ಕಾವ್ಯಧಾರೆಗೆ ಬಂತು ಹೊಸ ನೀರು


Team Udayavani, Mar 8, 2020, 5:04 AM IST

hoosa-niru

ಎಸ್‌.ದಿವಾಕರ್‌ ಅವರು ತಮ್ಮ ಓದಿನ ವ್ಯಾಪ್ತಿಯಿಂದ ಸದಾ ಸಾಹಿತ್ಯ ವಲಯವನ್ನು ಅಚ್ಚರಿಗೊಳಿಸಿದ್ದಾರೆ. ಅವರ ಕತೆಗಳನ್ನು ಮೆಚ್ಚಿಕೊಂಡ ದೊಡ್ಡ ವರ್ಗವೇ ಇದೆ. ಅವರು ಸಮರ್ಥ ಕವಿಗಳು ಹೌದೆನ್ನುವುದು ಇತ್ತೀಚೆಗೆ ಬಿಡುಗಡೆಯಾದ ಅವರ ಕವಿತಾ ಗುತ್ಛ ಓದಿದರೆ ತಿಳಿಯುವುದು. ಅವರು ಇಷ್ಟು ದಿವಸ ಈ ಕವಿತೆಗಳನ್ನು ಪುಸ್ತಕ ರೂಪದಲ್ಲಿ ತರದೆ ಕನ್ನಡ ಕವಿತೆಯ ಓದುಗರಿಗೆ ತುಂಬಾ ಅನ್ಯಾಯ ಮಾಡಿದ್ದಾರೆ.

ದಿವಾಕರರ ಕವಿತೆಗಳನ್ನೋದುವಾಗ ಕವಿ ಬೊರಿಸ್‌ ಪಾಸ್ತರ್ನಾಕನ ಸಾಲುಗಳು ನೆನಪಾದವು:
ಖಾಲಿ ಬಿಡು ಜಾಗಗಳನ್ನು ಬದುಕಿನಲ್ಲಿ ಆದರೆ ಕವಿತೆಯಲ್ಲಲ್ಲ ಅವರ ಕವಿತೆಗಳಲ್ಲಿ ಯಾವ ಪದವೂ ಪ್ರತಿಮೆಯೂ ಯಾದೃಚ್ಛಿಕವಾದುದಲ್ಲ. ಕತೆಗಳನ್ನು ಕಟ್ಟುವುದರಲ್ಲಿ ಅವರು ವಹಿಸುವ ಕಟ್ಟೆಚ್ಚರ ವಿಶ್ವದಆಧುನಿಕ ಕವಿಗಳಲ್ಲಿ ಪ್ರಮುಖರಾದವರನ್ನು ನೆನಪಿಸುತ್ತದೆ.

ಕನ್ನಡ ಕಾವ್ಯದಲ್ಲಿ ಆಧುನಿಕತೆ ಬಂದಾಗ ಅದು ವಿಶ್ವಕಾವ್ಯದ ಆಧುನಿಕತೆಯ ಸೀಮಿತ ರೂಪವಾಗಿತ್ತು. ಆಧುನಿಕ ಕಾವ್ಯ ವಿಶ್ವವ್ಯಾಪಿಯಾದ ಚಳುವಳಿಯಾದರೂ ಅದರ ಚಾಲನೆ ಸುರುವಾದದ್ದು ಯುರೋಪಿನ ಭಾಗಗಳಲ್ಲಿ.ಆಧುನಿಕ ಕಾವ್ಯದ ಲಕ್ಷಣಗಳ ಬಗೆಗೆ ದೀರ್ಘ‌ಚಿಂತನೆ ಮಾಡಿದ ಅಕ್ಟೇವಿಯೊ ಪಾಜ್‌ನ ಪ್ರಕಾರ ಆಧುನಿಕ ಕಾವ್ಯಎರಡು ಪ್ರಕಾರದ್ದು.ಮೊದಲನೆಯದು, ಜರ್ಮನಿಕ್‌ ಭಾಗಗಳ ಅಂಶೀಛಂದವನ್ನು ಹೋಲುವ ಪ್ರಕಾರದ್ದು.ಇದರ ಅಭಿವ್ಯಕ್ತಿ ಬಿಚ್ಚುಛಂದಸ್ಸಿನ ರಚನೆ. ಇನ್ನೊಂದು ರೋಮಾನ್ಸ್‌ ಭಾಗಗಳದು. ಇಲ್ಲಿನ ಛಂದಸ್ಸು ಮಾತ್ರಾಧಾರಿತ. ಇದರ ಪ್ರಧಾನ ಅಭಿವ್ಯಕ್ತಿ ಗದ್ಯಕತೆ.

ಟಿ.ಎಸ್‌.ಎಲಿಯಟ್‌ನ ಕಾವ್ಯವನ್ನು ರೊಮಾನ್ಸ್‌ ಆಧುನಿಕತೆಯ ಪ್ರಾತಿನಿಧಿಕ ಕವಿಯಾದ ಲೋರ್ಕಾನ ಕತೆಗಳ ಜೊತೆ ಹೋಲಿಸಿದರೆ ಇನ್ನೊಂದು ವ್ಯತ್ಯಾಸ ಗಮನಕ್ಕೆ ಬರುತ್ತದೆ. ಅದೇನೆಂದರೆ, ಎಲಿಯಟ್‌ನ ಪ್ರತಿಮಾಲೋಕ ಜಾಗೃತಾವಸ್ಥೆಯ ಬಿಸಿಲಿನಲ್ಲಿ ಮಿಂದದ್ದು. ಆದರೆ, ಲೋರ್ಕಾನನದು ಸ್ವಪ್ನಾವಸ್ಥೆಯ ಬೆಳದಿಂಗಳಲ್ಲಿ ಮೈತೊಳೆದುಕೊಂಡದ್ದು.

ಕನ್ನಡದ ಆಧುನಿಕತೆಯ ಪ್ರಧಾನಧಾರೆ ಆಂಗ್ಲೋ-ಅಮೆರಿಕನ್‌ ಮೂಲದಿಂದ ಬಂದ ಕಾರಣ ಅದು ಜರ್ಮನಿಕ್‌ ಬಗೆಯದು; ವ್ಯಂಗ್ಯದ, ವಿಡಂಬನೆಯ ಎಚ್ಚರದಿಂದ ಕೂಡಿದ್ದು.ಆದರೆ ಇದಕ್ಕೆ$ವ್ಯತಿರಿಕ್ತವಾದ ಒಳವಾಸ್ತವಿಕ ಬಗೆಯ ಆಧುನಿಕತೆಯ ಸಣ್ಣ ಝರಿಯೊಂದು ಕನ್ನಡಕಾವ್ಯದಲ್ಲಿ ಆಗಾಗ ಹರಿದದ್ದುಂಟು.ಉದಾಹರಣೆಗೆ ಕೆಎಸ್‌ನ ಅವರ ಶಿಲಾಲತೆ ಕಾಲದ ಕತೆಗಳು, ವಿಶೇಷವಾಗಿ ಗಡಿಯಾರದಂಗಡಿಯ ಮುಂದೆ ಎಂಬ ಕವಿತೆ. ಆದರೆ, ತೆರೆದ ಬಾಗಿಲು ಹಂತಕ್ಕೆ ಬಂದಾಗ ಕೆಎಸ್‌ನ ಅವರೇ ಈ ಶೈಲಿಗೆ ದಾಯ ಹೇಳಿಬಿಟ್ಟಿದ್ದರು. ಹೀಗಾಗಿ, ವಿಶ್ವಕಾವ್ಯದ ಆಧುನಿಕತೆಯ ಒಂದು ಪ್ರಧಾನ ಭಾಷಿಕ ಸಾಹಿತ್ಯದಿಂದ ಕನ್ನಡಕಾವ್ಯ ವಂಚಿತವಾಗಿತ್ತು. ಆ ಕೊರೆಯನ್ನು ದಿವಾಕರರ ಕವಿತೆಗಳು ಸರಿಪಡಿಸಿವೆಯೆಂಬುದು ಅವರ ಕಾವ್ಯಕಾಯಕದ ವಿಶೇಷವಾಗಿದೆ.

ದಿವಾಕರರ ಕಾವ್ಯದಲ್ಲಿ ನನಗೆ ಆಂಗ್ಲೋ-ಅಮೆರಿಕನ್‌ ಕಾವ್ಯವಲಯದ ಹೊರಗಿನ ಮಹಾನ್‌ ಕವಿಗಳ ಪ್ರೇರಣೆ ಕಾಣುತ್ತದೆ. ಆದರೆ, ಅದು ಖಂಡಿತ ಅನುಕರಣೆ ಅಲ್ಲ. ದಿವಾಕರರು ಆಧುನಿಕ ವಿಶ್ವಕಾವ್ಯದ ಹಲವು ಪ್ರಯೋಗ ಸಾಧ್ಯತೆಗಳನ್ನು ಮೈಗೂಡಿಸಿಕೊಂಡು ಅದರ ಕನ್ನಡದ ವಿಶೇಷ ಬಗೆಯನ್ನು ನಿರ್ಮಿಸಿ ವಿಶಿಷ್ಟರಾಗಿದ್ದಾರೆ.

ಕಾವ್ಯ ಮತ್ತು ವೈಚಾರಿಕತೆಯ ಸಂಬಂಧದ ಪರಿ ಮತ್ತೂಂದು ಗಮನಾರ್ಹ. ಕಾವ್ಯಆಷೇಯವಾಗಲಿ, ಆಧುನಿಕವಾಗಲಿ, ಅದು ಒಂದು ವೈಚಾರಿಕ ನಿಲುವಿನ ಪದ್ಯಾತ್ಮಕ ತರ್ಜಮೆ ಅಲ್ಲ. ವೈಚಾರಿಕ ಪೂರ್ವಗ್ರಹದಿಂದ ಬಿಡುಗಡೆ ಹೊಂದಿ, ಈ ಕವಿತೆಗಳು ಭಾವಕ್ಷಣವೊಂದರ ಅನನ್ಯತೆಯನ್ನು, ಅದ್ವಿತೀಯತೆಯನ್ನು ಕಾವ್ಯವಾಗಿ ನಿರ್ಮಿಸುತ್ತಿದೆ.

“ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಹುದೆ?’ ಇದು ಅಲ್ಲಮ ಕೇಳಿದ ಪ್ರಶ್ನೆ. ಇದಕ್ಕೆ ಉತ್ತರವೋ ಎಂಬಂತೆ ದಿವಾಕರರು ಪದಗಳ ಮೂಲಕ ಪದಾರ್ಥಗಳನ್ನೂ ನಿರ್ಮಿಸುವ ಕಾರಣ ಕನ್ನಡಕಾವ್ಯವು ವಂಚಿತವಾದ ಒಂದು ಆಧುನಿಕ ಕಾವ್ಯಸಾಧ್ಯತೆಯನ್ನು ಕನ್ನಡಕ್ಕೆ ತಂದುಕೊಟ್ಟಿದ್ದಾರೆ.

ಎಚ್‌. ಎಸ್‌. ಶಿವಪ್ರಕಾಶ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.