ನನ್ನಲ್ಲಿ ಗುರಿಯಿಲ್ಲ, ಆದರೆ ಬೆಟ್ಟದಷ್ಟು ಆಸೆಗಳಿವೆ: ಬ್ಲೇಡ್‌ ರನ್ನರ್‌ ಶಾಲಿನಿ ಸರಸ್ವತಿ

"ಮೈ ಲೈಫ್-ಮೈ ಜರ್ನಿ' ಸಂವಾದ

Team Udayavani, Nov 25, 2019, 5:13 AM IST

3835582055594832_KUP7484

ಉಡುಪಿ: ಅಂಗಛೇದದ ಬಳಿಕ 2 ವರ್ಷಗಳನ್ನು ನಾನು ಮೂರು ಗೋಡೆಗಳ ನಡುವೆ ವ್ಯಯಿಸಿದ್ದೇನೆ. ಇದು ನನ್ನ ಬದುಕಿಗೆ ಹೊಸ ತಿರುವು ನೀಡಿದೆ ಎಂದು ಬ್ಲೇಡ್‌ರನ್ನರ್‌ ಶಾಲಿನಿ ಸರಸ್ವತಿ ಹೇಳಿದರು.

ಮಣಿಪಾಲ ಮಾಹೆ ಹಾಗೂ “ಮಣಿಪಾಲ ಮ್ಯಾರಥಾನ್‌ 20′ ಸಹಯೋಗದಲ್ಲಿ ಶನಿವಾರ ಎಂಎಂಎಂಸಿ ಸಭಾಂಗಣದಲ್ಲಿ ಆಯೋಜಿಸಿದ್ದ “ಮೈ ಲೈಫ್-ಮೈ ಜರ್ನಿ’ ಸಂವಾದದಲ್ಲಿ ಮಾತನಾಡಿದರು.

ಪೋಷಕರು ನನಗೆ ಬಾಲ್ಯದಿಂದಲೇ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದಾರೆ. ಆ ಕಾಲದಲ್ಲಿ “ಬಿಪಿಒ’ ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡುವ ಹುಡುಗಿಯರನ್ನು ಸಮಾಜ ನೋಡುವ ದೃಷ್ಟಿ ಕುರಿತು ಪೋಷಕರಿಗೆ ಅರಿವಿತ್ತಾದರೂ ನನ್ನ ಮೇಲಿನ ವಿಶ್ವಾಸದಿಂದ ಕೆಲಸಕ್ಕೆ ಅನುಮತಿ ನೀಡಿದ್ದರು. ಆ ನಂಬಿಕೆ ನನ್ನನ್ನು ಇಲ್ಲಿಯ ವರೆಗೆ ಕರೆ ತಂದಿದೆ ಎಂದು ಹೇಳಿದರು.

ನಾನು ಹುಟ್ಟುತ್ತಲೇ ಕೈ ಕಾಲು ಕಳೆದುಕೊಂಡಿಲ್ಲ. ಕಾಂಬೋಡಿಯ ಪ್ರವಾಸದಿಂದ ಹಿಂದಿರುಗಿದ ಒಂದು ತಿಂಗಳ ಬಳಿಕ ನನಗೆ ಜ್ವರ ಕಾಣಿಸಿಕೊಂಡಿತ್ತು. ಆ ಸಂದರ್ಭ ನಾನು ಗರ್ಭಿಣಿಯಾಗಿದ್ದೆ. ವೈದ್ಯರು ಸಾಮಾನ್ಯ ಜ್ವರದ ಔಷಧಿ ನೀಡಿದರು. ಆದರೆ ಅದು ಸಾಮಾನ್ಯ ಜ್ವರವಾಗಿರಲಿಲ್ಲ. ಕಾಯಿಲೆ ಪತ್ತೆ ಹೆಚ್ಚುವಾಗ ಸಮಯ ಮೀರಿ ಹೋಗಿತ್ತು. ಮಹಾಮಾರಿ ಗ್ಯಾಂಗ್ರೀನ್‌ನಿಂದ ಎರಡು ಕೈ, ಕಾಲುಗಳ ಜತೆಗೆ ಜಗತ್ತನ್ನು ಕಾಣದ ಮಗುವನ್ನು ಸಹ ಕಳೆದುಕೊಂಡೆ ಎಂದು ಬದುಕಿನ ಹಾದಿ ವಿವರಿಸಿದರು.

ಜೀವನದಲ್ಲಿ ಆಸೆ ಇರಬೇಕು
ನನಗೆ ಜೀವನದಲ್ಲಿ ಗುರಿಯಿಲ್ಲ. ಆದರೆ ಬೆಟ್ಟದಷ್ಟು ಆಸೆಗಳಿವೆ. ಅದುವೇ ನನ್ನನ್ನು ಇಲ್ಲಿಯವರೆಗೆ ಜೀವಂತ ಇರಿಸಿದೆ. ನಾನು ಪ್ರತಿಯೊಂದು ಕೆಲಸಕ್ಕೆ ಬೇರೆ ಯವರನ್ನು ಅವಲಂಬಿಸಬೇಕಾಗಿದೆ. ಆದರೆ ಓಟದ ಗುರಿ ಮುಟ್ಟಲು ನನಗೆ ಯಾರ ಸಹಾಯ ಬೇಕಿಲ್ಲ. ಬ್ಲೇಡ್‌ ರನ್ನರ್‌ ಆಗಿ 10 ಕಿ.ಮೀ. ದೂರ ಕ್ರಮಿಸಿದ್ದೇನೆ. ಮುಂದೆ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್‌ 2020ರಲ್ಲಿ ಭಾಗವಹಿಸಬೇಕು ಎನ್ನುವ ಆಸೆ ಇದೆ ಎಂದು ಹೇಳಿದರು.

ಧನಾತ್ಮಕ ಶಕ್ತಿ ಇದೆ!
ಇಂದು ಹುಟ್ಟಿದ ಮಗುವಿಗೂ ಕ್ಯಾನ್ಸರ್‌ ಇರುತ್ತದೆ. ನನಗೆ ದೇವರು ಹಾಗೂ ಜಾತಿ ಕುರಿತು ನಂಬಿಕೆಯಿಲ್ಲ. ಜಗತ್ತಿನಲ್ಲಿ ಒಂದು ಧನಾತ್ಮಕ ಶಕ್ತಿ ಇದೆ. ಅದರಲ್ಲಿ ನಂಬಿಕೆ ಇದೆ. ಅದು ನಮಗೆ ಪ್ರಾಪ್ತಿಯಾದರೆ ಎಷ್ಟೇ ಕಷ್ಟದ ಕೆಲಸವಾದರೂ ಜಯಿಸಲು ಸಾಧ್ಯ ಎಂದರು.

ಸಮಾಜ ನೋಡುವ ರೀತಿ
ಸಮಾಜಕ್ಕೆ ಗಂಡ ಅನಾರೋಗ್ಯ ಪೀಡಿತರಾದರೆ ಹೆಂಡತಿ ನೋಡಿಕೊಳ್ಳುವುದು ಧರ್ಮ. ಆದರೆ ಹೆಂಡತಿ ಅನಾರೋಗ್ಯ ಪೀಡಿತಳಾದರೆ ಗಂಡ ಆಕೆಯನ್ನು ನೋಡಿಕೊಂಡರೆ ಅದು ತ್ಯಾಗವಾಗಿ ಕಾಣುತ್ತದೆ. ಆದರೆ ನನ್ನ ಪತಿ ಭಿನ್ನ. ನನ್ನ ಉಳಿವಿಗಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ ಎಂದು ಜೀವನದ ಕಷ್ಟದ ದಿನಗಳನ್ನು ಮೆಲಕು ಹಾಕಿದರು. ಅದಿತಿ ಶಾಸಿŒ ಉಪಸ್ಥಿತರಿದ್ದರು. ಡಾ| ಶೋಭಾ ಕಾರ್ಯಕ್ರಮ ನಿರ್ವಹಿಸಿದರು.

ಆಶಾ ಮನೋಭಾವ ಬೆಳೆಸಿಕೊಳ್ಳಿ
ನಾನು ನನ್ನ ಕೈ ಕಾಲು ಕಳೆದುಕೊಂಡ ಅನಂತರ ಸಾಧನೆ ಮಾಡಿರುವುದು ಹೆಚ್ಚು. ಬದುಕಿನ ಸಿಹಿ ಹಾಗೂ ಕಹಿ ಘಟನೆಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಜೀವನದಲ್ಲಿ ಸಾಧ್ಯವಾದಷ್ಟು ಉತ್ತಮವಾದ ಸ್ನೇಹಿತರನ್ನು ಸಂಪಾದಿಸಿ. ನಿಮ್ಮ ಕಷ್ಟ ಕಾಲದಲ್ಲಿ ಅವರು ಖಂಡಿತ ನೆರವಾಗುತ್ತಾರೆ. ಒಂದು ಕಹಿ ಘಟನೆಯಿಂದ ಬದುಕು ನಾಶವಾಗಿದೆ ನಿರಾಶಭಾವ ಬಿಟ್ಟು ಹೊಸ ಬದುಕಿನ ಮುನ್ನುಡಿ ಎನ್ನುವ ಆಶಾ ಮನೋಭಾವದೊಂದಿಗೆ ಜೀವನ ನಡೆಸಿ ಎಂದು ವಿದ್ಯಾರ್ಥಿಗಳಿಗೆ ಶಾಲಿನಿ ಸರಸ್ವತಿ ಕರೆ ನೀಡಿದರು.

ಟಾಪ್ ನ್ಯೂಸ್

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

3 days fast as penance for Jagannath being a Modi devotee: Patra

Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

Hiriadka ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

Udupi ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Slander about Malabar group: Mumbai High Court harsh verdict

Malabar group ಬಗ್ಗೆ ಅಪಪ್ರಚಾರ:  ಮುಂಬಯಿ ಹೈಕೋರ್ಟ್‌ ಕಠಿನ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.