ಕೋಂಗಲಪಾದೆ, ಕಂಚಿನಡ್ಕಪದವಿನಲ್ಲಿ ಮಾದರಿ ಶ್ಮಶಾನಗಳು

ಬಂಟ್ವಾಳ ತಾ|ನ 8 ಗ್ರಾಮಗಳಲ್ಲಿ ರುದ್ರಭೂಮಿ ವ್ಯವಸ್ಥೆಯೇ ಇಲ್ಲ

Team Udayavani, Mar 16, 2020, 5:00 AM IST

ಕೋಂಗಲಪಾದೆ, ಕಂಚಿನಡ್ಕಪದವಿನಲ್ಲಿ ಮಾದರಿ ಶ್ಮಶಾನಗಳು

ಕಲ್ಲಡ್ಕ: ರುದ್ರಭೂಮಿ ಹೇಗಿರಬೇಕು ಎಂಬುದಕ್ಕೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಕೋಂಗಲಪಾದೆ ಮತ್ತು ಸಜೀಪನಡು ಗ್ರಾಮದ ಕಂಚಿನಡ್ಕಪದವಿನ ಎರಡು ಶ್ಮಶಾನಗಳು ಮಾದರಿಯಾಗಿವೆ.

ಕೋಂಗಲಪಾದೆಯಲ್ಲಿ 5.29 ಎಕ್ರೆ ಜಮೀನು ಶ್ಮಶಾನದ ಉದ್ದೇಶಕ್ಕೆ ಮೀಸಲಾಗಿದೆ. ಇಲ್ಲಿ ನೂರಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ನೆಡಲಾಗಿದೆ. ಕ್ರೀಡಾಂಗಣ ರಚಿಸಲಾಗಿದೆ. ಸುಖಾಸಿನಗಳನ್ನು ಅಳವಡಿಸಿದ್ದು, ರುದ್ರ ದೇವರ ಬೃಹತ್‌ ಮೂರ್ತಿ ಯನ್ನು, ತ್ರಿಶೂಲವನ್ನು ಸ್ಥಾಪಿಸಲಾಗಿದೆ.

ಕಂಚಿನಡ್ಕಪದವಿನಲ್ಲಿ 1.20 ಎಕ್ರೆ ಜಮೀನು ಶ್ಮಶಾನದ ಉದ್ದೇಶಕ್ಕೆ ಮೀಸಲಾಗಿದೆ. ಶ್ಮಶಾನವನ್ನು ಸೌಕರ್ಯ, ಸೌಲಭ್ಯಗಳಿಂದ ನಿರ್ಮಿಸಲಾಗಿದೆ.ರುದ್ರ ದೇವರ ಬೃಹತ್‌ ಮೂರ್ತಿಯನ್ನು, ತ್ರಿಶೂಲ ವನ್ನು ಸ್ಥಾಪಿಸಲಾಗಿದೆ.

8 ಗ್ರಾಮಗಳಲ್ಲಿ
ರುದ್ರಭೂಮಿ ವ್ಯವಸ್ಥೆ ಇಲ್ಲ
ಬಂಟ್ವಾಳ ತಾಲೂಕಿನ 58 ಗ್ರಾ.ಪಂ.ಗಳಲ್ಲಿ ರುದ್ರಭೂಮಿ ವ್ಯವಸ್ಥೆಯೇ ಇಲ್ಲದ 8 ಗ್ರಾಮಗಳಿವೆ. ಇಲ್ಲಿನ ಗ್ರಾಮಸ್ಥರು ಹತ್ತಿರದ ಗ್ರಾಮದ ಶ್ಮಶಾನವನ್ನು ಅವಲಂಬಿಸಿದ್ದಾರೆ. 16 ಗ್ರಾಮಗಳ ಶ್ಮಶಾನಗಳಲ್ಲಿ ಸಮರ್ಪಕ ಸೌಕರ್ಯಗಳಿಲ್ಲ. ಅವುಗಳಲ್ಲಿ ಬಂಟ್ವಾಳ ನಗರ ಕೇಂದ್ರ ಬಿ.ಸಿ. ರೋಡ್‌ನ‌ ಕೈಕುಂಜೆ ಶ್ಮ‌¾ಶಾನವೂ ಕೂಡ ಒಂದಾಗಿದೆ.

ಕೈಕುಂಜೆ ರುದ್ರಭೂಮಿಗೆ ಸಂಪರ್ಕಿಸುವ ರಸ್ತೆ ರೈಲ್ವೇ ಇಲಾಖೆ ಜಮೀನಿನಲ್ಲಿ ಹೋಗುವುದರಿಂದ ಸಮಸ್ಯೆ ಎದುರಾಗಿದೆ. ನಿರ್ವಾಹಕರ ಕೊರತೆ ಯಿಂದ ಸಮಸ್ಯೆ ಎದುರಾಗಿದ್ದು, ಮೃತದೇಹ ವನ್ನು ಹತ್ತಿರದ ಇತರ ಗ್ರಾಮಗಳ ಶ್ಮ‌¾ಶಾನಕ್ಕೆ ಕೊಂಡು ಹೋಗುವಂತಾಗಿದೆ.

ತಾಲೂಕಿನ ಅನೇಕ ಗ್ರಾ.ಪಂ.ಗಳಲ್ಲಿ ಶ್ಮಶಾನಕ್ಕೆ ಜಮೀನು ಕಾದಿರಿಸಲಾಗಿದೆ. ಕಟ್ಟಡ ನಿರ್ಮಿಸಿ ಅರ್ಧದಲ್ಲಿ ನಿಲ್ಲಿಸಲಾಗಿದೆ. ಆರ್ಥಿಕ ಸಮಸ್ಯೆ, ಜಮೀನು ವಿವಾದ, ಆಕ್ಷೇಪಗಳಿಂದಾಗಿ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯ ಆಡಳಿತ ಸೋತಿದೆ. ಪ್ರಾಥಮಿಕವಾಗಿ ಜಮೀನು ಇಲ್ಲದಿರುವುದು. ಅನುದಾನದ ಕೊರತೆ, ಆಡಳಿತದ ನಿರಾಸಕ್ತಿ ಶ್ಮಶಾನ ನಿರ್ಮಾಣ ಸಮಸ್ಯೆಗೆ ಕಾರಣಗಳಾಗಿದೆ.

ಅತಿಕ್ರಮಣ
ರುದ್ರಭೂಮಿಗೆ ಮೀಸಲಿಟ್ಟ ಜಮೀನನ್ನು ಖಾಸಗಿ ವ್ಯಕ್ತಿಗಳು ಅಧಿಕಾರ ಬಲದಿಂದ ಅತಿಕ್ರಮಿಸಿ ತನ್ನ ಕುಟುಂಬಿಕರಿಗೆ, ಸಂಬಂಧಿಗಳಿಗೆ, ಸ್ವಹಿತಾಸಕ್ತರಿಗೆ ಅಕ್ರಮ-ಸಕ್ರಮದಲ್ಲಿ ಪರಾಭಾರೆ ಮಾಡಿಸಿಕೊಟ್ಟಿದ್ದಾರೆ ಎಂಬ ದೂರುಗಳಿವೆ. ಇಂತಹ ದೂರುಗಳನ್ನು ತಹಶೀಲ್ದಾರ್‌ ಕೂಡಾ ಪರಿಹರಿಸಲಾಗದೆ ಕೈಕಟ್ಟಿ ಕುಳಿತಿದ್ದಾರೆ ಎಂಬ ಆರೋಪಗಳಿವೆ.

 ಸರಕಾರಿ ಭೂಮಿ ಗುರುತಿಸಲು ಸೂಚನೆ
ಜಮೀನು ಕಾದಿರಿಸದ ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವಂತಹ ಸರಕಾರಿ ಭೂಮಿಯನ್ನು ಗುರುತಿಸಿ ಶ್ಮಶಾನಕ್ಕೆ ಗೊತ್ತುಪಡಿಸಲು ಸೂಚಿಸಲಾಗಿದೆ. ಶ್ಮಶಾನ ನಿರ್ಮಾಣ ಆರ್ಥಿಕ ಸಂಪನ್ಮೂಲಕ್ಕೆ ಉದ್ಯೋಗ ಖಾತರಿ ಯೋಜನೆ ಸಹಿತ ವಿವಿಧ ಮೂಲಗಳಿಂದ ಅನುದಾನ ಒದಗಿಸಲು ಸಾಧ್ಯವಿದೆ. ಈ ಸದುದ್ದೇಶಕ್ಕೆ ಖಾಸಗಿ ಸಾಮಾಜಿಕ ಸಂಘಸಂಸ್ಥೆಗಳು ಕೈಜೋಡಿಸುತ್ತವೆ. ಶ್ರೀಕ್ಷೇತ್ರ ಧ.ಗಾ. ಯೋಜನೆ ಪ್ರೋತ್ಸಾಹವನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಿದೆ.
– ರಾಜಣ್ಣ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪುರಸಭಾ ವ್ಯಾಪ್ತಿ ರುದ್ರಭೂಮಿ
– ಪಾಣೆಮಂಗಳೂರು ಗ್ರಾಮದ ಮಾಸ್ತಿಕಟ್ಟೆ- 0.50 ಎಕ್ರೆ, ನೇತ್ರಾವತಿ ನದಿ ತೀರದ ಸುಸಜ್ಜಿತ ಶ್ಮಶಾನ.
– ಬಿ. ಕಸ್ಬಾ ಗ್ರಾಮದ ಬಡ್ಡಕಟ್ಟೆ-0.30 ಎಕ್ರೆ, ನೇತ್ರಾವತಿ ನದಿ ತೀರದ ಸುಸಜ್ಜಿತ ಶ್ಮಶಾನವಿದೆ.
– ಬಿ. ಮೂಡ ಗ್ರಾಮದ ಕೈಕುಂಜೆ: 0.60 ಎಕ್ರೆ, ನೇತ್ರಾವತಿ ನದಿ ಸನಿಹವಿದೆ. ರಸ್ತೆ ಮತ್ತು ನಿರ್ವಾಹಕರ ಕೊರತೆ ಇದೆ ಎದುರಿಸುತ್ತಿದೆ.

– ರಾಜಾ ಬಂಟ್ವಾಳ

ಟಾಪ್ ನ್ಯೂಸ್

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Belthangady ವೇಣೂರಿನ ಬಾಹುಬಲಿಗೆ ಮಸ್ತಕಾಭಿಷೇಕ; ವಿರಾಟ್‌ ವಿರಾಗಿಗೆ ಮಜ್ಜನ ಸಮಾಪನ

Belthangady ವೇಣೂರಿನ ಬಾಹುಬಲಿಗೆ ಮಸ್ತಕಾಭಿಷೇಕ; ವಿರಾಟ್‌ ವಿರಾಗಿಗೆ ಮಜ್ಜನ ಸಮಾಪನ

Belthangady ವಿದ್ಯುತ್‌ ಕಂಬಕ್ಕೆ ಟಿಪ್ಪರ್‌ ಢಿಕ್ಕಿ

Belthangady ವಿದ್ಯುತ್‌ ಕಂಬಕ್ಕೆ ಟಿಪ್ಪರ್‌ ಢಿಕ್ಕಿ

Snake; ನೀರಿಲ್ಲದ ಬಾವಿಗೆ ಬಿದ್ದ ನಾಗರಹಾವಿನ ರಕ್ಷಣೆ

Snake; ನೀರಿಲ್ಲದ ಬಾವಿಗೆ ಬಿದ್ದ ನಾಗರಹಾವಿನ ರಕ್ಷಣೆ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.