ಬರಲಿದೆ ನೋಕಿಯಾ ಸ್ಮಾರ್ಟ್ ಎಚ್.ಡಿ. ಟಿ.ವಿ.
ಸ್ಪರ್ಧಾತ್ಮಕ ಬೆಲೆಯೊಂದಿಗೆ ದೇಶದ ಮಾರುಕಟ್ಟೆಗೆ ಲಗ್ಗೆ
Team Udayavani, Nov 10, 2019, 8:01 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ನೋಕಿಯಾ ಹೆಸರು ಎಲ್ಲರಿಗೂ ಗೊತ್ತು. ಒಂದಾನೊಂದು ಕಾಲದಲ್ಲಿ ಮಿರಮಿರನೆ ಮಿಂಚುತ್ತಿದ್ದ ನೋಕಿಯಾ ಫೀಚರ್ ಫೋನ್ಗಳನ್ನು ಎಲ್ಲರೂ ಕೈಯಲ್ಲಿ ಹಿಡಿದುಕೊಂಡವರೇ. ಅದೀಗ ಸ್ಮಾರ್ಟ್ ಫೋನ್ ಮಾರುಕಟ್ಟೆಗೂ ಪ್ರವೇಶಿಸಿದೆ. ಮುಂದುವರಿದ ಭಾಗವಾಗಿ ಈಗ ನೋಕಿಯಾ ಟಿ.ವಿ. ಕೂಡ ಬರಲಿದೆ.
ನೋಕಿಯಾ ಶೀಘ್ರದಲ್ಲಿ ಭಾರತದಲ್ಲಿ ಸ್ಮಾರ್ಟ್ ಟಿ.ವಿ.ಗಳನ್ನು ಪರಿಚಯಿಸಲಿದೆ. 24 ಇಂಚಿನಿಂದ 65 ಇಂಚಿನ ವರೆಗೆ ಅಲ್ಟ್ರಾ ಎಚ್ಡಿ ಪರದೆಯನ್ನು ಈ ಟಿ.ವಿ.ಗಳು ಹೊಂದಿರಲಿವೆ. ಅಷ್ಟೇ ಅಲ್ಲ ಬೆಲೆಯೂ ಅತ್ಯಂತ ಸ್ಪರ್ಧಾತ್ಮಕವಾಗಿ ಇರಲಿದೆ. ಮೂಲಗಳ ಪ್ರಕಾರ ಸ್ಮಾರ್ಟ್ ಟಿ.ವಿ.ಗಳಿಗೆ ಸಡ್ಡು ಹೊಡೆಯುವಂತೆ 6999 ರೂ.ಗಳಿಂದ 64999 ರೂ.ಗಳವರೆಗೆ ದರ ಇರಲಿದೆ. ನೋಕಿಯಾ ಸ್ಮಾರ್ಟ್ ಟಿ.ವಿ.ಗಳು ಜೆ.ಬಿ.ಎಲ್. ಸೌಂಡ್ ವ್ಯವಸ್ಥೆಯನ್ನು ಹೊಂದಿರಲಿದ್ದು, ಸ್ಮಾರ್ಟ್ ಟಿ.ವಿ. ಮಾದರಿಗಳಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳಲಿದೆ.
ಇನ್ನೊಂದು ಪ್ರಸಿದ್ಧ ಮೊಬೈಲ್ ತಯಾರಿಕೆ ಕಂಪೆನಿ ಮೊಟೊರೊಲಾ ಕೂಡ ಭಾರತೀಯ ಟಿ.ವಿ. ಮಾರುಕಟ್ಟೆಗೆ ಸ್ಮಾರ್ಟ್ ಟಿ.ವಿ.ಗಳನ್ನು ಪರಿಚಯಿಸುವುದಾಗಿ ಹೇಳಿತ್ತು. 32 ಇಂಚಿನಿಂದ 65 ಇಂಚಿನವರೆಗೆ ಈ ಟಿ.ವಿ.ಗಳು ಇರಲಿದ್ದು, ಬೆಲೆ 13999 ರೂ.ಗಳಿಂದ ಆರಂಭವಾಗಲಿದೆ ಎಂದು ಹೇಳಲಾಗಿತ್ತು.
ಅಂದಹಾಗೆ ನೋಕಿಯಾ ತನ್ನ ಸ್ಮಾರ್ಟ್ ಟಿ.ವಿ.ಗಳ ಮಾರಾಟವನ್ನು ಪ್ರಸಿದ್ಧ ಮಾರಾಟ ಜಾಲತಾಣ ಫ್ಲಿಪ್ಕಾರ್ಟ್ ಮೂಲಕ ಮಾಡಲಿದೆ. ಮಾರ್ಕ್ ಕ್ಯೂ ಹೆಸರಿನಲ್ಲಿ ಈ ಟಿ.ವಿ.ಗಳು ಇರಲಿವೆ. ದೇಶದಲ್ಲಿ ಅತಿ ಹೆಚ್ಚು ಟಿ.ವಿ.ಗಳನ್ನು ಮಾರಾಟ ಮಾಡುವ ತಾಣಗಳಲ್ಲಿ ಫ್ಲಿಪ್ಕಾರ್ಟ್ ಕೂಡ ಒಂದಾಗಿದ್ದು, ಈ ಹಿನ್ನೆಲೆಯಲ್ಲಿ ನೋಕಿಯಾ ಮತ್ತು ಫ್ಲಿಪ್ಕಾರ್ಟ್ ಈ ಬಗ್ಗೆ ಒಪ್ಪಂದಕ್ಕೆ ಬಂದಿವೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ