100 ಎಕ್ರೆಯಲ್ಲಿ 300 ಟನ್ ಬೆಳೆದ ಅನನಾಸಿಗೆ ಲಾಕ್‌ಡೌನ್ ಕುತ್ತು


Team Udayavani, Apr 18, 2020, 10:27 AM IST

100 ಎಕ್ರೆಯಲ್ಲಿ 300 ಟನ್ ಬೆಳೆದ ಅನನಾಸಿಗೆ ಲಾಕ್‌ಡೌನ್ ಕುತ್ತು

ಬೆಳ್ತಂಗಡಿ: ಶ್ರಮಜೀವಿ ರೈತನಿಗೆ ಬೆಳೆದ ಬೆಳೆಯಲ್ಲಿ ಪ್ರತಿ ಹಂತದಲ್ಲೂ ನಷ್ಟ ಸರ್ವೇಸಾಮಾನ್ಯ ಎಂಬಂತಾಗಿದೆ. ಇದರ ನಡುವೆ ಜಗತ್ತಿಗೆ ಆವರಿಸಿದ ಕೋವಿಡ್ ರೈತಾಪಿ ವರ್ಗವನ್ನು ಇನ್ನಿಲ್ಲದಂತೆ ಹೈರಾಣಾಗಿಸಿದೆ.

ಕೇರಳ ಎರ್ನಾಕುಲಂ ಮೂಲದ ಶೈಜು ಎನ್.ಪಿ. ಅಂಬುವವರು ಕಳೆದ 9 ವರ್ಷದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅನನಾಸು ಬೆಳೆಯುತ್ತಿದ್ದು ಪ್ರಸಕ್ತ ಮೂರು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ತೋಟತ್ತಡಿ, ಲಾಯಿಲ, ನೆರಿಯಾ, ನೆಕ್ಕರೆ, ಗುರಿಪಳ್ಳ ಸುತ್ತಮುತ್ತ 100 ಎಕ್ರೆಯಲ್ಲಿ ಅನನಾಸು ಬೆಳೆದಿದ್ದಾರೆ.

ಬ್ಯಾಂಕ್ ಸಹಿತ ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ಸಲಾಮಾಡಿ ಸವಾಲಿನ ಕ್ಷೇತ್ರದಲ್ಲಿ 300 ಟನ್ ಅನನಾಸು ಉತ್ತಮ ಬೆಳೆ ಬೆಳೆದು ಕಟಾವಿಗೆ ಸಿದ್ಧವಾಗಿದೆ.

ಮಾರ್ಚ್, ಏಪ್ರಿಲ್ ಸೀಸನ್ ಅಗಿರುವ ಸಮಯದಲ್ಲೇ ಕೋವಿಡ್ ಮಹಾಮಾರಿಯ ಲಾಕ್‌ಡೌನ್‌ನಿಂದ ಖರೀದಿಗೆ ಯಾರೊಬ್ಬರೂ ಮುಂದಾಗದೆ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಸುಮಾರು 1.5೦ ಕೋಟಿ ನಷ್ಟದ ಹಾದಿ ಹಿಡಿದಿದ್ದಾರೆ.

ಮಾರುಕಟ್ಟೆ ಬಂದ್
ಅನನಾಸು ಮೋರಿಸ್, ರಾಜ, ರಾಣಿ ತಳಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಶೈಜು ಅವರು ಬೆಳೆಯುವ ಮೋರಿಸ್ ತಳಿಗೆ ದೆಹಲಿ, ಬ್ವಾಂಬೆ ಮಾರುಕಟ್ಟೆಯಲ್ಲಿ ಪ್ರಮುಖ ಬೇಡಿಕೆಯುತ್ತು. ಉಳಿದಂತೆ ಪೂಣೆ, ಇಂದೋರ್, ರಾಜಾಸ್ಥಾನ್, ಪಾಕಿಸ್ಥಾನ ಗಡಿ ವರೆಗೂ ರಫ್ತಾಗುತ್ತಿತ್ತು. ಪ್ರಸಕ್ತ ಖರೀದಿಗೆ ಜನ ಮುಂದಾಗದಿರುವುದರಿಂದ ರಾಜ್ಯ ಹಾಗೂ ಹೊರರಾಜ್ಯದ ಯಾವ ಮಾರುಕಟ್ಟೆಯಲ್ಲೂ ಬೇಡಿಕೆ ಇಲ್ಲ. ಪರಿಣಾಮ ಬೆಳೆದ ಬೆಳೆಯೊಂದಿಗೆ ರೈತನೂ ಸೊರಗುವಂತಾಗಿದೆ. ಸೀಸನ್ ಅವಧಿಯಲ್ಲಿ ಕೆ.ಜಿ.ಗೆ 40ರಿಂದ 45 ರೂ. ಮಾರಾಟವಾಗುತ್ತಿದ್ದುದು ಪ್ರಸಕ್ತ 15 ರಿಂದ 17 ರೂ.ಗೆ ಬೇಡಿಕೆ ಬರುತ್ತಿದೆ. ಕನಿಷ್ಠ ಪಕ್ಷ 30 ರೂ. ಸಿಕ್ಕರಷ್ಟೆ ಬೆಳೆದ ಬೆಳೆಗೆ ಸಮಾನಾಗಿ ಅಸಲು ಪಡೆಯಬಹುದು ಎಂದು ಶೈಜು ಹೇಳುತ್ತಾರೆ.

ಒಂದು ಫಸಲು ಪಡೆಯಲು 9 ತಿಂಗಳ ಶ್ರಮ
ಶೈಜು ಅವರು 9 ವರ್ಷದಿಂದ ಅನನಾಸು ಕೃಷಿಗೆ ಒಗ್ಗಿಕೊಂಡಿದ್ದು, 3 ವರ್ಷ ಲೀಝ್‌ಗೆ ಭೂಮಿ ಪಡೆದು ಬೆಳೆ ಬೆಳೆದಿದ್ದಾರೆ. 3 ವರ್ಷದಲ್ಲಿ ಮೂರು ಬೆಳೆ ಪಡೆಯಬಹುದಾಗಿದ್ದು, ಒಂದು ಬೆಳೆ ಪಡೆಯಲು 9 ತಿಂಗಳು ಶ್ರಮಿಸಬೇಕಾಗುತ್ತದೆ. ಕನಿಷ್ಠ ಪಕ್ಷ ಎಕ್ರೆಗೆ 2.50 ಲಕ್ಷ ರೂ. ನಷ್ಟ ಅನುಭವಿಸಬೇಕಾಗಿ ಬಂದಿದೆ.

ಮೊದಲ ಬೆಳೆಯಲ್ಲಿ ಯಾವುದೇ ಲಾಭವಿಲ್ಲ. ಎರಡನೇ ಬೆಳೆಯಿಂದ ಬಳಿಕವಷ್ಟೆ ಲಾಭ. ಈ ನಡುವೆ ಕಾರ್ಮಿಕರ ಸಮಸ್ಯೆ, ಹಂದಿ, ಮಂಗಗಳ ಕಾಟ ಎಲ್ಲವನ್ನೂ ಎದುರಿಸಿ ಬೆಳೆದ ಬೆಳೆ ಇದೀಗ ಕೈಗೆ ಸಿಗದಂತಾಗಿದೆ.

ಉದಯವಾಣಿ ರೈತ ಸೇತು ಸಹಾಯ
ರೈತರ ಬೆಳೆಗೆ ಸೂಕ್ತ ನ್ಯಾಯ ಒದಗಿಸುವಲ್ಲಿ ಉದಯವಾಣಿ ಹೊರತಂದ ರೈತಸೇತುವಿನಲ್ಲಿ ಶೈಜು ಅವರು ಬೆಳೆದ ಅನನಾಸು ಬೆಳೆ ವಿವರ ನೀಡಲಾಗಿತ್ತು. 10ಕ್ಕೂ ಅಧಿಕ ಕರೆಗಳು ಸ್ಥಳೀಯವಾಗಿ ಬಂದಿವೆ. 100 ರಿಂದ 400 ಕ್ವಿಂಟಾಲ್ ವರೆಗೆ ಬೇಡಿಕೆ ಬಂದಿದೆ. ಸಧ್ಯ ಜೈಪುರದಿಂದ ಬೇಡಿಕೆ ಬಂದಿದ್ದು, ಮೊದಲ 15 ಟನ್ ಅನನಾಸು ಕಳುಹಿಸಲಾಗಿದೆ. ರಾಜ್ಯ ಸರಕಾರ ಈ ಕುರಿತು ಗಮನ ಹರಿಸಿ ಬೆಳೆಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಶೈಜು ಅಳಲು ತೋಡಿಕೊಂಡಿದ್ದಾರೆ.

–  ಚೈತ್ರೇಶ್ ಇಳಂತಿಲ

ಟಾಪ್ ನ್ಯೂಸ್

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

Puttur: ಕೊಳವೆಬಾವಿ ಶುದ್ಧೀಕರಣ ವೇಳೆ ಕಲ್ಲು ತೂರಾಟ

Puttur: ಕೊಳವೆಬಾವಿ ಶುದ್ಧೀಕರಣ ವೇಳೆ ಕಲ್ಲು ತೂರಾಟ

Charmady Ghat: ತಡೆಗೋಡೆಗೆ ಗುದ್ದಿದ ಬಸ್‌

Charmady Ghat: ತಡೆಗೋಡೆಗೆ ಗುದ್ದಿದ ಬಸ್‌

Crypto currency ವರ್ಗಾವಣೆಗೆ ಆ್ಯಪ್‌ ಅಪರಿಚಿತನ ಮಾತು ನಂಬಿ 1 ಕೋ.ರೂ.ಕಳೆದುಕೊಂಡ ವ್ಯಕ್ತಿ

Crypto currency ವರ್ಗಾವಣೆಗೆ ಆ್ಯಪ್‌ ಅಪರಿಚಿತನ ಮಾತು ನಂಬಿ 1 ಕೋ.ರೂ.ಕಳೆದುಕೊಂಡ ವ್ಯಕ್ತಿ

18

Puttur: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

1-wqeqewewqewqe

TMCಯ ಶಹಜಹಾನ್‌ ವಿರುದ್ಧ ಕೊಲೆ ಯತ್ನ ಕೇಸು

1-wqeqewqe

Congo;ಭಾರತದ ಮೇಜರ್‌ ರಾಧಿಕಾಗೆ ವಿಶ್ವಸಂಸ್ಥೆಯ ಉನ್ನತ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.