ಬೆಳ್ತಂಗಡಿ: ಬದುಕು ಕಟ್ಟಿಕೊಟ್ಟ ಶ್ರಮದಾನಿಗಳು

ಪ್ರವಾಹ ಪೀಡಿತ ಕೊಳಂಬೆ, ಅಂತರ ಈಗ ಹಚ್ಚ ಹಸುರು, ಸ್ವಚ್ಛ ಊರು

Team Udayavani, Oct 20, 2019, 5:30 AM IST

c-46

ಕೊಳಂಬೆಯಲ್ಲಿ ಗದ್ದೆಯಲ್ಲಿ ತುಂಬಿದ್ದ ಮರಳು, ಕೊಳಚೆಯನ್ನು ತೆಗೆದುಹಾಕಿ ನೇಜಿ ನಾಟಿಗೆ ಸಿದ್ಧತೆ ನಡೆಸಲಾಯಿತು.

ಬೆಳ್ತಂಗಡಿ: ಎರಡೂವರೆ ತಿಂಗಳ ಹಿಂದೆ ಮಹಾಮಳೆಯಿಂದ ರೂಪುಗೆಟ್ಟಿದ್ದ ಬೆಳ್ತಂಗಡಿ ತಾಲೂಕಿನ ಕೆಲವು ಭಾಗಗಳನ್ನು ಉಜಿರೆಯ ಉತ್ಸಾಹಿ ತಂಡ ಮರುನಿರ್ಮಿಸಿ ಬದುಕು ಕೊನರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಅ.9ರಂದು ಚಾರ್ಮಾಡಿ ತಾಲೂಕಿನ ಕೊಳಂಬೆ ಪ್ರದೇಶದಲ್ಲಿ ಮೃತ್ಯುಂಜಯ ನದಿ ಉಕ್ಕಿ ಹರಿದು ಕೊಳಂಬೆ ಅಂತರದ ಗದ್ದೆಗಳಲ್ಲಿ 2ರಿಂದ 4 ಅಡಿ ಮರಳು ಆವರಿಸಿತ್ತು. ಸುತ್ತಮುತ್ತಲಿದ್ದ 22 ಮನೆಗಳ ಪೈಕಿ ಎರಡು ಸಂಪೂರ್ಣ ಕುಸಿದಿದ್ದವು, ಒಂದು ಮನೆ ನೀರಿನಲ್ಲಿ ಕೊಚ್ಚಿಹೋಗಿತ್ತು. ಇವರೆಲ್ಲರ ಬದುಕನ್ನು ಮತ್ತೆ ಹಳಿಗೆ ತರಲು ಉಜಿರೆ ಉದ್ಯಮಿಗಳಾದ ಮೋಹನ್‌ ಕುಮಾರ್‌ ಮತ್ತು ರಾಜೇಶ್‌ ಪೈ ತಂಡ ಶ್ರಮಿಸಿದೆ.

ಸ್ವಾತಂತ್ರ್ಯೋತ್ಸವದಂದು ಚಾಲನೆ
ಮೋಹನ್‌ಕುಮಾರ್‌ ಮತ್ತು ರಾಜೇಶ್‌ ಪೈ ಸುಮಾರು 500ಕ್ಕೂ ಹೆಚ್ಚು ಯುವಕರ ತಂಡ ಕಟ್ಟಿಕೊಂಡು ಅ.15ರಂದು ಪುನರ್‌ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಪ್ರತಿ ರವಿವಾರದಂತೆ ಒಟ್ಟು ಸುಮಾರು 2 ಸಾವಿರ ಮಂದಿ ಕೂಲಿಯಾಳುಗಳು, 2,500 ವಿವಿಧ ಸಂಘ ಸಂಸ್ಥೆಗಳ ಸೇವಕರ ಕರ ಸೇವೆ ನಡೆಸಲಾಗಿದೆ. ಕೊಳಂಬೆ ಮತ್ತು ಅಂತರದ 70 ಎಕರೆ ಪ್ರದೇಶದ ಚಿತ್ರಣವನ್ನೇ ಅವರು ಬದಲಾಯಿಸಿದ್ದಾರೆ. ರಾಶಿಬಿದ್ದ ಮರಮಟ್ಟು ತೆರವಾಗಿದೆ, ಗದ್ದೆಗಳಲ್ಲಿ ಹರಡಿದ್ದ ಮರಳು ತೆಗೆದು ಉತ್ತು ಬಿತ್ತಿ ಹಚ್ಚ ಹಸುರಾಗಿದೆ. ಈಗಾಗಲೇ ನೂರು ಬಾಳೆ ಗಿಡಗಳು, 50 ಬುಡ ಬಸಳೆ, 20 ಸಾಲು ಅಲಸಂಡೆ, 12 ಸಾಲು ಸೌತೆ, 25 ಬುಡ ತೊಂಡೆ, 50 ಬದನೆ ಗಿಡ ನಾಟಿ ಮಾಡಿದ್ದಾರೆ.

ಅ.20ರಂದು ಸಮಾರೋಪ
ಸುಮಾರು ಎರಡು ತಿಂಗಳ ಕಾಲ ನಡೆದ ಪುನರ್‌ನಿರ್ಮಾಣ ಶ್ರಮದಾನಕ್ಕೆ ಅ.20ರಂದು ಏಕಕಾಲದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. 6 ತಿಂಗಳಲ್ಲಿ ಊರು ಮರುನಿರ್ಮಾಣದ ಪಣ ತೊಟ್ಟಿದ್ದ ಉದ್ಯಮಿಗಳು ಕೇವಲ 2 ತಿಂಗಳಲ್ಲೇ ಇದನ್ನು ಸಾಧಿಸಿದ್ದಾರೆ. ಸರಕಾರದಿಂದ ಸಾಧ್ಯವಾಗದ್ದು ಸಮಾಜದಿಂದ ಕೈಗೂಡಿದೆ. ಅ.20ರಂದು ಶಾಸಕರು, ಪತ್ರಕರ್ತರು, ಸಾರ್ವಜನಿಕರು, ಸಂಘಸಂಸ್ಥೆಗಳು, ದಾನಿಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ 1 ಸಾವಿರ ಅಡಿಕೆ ಗಿಡ, 300 ತೆಂಗು, 100 ಬಾಳೆ, 150 ಹಲಸು, ಮಾವು, ಪೇರಳೆ ಸಹಿತ ಫಲವಸ್ತುಗಳ ಗಿಡ ನೆಡಲಾಗುತ್ತದೆ. ಬಳಿಕ ಸುಮಾರು 5 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ ಹದ ಮಾಡಿದ 17 ಗದ್ದೆಗಳಲ್ಲಿ ನೇಜಿ ನಾಟಿ ಮಾಡಿ ಪ್ರವಾಹ ಸಂತ್ರಸ್ತರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಮೋಹನ್‌ ಕುಮಾರ್‌ ಮತ್ತು ರಾಜೇಶ್‌ ಪೈ ತಿಳಿಸಿದ್ದಾರೆ.

ಫರ್ಲಾನಿಯಲ್ಲಿ ಬದಲಾಗದ ಚಿತ್ರಣ
ಇದೇ ಗ್ರಾಮದ ಫರ್ಲಾನಿ ಪ್ರದೇಶದ ಚಿತ್ರಣ ಮಾತ್ರ ಹೇಳತೀರದಂತಿದೆ. ಅಡಿಕೆ ಮರಗಳ ಬುಡ 5 ಅಡಿಗಳಷ್ಟು ಮರಳಿನಿಂದ ಆವೃತವಾಗಿದೆ.ಇಲ್ಲಿನ ಡೀಕಯ್ಯ ಗೌಡ, ಗಣೇಶ್‌, ರಮಾನಂದ್‌, ಸುಧಾಕರ್‌, ಉಮನ ಗೌಡ ಅವರ 4 ಎಕ್ರೆ ತೋಟ ನೆರೆ ಹಾವಳಿಗೆ ತುತ್ತಾಗಿ 65 ದಿನಗಳಾದರೂ ಒಂದು ಹುಲ್ಲುಕಡ್ಡಿಯನ್ನೂ ಸ್ಥಳೀಯಾಡಳಿತದಿಂದ ತೆರವು ಮಾಡಲಾಗಿಲ್ಲ. ಒಂದು ಎಕ್ರೆಯಲ್ಲಿ 6 ವರ್ಷದ ಫಲಭರಿತ ಕನಿಷ್ಠ 400 ಅಡಿಕೆ ಗಿಡಗಳಿವೆ. ಇವೆಲ್ಲವನ್ನು ಕಳೆದುಕೊಂಡ ಈ ಪ್ರದೇಶದ ಮಂದಿಗೆ ಪಂಚಾಯತ್‌ ಉಚಿತವಾಗಿ ಮರಳು ತೆರವುಗೊಳಿಸುವ ಬದಲು 8 ಸಾವಿರ ರೂ. ಬಿಲ್‌ ನೀಡಿ ಹೋಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಾನಿ
ಕೊಳಂಬೆ : 21 ಮನೆ,
40 ಎಕ್ರೆ ಕೃಷಿ ಪ್ರದೇಶ
ಅಂತರ : 16 ಮನೆ,
30 ಎಕ್ರೆ ಕೃಷಿ ಪ್ರದೇಶ

ಕಾಮಗಾರಿ
2 ಹಿಟಾಚಿ 20 ದಿವಸ
1 ಟಿಲ್ಲರ್‌ 50 ಗಂಟೆ

ಶ್ರಮದಾನ
ಕೂಲಿಯಾಳು 2,000, ಸ್ವಯಂಸೇವಕರು 2,500

– ಗ್ರಾಮಾಭಿವೃದ್ಧಿ ಯೋಜನೆ ಸ್ವಯಂ ಸೇವಕರು, ಉಜಿರೆ ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳು, ಉಳಿದ ಸಂಘಟನೆಗಳ ನಿರಂತರ ಪ್ರಯತ್ನ
– 30 ಲಕ್ಷ ರೂ. ಅಧಿಕ ಕಾಮಗಾರಿ
– ಗದ್ದೆ, ತರಕಾರಿ ಕೃಷಿ, ನೀರು ಹರಿಯುವ ಕಣಿ ಮರುನಿರ್ಮಾಣ, ತೆಂಗಿನ ಮರ ಬುಡ ಸ್ವಚ್ಛ, ನೇಜಿ ನಾಟಿ, ಮನೆ ಸ್ವಚ್ಛ

ಸಮಾಜದಲ್ಲಿ ಒಂದಷ್ಟು ಪರಿವರ್ತನೆ ಯಾಗಬೇಕೆಂಬ ಹಂಬಲದಿಂದ ಉದ್ಯಮಿಗಳು ತಂಡ ಕಟ್ಟಿಕೊಂಡು ಯುವಕರ ಸಹಾಯದಿಂದ ಪ್ರವಾಹ ಪ್ರದೇಶ ಮರುಸೃಷ್ಟಿಸಿದ್ದಾರೆ. ಇದು ಮಾದರಿ ಮತ್ತು ಅನುಕರಣೀಯ. ಅವರ ನಿಸ್ವಾರ್ಥ ಸೇವೆಯನ್ನು ಸರಕಾರವು ಶ್ಲಾಘಿಸಬೇಕಿದೆ.
– ಹರೀಶ್‌ ಪೂಂಜ, ಶಾಸಕರು

ನಮ್ಮ ಕನಸು ಸಾಕಾರಗೊಂಡಿದೆ. ನಮಗೆ ದೇವರು ಕರುಣಿಸಿದ್ದರಲ್ಲಿ ಕಿಂಚಿತ್ತನ್ನು ನಾವು ಸಂತ್ರಸ್ತರ ಬಾಳಿಗೆ ಬೆಳಕಾಗಿ ನೀಡಿದ್ದೇವೆ. ಅ.20ರಂದು ಸಮಾರೋಪ ಹಮ್ಮಿಕೊಂಡಿದ್ದು ಅಂದು 200 ಮಹಿಳೆಯರು, 350 ಸ್ವಯಂ ಸೇವಕರಿಂದ ಏಕಕಾಲದಲ್ಲಿ ಶ್ರ ಮದಾನ ಸಮಾಪನಗೊಳ್ಳಲಿದೆ. ಆರಂಭದಲ್ಲಿ ನಾಲ್ಕು ತಿಂಗಳು ಎಂದು ಅಂದಾಜಿಸಲಾಗಿತ್ತು, ಆದರೆ ಪ್ರಸಕ್ತ ಎಲ್ಲರ ಸಹಕಾರದಿಂದ ಎರಡೇ ತಿಂಗಳಲ್ಲಿ ಪೂರ್ಣಗೊಳಿಸಿರುವ ಖುಷಿ ನಮಗಿದೆ.
– ಮೋಹನ್‌ ಕುಮಾರ್‌, ಉಜಿರೆ ಲಕ್ಷ್ಮೀ ಗ್ರೂಪ್‌

– ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.