ಕಷ್ಟಕಾಲದಲ್ಲಿ ಕೈ ಹಿಡಿಯಿತು ಕಸೂತಿ ಕಲೆ

ಇದು ವಾರ್ಡನ್‌ ಕಲಿಸುವ ಪಾಠ

Team Udayavani, Dec 25, 2019, 5:27 AM IST

sz-5

ಹಾಸ್ಟೆಲ್‌ ಮಕ್ಕಳಿಗೆ ವಾರ್ಡನ್‌ ಅಂದ್ರೆ ಭಯ. ತುಂಬಾ ಸ್ಟ್ರಿಕ್ಟ್ ಇರ್ತಾರೆ. ಪ್ರೀತಿಯಿಂದ ಮಾತಾಡಿಸುವುದಿಲ್ಲ ಅಂತೆಲ್ಲಾ ವಾರ್ಡನ್‌ ಬಗ್ಗೆ ದೂರುಗಳಿರುತ್ತವೆ. ಆದರೆ, ಚಾಮನಾಳದ ಕಸ್ತೂರಬಾ ಬಾಲಕಿಯರ ವಸತಿ ಶಾಲೆಯ ಮಕ್ಕಳಿಗೆ ಮಾತ್ರ ತಮ್ಮ ವಾರ್ಡನ್‌ ಅಂದ್ರೆ ಅಚ್ಚುಮೆಚ್ಚು. ಯಾಕೆ ಗೊತ್ತಾ? ಅಲ್ಲಿ ವಾರ್ಡನ್‌ ಆಗಿ ಕೆಲಸ ಮಾಡ್ತಿರೋ ಶಾಹೀನ, ಬೇರೆ ವಾರ್ಡನ್‌ಗಳಿಗಿಂತ ಬಹಳ ಭಿನ್ನ.ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿ ಶಾಹೀನ ಸಿಖೀಲ್‌ಘರ್‌, ಬಡಕಟುಂಬದಿಂದ ಬಂದವರು.

ಬಿ.ಎಸ್ಸಿ. ಮುಗಿಸಿ ವಾರ್ಡ್‌ನ್‌ ಆಗಿ ಕೆಲಸಕ್ಕೆ ಸೇರಿದ ಶಾಹೀನರಿಗೆ, ಬಿಡುವಿನ ವೇಳೆಯನ್ನು ವ್ಯರ್ಥವಾಗಿ ಕಳೆಯುವುದು ಇಷ್ಟವಿರಲಿಲ್ಲ. ಆ ಸಮಯದಲ್ಲಿ ಏನಾದರೂ ಮಾಡಬೇಕೆಂದು ಯೋಚಿಸಿದ ಆಕೆ, ತನಗೆ ಗೊತ್ತಿರುವ ಕಸೂತಿ ಕಲೆಯನ್ನು ಹಾಸ್ಟೆಲ್‌ ಹುಡುಗಿಯರಿಗೂ ಕಲಿಸಲು ನಿರ್ಧರಿಸಿದಳು. ಇದಕ್ಕೆ ಶಾಲಾ ಮುಖ್ಯಸ್ಥೆ ಮತ್ತು ಶಿಕ್ಷಕಿಯರಿಂದಲೂ ನೆರವು ಸಿಕ್ಕಿತು.

ವಾರದಲ್ಲಿ 2 ದಿನ ತರಬೇತಿ
ಸದ್ಯ, ಪ್ರಾಥಮಿಕ ಶಾಲೆಯ 150 ಹಾಗೂ ಪ್ರೌಢಶಾಲೆಯ 50 ವಿದ್ಯಾರ್ಥಿನಿಯರು ಶಾಹೀನ ಅವರಿಂದ ಕಸೂತಿ ಕಲೆ ತರಬೇತಿ ಪಡೆಯುತ್ತಿದಾರೆ. ಶನಿವಾರ-ಭಾನುವಾರ ಹಾಗೂ ರಜೆ ದಿನಗಳಲ್ಲಿ ಸಿಗುವ ಬಿಡುವಿನ ವೇಳೆಯಲ್ಲಿ, ಎಲ್ಲರೂ ಆಕೆಯ ಸುತ್ತ ಕುಳಿತು, ಉತ್ಸಾಹದಿಂದ ಕಸೂತಿ ಹೆಣೆಯುತ್ತಾರೆ.

ಎಂಬ್ರಾಯ್ಡ್ ರಿಗೆ ಒತ್ತು
ಇತ್ತೀಚಿನ ದಿನಗಳಲ್ಲಿ ಎಂಬ್ರಾಯ್ಡ್ ರಿ ಕೆಲಸಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಸೀರೆ, ಬ್ಲೌಸ್‌ಗೆ ಎಂಬ್ರಾಯxರಿ ಹಾಕಿಸುವುದು ಈಗಿನ ಟ್ರೆಂಡ್‌. ಅದನ್ನು ಕಲಿತರೆ ಸ್ವಂತ ಸಂಪಾದನೆಗೆ ಮೋಸವಿಲ್ಲ. ಹೀಗಾಗಿ, ವಿದ್ಯಾರ್ಥಿನಿಯರಿಗೆ ಪ್ರತಿದಿನ ಶಾಲಾ ಅವಧಿಯ ನಂತರ ಸಂಜೆ 40 ನಿಮಿಷ ಬಟ್ಟೆ ಹೊಲಿಗೆ ಮತ್ತು ಎಂಬ್ರಾಯxರಿ ಕೆಲಸ ಕಲಿಸುತ್ತಾರೆ ಶಾಹೀನ.

ರೇಷ್ಮೆದಾರ, ಉಲನ್‌ ದಾರ, ಪ್ಲಾಸ್ಟಿಕ್‌ ವೈರ್‌, ಬಾಗಿಲು ಪರದೆ, ಟೇಬಲ್‌ ಕ್ಲಾಥ್‌, ಮಕ್ಕಳ ಹೊದಿಕೆ ಶಾಲು, ಗರಂ ಟೋಪಿ, ಚಿತ್ತಾರದ ಕ್ಯಾಪ್‌, ಬೊಂಬೆ, ಬಾಸ್ಕೆಟ್‌ ಬ್ಯಾಗ್‌, ಕರವಸ್ತ್ರ, ಹಡಗು, ನಾವಿ, ತೆಪ್ಪ, ಕಿವಿ ಓಲೆ, ಹೇರ್‌ಬ್ಯಾಂಡ್‌, ಮುತ್ತಿನ ಮರ, ಮುತ್ತಿನ ಸರ, ಮುತ್ತಿನ ಬಳೆ, ತೊಟ್ಟಿಲು, ಬುತ್ತಿ ಡಬ್ಬಿಯ ಹೊದಿಕೆ ಮೇಣದ ಬತ್ತಿ ತಯಾರಿಕೆ, ಹರಿದ ಸೀರೆಗಳಿಂದ ಮ್ಯಾಟ್‌ ತಯಾರಿಸುವುದು, ಆಟದ ಸಾಮಾನುಗಳು, ಫ್ಲವರ್‌ ಪಾಟ್‌, ಪಕ್ಷಿಗಳ ಪ್ರತಿಕೃತಿ… ಹೀಗೆ, ಶಾಹೀನಾ ಹೇಳಿಕೊಡುವ ಕಸೂತಿ ಪಾಠದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ತಯಾರಿಸಿದ ವಸ್ತುಗಳನ್ನು, ಹತ್ತಿರದ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ.

ಉಪಜೀವನಕ್ಕೆ ಸಹಕಾರಿ
ಮಕ್ಕಳನ್ನು ಹಾಸ್ಟೆಲ್‌ಗೆ ದಾಖಲಿಸುವಾಗಲೇ ಪಾಲಕರಿಗೆ, ಕಸೂತಿ ತರಬೇತಿಗೆ ಬೇಕಾಗುವ ಸಾಮಗ್ರಿಗಳನ್ನು ಒದಗಿಸುವಂತೆ ತಿಳಿಸಲಾಗುತ್ತದೆ. ವಿದ್ಯಾರ್ಥಿನಿಯರು, ತಾವು ತಯಾರಿಸುವ ಚಿತ್ತಾಕರ್ಷಕ ವಸ್ತುಗಳನ್ನು ಮನೆಗೂ ಕೊಂಡೊಯ್ಯಬಹುದು. ವಸತಿ ನಿಲಯದಲ್ಲಿದ್ದು ವಿದ್ಯಾಭ್ಯಾಸ ಮುಗಿಸಿದ ಅದೆಷ್ಟೋ ವಿದ್ಯಾರ್ಥಿನಿಯರು, ಕರಕುಶಲ ಕಲೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯಾಭ್ಯಾಸದ ನಂತರ ಮದುವೆಯಾಗಿ ಬೇರೆ ಪಟ್ಟಣಗಳಿಗೆ ಹೋಗಿರುವ ಹುಡುಗಿಯರು, ಕರಕುಶಲ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡಿ ಉಪಜೀವನಕ್ಕೆ ದಾರಿ ಕಂಡುಕೊಂಡಿದ್ದಾರೆ.

“ವಿದ್ಯಾರ್ಥಿ ಜೀವನದಲ್ಲಿ ಕಲಿತಕೊಂಡ ಕರಕುಶಲ ಕಲೆ ಕುಟುಂಬದ ಕೈ ಹಿಡಿದಿದೆ. ವಿವಿಧ ನಮೂನೆಯ ಆಕೃತಿಗಳನ್ನು ಮಾರಾಟ ಮಾಡಿ ಸಂಸಾರ ಸಾಗಿಸುತ್ತಿದ್ದೇವೆ. ಕರಕುಶಲ ಕಸೂತಿ ಕೆಲಸ ನಮ್ಮ ಜೀವನಕ್ಕೆ ಆಧಾರವಾಗಿದೆ’
-ಮಲ್ಲಮ್ಮ ಪಟೇಲ್‌, ಹಾಸ್ಟೆಲ್‌ನ ಹಳೆ ವಿದ್ಯಾರ್ಥಿನಿ

“ವಾರ್ಡ್‌ನ್‌ ಕಲಿಸಿಕೊಟ್ಟ ಕರಕುಶಲ ಕಲೆ ನಮ್ಮ ಬದುಕಿಗೆ ಆಶ್ರಯವಾಗಿದೆ. ಈ ಕಲೆಯಿಂದ ಆರ್ಥಿಕವಾಗಿ ಸದೃಢವಾಗಿರಲು ಸಾಧ್ಯವಾಗಿದೆ. ಶಾಹೀನ ಮೇಡಂ ಅವರನ್ನು ನಾನು ಪ್ರತಿನಿತ್ಯವೂ ಸ್ಮರಿಸುತ್ತೇನೆ’
-ಶ್ರೀದೇವಿ, ಹಳೆ ವಿದ್ಯಾರ್ಥಿನಿ

ಸಿದ್ದಯ್ಯ ಪಾಟೀಲ

ಟಾಪ್ ನ್ಯೂಸ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.