ಆರ್ಥಿಕ ಅಪಾಯಕ್ಕಿಂತ ಹವಾಮಾನ ವೈಪರಿತ್ಯಕ್ಕೇ ಪ್ರಥಮ ಪ್ರಾಶಸ್ತ್ಯ: WEF ವರದಿ
Team Udayavani, Jan 15, 2020, 10:30 PM IST
ಲಂಡನ್: ಇಂದು ಜಗತ್ತು ಎದುರಿಸುತ್ತಿರುವ ಪ್ರಮುಖ ದೀರ್ಘಕಾಲೀನ ಅಪಾಯಗಳಲ್ಲಿ ಹವಾಮಾನ ವೈಪರೀತ್ಯ ಅಗ್ರಸ್ಥಾನದಲ್ಲಿದ್ದು, 2020ರಲ್ಲಿ ಅಪಾಯದ ಮಟ್ಟ ಹೆಚ್ಚಾಗುವ ನಿರೀಕ್ಷೆ ಇದೆ. ಇದರ ಜತೆಗೆ ಆರ್ಥಿಕತೆ ಮತ್ತು ರಾಜಕೀಯ ಧ್ರುವೀಕರಣವೂ ಸೇರಲಿದೆ ಎಂದು ನೂತನ ಸಮೀಕ್ಷೆ ತಿಳಿಸಿದೆ.
ಹೆಚ್ಚಿದ ದೇಶಿಯ, ಅಂತಾರಾಷ್ಟ್ರೀಯ ಮತ್ತು ಆರ್ಥಿಕ ಮಂದಗತಿಯ ಮುನ್ಸೂಚನೆಗಳ ನಡುವೆ ಜಾಗತಿಕ ಆರ್ಥಿಕ ವೇದಿಕೆ (ಡಬ್ಲೂಇಎಫ್) ವಾರ್ಷಿಕ ಜಾಗತಿಕ ಅಪಾಯಗಳ ವರದಿಯನ್ನು ಬಿಡುಗಡೆ ಮಾಡಿದೆ.
ಭೌಗೋಳಿಕ, ರಾಜಕೀಯ ವಾಣಿಜ್ಯ ಸಮಸ್ಯೆಗಳು ಒಂದು ‘ಬಗೆಹರಿಯದ’ ಏಕಪಕ್ಷೀಯ ಮಹಾನ್ ಶಕ್ತಿಯಾಗಿದ್ದು, ಇದರ ಅಪಾಯಗಳ ತೀವ್ರತೆ ಹೆಚ್ಚುವ ಮುನ್ನ ಎಲ್ಲ ರಾಷ್ಟ್ರಗಳ ನಾಯಕರು ಈ ವಿಷಯಗಳ ಕುರಿತು ತುರ್ತಾಗಿ ಗಮನಹರಿಸಬೇಕು ಎಂದು ಎಚ್ಚರಿಸಿದೆ.
ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ಪರಿಸರದಲ್ಲಿನ ವಿಪರೀತ ಹವಾಮಾನದ ವೈಪರೀತ್ಯ ಸಮಸ್ಯೆಗಳು ಎದುರಾಗಿದ್ದು, ಮಾನವ ನಿರ್ಮಿತ ಪರಿಸರ ಆಪತ್ತುಗಳನ್ನು ಮತ್ತು ನೈಸರ್ಗಿಕ ವಿಪತ್ತುಗಳನ್ನು ಕಡಿತಗೊಳಿಸುವಲ್ಲಿ ವಿಫಲರಾಗಿದ್ದೇವೆ ಎಂದು ವರದಿ ಉಲ್ಲೇಖ ಮಾಡಿದೆ.
ದಶಕದ ಹಿಂದಷ್ಟೇ ಜಾಗತಿಕ ಅಪಾಯಗಳು, ಜಾಗತಿಕ ಆರ್ಥಿಕತೆ ಮತ್ತು ಹಣಕಾಸು ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿತು. ಅಲ್ಪಾವಧಿಯ 2020ರಲ್ಲಿ ಆರ್ಥಿಕ ಪ್ರತಿಸ್ಪರ್ಧೆ, ದೇಶಿಯ ರಾಜಕೀಯ ಧ್ರುವೀಕರಣ, ವಾತಾವರಣದಲ್ಲಿ ತಾಪಮಾನ ಏರಿಕೆ, ನೈಸರ್ಗಿಕ ಸಂಪನ್ಮೂಲಗಳ ನಾಶ ಮತ್ತು ಸೈಬರ್ ದಾಳಿಗಳು ಸೇರಿಕೊಂಡಿವೆ.
ಲಂಡನ್ ನಲ್ಲಿ ಸಮೀಕ್ಷೆ ಬಿಡುಗಡೆ ಮಾಡಿದ ಜಿನಿವಾ ಮೂಲದ ಡಬ್ಲೂ.ಇ.ಎಫ್., ವಿಶ್ವದ ಸುಸ್ಥಿರಕ್ಕೆ ತೀವ್ರವಾದ ಅಪಾಯಗಳನ್ನು ತಡೆಯಲು ಜಾಗತಿಕ ನಾಯಕರ, ಉದ್ಯಮಿಗಳ, ಚಿಂತಕರ ಚಾವಡಿಗರ ಹಾಗೂ ನೀತಿ ನಿರೂಪಕರ ಸಹಯೋಗ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಿದೆ ಎಂದು ಹೇಳಿದೆ.
ದಾವೊಸ್ನಲ್ಲಿ ನಡೆಯುವ ಡಬ್ಲ್ಯೂ.ಇ.ಎಫ್.ನ ವಾರ್ಷಿಕ ಸಭೆಯಲ್ಲಿ ಜಾಗತಿಕ ಅಪಾಯಗಳ ವರದಿ ಬಗ್ಗೆ ಚರ್ಚೆ ನಡೆಯಲಿದ್ದು, ಬದಾವೊಸ್ನ 50ನೇ ವಾರ್ಷಿಕ ಸಭೆಯು ಜನವರಿ 20ರಿಂದ 24ರ ನಡುವೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್, ಸಾವಿನ ಸಂಖ್ಯೆ 90ಕ್ಕೆ ಏರಿಕೆ
Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್ ಪಡೆ
ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!
Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
MUST WATCH
ಹೊಸ ಸೇರ್ಪಡೆ
Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ
Bhupal: ʼಭೂಪೇಂದ್ರ ಜೋಗಿʼ ರೀಲ್ಸ್ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ
Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು
ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು
Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ