ಸಂಕಷ್ಟ ಪರಿಹಾರಕ್ಕೆ ಪಶುಪಾಲನೆ ಮುಖ್ಯ
Team Udayavani, May 1, 2020, 4:20 PM IST
ದೇವನಹಳ್ಳಿ: ರೈತರು, ತಮ್ಮ ಸಂಕಷ್ಟದಲ್ಲಿ ನೆರವಿಗೆ ಬರುವುದು ಪಶುಪಾಲನೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಬಿ.ಶ್ರೀನಿವಾಸ್ ತಿಳಿಸಿದರು. ತಾಲೂಕಿನ ದುದ್ದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಹಾಲು ಉತ್ಪಾದಕರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಿ ಮಾತನಾಡಿದರು. ಪಶು ಮೇವು ಹಾಕುವ ಸ್ಥಳಗಳನ್ನು ಶುಚಿ ಯಾಗಿಟ್ಟುಕೊಳ್ಳಬೇಕು.
ಹಾಲು ಶೇಖರಿಸುವ ಸ್ಟೀಲ್ ಕ್ಯಾನ್ ಬಿಸಿ ನೀರಿನಿಂದ ಸ್ವತ್ಛಗೊಳಿಸಬೇಕು. ತಾಲೂಕಿನ 181 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಮನೆಯಿಂದ ಬರುವಾಗಲೇ ಮಾಸ್ಕ್ ಧರಿಸಬೇಕು ಎಂದರು ಹೇಳಿದರು. ದುದ್ದನ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಮುನಿ ಶಾಮಪ್ಪ, ಕಾರ್ಯದರ್ಶಿ ಆನಂದ್, ನಿರ್ದೇಶಕ ಡಿ.ವಿ.ರಂಗಸ್ವಾಮಿ, ನಾಗರಾಜ್, ಡಿಆರ್ ಚಂದ್ರಪ್ಪ, ಡಿ.ಎಂ.ಮಂಜುನಾಥ್, ಡಿ.ಕೆ. ರವಿಕುಮಾರ್, ಮುನಿಯಮ್ಮ, ತಾಲೂಕು ಹಾಲು ಒಕ್ಕೂಟದ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಗಂಗಯ್ಯ, ವಿಸ್ತರಣಾಧಿಕಾರಿ ನಾಗರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ
GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ
Loksabha; ಬಿಜೆಪಿಗೆ 300 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಪ್ರಶಾಂತ್ ಕಿಶೋರ್ ಭವಿಷ್ಯ
Kanhaiya Kumar ಕ್ಯಾಂಪೇನ್ಗೆ 47 ಲಕ್ಷ ರೂ. ದೇಣಿಗೆ ಸಂಗ್ರಹ!
ಗುಣಮಟ್ಟ ಪರೀಕ್ಷೆಯಲ್ಲಿ ಎಂಡಿಎಚ್, ಎವರೆಸ್ಟ್ ಉತ್ಪನ್ನಗಳು ಪಾಸ್!