ಒಂದಷ್ಟು ಖುಷಿಯೊಂದಿಗೆ…


Team Udayavani, Jan 20, 2020, 5:55 AM IST

ASD

ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು ತುಂಬಿಕೊಂಡು ದಿನಪೂರ್ತಿ ಅದರ ಯೋಚನೆಯೆಲ್ಲೇ ಕೊರಗುತ್ತಾ ನಮ್ಮ ಅಮೂಲ್ಯ ದಿನವನ್ನು ಹಾಳು ಮಾಡಿಕೊಳ್ಳುತ್ತೇವೆ. ಕೆಲವು ಸಂದರ್ಭ ನಗು ಬಂದರೂ ನಗಲು ನಾವು ತಯಾರಿರುವುದಿಲ್ಲ. ಏನೇ ಆಗಲಿ ಆ ಕ್ಷಣಕ್ಕೆ ಒಮ್ಮೆ ಮನಸ್ಸು ತೆರೆದು ನಕ್ಕು ಬಿಟ್ಟರೆ ನಾವು ಎಷ್ಟೋ ಖುಷಿಯಿಂದ ಜೀವಿಸಬಹುದು. ಸಂತೋಷ ಎನ್ನುವುದೇ ಹಾಗೆಯೇ ಅದನ್ನು ಇನ್ನೊಬ್ಬರ ಹತ್ತಿರ ಹಂಚಿಕೊಂಡಷ್ಟು ಇಮ್ಮಡಿಯಾಗುತ್ತದೆ.

ಶಾಲೆ, ಕಾಲೇಜು, ಕ್ಯಾಂಪಸ್ಸು, ಮನೆ, ಗೆಳೆಯರು ಅವರ ಹಳೆಯ ನೆನಪುಗಳು ನಮನ್ನು ಆಗಾಗ ಕಾಡುತ್ತವೆ. ಕಳೆದು ಹೋದ ಆ ಜೀವನ ಮತ್ತೆ ಸಿಗಬೇಕು ಎನ್ನುವ ಹುಚ್ಚು ಮನಸ್ಸಿನ ಹಟ ಇನ್ನಷ್ಟು ದುಃಖಕ್ಕೆ ತಳ್ಳಿ ಬಿಡುತ್ತವೆ. ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ತಪ್ಪಲ್ಲ. ಆದರೆ ನಿನ್ನೆ ತಿಂದ ಹೋಳಿಗೆಯ ಸವಿ ಇಂದು ಬೆಳಗ್ಗಿನ ದೊಸೆಯಲ್ಲೂ ಬಯಸುವುದು ಎಷ್ಟು ಸರಿ? ನಿನ್ನೆ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದವಳೂ ಇಂದು ಇದೆಲ್ಲ ಸರಿ ಬರೊಲ್ಲ. ನಾವು ಸ್ನೇಹಿತರಾಗಿಯೇ ಉಳಿದುಬಿಡೋಣ ಎನುತ್ತಾಳೆ. ಆ ಕ್ಷಣಕ್ಕೆ ಬಂದದ್ದನ್ನು ಖುಷಿಯಿಂದ ಅನುಭವಿಸಿದರೆ ಜೀವನ ಮತ್ತಷ್ಟು ಸುಂದರವಾಗುತ್ತದೆ. ಇಲ್ಲವಾದರೆ ನಿನ್ನೆ ಅನುಭವಿಸಿದ ಸಂತೋಷಕ್ಕೆ ಇಂದು ನೋವು ಪಡಬೇಕಾಗುತ್ತದೆ. ಜೀವನದ ಪ್ರತೀ ಹಂತದಲ್ಲೂ ವಿಭಿನ್ನ ಜನರು ಸಿಗುತ್ತಾರೆ. ತುಂಬ ಹತ್ತಿರಕ್ಕೆ ಬಂದಷ್ಟೇ ವೇಗದಲ್ಲಿ ಮತ್ತೆಲ್ಲೋ ತೆರೆ ಮರೆಗೆ ಸರಿದು ಬಿಡುತ್ತಾರೆ. ಅವರಿಂದ ಹೊಸದೇನೊ ಒಂದನ್ನು ನೀವು ನಿಮಗೆ ಗೊತ್ತಿಲ್ಲದೇ ಹಾಗೆ ಕಲಿತಿರುತ್ತೀರಿ. ಜೀವನವೇ ಹಾಗೆ ಎಲ್ಲರಿಂದಲೂ ಒಂದೊಂದು ಅಂಶ ಕಲಿತು ಪಕ್ವವಾಗುತ್ತದೆ.

ಜೀವನ ಹರಿಯುವ ನೀರಾಗಬೇಕು. ದಟ್ಟ ಕಾನನವ ಭೇದಿಸಿ ಕಣಿವೆಯಿಂದ ಧುಮಿಕ್ಕಿ ಹರಿಯುವ ನದಿಯಂತೆ ನಮ್ಮ ಜೀವನದಲ್ಲೂ ಅಚಾನಕ್ಕಾದ ತಿರುವು, ಭೋರ್ಗರೆತ, ಭಯ ಹುಟ್ಟಿಸುವ ಆಳವಾದ ಕಣಿವೆ, ಶಾಂತವಾದ ಬಯಲು ಆಗಾಗ ಎದುರಾಗುತ್ತವೆ. ಹೀಗಿದ್ದಾಗಲೇ ಅದಕ್ಕೊಂದು ಅರ್ಥ ಸಿಗುವುದು. ಬದುಕಿನ ಪಯಣದ ಉದ್ದಕ್ಕೂ ಅನೇಕರು ಸಿಗುತ್ತಾರೆ. ಕೆಲವರು ಶಾಶ್ವತ, ಕೆಲವರು ಕ್ಷಣಿಕ, ಇನ್ನು ಕೆಲವರು ಇದ್ದೂ ಇಲ್ಲದಂತೆ ಇದ್ದುಬಿಡುತ್ತಾರೆ. ಜತೆಗಿರುವಷ್ಟು ದಿನ ಒಬ್ಬರಿಗೊಬ್ಬರು ಹೆಗಲಾಗುತ್ತಾ, ಹೆಗಲು ಬಯಸುತ್ತಾ ಅವರ ಸುಖ, ದುಃಖದಲ್ಲಿÉ ಜತೆಯಾಗಿ ಇದ್ದು ಬಿಡಬೇಕು. ಹಾಗೇ ಒಂದಷ್ಟು ಖುಷಿಯೊಂದಿಗೆ…

– ಶಿವಾನಂದ ಎಚ್‌.

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.