ಟಿಡಿಪಿ ನಾಯಕನ ಹೇಳಿಕೆ ಖಂಡಿಸಿ ಹುತಾತ್ಮ ಪೊಲೀಸನ ಶೂಗೆ ಮುತ್ತಿಟ್ಟ ಆಂಧ್ರ ಸಂಸದ
Team Udayavani, Dec 21, 2019, 1:50 PM IST
ಹೈದರಬಾದ್: ಮತ್ತೊಮ್ಮೆ ಟಿಡಿಪಿ ಅಧಿಕಾರಕ್ಕೆ ಬಂದಲ್ಲಿ ಪೊಲೀಸರು ನನ್ನಂತಹ ರಾಜಕಾರಣಿಗಳ ಬೂಟು ನೆಕ್ಕುವಂತೆ ಮಾಡುತ್ತೇನೆ ಎಂದು ಟಿಡಿಪಿ ನಾಯಕ ದಿವಾಕರ ರೆಡ್ಡಿ ಅವರ ವಿವಾದಿತ ಹೇಳಿಕೆಗೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸದ ಗೋರಂಟ್ಲ ಮಾಧವ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಮಾತ್ರವಲ್ಲದೆ ಹುತಾತ್ಮ ಪೊಲೀಸರೊಬ್ಬರ ಬೂಟು ನೆಕ್ಕುವ ಮೂಲಕ ದಿವಾಕರ ರೆಡ್ಡಿ ಹೇಳಿಕೆಯನ್ನು ಖಂಡಿಸಿದ್ದಾರೆ.
ಮಾಜಿ ಪೊಲೀಸ್ ಅಧಿಕಾರಿಯೂ ಅಗಿರುವ ಗೋರಂಟ್ಲ ಮಾಧವ ಅವರು, ಪೊಲೀಸರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ದಿವಾಕರ ರೆಡ್ಡಿ ನಡೆಯನ್ನು ಖಂಡಿಸಿದ್ದಾರೆ.
ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಸಂಸದ ಜೆ.ಸಿ. ದಿವಾಕರ್ ರೆಡ್ಡಿ ಬುಧವಾರ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿ ಸತ್ಯಯೇಸು ಬಾಬು ಅವರನ್ನು ಗುರಿಯಾಗಿರಿಸಿಕೊಂಡಡು ಮಾತನಾಡುತ್ತಾ: ಕೆಲವು ಪೊಲೀಸರು ಅಧಿಕಾರದ ದರ್ಪ ಮೆರೆಯುತ್ತಿದ್ದಾರೆ. ನಮ್ಮ ಪಕ್ಷದ ಸ್ಥಳೀಯ ನಾಯಕರ ವಿರುದ್ಧ ಸುಳ್ಳು ಕೇಸ್ ಗಳನ್ನು ದಾಖಲಿಸುತ್ತಿದ್ದಾರೆ. ಅನಂತಪುರ ಎಸ್ಪಿಯವರೇ ನಿಮ್ಮ ಅಧಿಕಾರವಧಿ 5 ವರ್ಷಕ್ಕೆ ಸೀಮಿತವಲ್ಲ. ಟಿಡಿಪಿ ಅಧಿಕಾರ ಬಂದಲ್ಲಿ ನಮ್ಮ ಬೂಟು ನೆಕ್ಕುವ ಪೊಲೀಸರನ್ನು ನೇಮಿಸಿಕೊಂಡು,ನಿಮ್ಮ ವಿರುದ್ಧವೂ ಸುಳ್ಳು ಕೇಸ್ ದಾಖಲಿಸುತ್ತೇವೆ ಎಂದು ಹೇಳಿದ್ದರು.
ಇದನ್ನು ಖಂಡಿಸಿರುವ ಗೋರಂಟ್ಲ ಮಾಧವ, ಪೊಲೀಸರು ಜನರ ಸುರಕ್ಷತೆಗಾಗಿ ಕುಟುಂಬದ ಕಾಳಜಿಯನ್ನು ಬದಿಗೊತ್ತಿ ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಾರೆ. ಸಾರ್ವಜನಿಕ ಜೀವನದಲ್ಲಿರುವವರು, ಜನ ಪ್ರತಿನಿಧಿಗಳು ಅವರ ಬಗ್ಗೆ ಹೀಗೆ ಬಾಯಿಗೆ ಬಂದಂತೆ ಮಾತನಾಡುವುದು ತರವಲ್ಲ. ಅದು ದಿವಾಕರ ರೆಡ್ಡಿಯವರ ಯೋಗ್ಯತೆಯನ್ನು ತೊರಿಸುತ್ತದೆ ಎಂದು ಹೇಳಿ ಹುತಾತ್ಮ ಪೊಲೀಸರ ಬೂಟು ನೆಕ್ಕುವ ಮೂಲಕ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ