರವಾನಗಿ ನೀಡಿದ್ದು, ಗೋದಾಮಿನ ಆಧಾರಿತ ಮಾರಾಟದ ಪರಿಕಲ್ಪನೆಯು ಸಹ ಅಪೇಕ್ಷಿತ ಫ‌ಲಿತಾಂಶವನ್ನು ನೀಡಿಲ್ಲ  ಎಂಬ ಮಾಹಿತಿಯನ್ನು ವರದಿ ಹಂಚಿಕೊಂಡಿದೆ.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.