ಸುಳ್ಯ ಬಂದ್‌: ಹಾಲು ಪೂರೈಕೆಗೆ ತಡೆ; ಪರದಾಟ


Team Udayavani, Mar 29, 2020, 5:05 AM IST

ಸುಳ್ಯ ಬಂದ್‌: ಹಾಲು ಪೂರೈಕೆಗೆ ತಡೆ; ಪರದಾಟ

ಸುಳ್ಯ: ಸಂಪೂರ್ಣ ಬಂದ್‌ನಿಂದಾಗಿ ಶನಿವಾರ ತಾಲೂಕಿನಲ್ಲಿ ಜನಜೀವನ ಸ್ತಬ್ಧವಾಗಿತ್ತು. ಜನ, ವಾಹನ ಓಡಾಟಕ್ಕೆ ಕಡಿವಾಣ ಬಿದ್ದು, ಲಾಕ್‌ಡೌನ್‌ ಆದೇಶ ಪಾಲನೆ ಆಯಿತು. ಜಾಲೂÕರು, ಸುಳ್ಯ, ಕಲ್ಲುಗುಂಡಿ ಕಡೆ ನಿಯಮ ಮೀರಿ ರಸ್ತೆಗೆ ಇಳಿದ ವಾಹನ ಸವಾರರಿಗೆ ಪೊಲೀಸರು ಲಾಠಿ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು.

ಹಾಲು ಪೂರೈಕೆಗೆ ಅಡ್ಡಿ
ಹಾಲು ಪೂರೈಕೆಗೆ ಸರಕಾರ ಅವಕಾಶ ನೀಡಿದ್ದರೂ ಶನಿವಾರ ಅಡ್ಡಿ ಉಂಟಾಯಿತು. ಹಲವೆಡೆ ಹಾಲು ಪೂರೈಕೆ ವಾಹನಗಳಿಗೆ ಪೊಲೀಸರು ತಡೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಂಜೆ ವೇಳೆ ಹಾಲಿನ ಡಿಪೋಗಳಲ್ಲಿ ಹಾಲು ಖರೀದಿ ಸ್ಥಗಿತ ಮಾಡಲಾಯಿತು. ದಿನಕ್ಕೆ 200ಕ್ಕೂ ಅಧಿಕ ಲೀಟರ್‌ ಹಾಲು ಪೂರೈಕೆ ಮಾಡುವ ಹೈನುಗಾರರಿದ್ದು, ತೊಂದರೆಗೀಡಾದರು.

ಅಲೆಮಾರಿ ಕುಟುಂಬಗಳಿಗೆ ನೆರವು
ಸುಳ್ಯ ಕಸಬಾ ಗ್ರಾಮದ ಕಂದಡ್ಕದಲ್ಲಿ ಡೇರೆ ಹಾಕಿರುವ ಅಲೆಮಾರಿ ಜನರಿಗೆ ದುಗ್ಗಲಡ್ಕದ ಸಂಘ ಸಂಸ್ಥೆಗಳ ಸದಸ್ಯರು ಹಣ ಸಂಗ್ರಹಿಸಿ ಅಕ್ಕಿ, ಧಾನ್ಯಗಳನ್ನು ನೀಡಿದರು. ಯತೀಶ್‌ ರೈ ದುಗ್ಗಲಡ್ಕ, ನ.ಪಂ. ಸದಸ್ಯ ಬಾಲಕೃಷ್ಣ ರೈ ದುಗಲಡ್ಕ, ದಿನೇಶ್‌ ಮಣಿಯಾಣಿ, ನ.ಪಂ. ಸದಸ್ಯೆ ಶಶಿಕಲಾ ನೀರಬಿದಿರೆ, ಮಾಜಿ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಹೇಮಂತ್‌ ಕಂದಡ್ಕ ಉಪಸ್ಥಿತರಿದ್ದರು.

ಗಡಿ ಗ್ರಾಮದ ಗೋಳು
ಕರ್ನಾಟಕ -ಕೇರಳ ಗಡಿ ಪ್ರದೇಶಗಳಲ್ಲಿ ಕರ್ನಾಟಕ ಸರಕಾರವು ಬ್ಯಾರಿಕೇಡ್‌, ಮಣ್ಣು ಹಾಕಿ ಬಂದ್‌ ಮಾಡಿರುವುದು ಕೇರಳ ದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಪಾಣ ತ್ತೂರಿನ ಕಲ್ಲಪ್ಪಳ್ಳಿ, ಬಂದಡ್ಕದ ಕನ್ನಡಿತೋಡು, ಅಡೂರಿನ ಕನ್ಯಾನ, ಪಂಜಿಕಲ್ಲಿನ ಮುರೂರು ಭಾಗದಲ್ಲಿ ಹೀಗೆ ಬಂದ್‌ ಮಾಡಲಾಗಿತ್ತು.

ಸಮಯ ನಿಗದಿ
ಕೊಡಗಿನಲ್ಲಿ ಸಾರ್ವಜನಿಕರು ಅವಶ್ಯ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 6ರಿಂದ ಅಪರಾಹ್ನ 12ರ ವರೆಗೆ ಸಮಯವನ್ನು ಈ ಹಿಂದೆ ನಿಗದಿಗೊಳಿಸಲಾಗಿತ್ತು. ಸುಳ್ಯ ತಾಲೂಕಿನ ಹಲವು ಗ್ರಾಮಗಳು ಕೊಡಗು ಗಡಿಭಾಗದಲ್ಲಿದ್ದು, ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸ ಬೇಕಾದ ಕಾರಣ ಶನಿವಾರ ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅಗತ್ಯ ವಸ್ತುಗಳನ್ನು ಖರೀದಿಸಲು ಈ ಕೆಳಕಂಡಂತೆ ಸಮಯ ನಿಗದಿಪಡಿಸಲಾಗಿದೆ.

ಬೆಳಗ್ಗೆ 6ರಿಂದ 8ರ ವರೆಗೆ ಹಾಲು, ದಿನಪತ್ರಿಕೆ ಮಾತ್ರ ಖರೀದಿ.ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಆಹಾರ, ದಿನಸಿ, ತರಕಾರಿ, ಹಣ್ಣುಹಂಪಲುಗಳ ಖರೀದಿ.ಎಲ್ಲ ರೀತಿಯ ಮೀನು ಮತ್ತು ಮಾಂಸ ಮಾರಾಟ ನಿಷೇಧ.ಅಗತ್ಯ ವಸ್ತುಗಳ ಖರೀದಿಗೆ ಪ್ರತೀ ಮನೆಯಿಂದ ಒಬ್ಬ ಆರೋಗ್ಯವಂತ ವ್ಯಕ್ತಿ ಮಾತ್ರ ಆಗಮಿಸಬೇಕು.

ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ 1 ಮೀ. ಅಂತರ ಕಾಯ್ದುಕೊಳ್ಳಬೇಕು.
ಆಸ್ಪತ್ರೆ, ಕ್ಲಿನಿಕ್‌, ಫಾರ್ಮಸಿ, ಆಪ್ಟಿಕಲ್‌ ಸ್ಟೋರ್‌, ಡಯಾಗ್ನೊàಸ್ಟಿಕ್‌ ಸೆಂಟರ್‌ ಒಳಗೊಂಡಂತೆ ಇತರ ಆರೋಗ್ಯ, ವೈದ್ಯಕೀಯ ಸಂಬಂಧಿ ಅಂಗಡಿ, ಗೋಡೌನ್‌, ಕಾರ್ಖಾನೆಗಳಿಗೆ ಮಾತ್ರ ದಿನದ 24 ಗಂಟೆಗಳು ಕಾರ್ಯಾಚರಿಸಲು ವಿನಾಯಿತಿ.

ದಿನಪತ್ರಿಕೆ ವಿತರಣೆಗೆ ಅಡ್ಡಿ ಇಲ್ಲ
ದಿನಪತ್ರಿಕೆ ವಿತರಣೆಗೆ ಅವಕಾಶ ಇದ್ದು, ಪೊಲೀಸರು ಅಡ್ಡಿ ಮಾಡುವುದಿಲ್ಲ. ಮನೆ ಮನೆಗೆ ಪತ್ರಿಕೆ ವಿತರಣೆ ಮಾಡಬಹುದಾಗಿದೆ. ಈ ತನಕ ಯಾವುದೇ ದೂರು ಬಂದಿಲ್ಲ. ಅಡ್ಡಿ ಉಂಟಾದಲ್ಲಿ ಸಂಪರ್ಕಿಸುವಂತೆ ಸುಳ್ಯ ಠಾಣೆ ಎಸ್‌.ಐ. ಹರೀಶ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.