ತೊಡೆ ತಟ್ಟಿದ “ಒಡೆಯ’

ಚಿತ್ರ ವಿಮರ್ಶೆ

Team Udayavani, Dec 14, 2019, 7:02 AM IST

Odeya

ದರ್ಶನ್‌ ಸಿನಿಮಾದಿಂದ ಅವರ ಪಕ್ಕಾ ಅಭಿಮಾನಿಗಳು, ಅದರಲ್ಲೂ ಅವರ ಮಾಸ್‌ ಅಭಿಮಾನಿಗಳು ಏನು ಬಯಸುತ್ತಾರೆ ಹೇಳಿ? ಹೈವೋಲ್ಟೆಜ್‌ ಆ್ಯಕ್ಷನ್‌, ಪಂಚಿಂಗ್‌ ಡೈಲಾಗ್‌, ಕಲರ್‌ಫ‌ುಲ್‌ ಸಾಂಗ್‌, ರುಚಿಗೆ ತಕ್ಕಷ್ಟು ಕಾಮಿಡಿ… ಇವೆಲ್ಲದರ ಮಧ್ಯೆ ಒನ್‌ಲೈನ್‌ ಸ್ಟೋರಿ. ದರ್ಶನ್‌ ಕೂಡಾ ಸಿನಿಮಾ ಒಪ್ಪಿಕೊಳ್ಳುವ ಮುಂಚೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಅದು ರೀಮೇಕ್‌ ಆಗಲಿ, ಸ್ವಮೇಕ್‌ ಆಗಲಿ, ಅಭಿಮಾನಿಗಳು ಇಷ್ಟಪಡುತ್ತಾರಾ ಎಂಬುದು ಮುಖ್ಯವಾಗುತ್ತದೆ.

ಈ ವಾರ ತೆರೆಕಂಡಿರುವ “ಒಡೆಯ’ ಚಿತ್ರ ನೋಡಿದರೆ ನಿಮಗೆ ಈ ಮೇಲಿನ ಅಂಶಗಳು ಸಿಗುತ್ತವೆ. ಅದೇ ಕಾರಣದಿಂದ ಚಿತ್ರಮಂದಿರದಲ್ಲಿ ದರ್ಶನ್‌ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಜೋರಾಗಿದೆ. ಅದರಲ್ಲೂ ಮಾಸ್‌ ಡೈಲಾಗ್‌ಗಳ ಮೂಲಕ ಅಭಿಮಾನಿಗಳನ್ನು ಖುಷಿಪಡಿಸಲು ಚಿತ್ರತಂಡ ಸ್ವಲ್ಪ ಹೆಚ್ಚೇ ಪ್ರಯತ್ನಿಸಿದೆ. ಹಾಗಂತ “ಒಡೆಯ’ ಚಿತ್ರ ಕೇವಲ ಮಾಸ್‌ಗಷ್ಟೇ ಸೀಮಿತನಾ ಎಂದು ನೀವು ಕೇಳುವಂತಿಲ್ಲ. ಏಕೆಂದರೆ ಮಾಸ್‌ ಅಂಶಗಳ ಹಿಂದೆ ಕ್ಲಾಸ್‌ ಇದೆ.

ಆ ಕ್ಲಾಸ್‌ ಮೂಲಕ ಮಾಸ್‌ಗೆ ದೊಡ್ಡ ದಾರಿ ಸಿಗುತ್ತದೆ. ಅದೇನೆಂಬುದನ್ನು ನೀವು ತೆರೆಮೇಲೆ ನೋಡಬಹುದು. ಅಂದಹಾಗೆ, ಇದು ತಮಿಳಿನ “ವೀರಂ’ ಸಿನಿಮಾದ ರೀಮೇಕ್‌. ಮೂಲ ಕಥೆಯನ್ನಿಟ್ಟುಕೊಂಡು ಉಳಿದಂತೆ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಂಡು “ಒಡೆಯ’ನನ್ನು ಕಟ್ಟಿಕೊಡಲಾಗಿದೆ. ಅದೇ ಕಾರಣದಿಂದ ಮೊದಲರ್ಧ ಮಾಸ್‌ ಆದರೆ, ದ್ವಿತೀಯಾರ್ಧ ಕ್ಲಾಸ್‌ ಎನ್ನಬಹುದು. ಇಲ್ಲಿ ತುಂಬು ಕುಟುಂಬವೊಂದರ ಖುಷಿ ಇದೆ,

ಅದರ ಹಿಂದೆಯೇ ದೊಡ್ಡ ಕಂಟಕವೊಂದರ ಛಾಯೆಯೂ ಇದೆ. ಇವೆಲ್ಲವನ್ನು ಮೆಟ್ಟಿ ನಿಲ್ಲಲು ಗಜೇಂದ್ರ ಎಂಬ ಬಲಿಷ್ಠನೊಬ್ಬನಿದ್ದಾನೆ. ಚಿತ್ರದಲ್ಲಿ ಆ್ಯಕ್ಷನ್‌ ಅತಿಯಾಯಿತೇನೋ ಎಂಬ ಭಾವನೆ ಬರುವಾಗ ಸಾಧುಕೋಕಿಲ ಪ್ರತ್ಯಕ್ಷರಾಗುತ್ತಾರೆ. ಒಮ್ಮೆ ನೈಟಿ ಹಾಕಿಕೊಂಡು ನಗಿಸಲು ಪ್ರಯತ್ನಿಸಿದರೆ, ಇನ್ನೊಮ್ಮೆ ಪಂಚೆ ಉದುರಿಸಿಕೊಂಡು ನಗಿಸುತ್ತಾರೆ. ನಗುವ ದೊಡ್ಡ ಮನಸ್ಸು ನಿಮಗೆ ಬೇಕು.

ಅದೇ ಕಾರಣದಿಂದ ನೀವು ಒಂದು ಕಮರ್ಷಿಯಲ್‌ ಸಿನಿಮಾವನ್ನು ಇಷ್ಟಪಡುವವರಾಗಿದ್ದರೆ ನಿಮಗೆ “ಒಡೆಯ’ ಇಷ್ಟವಾಗುತ್ತದೆ. ಇನ್ನು, ಮೂಲ ಚಿತ್ರದ ಅವಧಿಗಿಂತ “ಒಡೆಯ’ನ ಅವಧಿ ಕಡಿಮೆ ಇದೆ. ಇಲ್ಲೂ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶವಿತ್ತು. ನಟ ದರ್ಶನ್‌ ಅವರಿಗೆ ಇಂತಹ ಕಥೆಗಳು ಹೊಸದಲ್ಲ. ಈ ಹಿಂದೆಯೂ ಫ್ಯಾಮಿಲಿ ಕಂ ಮಾಸ್‌ ಎಂಟರ್‌ಟೈನರ್‌ ಸಿನಿಮಾಗಳಲ್ಲಿ ದರ್ಶನ್‌ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಈ ಬಾರಿ “ಒಡೆಯ’ ಮೂಲಕ ಮತ್ತೂಮ್ಮೆ ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಂಭಾಷಣೆ, ಆ್ಯಕ್ಷನ್‌, ನಟನೆ ಮೂಲಕ ರಂಜಿಸಿದ್ದಾರೆ. ನಾಯಕಿ ಸನಾ ತಿಮ್ಮಯ್ಯ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದರೂ, ನಟನೆಯಲ್ಲಿ ಸಾಕಷ್ಟು ಪಳಗಬೇಕಿದೆ. ಉಳಿದಂತೆ ದೇವರಾಜ್‌, ಶರತ್‌ ಲೋಹಿತಾಶ್ವ, ರವಿಶಂಕರ್‌, ಚಿಕ್ಕಣ್ಣ, ಸಾಧುಕೋಕಿಲ ನಟಿಸಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತದೆ.

ಚಿತ್ರ: ಒಡೆಯ
ನಿರ್ಮಾಣ: ಎನ್‌.ಸಂದೇಶ್‌
ನಿರ್ದೇಶನ: ಎಂ.ಡಿ.ಶ್ರೀಧರ್‌
ತಾರಾಗಣ: ದರ್ಶನ್‌, ಸನಾ ತಿಮ್ಮಯ್ಯ, ದೇವರಾಜ್‌, ಶರತ್‌ ಲೋಹಿತಾಶ್ವ, ರವಿಶಂಕರ್‌, ಚಿಕ್ಕಣ್ಣ ಮತ್ತಿತರರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.