ಕಿಡಿಗೇಡಿಗಳ ಫೇಸ್ಗೆ ಸಾಫ್ಟ್ ವೇರ್ ಗುದ್ದು !
ಫೇಸ್ ರೆಕಗ್ನಿಶನ್ ಸಾಫ್ಟ್ ವೇರ್ ಬಳಕೆ ಹಿಂಸಾಚಾರದಲ್ಲಿ ತೊಡಗುವವರನ್ನು ಪತ್ತೆಹಚ್ಚಲು ಈ ಕ್ರಮ
Team Udayavani, Dec 29, 2019, 7:00 AM IST
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಕೆಲವು ಕಡೆ ಇವು ಹಿಂಸೆಯ ರೂಪ ತಾಳಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗ “ಫೇಸ್ ರೆಕಗ್ನಿಶನ್'(ಮುಖ ಗುರುತಿಸುವಿಕೆ) ಅಸ್ತ್ರವನ್ನು ಪ್ರಯೋಗಿಸಲು ಆರಂಭಿಸಿದ್ದಾರೆ.
ಪ್ರತಿಭಟನ ರ್ಯಾಲಿಗಳಲ್ಲಿ ಸಾವಿರಾರು ಮಂದಿ ಭಾಗವಹಿಸುವ ಕಾರಣ, ಹಿಂಸಾಚಾರದಲ್ಲಿ ತೊಡಗಿ ದವರು ಯಾರು ಎಂಬುದನ್ನು ಕರಾರುವಕ್ಕಾಗಿ ಪತ್ತೆಹಚ್ಚುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಫೇಸ್ ರೆಕಗ್ನಿಶನ್ ಸಾಫ್ಟ್ವೇರ್ ಬಳಸಿಕೊಂಡು, ಅದರ ಮೂಲಕ ಕಿಡಿಗೇಡಿಗಳನ್ನು ಪತ್ತೆಹಚ್ಚುವ ಉಪಾಯವನ್ನು ಹೂಡಲಾಗಿದೆ.
ಸಾಫ್ಟ್ ವೇರ್ಗೆ ಅಪ್ಲೋಡ್
ಪ್ರಸ್ತುತ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ದೃಶ್ಯಾವಳಿಗಳನ್ನು ಪೊಲೀಸರು ಈ ಸಾಫ್ಟ್ ವೇರ್ಗೆ ಅಪ್ಲೋಡ್ ಮಾಡುತ್ತಿದ್ದು, ಆ ಮೂಲಕ ವೃತ್ತಿಪರ “ಪ್ರತಿಭಟನಕಾರರು’ ಹಾಗೂ “ರೌಡಿ’ಗಳನ್ನು ಪತ್ತೆಹಚ್ಚುವ ಕಾರ್ಯ ವನ್ನು ಈಗಾಗಲೇ ಆರಂಭಿಸಲಾಗಿದೆ.
ಡೇಟಾಸೆಟ್ ರೆಡಿ
ಈವರೆಗೆ ದಿಲ್ಲಿ ಪೊಲೀಸರು ಮಾಮೂಲಿ ಅಪರಾಧ ಪ್ರಕರಣ ಗಳ ತನಿಖೆಗೆ ಅನುಕೂಲವಾಗ ಲೆಂದು ಸುಮಾರು 1.5 ಲಕ್ಷ “ಹಿಸ್ಟರಿ ಶೀಟರ್’ಗಳ ಫೋಟೋಗಳನ್ನು ಒಳಗೊಂಡ ಡೇಟಾಸೆಟ್ ತಯಾರಿಸಿಕೊಂಡಿದ್ದಾರೆ. ಇನ್ನು ಅತ್ಯಂತ ಸೂಕ್ಷ್ಮವಾದ ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ನಿಗಾ ಇಡಲೆಂದು ಶಂಕಿತ ಉಗ್ರರು ಹಾಗೂ ದುಷ್ಕರ್ಮಿಗಳ ಸುಮಾರು 2,000 ಫೋಟೋಗಳುಳ್ಳ ಮತ್ತೂಂದು ಸೆಟ್ ಅನ್ನು ಸಿದ್ಧಪಡಿಸಿಟ್ಟು ಕೊಂಡಿದ್ದಾರೆ.
ಮೋದಿ ರ್ಯಾಲಿಯಲ್ಲೂ ಬಳಕೆ
ಡಿ. 22ರಂದು ದಿಲ್ಲಿಯ ರಾಮಲೀಲಾ ಮೈದಾನ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ನಡೆದಾಗಲೂ ಪೊಲೀಸರು ಈ ಸಾಫ್ಟ್ವೇರ್ ಅನ್ನು ಮುನ್ನೆಚ್ಚರಿಕೆಯಾಗಿ ಬಳಸಿದ್ದರು. ಈ ರ್ಯಾಲಿ ವೇಳೆ ಉಗ್ರರ ದಾಳಿ ನಡೆಯ ಬಹುದು ಅಥವಾ ಪ್ರತಿ ಭಟನೆ ಮೂಲಕ ಕೆಲವು ಶಕ್ತಿಗಳು ರ್ಯಾಲಿಗೆ ಅಡ್ಡಿ ಉಂಟು ಮಾಡ ಬಹುದು ಎಂಬ ಹಿನ್ನೆಲೆಯಲ್ಲಿಯೂ ಇದನ್ನು ಬಳಸಿಕೊಳ್ಳಲಾಗಿತ್ತು.
ಯಾವಾಗೆಲ್ಲ ಬಳಸಲಾಗಿತ್ತು?
– ನಮ್ಮ ದೇಶದಲ್ಲಿ ಈ ಸಾಫ್ಟ್ವೇರ್ ಅನ್ನು ಆರಂಭದಲ್ಲಿ ಬಳಸಿಕೊಂಡದ್ದು ನಾಪತ್ತೆ ಯಾದ ಮಕ್ಕಳನ್ನು ಪತ್ತೆಹಚ್ಚಲು. 2018ರ ಮಾರ್ಚ್ನಲ್ಲಿ ದಿಲ್ಲಿ ಹೈಕೋರ್ಟ್ ಆದೇಶದ ಅನ್ವಯ ಪೊಲೀಸರು ಈ ಸಾಫ್ಟ್ವೇರ್ ಬಳಸಿ, ಕಣ್ಮರೆಯಾದ ಮಕ್ಕಳ ಫೋಟೋ ಗಳೊಂದಿಗೆ ಹೋಲಿಕೆ ಮಾಡಿಕೊಂಡು, ಯಾರೆಲ್ಲ ನಾಪತ್ತೆ ಯಾಗಿದ್ದಾರೆ, ಯಾರು ಪತ್ತೆಯಾಗಿದ್ದಾರೆ ಎಂಬುದನ್ನು ಕಂಡುಕೊಂಡಿದ್ದರು.
– ಇದಕ್ಕೂ ಮುನ್ನ ಎರಡು ಬಾರಿ ಸ್ವಾತಂತ್ರ್ಯ ದಿನದ ಪರೇಡ್ನಲ್ಲಿ ಹಾಗೂ ಒಂದು ಬಾರಿ ಗಣರಾಜ್ಯೋತ್ಸವದ ಪರೇಡ್ನಲ್ಲಿ ದಿಲ್ಲಿ ಪೊಲೀಸರು ಮುಖ ಗುರುತಿಸುವಿಕೆ ಸಾಫ್ಟ್ ವೇರ್ನ ಪ್ರಯೋಜನ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ