ಮೌನಿಯಾದೆ ನಾ…


Team Udayavani, Nov 25, 2019, 5:15 AM IST

sILENCE

ಮುಂಜಾವಿನ ಸೋಗು ಕಣ್ಮನ ಸೆಳೆಯುತ್ತಾ, ಭಾವನೆಗಳ ಜತೆಗೂಡಿ ನೆನಪುಗಳ ಸಾಲು ಒಂದೊಂದಾಗಿ ಬರುತಿರಲು ಮೌನವೊಂದೇ ಸಹಪಾಠಿ. ಪ್ರತಿಯೊಬ್ಬರ ಸುಂದರ ಪಯಣದಿ ಎಂದಿಗೂ ಜತೆಗಿರುವ ಮನದಾಳದ ಸಂಗಾತಿಯೂ ಹೌದು. ಮೌನ ಎಂದಾಕ್ಷಣ ಅಲ್ಲಿ ಹುದುಗಿರುವ ಸಾವಿರಾರು ಯೋಚನೆ, ಆಲೋಚನೆಗಳಿಗೆ ಅದೊಂದೇ ಕಣಿವೆಯಾಗಿ ನಮ್ಮನ್ನು ಇನ್ನೊಂದೆಡೆ ಬದುಕಲು ಪ್ರೇರೇಪಿಸುತ್ತಾ, ಸುಂದರ ಬದುಕಿನ ಪಯಣಕ್ಕೆ ಕರೆದೊಯ್ಯುತ್ತದೆ.

ನೀನಿರಲು ಸನಿಹ ಬೇರೇನು ಬೇಡ , ಕೆಲವೊಮ್ಮೆ ಇದೇ ಮೌನ ಆತಂಕವನ್ನು ಸೃಷ್ಟಿಸುವುದುಂಟು.ಭಯಪಡದೇ ಏಕಾಂತದಲ್ಲಿ ವಿಚಾರಗಳನ್ನು ಸಮರ್ಥಿಸಿದಾಗ ಉತ್ತರದ ಜತೆಗೆ ಮುಂದಾಗಬೇಕಾದ ಕಾರ್ಯಕ್ಕೆ ದಾರಿ ದೊರೆತು ಮನಸ್ಸು ನಿರಾಳವಾಗುವುದಂತೂ ನಿಜ. ಹಾಗಾಗಿ ಮೌನದಿಂದ ಮನಸ್ಸು ಕೆಡುತ್ತದೆ, ತಪ್ಪು ಹಾದಿಯತ್ತ ಮನದ ಚಿತ್ತ ಎನ್ನುವ ಮಾತು ಎಷ್ಟು ನಿಜವೋ ಅದೇ ಮೌನ ಸಾಧನೆಯ ಹಾದಿಯನ್ನೂ ತೋರುತ್ತದೆ ಎನ್ನುವುದೂ ಅಷ್ಟೇ ನಿಜ.

ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲೂ ಸಹಕಾರಿ. ಕಂಡು ಕಾಣದ ಮನಸ್ಸಿನ ನೋವು, ವೇದನೆಗಳಿಗೆ ಏಕಾಂತ ಜೊತೆಗಾರನಂತೆ ಬಂದು ಮನದ ಪರಿವರ್ತನೆಗೊಳಿಸಿ ಜೀವವಿಲ್ಲದ ಪಯಣವನ್ನು ಸುಂದರ ಜೀವಗೊಳಿಸಿ ಮುನ್ನಡೆಸುತ್ತದೆ. ಒಲಿದ ಅದೃಷ್ಟವನ್ನು ತೃಪ್ತಿಪಡುವುದು ಅಷ್ಟೇ ಸುಖವೆನಿಸುತ್ತದೆ.

ಜೀವನದಂತ್ಯದವೆರೆಗೆ ಕೂಡಿ ಬರುವ ಜೀವನದ ಹಾದಿ ಸುಗಮವಾಗಲೂ ಹೆಗಲು ನೀಡಿ, ಕಷ್ಟ ಸುಖಗಳಿಗೆ ಸಮಾನವಾಗಿ ಜತೆಗಿದ್ದು, ಮುನ್ನಡೆಸುತ್ತದೆ. ಬಯಸದೇ ಬಂದ ಭಾಗ್ಯ ನೋವುಗಳ ಜತೆಗೆ ಜೀವನದ ಸೂತ್ರವ ಹೆಣೆದು ಆಡಿಸುವ ಈ ಜಗದಿ ಏಕಾಂತ ಸುಂದರ ಬದುಕ ನಡೆಸಲು ನಮ್ಮೊಂದಿಗೆ ಇರುತ್ತದೆ. ಸಮಯೋಚಿತ ಸಲಹೆ ನೀಡುವವರು, ಕೈ ಹಿಡಿದು ಮುನ್ನಡೆಸೋ ಜನ ಎಷ್ಟಿದ್ದರೂ, ಸುತ್ತೆಲ್ಲಾ ಹರಡಿದ ಮೌನ ಒಂದು ವಿಧವಾದ ಹುನ್ನಾರವನ್ನೆ ಹುಟ್ಟುಹಾಕಿರುತ್ತದೆ. ಮೌನ ಬೇಡ ಮಾತು ಬೇಕೆನಿಸಿದರೂ, ಮೌನಕ್ಕಿರುವ ಒಳಾರ್ಥ ಜೀವನದಲ್ಲಿನ ನೋವ ಮರೆತು ಪ್ರತಿಯೊಂದು ಮೆಟ್ಟಿಲುಗಳನ್ನೇರುತ್ತಾ ಹೊಸ ಹುರುಪಿನ ಹೊಸ ಅರ್ಥದ ಹೊಸ ಬದುಕು ಮೌನ ಕಣಿವೆಯಿಂದ.

-ವಿಜಿತಾ, ಬಂಟ್ವಾಳ

ಟಾಪ್ ನ್ಯೂಸ್

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.