ದಿಲ್ಲಿ ವಿದ್ಯಾರ್ಥಿಗಳ ವಿಕೃತಿ ಎಚ್ಚರಿಕೆ ಅಗತ್ಯ


Team Udayavani, May 10, 2020, 7:38 PM IST

ದಿಲ್ಲಿ ವಿದ್ಯಾರ್ಥಿಗಳ ವಿಕೃತಿ ಎಚ್ಚರಿಕೆ ಅಗತ್ಯ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಅಂತರ್ಜಾಲ ಮತ್ತು ಮೊಬೈಲ್‌ ಇಂದು ಬದುಕಿನ ಅವಿಭಾಜ್ಯ ಅಂಗಗಳಾಗಿ ಬದಲಾಗಿವೆ. ಭಾರತದಲ್ಲಿ 4ಜಿ ಹಾಗೂ ಅಗ್ಗದ ಸ್ಮಾರ್ಟ್‌ಫೋನ್‌ಗಳ ಕ್ರಾಂತಿ ಆರಂಭವಾದಾಗಿನಿಂದ ದೇಶದ ಬಹುತೇಕರಿಗೆ ಅಂತರ್ಜಾಲ ಸಂಪರ್ಕ ಬೆರಳಂಚಿಗೆ ನಿಲುಕಿದೆ.

ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಕೈಗಳಲ್ಲೂ ಮೊಬೈಲ್‌ಗಳು ಇವೆ. ಅದರಲ್ಲೂ ಲಾಕ್‌ ಡೌನ್‌ ಆರಂಭವಾದ ಅನಂತರದಿಂದ ದೇಶದಲ್ಲಿ ಅಂತರ್ಜಾಲ ಬಳಕೆ ಪ್ರಮಾಣ ಅಪಾರವಾಗಿ ವೃದ್ಧಿಸಿದೆ.

ಪ್ರತಿ ವ್ಯಕ್ತಿಯ ಸರಾಸರಿ ಅಂತರ್ಜಾಲ ಬಳಕೆ ಪ್ರಮಾಣ 4 ಗಂಟೆಗಳಿಗೂ ಅಧಿಕವಾಗಿದೆ. ಮನೆಯಿಂದ ಕೆಲಸ ಮಾಡುವವರಿಗಷ್ಟೇ ಅಲ್ಲದೇ, ಶಾಲೆ – ಕಾಲೇಜುಗಳು ಬಂದ್‌ ಆಗಿರುವುದರಿಂದ ಮನೆಯಲ್ಲೇ ಕುಳಿತು ಓದುತ್ತಿರುವ ಮಕ್ಕಳ ಅಂತರ್ಜಾಲ ಬಳಕೆ ಪ್ರಮಾಣವೂ ಹೆಚ್ಚಿದೆ. ಆದರೆ ಇದು ವಿಕೃತಿಗೂ ಎಡೆಮಾಡಿಕೊಡುತ್ತಿರುವುದು ದುರಂತ.

ದಕ್ಷಿಣ ದಿಲ್ಲಿಯ ಕೆಲವು ಶಾಲಾ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮವೊಂದರಲ್ಲಿ ಬಾಯ್ಸ್ ಲಾಕರ್‌ ರೂಮ್‌ ಎಂಬ ಗುಂಪು ರಚಿಸಿಕೊಂಡು ಸಹ ವಿದ್ಯಾರ್ಥಿನಿಯರ ಬಗ್ಗೆ ಅಶ್ಲೀಲ ಸಂದೇಶಗಳು, ಮಾರ್ಫ್ಡ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವುದು ಪತ್ತೆಯಾಗಿದೆ.

ಯಾವ ಮಟ್ಟದ ವಿಕೃತಿ ಈ ಗ್ರೂಪ್‌ನಲ್ಲಿ ಇತ್ತೆಂದರೆ, ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವ ಕುರಿತೂ ಈ ಹುಡುಗರು ಚರ್ಚಿಸುತ್ತಿದ್ದರಂತೆ. ಸಹಜವಾಗಿಯೇ, ಈ ಘಟನೆ ಹೊರಗೆ ಬರುತ್ತಿದ್ದಂತೆಯೇ ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿರುವ ಅಪರಾಧಿಕ ಪ್ರವೃತ್ತಿಯ ಬಗ್ಗೆ ಆತಂಕ ವ್ಯಕ್ತಪಡಿಸಲಾಗುತ್ತಿದೆ.

ಪೊಲೀಸರೀಗ ಈ ಗ್ರೂಪ್‌ನಲ್ಲಿದ್ದ ಹುಡುಗರನ್ನು ಪತ್ತೆಹಚ್ಚಿ ವಿಚಾರಣೆಯನ್ನೂ ನಡೆಸಿದ್ದಾರೆ. ಈ ಮಕ್ಕಳಲ್ಲಿ ಹೆಣ್ಣುಮಕ್ಕಳ ಬಗ್ಗೆ ಇಷ್ಟೊಂದು ಕೀಳು ಮನಸ್ಥಿತಿ ಬೆಳೆದಿದ್ದೇಕೆ, ಇವರ ಪಾಲನೆಯಲ್ಲಿ ಪೋಷಕರು, ಶಿಕ್ಷಣ ವಲಯ ಎಲ್ಲಿ ಎಡವಿದವು ಎನ್ನುವ ಪ್ರಶ್ನೆಯೂ ಎದುರಾಗುತ್ತದೆ.

ಇಂದು ಅಂತರ್ಜಾಲವು ಜನರ ಮನಸ್ಥಿತಿಯ ಮೇಲೆ ಸಾಧಿಸುತ್ತಿರುವ ನಿಯಂತ್ರಣ, ಬೀರುತ್ತಿರುವ ದುಷ್ಟಭಾವ ಬೆಚ್ಚಿಬೀಳಿಸುವಂತಿದೆ. ಅದರಲ್ಲೂ ಸೋಷಿಯಲ್‌ ಮೀಡಿಯಾವಂತೂ ವಿಕೃತಿಯ ಆಗರವಾಗಿ ಹೋಗಿದೆ.

ಹುಸಿ ಸುದ್ದಿಗಳು, ಕೊಲೆ, ಥಳಿತದ ವಿಡಿಯೋಗಳು, ಅಶ್ಲೀಲ ಚಿತ್ರಗಳು, ನಕಲಿ ಫೋಟೋಗಳು ಅತ್ಯಂತ ಸಾಮಾನ್ಯವಾಗಿಬಿಟ್ಟಿದ್ದು, ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಹರಿದಾಡುತ್ತಲೇ ಇರುತ್ತವೆ. ಇದು ಮನುಷ್ಯನ ಸಂವೇದನೆಯನ್ನೇ ಹಾಳುಮಾಡಿಬಿಟ್ಟಿದೆ.

ನಿರ್ಭಯಾ ಪ್ರಕರಣದ ಅನಂತರ ದೇಶದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿದೆ ಎನ್ನಲಾಗುತ್ತದೆಯಾದರೂ, ಅದು ಎಷ್ಟು ನಿಜ ಎನ್ನುವ ಪ್ರಶ್ನೆಯನ್ನು ಮೇಲಿನ ಘಟನೆಗಳು ಎದುರಿಡುತ್ತಿವೆ.

ಈ ವಿದ್ಯಾವಂತ ಮಕ್ಕಳು ಅತ್ಯಾಚಾರದ ಬಗ್ಗೆ ಅತ್ಯಂತ ಸಹಜವೇನೋ ಎಂಬಂತೆ ಆಡುವ ಮಾತುಗಳು ನಿಜಕ್ಕೂ ಆತಂಕಕಾರಿ. ಇಂಥ ಇನ್ನೆಷ್ಟು ಗುಂಪುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿವೆಯೋ ತಿಳಿಯದು.  ಈ ವಿಚಾರದಲ್ಲಿ ಪೋಷಕರ ಜವಾಬ್ದಾರಿಯೂ ಅಧಿಕವಿದೆ.

ಮಕ್ಕಳಿಗೆ ಸರಿಯಾದ ಸಂಸ್ಕಾರ ಕಲಿಸುವ ಜತೆಜತೆಗೇ ಅವರ ಅಂತರ್ಜಾಲ ಬಳಕೆಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಮಕ್ಕಳೆಂದಷ್ಟೇ ಅಲ್ಲ, ಮನೆಯವರೆಲ್ಲರೂ ಅಂತರ್ಜಾಲ ಬಳಕೆಯನ್ನು ತಗ್ಗಿಸುವುದು, ಆದಷ್ಟೂ ಸಾಮಾಜಿಕ ಮಾಧ್ಯಮಗಳಿಂದ ದೂರವಿರುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾದೀತು.

ಟಾಪ್ ನ್ಯೂಸ್

1-modi

Ayodhya;ಮೋದಿ ಭರ್ಜರಿ ರೋಡ್‌ ಶೋ: ಜನರ ಹೃದಯ ರಾಮನಷ್ಟೇ ವಿಶಾಲ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial:ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

Editorial: ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

Economy

ಉತ್ಪಾದನ ವಲಯದಲ್ಲಿ ಜಿಗಿತ: ಆರ್ಥಿಕತೆಗೆ ಮತ್ತಷ್ಟು ಬಲ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

1-modi

Ayodhya;ಮೋದಿ ಭರ್ಜರಿ ರೋಡ್‌ ಶೋ: ಜನರ ಹೃದಯ ರಾಮನಷ್ಟೇ ವಿಶಾಲ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.