ಪ್ಲಾಸ್ಟಿಕ್‌ ನಿಷೇಧದಿಂದ ಸಾಂಪ್ರದಾಯಿಕ ಕೈಕಸುಬಿನ ಪುನರುಜ್ಜೀವನ


Team Udayavani, Oct 17, 2019, 5:34 AM IST

f-19

ಅಸ್ಸಾಮಿನ ಉದ್ಯಮಿಯೋರ್ವರು ಬಿದಿರಿನ ಬಾಟಲಿಗಳನ್ನು ಯಶಸ್ವಿಯಾಗಿ ಮಾರುತ್ತಿದ್ದಾರೆ. ಅದಕ್ಕೆ ಉತ್ತಮ ಸ್ಥಳೀಯ ಬೇಡಿಕೆ ಮತ್ತು ರಫ್ತು ಬೇಡಿಕೆಯೂ ಇದೆ. ತೆಂಗಿನ ನಾರು, ಗೋಣಿ ನಾರಿನ ಬಟ್ಟೆ ಮತ್ತು ಕಾಗದದ ಚೀಲಗಳು ಪ್ಲಾಸ್ಟಿಕ್‌ ಚೀಲಕ್ಕೆ ಉತ್ತಮ ಬದಲಿಯಾಗಬಹುದು. ತೆಂಗಿನ ನಾರು ಮತ್ತು ಗೋಣಿ ನಾರು ಉತ್ಪನ್ನಗಳ ಬಳಕೆಯು ದೇಶದಲ್ಲಿ ತೆಂಗಿನ ನಾರು ಮತ್ತು ಗೋಣಿ ನಾರಿನ ತೋಟಗಳನ್ನು ಕ್ರಿಯಾಶೀಲಗೊಳಿಸುತ್ತದೆ. ಕೇರಳದಲ್ಲಿ ಸಾವಿರಾರು ತೆಂಗಿನ ಮರ ಕೃಷಿಯು ಸಮರ್ಥ ನಿರ್ವಹಣೆಯಿಲ್ಲದೆ ಮತ್ತು ಮಾರಾಟ ವ್ಯವಸ್ಥೆಯಿಲ್ಲದೆ ಸೊರಗುತ್ತಿದೆ. ಒರಿಸ್ಸಾದಲ್ಲಿ ಬೇಡಿಕೆ ಕುಸಿದಿದ್ದರಿಂದ ರೈತರು ಸೆಣಬು ಕೃಷಿಯನ್ನು ತೊರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಪ್ಲಾಸ್ಟಿಕ್‌ ವಿರುದ್ಧದ ಹೋರಾಟದಲ್ಲಿ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದ್ದಾರೆ. ದಶಕಗಳಿಂದ ಪ್ಲಾಸ್ಟಿಕ್‌ ಕೃಷಿ ಭೂಮಿ, ಆಹಾರ ಪದಾರ್ಥಗಳು, ನದಿಗಳು, ಕೆರೆಗಳು, ಪ್ರವಾಸಿ ತಾಣಗಳು, ಯಾತ್ರಾಸ್ಥಳ ಮತ್ತು ಸಾಗರಗಳನ್ನು ಹಾನಿಗೊಳಿಸುವುದರ ಮೂಲಕ ಅಪಾರ ಆರ್ಥಿಕ ನಷ್ಟವನ್ನುಂಟುಮಾಡುತ್ತಿದೆ.

ಭಾರತವು ದಿನವೊಂದಕ್ಕೆ ಸುಮಾರು 26 ಸಾವಿರ ಟನ್ನು ಪ್ಲಾಸ್ಟಿಕ್ಕನ್ನು ಉತ್ಪಾದಿಸುತ್ತದೆ. ಅದರಲ್ಲಿ ಹತ್ತು ಸಾವಿರ ಟನ್ನು ಪ್ಲಾಸ್ಟಿಕ್‌ ತ್ಯಾಜ್ಯ ಖಾಲಿ ಜಾಗ, ರಸ್ತೆಬದಿಯಲ್ಲಿ ಶೇಖರಣೆಯಾಗುತ್ತದೆ ಮತ್ತು ನೀರಿಗೆಸೆಯಲ್ಪಡುತ್ತದೆ. ಭಾರತದ ತಲಾ ಪ್ಲಾಸ್ಟಿಕ್‌ ಬಳಕೆ 11 ಕಿಲೋ. ವರ್ಷದಿಂದ ವರ್ಷಕ್ಕೆ ಇದು ವೃದ್ಧಿಯಾಗುತ್ತಿದೆ. ಫೆಡರೇಶನ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಅಧ್ಯಯನದಂತೆ ಪ್ಲಾಸ್ಟಿಕ್‌ ಪರಿಷ್ಕರಣ ಉದ್ಯಮವು 2020ರೊಳಗೆ ವರ್ಷಕ್ಕೆ 22 ಮಿಲಿಯನ್‌ ಟನ್‌ ಗಾತ್ರದಷ್ಟು ಬೆಳೆಯುತ್ತದೆ. (2015 ರಲ್ಲಿ 13.4 ಮಿಲಿಯ ಟನ್ನು) ಇದರಲ್ಲಿ ಅರ್ಧದಷ್ಟು ಸಿ.ಯೂ. (ಸಿಂಗಲ್‌ ಯೂಸ್‌)ಪ್ಲಾಸ್ಟಿಕ್‌. ಸಣ್ಣ ಕಿರಾಣಿ ಅಂಗಡಿಯಿಂದ ಬೃಹತ್‌ ಮಾಲುಗಳ ತನಕ ಎಲ್ಲೆಡೆಯೂ ವಿವಿಧ ಗಾತ್ರ, ದಪ್ಪನೆಯ ಪ್ಲಾಸ್ಟಿಕ್‌ ಚೀಲಗಳನ್ನು ಮಾರಲಾಗುತ್ತದೆ. 2023ರ ಅಂತ್ಯದೊಳಗೆ ದೇಶದಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿ ಮಾರುಕಟ್ಟೆ 403 ಬಿಲಿಯನ್‌ ರೂ. ದಾಟಲಿದೆ. ಇದು ಆರೋಗ್ಯ, ಮಣ್ಣು, ನೀರು ಮತ್ತು ಗಾಳಿಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡುತ್ತದೆ.

ಮರಣಾಂತಿಕ ಬಿಸ್ಪನಾಲ್‌
ಬ್ರಿಟಿಷ್‌ ಮತ್ತು ಅಮೆರಿಕ ಸಂಶೋಧಕರು ಪ್ಲಾಸ್ಟಿಕ್‌ನಲ್ಲಿ ಬಿಸೆ#ನಾಲ್‌(ಬಿಪಿಎ) ಎಂಬ ರಾಸಾಯನಿಕವನ್ನು ಬಳಸುವುದರಿಂದ ಅದನ್ನು ಬಳಸುವವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎಂದಿದ್ದಾರೆ. ಸಕ್ಕರೆ ಕಾಯಿಲೆ ಮತ್ತು ಲಿವರ್‌ ಕಾಯಿಲೆಯೂ ಬರುವ ಸಾಧ್ಯತೆಗಳಿವೆ. ಪ್ಲಾಸ್ಟಿಕ್‌ನ್ನು ಸುಟ್ಟಾಗ ಅದರಿಂದ ಸುಮಾರು 55-60 ವಿವಿಧ ರಾಸಾಯನಿಕಗಳು ಬಿಡುಗಡೆಗೊಳ್ಳುತ್ತವೆ. ಪ್ಲಾಸ್ಟಿಕ್‌ ಕಂಟೈನರಿನಲ್ಲಿ ಬಿಸಿ ಮಾಡಿದಾಗ ಅಥವಾ ಪ್ಲಾಸ್ಟಿಕ್‌ ತಟ್ಟೆಯಲ್ಲಿ ಬಿಸಿ ಪದಾರ್ಥಗಳನ್ನು ಬಡಿಸುವಾಗ ವಿವಿಧ ರಾಸಾಯನಿಕಗಳು ನಮ್ಮ ಆಹಾರದಲ್ಲಿ ಸೇರುತ್ತವೆ. ಪರಿಣಾಮ ಸೇವಿಸುವವರಲ್ಲಿ ಹಾರ್ಮೋನುಗಳ ಅಸಮತೋಲನವುಂಟಾಗಿ ಅನೇಕ ಕಾಯಿಲೆಗಳಿಗೆ ನಾಂದಿಯಾಗುತ್ತದೆ. ಭ್ರೂಣ ಸಮಸ್ಯೆ, ಸ್ತನ ಕ್ಯಾನ್ಸರ್‌, ಕೊಲೊನ್‌ ಕ್ಯಾನ್ಸರ್‌, ಪ್ರೊಸ್ಟೇಟ್‌ ಕ್ಯಾನ್ಸರ್‌ ಇತ್ಯಾದಿ.

ಪ್ಲಾಸ್ಟಿಕ್‌ ಬಾಟಲಿಗಳು ಡೀಕಂಪೋಸ್‌ ಆಗಬೇಕಾದರೆ ಕನಿಷ್ಠ 400 ವರ್ಷಗಳು ಬೇಕೆಂದು ಸಂಶೋಧನೆ ತಿಳಿಸುತ್ತದೆ. ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಕನಿಷ್ಠ ಬಳಸುವ ಅನೇಕ ದಾರಿಗಳಿವೆ. ಕೇಂದ್ರ ಸರಕಾರವು ಸಾರ್ವಜನಿಕ ರಂಗದ ಕಚೇರಿಗಳಲ್ಲಿ ಬಯೊಡಿಗ್ರೇಡೆಬಲ್‌ ವಸ್ತುಗಳನ್ನು ಉಪಯೋಗಿಸಬೇಕೆಂದು ಆದೇಶಿಸಿದೆ. ಪ್ಲಾಸ್ಟಿಕ್‌ ಬಳಕೆ ನಿಷೇಧ, ಪರಿಸರ ಸ್ನೇಹಿ ಪರಿಕರಗಳನ್ನು ತಯಾರಿಸುವ ಸ್ವಸಹಾಯ ಗುಂಪುಗಳ ಮಿಲಿಯಗಟ್ಟಳೆ ಮಹಿಳೆಯರಿಗೆ ಸಹಾಯವಾಗುತ್ತದೆ.

ಭಾರತವು ಬಯೊಡಿಗ್ರೇಡೆಬಲ್‌ ಕೈಕಸುಬು ಪದಾರ್ಥಗಳ ಭಂಡಾರವೆ ಆಗಿದೆ. ಬಯೊಡಿಗ್ರೇಡೆಬಲ್‌ ವಸ್ತುಗಳು ನಮ್ಮ ಮನೆಯ ಪ್ಲಾಸ್ಟಿಕ್‌ ಪರಿಕರಗಳಿಗೆ ಸೂಕ್ತ ಬದಲಿಯಾಗಬಹುದು. ಗುಜರಾತಿನ ಆವೆಮಣ್ಣಿನ ಮಡಕೆ ಹೈದರಾಬಾದಿನಲ್ಲಿ ಬಹಳ ಜನಪ್ರಿಯವಾಗಿವೆ. ಮಣ್ಣಿನ ಮಡಕೆಯಲ್ಲಿ ಬೆಂದ ಪದಾರ್ಥ ರುಚಿಯಾಗಿರುತ್ತದೆ. ಜನರು ಮಣ್ಣಿನ ಮತ್ತು ಮರದ ಪಾತ್ರೆಯನ್ನ ಬಳಸಿದರೆ ಲಕ್ಷಗಟ್ಟಲೆ ಕಸುಬುಗಾರರು, ಕುಂಬಾರರಿಗೆ ಉದ್ಯೋಗವನ್ನು ಒದಗಿಸಬಹುದು.

ಅಸ್ಸಾಮಿನ ಉದ್ಯಮಿಯೋರ್ವರು ಬಿದಿರಿನ ಬಾಟಲಿಗಳನ್ನು ಯಶಸ್ವಿಯಾಗಿ ಮಾರುತ್ತಿದ್ದಾರೆ. ಅದಕ್ಕೆ ಉತ್ತಮ ಸ್ಥಳೀಯ ಬೇಡಿಕೆ ಮತ್ತು ರಫ್ತು ಬೇಡಿಕೆಯೂ ಇದೆ. ತೆಂಗಿನ ನಾರು, ಗೋಣಿ ನಾರಿನ ಬಟ್ಟೆ ಮತ್ತು ಕಾಗದದ ಚೀಲಗಳು ಪ್ಲಾಸ್ಟಿಕ್‌ ಚೀಲಕ್ಕೆ ಉತ್ತಮ ಬದಲಿಯಾಗಬಹುದು. ತೆಂಗಿನ ನಾರು ಮತ್ತು ಗೋಣಿ ನಾರು ಉತ್ಪನ್ನಗಳ ಬಳಕೆಯು ದೇಶದಲ್ಲಿ ತೆಂಗಿನ ನಾರು ಮತ್ತು ಗೋಣಿ ನಾರಿನ ತೋಟಗಳನ್ನು ಕ್ರಿಯಾಶೀಲಗೊಳಿಸುತ್ತದೆ. ಕೇರಳದಲ್ಲಿ ಸಾವಿರಾರು ತೆಂಗಿನ ಮರ ಕೃಷಿಯು ಸಮರ್ಥ ನಿರ್ವಹಣೆಯಿಲ್ಲದೆ ಮತ್ತು ಮಾರಾಟ ವ್ಯವಸ್ಥೆಯಿಲ್ಲದೆ ಸೊರಗುತ್ತಿದೆ. ಒರಿಸ್ಸಾದಲ್ಲಿ ಬೇಡಿಕೆ ಕುಸಿದಿದ್ದರಿಂದ ರೈತರು ಸೆಣಬು ಕೃಷಿಯನ್ನು ತೊರೆದಿದ್ದಾರೆ. ಅಂಗಡಿಗಳು, ಮಾಲ್‌ಗ‌ಳು, ಹೊಟೇಲುಗಳಲ್ಲಿ ಪ್ಲಾಸ್ಟಿಕ್‌ ಚೀಲದ ಬದಲಿಗೆ ಬಯೊಡಿಗ್ರೇಡೆಬಲ್‌ ತೆಂಗು ಮತ್ತು ಗೋಣಿ ನಾರಿನ ಚೀಲಗಳನ್ನು ಮಾರಬಹುದು.

ಅಸ್ಸಾಂ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಟನ್‌ ಕಚ್ಚಾ ಬಿದಿರನ್ನು ಆಸ್ಟ್ರೇಲಿಯಾಕ್ಕೆ ಸರಬರಾಜು ಮಾಡುತ್ತದೆ. ಆಸ್ಟ್ರೇಲಿಯಾದಲ್ಲಿ ಬಿದಿರಿನಿಂದ ಅನೇಕ ಬಳಕೆಯೋಗ್ಯ ವಸ್ತುಗಳನ್ನು ತಯಾರಿಸಲಾಗುತ್ತದೆ. ಭಾರತವು ತನ್ನ ಬಯೊಡಿಗ್ರೇಡೆಬಲ್‌ ಕೈಕಸುಬಿನ ಉತ್ಪನ್ನಗಳೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಕದ ತಟ್ಟಬಹುದು. ಕೈಕುಶಲ ಮತ್ತು ಅಲಂಕಾರಿಕ ಉತ್ಪನ್ನಗಳ ಉಪಯೋಗ ಮತ್ತು ಜಾಗೃತಿಯಿಂದಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿ, ಅಪಾರ ಪ್ರಮಾಣದ ವಿದೇಶಿ ಹಣ ದೇಶಕ್ಕೆ ಹರಿದು ಬರುತ್ತದೆ. ಉದ್ಯೋಗ ಸೃಷ್ಟಿಯಿಂದಾಗಿ ಜನರಲ್ಲಿ ಆತ್ಮಗೌರವ ಹೆಚ್ಚಿ ಸರಕಾರಿ ಸಬ್ಸಿಡಿಯಿಲ್ಲದೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಆತ್ಮವಿಶ್ವಾಸ ಬೆಳೆಯುತ್ತದೆ. ಸರಕಾರವು ಸಿನಿಮಾ ನಟರು, ಕ್ರೀಡಾಪಟುಗಳ ಮೂಲಕ ಕೈಕಸುಬು ಮತ್ತು ಕೈಮಗ್ಗದ ಉತ್ಪನ್ನಗಳ ಜನಪ್ರಿಯತೆಯನ್ನು ಹೆಚ್ಚಿಸಬಹುದು. ಪ್ರಧಾನಿಯವರ ಸ್ಕಿಲ್‌ ಇಂಡಿಯಾ ಯೋಜನೆಯಡಿ ಇಂತಹ ಹ್ಯಾಂಡಿಕ್ರಾಫ್ಟ್ ಮತ್ತು ಹ್ಯಾಂಡ್‌ಲೂಮ್‌ ಉದ್ಯಮವನ್ನು ಬೆಳೆಸಬಹುದು.

– ಜಲಂಚಾರು ರಘುಪತಿ ತಂತ್ರಿ

ಟಾಪ್ ನ್ಯೂಸ್

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.