ದಕ್ಷಿಣ ಕೊರಿಯಾ ಮಾರಕ ವೈರಸ್ ಗೆದ್ದಿದ್ದು ಈ ನಾಲ್ಕು ವಿಧಾನಗಳಿಂದ
Team Udayavani, Mar 29, 2020, 1:50 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಇಲ್ಲಿ ಯಾವ ನಗರವನ್ನೂ ಲಾಕ್ ಡೌನ್ ಮಾಡಲಿಲ್ಲ. ಯಾವ ಸಾರಿಗೆ ಸಂಪರ್ಕವೂ ಸ್ಥಗಿತಗೊಳ್ಳಲಿಲ್ಲ, ಅಂತಾರಾಷ್ಟ್ರೀಯ ವಿಮಾನಗಳ ಪ್ರವೇಶವನ್ನೂ ತಡೆದಿಲ್ಲ… ಆದರೂ, 9,137 ಕೋವಿಡ್ 19 ವೈರಸ್ ಸೋಂಕಿತರ ಪೈಕಿ 3,730 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಈ ಅಚ್ಚರಿ ಸಂಭವಿಸಿದ್ದು ದಕ್ಷಿಣ ಕೊರಿಯಾದಲ್ಲಿ
ದಕ್ಷಿಣ ಕೊರಿಯಾದ ನಾಲ್ಕು ಕ್ರಮಗಳು
1. ಮಾಹಿತಿಯಲ್ಲಿ ಪಾರದರ್ಶಕತೆ
ಹೊಸದಾಗಿ ಪತ್ತೆಯಾದ ಸೋಂಕುಗಳ ಮಾಹಿತಿ ನೀಡುವಲ್ಲಿ ಪಾರದರ್ಶಕತೆ. ಎಲ್ಲಿ, ಯಾವಾಗ ಮತ್ತು ಹೇಗೆ ಸೋಂಕು ಪತ್ತೆಯಾಯಿತು ಎಂಬ ನಿಖರ ಮಾಹಿತಿ ಒದಗಿಸಿದ್ದು.
2. ನಿಯಂತ್ರಣ, ತಗ್ಗಿಸುವಿಕೆ
ಚೀನದಲ್ಲಿ ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಅಂದರೆ ಸೋಂಕು ಹರಡದಂತೆ ನಿಯಂತ್ರಣ ಕ್ರಮ. ಸೋಂಕಿತರನ್ನು ಗುರುತಿಸಿ, ಪ್ರತ್ಯೇಕಿಸುವ ಪ್ರಕ್ರಿಯೆಗೆ ವೇಗ.
3. ಕಿಟ್, ಸ್ಕ್ರೀನಿಂಗ್
ಪ್ರಮುಖ ಅಸ್ತ್ರವಾಗಿ ರೋಗಪತ್ತೆ ಕಿಟ್ ಗಳ ಬಳಕೆ ಹಾಗೂ ಭಾರೀ ಪ್ರಮಾಣದ ಸ್ಕ್ರೀನಿಂಗ್ ಪ್ರಕ್ರಿಯೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸಿದ 100ರಷ್ಟು ಪ್ರಯೋಗಾಲಯಗಳು. ವಾರಕ್ಕೆ 4.3 ಲಕ್ಷ ಮಂದಿಯ ತಪಾಸಣೆ ಮತ್ತು ರೋಗ ಪತ್ತೆ ಕಾರ್ಯ.
4. ಚಿಕಿತ್ಸೆಯ ಸರದಿ ನಿರ್ಧಾರ
2015ರಲ್ಲಿ ಮರ್ಸ್ ಸೋಂಕು ಆವರಿಸಿದ ವೇಳೆ ಬಳಸಲಾದ ಚಿಕಿತ್ಸೆಯ ಸರದಿ ನಿರ್ಧಾರ, ಚಿಕಿತ್ಸೆ ನೀಡುವ ವ್ಯವಸ್ಥೆಯ ಅನುಷ್ಠಾನ. ಗಂಭೀರ ಸ್ಥಿತಿಯಲ್ಲಿರುವವರಿಗೆಂದೇ 5 ಐಸೋಲೇಷನ್ ಆಸ್ಪತ್ರೆಗಳ ಸ್ಥಾಪನೆ ಮತ್ತು ಉಳಿದವರನ್ನು ಸಮುದಾಯ ಆಸ್ಪತ್ರೆಗಳಿಗೆ ರವಾನೆ. ಹೋಟೆಲ್, ಜಿಮ್, ವಸತಿ ಕೇಂದ್ರಗಳನ್ನು ಕೂಡ ಹೊಸ ಆಸ್ಪತ್ರೆಗಳಾಗಿ ಬಳಕೆ.
ಸ್ವಯಂಪ್ರೇರಿತ ಸಾಮಾಜಿಕ ಅಂತರ
ಸ್ವಯಂಪ್ರೇರಿತವಾಗಿ ಜನ ಅಂತರ ಕಾಯ್ದು ಕೊಂಡರು. 2015ರ ಮರ್ಸ್ ಸೋಂಕಿನ ವೇಳೆ ಆ ದೇಶ ಕಲಿತ ಪಾಠ ಕೂಡ ನೆರವಿಗೆ ಬಂದಿತ್ತು. ಹೀಗಾಗಿ ಸೋಂಕು ತಡೆವ ಕ್ರಮಗಳ ಬಗ್ಗೆ ಜನರಿಗೆ ಗೊಂದಲ ಇರಲಿಲ್ಲ.
ಸೋಂಕಿತರನ್ನು ಮತ್ತು ಶಂಕಿತರನ್ನೂ ಕ್ಷಿಪ್ರಗತಿಯಲ್ಲಿ ಟ್ರ್ಯಾಕ್ ಮಾಡಿದ್ದೂ, ಗೆಲುವಿಗೆ ಕಾರಣವಾಯಿತು. ಫೆಬ್ರವರಿಯಲ್ಲಿ ಡೈಗುವಿನಲ್ಲಿ ಮೊದಲ ಪ್ರಕರಣ ಪತ್ತೆಯಾದ ಮರುಕ್ಷಣವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಅಭಿಯಾನ ಆರಂಭಿಸಲಾಯಿತು.
ಆರಂಭ ಹೇಗೆ?
– ನಾಲ್ಕು ಹೆಜ್ಜೆಗಳ ಕ್ರಮ
– ಪ್ರತಿಯೊಬ್ಬ ಸೋಂಕಿತನ ಕುರಿತ ಪಾರದರ್ಶಕ ಮಾಹಿತಿ
– ಎಲ್ಲರೂ ಎಚ್ಚೆತ್ತುಕೊಂಡು ಮುಚ್ಚಿಡದೆ ಮುನ್ನೆಚ್ಚರಿಕೆ ವಹಿಸಿದ್ದು ಕಾರಣ
ಶುರುವಲ್ಲೇ ಜಾಗೃತಿ
– ರೋಗ ತಪಾಸಣೆ ಕಿಟ್ ಉತ್ಪಾದನೆ ಬಿರುಸು
– ವಾರಕ್ಕೆ 4.30 ಲಕ್ಷ ಮಂದಿಯ ರೋಗ ಪತ್ತೆಗೆ ಕ್ರಮ
– ಹೀಗಾಗಿ ಕೋವಿಡ್ 19 ವೈರಸ್ ಹಬ್ಬುವಿಕೆಗೆ ತಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ
RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ
Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ
Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು