ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಸುವರ್ಣ ಅಧ್ಯಾಯಕ್ಕೆ ಸಂಗೀತ ಮತ್ತು ಸಮ್ಮಾನದ ಮುಕುಟ
ಅಭಿಮಾನಿಗಳ ಋಣ ತೀರಿಸಲು ಸಾಧ್ಯವಿಲ್ಲ : ಸ್ಪೆಷಲ್ ಐಕಾನ್ ಪ್ರಶಸ್ತಿ ವಿಜೇತ ರಜನಿಕಾಂತ್ ವಿನಮ್ರ ನುಡಿ
Team Udayavani, Nov 20, 2019, 6:24 PM IST
ಪಣಜಿ: ಡಾ. ಶ್ಯಾಮಪ್ರಸಾದ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ 50ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ನೀಡಲಾಯಿತು. ಸಾಂಪ್ರದಾಯಿಕ ರೀತಿಯಲ್ಲಿ ಮುಖ್ಯ ಅತಿಥಿಗಳು ಜ್ಯೋತಿ ಬೆಳಗುವ ಮೂಲಕ ಉತ್ಸವವನ್ನು ಉದ್ಘಾಟಿಸಿದರು. ಆದರೆ ಇಡೀ ಉತ್ಸವಕ್ಕೆ ಖದರ್ ತುಂಬಿದ್ದು ಶಂಕರ್ ಮಹದೇವನ್ ತಂಡದ ಪ್ಯೂಷನ್ ಸಂಗೀತ.
ಮರಾಠಿ ಚಲನ ಚಿತ್ರ ‘ಕತ್ಯಾರ್ ಕಲ್ಜತ್ ಘುಸ್ಲೀ’ಯ ಗಣಪತಿ ಪ್ರಾರ್ಥನಾ ಗೀತೆ ‘ಸೂರ ನಿರಾಗ ಸಹೋ’ದಿಂದ ಆರಂಭಿಸಿದಾಗ ಕರತಾಡನ. ಬಳಿಕ ತಮ್ಮ ಅಮೋಘ ಸಂಗೀತ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಖುಷಿ ಪಡಿಸಿದರು.
ಈ ಸಂಗೀತ ರಸಸ್ವಾದದ ಬಳಿಕ ಸಚಿವರಾದಿಯಾಗಿ ಮಾತನಾಡಿದರೂ ಮತ್ತೆ ಅಮೋಘ ಕರತಾಡನ, ಸೀಟಿ ಕೇಳಿ ಬಂದಿದ್ದು ಹಿರಿಯ ನಟ ರಜನೀಕಾಂತ್ ಅವರನ್ನು ಸಮ್ಮಾನಿಸಿದ ಸಂದರ್ಭದಲ್ಲಿ. ಸುವರ್ಣ ಮಹೋತ್ಸವದ ಅಂಗವಾಗಿ ರಜನೀಕಾಂತ್ ಅವರನ್ನು ಸಮ್ಮಾನಿಸಲಾಯಿತು. ಆಗ ಜನರೆಲ್ಲಾ ಎದ್ದು ನಿಂತು ಅಭಿನಂದಿಸಿದರು.
ಈ ಗೌರವ ಸ್ವೀಕರಿಸಿ ಉತ್ತರಿಸಿದ ರಜನೀಕಾಂತ್, ಈ ಗೌರವ ನನ್ನ ಚಿತ್ರಗಳ ನಿರ್ಮಾಪಕರಿಗೆ, ನಿರ್ದೆಶಕರಿಗೆ, ತಂತ್ರಜ್ಞರಿಗೆ ಸಲ್ಲಬೇಕು. ಹಾಗೆಯೇ ನನ್ನ ಅಭಿಮಾನಿಗಳನ್ನು ಮರೆಯಲಾರೆ ಎಂದು ವಂದನೆ ಸಲ್ಲಿಸಿದರು. ಜೀವಮಾನ ಸಾಧನೆಗಾಗಿ ಪ್ರಶಸ್ತಿ ಸ್ವೀಕರಿಸಿ ಧನ್ಯವಾದ ಸಲ್ಲಿಸಿದವರು ನಟಿ ಹೆಸ್ಬುಲ್ಲ, ‘ಸಿನಿಮಾ ನನ್ನ ಬದುಕಿನ ಭಾಗ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ