ತೀವ್ರ ಚಳಿಗೆ ಉತ್ತರ ಭಾರತ ಗಡಗಡ
Team Udayavani, Dec 9, 2019, 1:23 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಉತ್ತರ ಭಾರತದಾದ್ಯಂತ ಚಳಿ ತೀವ್ರಗೊಂಡಿದ್ದು, ಲಡಾಖ್ನ ದ್ರಾಸ್ನಲ್ಲಿ ಮೈನಸ್ 26 ಡಿಗ್ರಿ ಸೆಲ್ಷಿಯಸ್ ಉಷ್ಣತೆ ದಾಖಲಾಗಿದೆ. ಮೈನಸ್ 4 ಡಿ.ಸೆ.ನೊಂದಿಗೆ ಶ್ರೀನಗರವು ಶನಿವಾರ ತನ್ನ ಅತಿ ಶೀತದ ರಾತ್ರಿಯನ್ನು ಕಂಡಿದೆ.
ದಾಲ್ ಸರೋವರವು ಭಾಗಶಃ ಮಂಜುಗಡ್ಡೆಯಾಗಿ ಪರಿವರ್ತನೆಯಾಗಿದೆ. ಮನೆಗಳಲ್ಲಿ ನಲ್ಲಿಗಳ ಮೂಲಕ ಬರುವ ನೀರೂ ಮಂಜುಗಡ್ಡೆಯಾಗಿ ಬದಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿರುವ ಕಾರಣ, ಸತತ 2ನೇ ದಿನವೂ ಅಂದರೆ ರವಿವಾರವೂ ವಿಮಾನಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.