ಐಪಿಎಲ್‌ ಆರಂಭಕ್ಕೆ 5 ದಿನಾಂಕ

ಎ. 15, ಎ. 21, ಎ. 25, ಮೇ 1 ಮತ್ತು ಮೇ 5

Team Udayavani, Mar 16, 2020, 1:19 AM IST

ಐಪಿಎಲ್‌ ಆರಂಭಕ್ಕೆ 5 ದಿನಾಂಕ

ಮುಂಬಯಿ: ಹದಿಮೂರನೇ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ತೂಗುಯ್ನಾಲೆಯಲ್ಲಿದೆ. ಇದು ನಡೆಯುತ್ತದೋ, ಇಲ್ಲವೋ ಅಥವಾ ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸಿ ಆಡಲಾಗುವುದೋ ಎಂಬ ಯಾವುದೇ ಪ್ರಶ್ನೆಗೆ ಶನಿವಾರದ ಸಭೆಯಲ್ಲಿ ಉತ್ತರ ಲಭಿಸಿಲ್ಲ. ಈ ನಡುವೆಯೇ ಐಪಿಎಲ್‌ ಫ್ರಾಂಚೈಸಿಗಳು ಕೂಟದ ಆರಂಭಕ್ಕೆ 5 ನೂತನ ದಿನಾಂಕಗಳನ್ನು ಸೂಚಿಸಿರುವುದು ತಿಳಿದು ಬಂದಿದೆ.

ಬಿಸಿಸಿಐ, ಐಪಿಎಲ್‌ ತಂಡಗಳ ಮಾಲಕರ ಸಭೆಯಲ್ಲಿ ಐಪಿಎಲ್‌ ಅಧ್ಯಕ್ಷ ಬೃಜೇಶ್‌ ಪಟೇಲ್‌ ಸಹಿತ ಉನ್ನತ ಅಧಿಕಾರಿಗಳೆಲ್ಲ ಪಾಲ್ಗೊಂಡಿದ್ದರು. ಆದರೆ ಯಾರಿಗೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಈ ನಡುವೆ ಫ್ರಾಂಚೈಸಿಗಳ ಮಾಲಕರು ಕೂಟದ ಆರಂಭಕ್ಕೆ ಕೆಲವು ದಿನಾಂಕಗಳನ್ನು ಸೂಚಿಸಿದ್ದಾಗಿ ವರದಿಯಾಗಿದೆ. ಮಾ. 19ಕ್ಕೆ ಆರಂಭವಾಗಬೇಕಿದ್ದ ಈ ಪಂದ್ಯಾವಳಿಯನ್ನು ಎ. 15, ಎ. 21, ಎ. 25, ಮೇ 1 ಅಥವಾ ಮೇ 5ರಿಂದ ಆರಂಭಿಸಬಹುದು ಎಂದು ಸೂಚಿಸಲಾಗಿದೆ.

ಆಗ ಸುದೀರ್ಘ‌ ಐಪಿಎಲ್‌ ಪಂದ್ಯಾವಳಿಗೆ ಕನಿಷ್ಠ 15ರಿಂದ 30 ದಿನಗಳ ನಷ್ಟವಾಗಲಿದೆ. ಆಗ ಈ ಕೂಟದ ಮಾದರಿಯನ್ನು ಪರಿವರ್ತಿಸುವುದು ಅನಿವಾರ್ಯವಾಗುತ್ತದೆ. ಪರ್ಯಾಯ ಮಾರ್ಗಗಳ ಬಗ್ಗೆ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಚರ್ಚೆ ನಡೆಯಬೇಕಾಗುತ್ತದೆ.

ಐಪಿಎಲ್‌ ಮುಂದಿರುವ ಅವಕಾಶಗಳು
– ಪೂರ್ಣ ಮಟ್ಟದಲ್ಲೇ ಪಂದ್ಯಾವಳಿ

ಎ. 15ರ ಅನಂತರ ಪೂರ್ಣ ಮಟ್ಟದಲ್ಲೇ ಪಂದ್ಯಾವಳಿಯನ್ನು ನಡೆಸುವುದು. ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಿ ಪಂದ್ಯಗಳನ್ನು ಆಡಿಸುವುದು. ಆದರೆ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಆಟಗಾರರಲ್ಲಿ ಯಾವ ಉತ್ಸಾಹವೂ ಇರದು. ಹಾಗೆಯೇ ಬಿಸಿಸಿಐಗೆ ಟಿಕೆಟ್‌ ಹಣವೂ ದಕ್ಕುವುದಿಲ್ಲ. ಇವೆರಡೂ ಈ ಹಂತದಲ್ಲಿ ಬಹಳ ಮಹತ್ವದ್ದಲ್ಲವಾದ್ದರಿಂದ ಫ್ರಾಂಚೈಸಿಗಳು ಅದಕ್ಕೆ ಸಿದ್ಧವಿವೆ. ಇದರಿಂದ ಒಂದು ಹಂತದ ಲಾಭ ಸಾಧ್ಯವಿದೆ.

– ದಿನಕ್ಕೆ ಎರಡು ಪಂದ್ಯಗಳು
ಎ. 15ರ ಬಳಿಕ ದಿನಕ್ಕೆರಡು ಪಂದ್ಯಗಳನ್ನು ನಡೆಸಿ, ಬೇಗ ಕೂಟ ಮುಗಿಸಿಬಿಡುವುದು.

ಐಪಿಎಲ್‌ನಲ್ಲಿ ಒಟ್ಟು 60 ಪಂದ್ಯಗಳು ನಡೆಯುತ್ತವೆ. ಸದ್ಯ ಬಿಸಿಸಿಐಗೆ 40 ದಿನಗಳ ಸಮಯಾವಕಾಶವಿದೆ. ದಿನಕ್ಕೆರಡು ಪಂದ್ಯಗಳನ್ನು ನಡೆಸಿದರೆ, 40 ದಿನದಲ್ಲಿ ಕೂಟ ಮುಗಿಸಬಹುದು. ಆದರೆ ಟಿವಿ ವೀಕ್ಷಕರಿಗೆ ಇದು ಬೋರ್‌ ಹೊಡೆಸುವ ಸಾಧ್ಯತೆಯಿದೆ.

– ಜ 8 ತಂಡಗಳ 2 ವಿಭಾಗ
8 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಿಯೂ ಆಡಬಹುದು. ಒಟ್ಟು 4 ಅಗ್ರ ತಂಡಗಳನ್ನು ಪ್ಲೇ ಆಫ್ಗೇರಿಸಲು ಅವಕಾಶ ನೀಡುವುದು.

ಇದುವರೆಗೆ ಐಪಿಎಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲೇ ನಡೆಯುತ್ತಿತ್ತು. ಇಲ್ಲಿ ಪ್ರತೀ ತಂಡ ಇನ್ನೊಂದು ತಂಡದ ವಿರುದ್ಧ 2 ಪಂದ್ಯಗಳನ್ನು ಆಡುತ್ತಿತ್ತು. ಈಗ 2 ಗುಂಪು ಮಾಡುವುದರಿಂದ ಪಂದ್ಯಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗುತ್ತದೆ. ಕೂಟವನ್ನು ಅತ್ಯಂತ ಬೇಗ ಮುಗಿಸಬಹುದು. ಬಹುಶಃ 20 ದಿನಗಳಲ್ಲೇ ಐಪಿಎಲ್‌ ಮುಗಿಯಲೂಬಹುದು. ಕೂಟದಲ್ಲೂ ಹೆಚ್ಚಿನ ರೋಚಕತೆ ಇರುತ್ತದೆ. ಆದರೆ ನೇರಪ್ರಸಾರ ಮಾಡುವ ಸ್ಟಾರ್‌ನ್ಪೋರ್ಟ್ಸ್ಗೆ ನಷ್ಟವಾಗಲಿದೆ.

– ಸೀಮಿತ ತಾಣಗಳಲ್ಲಿ ಪಂದ್ಯಗಳು
ಕೂಟದ ಎಲ್ಲ ಪಂದ್ಯಗಳನ್ನು 2 ಅಥವಾ 3 ತಾಣಗಳಲ್ಲಿ ಆಡಿಸುವುದು. ಇದರಿಂದ ಆಟಗಾರರ ಪ್ರವಾಸದ ಅವಧಿ ಸಾಕಷ್ಟು ಕಡಿಮೆಯಾಗುತ್ತದೆ. ಸದ್ಯ ಪ್ರೇಕ್ಷಕರಿಗೆ ಅವಕಾಶ ಇಲ್ಲದಿರುವುದರಿಂದ ಇದೊಂದು ಪ್ರಶಸ್ತ ಮಾರ್ಗವಾದೀತು. ಆದರೆ ಇದರಿಂದ ಮೈದಾನದ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ.

ಟಾಪ್ ನ್ಯೂಸ್

1—-wqwqeqwewqeq

India-born ಸುನೀತಾ ವಿಲಿಯಮ್ಸ್‌ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!

ಪ್ರಜ್ವಲ್‌ ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

Prajwal Revanna ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

1-wqewqeqwqweqwe

China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?

Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು

Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು

ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

Exam

NEET; ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ!: ಚುನಾವಣಾ ಅಸ್ತ್ರ

D. K. Shivakumar ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ

D. K. Shivakumar ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqqwewq

Must win ಡೆಲ್ಲಿ ಪ್ಲೇ ಆಫ್ ಆಸೆ ಜೀವಂತ: ರಾಜಸ್ಥಾನ್‌ ರಾಯಲ್ಸ್‌ ಸವಾಲು

CSK (2)

CSK; ಬಸ್‌ ಕಂಡಕ್ಟರ್‌ಗಳಿಗೆ ಚೆನ್ನೈ ಕಿಂಗ್ಸ್‌ನಿಂದ 8 ಸಾವಿರ ಅಗತ್ಯ ಗಿಫ್ಟ್ !

1-sss

Central government ಒಪ್ಪಿದರೆ ಪಾಕ್‌ಗೆ ಭಾರತ ಕ್ರಿಕೆಟ್‌ ತಂಡ: ರಾಜೀವ್‌ ಶುಕ್ಲ

1-wewqewqe

T20 ಸರಣಿ; ಬಾಂಗ್ಲಾ ಎದುರು ಭಾರತ ವನಿತೆಯರಿಗೆ 56 ರನ್‌ ಗೆಲುವು: 4-0 ಮುನ್ನಡೆ

PCB

Pakistan ಟಿ20 ವಿಶ್ವಕಪ್‌ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್‌ ಬಹುಮಾನ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

1—-wqwqeqwewqeq

India-born ಸುನೀತಾ ವಿಲಿಯಮ್ಸ್‌ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!

ಪ್ರಜ್ವಲ್‌ ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

Prajwal Revanna ವೀಡಿಯೋ ಪ್ರಕರಣಕ್ಕೆ ತಿರುವು ಡಿಕೆಶಿ ವಿರುದ್ಧ ಆಡಿಯೋ ಬಾಂಬ್‌

1-wqewqeqwqweqwe

China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?

Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು

Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು

ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.