ಜಾಲಿ ರೈಡ್ಗೆ ಇಂದಿನಿಂದ ಕೇಸು ದಾಖಲು!
Team Udayavani, Mar 25, 2020, 5:49 AM IST
ಮೂಡುಬಿದಿರೆ: ಅಂತರ್ ಜಿಲ್ಲಾ ಪ್ರವೇಶ ನಿರ್ಬಂಧದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಈಶಾನ್ಯ ಗಡಿ ಪ್ರದೇಶವಾದ ಬೆಳುವಾಯಿ ಕಾಂತಾವರ ಕ್ರಾಸ್ನಲ್ಲಿ ಜಿಲ್ಲೆಯನ್ನು ಪ್ರವೇಶಿಸಲೆತ್ನಿಸಿದವರನ್ನು ತಡೆದು ತೀವ್ರ ತಪಾಸಣೆಗೊಳಪಡಿಸಲಾಗು ತ್ತಿದೆ. ಅಗತ್ಯ ಸೇವೆ ಹೊರತು ಇತರ ವಾಹನಗಳನ್ನು ಬುಧವಾರದಿಂದ ತಡೆದು ಕೇಸು ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ಎಚ್ಚರಿಕೆ ನೀಡಿವೆ.
ಕೆಎಸ್ಆರ್ಪಿ ಸಹಿತ ಹಲವು ತಂಡಗಳು, ಅಧಿಕಾರಿಗಳು, ಹೋಂ ಗಾರ್ಡ್ಸ್, ಆರೋಗ್ಯ ಕಾರ್ಯಕರ್ತರು ಸ್ಥಳದಲ್ಲಿದ್ದು ಜಿಲ್ಲೆಗೆ ಅಗತ್ಯ ಪ್ರವೇಶ ಬಯಸಿದವರ ಎಲ್ಲ ದಾಖಲೆಗಳನ್ನು ಪರಿಶೀಲಿಸುವ ಜತೆಗೆ ವೈದ್ಯಕೀಯ ಸ್ಕ್ರೀನಿಂಗ್ಗೆ ಒಳಪಡಿಸಲಾಯಿತು. ಮುಂಡ್ಕೂರು ಜಾರಿಗೆಕಟ್ಟೆಯ ಮೂಲಕ ದ.ಕ. ಪ್ರವೇಶಿಸಲೆತ್ನಿಸಿದವ ರನ್ನು ಉಡುಪಿ ಪೊಲೀಸರು ತನಿಖೆಗೊಳಪಡಿಸುತ್ತಿದ್ದಾರೆ.
ಶಿರೂರು: ಅನಗತ್ಯ ಓಡಾಟಕ್ಕೆ ತಡೆ
ಬೈಂದೂರು: ಹೊರ ರಾಜ್ಯಗಳಿಂದ ಆಗಮಿಸುವ ವಾಹನಗಳಲ್ಲಿ ರುವ ವ್ಯಕ್ತಿಗಳನ್ನು ಶಿರೂರು ಟೋಲ್ಗೇಟ್ ಬಳಿ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯವರನ್ನು ಹೊರತುಪಡಿಸಿ ಅನಗತ್ಯವಾಗಿ ಒಳಬರುವ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಬೈಂದೂರು ಭಾಗದಲ್ಲಿ ಕಿರಾಣಿ ಹೊರತು ಪಡಿಸಿ ಉಳಿದೆಲ್ಲಾ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಬೆಳಗ್ಗೆ ರಸ್ತೆಗಿಳಿದ ಜನರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿದ್ದಾರೆ.
ಪೊಲೀಸರಿಂದ ಪಾಠ!
ಪಡುಬಿದ್ರಿ: ಯಾವುದೇ ಮುನ್ನೆಚ್ಚರಿಕೆಗಳನ್ನು ಲೆಕ್ಕಿಸದೆ ದ್ವಿಚಕ್ರ ವಾಹನಗಳಲ್ಲಿ ಜಾಲಿ ರೈಡ್ ಹೊರಟ ಯುವಜನರಿಗೆ ಹೆಜಮಾಡಿಯ ಗಡಿಯಲ್ಲಿ ಪೊಲೀಸರು ಪಾಠ ಹೇಳಿ ಮನೆಗಟ್ಟಿದ್ದಾರೆ. ಕೇವಲ ಹಾಸ್ಟೆಲ್ ಮಕ್ಕಳನ್ನು ಕರೆದು ತರಲು ಮಂಗಳೂರಿನತ್ತ ಹೋಗುತ್ತಿದ್ದ ತಂದೆ ತಾಯಿ, ಹೃದಯ ಸಂಬಂಧಿ ತುರ್ತು ಚಿಕಿತ್ಸಾ ಸೇವೆಗಳಿಗಾಗಿ ಮಂಗಳೂರಿನತ್ತ ಹೋಗಬಯಸಿದ ಆ್ಯಂಬುಲೆನ್ಸ್ಗಳನ್ನಷ್ಟೇ ಬಿಡಲಾಗಿದೆ ಎಂದು ಸಿಪಿಐ ದಿನೇಶ್ ಕುಮಾರ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
Desi Swara: ಮಸ್ಕತ್- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ