ಮಕ್ಕಳ ಪ್ರಶ್ನೆಗೆ ಸಚಿವರ ಉತ್ತರ
Team Udayavani, May 30, 2020, 5:32 AM IST
ಮೈಸೂರು: ಆಕಾಶವಾಣಿಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸಚಿವ ಸುರೇಶ್ ಕುಮಾರ್ ಶುಕ್ರವಾರ ನೇರ ಫೋನ್ ಇನ್ ಕಾರ್ಯ ಕ್ರಮ ನಡೆಸಿ, ರಾಜ್ಯದ ವಿವಿಧ ಭಾಗಗ ಳಿಂದ ಕರೆ ಮಾಡಿದ ವಿದ್ಯಾರ್ಥಿಗಳ ಹಾಗೂ ಪೋಷಕರ ಪ್ರಶ್ನೆಗೆ ಉತ್ತರಿಸಿದರು.
ಕರೆ ಮಾಡಿದ ಸಾಕಷ್ಟು ಜನರು, ವಿದ್ಯಾರ್ಥಿ ಗಳ ಹಾಗೂ ಕೊಠಡಿ ಪರಿ ವೀಕ್ಷಕರ ಸುರಕ್ಷತೆ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿ ವರು, ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ. ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಯನ್ನು ಕೊಡುವ ಹಾಗೂ ತೆಗೆದು ಕೊಳ್ಳುವ ಮುನ್ನ ಮತ್ತು ಆಗಾಗ ಸ್ಯಾನಿ ಟೈಸರ್ ಬಳಸು ವುದು ಕಡ್ಡಾಯಗೊಳಿಸ ಲಾಗಿದೆ.
ಕೆಮ್ಮು, ನೆಗಡಿ, ಜ್ವರ ಇರುವ ವಿದ್ಯಾ ರ್ಥಿಗಳು ಪ್ರತ್ಯೇಕವಾಗಿ ಕುಳಿತು ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡ ಲಾಗಿದೆ ಎಂದು ತಿಳಿಸಿದರು. ಇನ್ನೊಂದಷ್ಟು ಮಂದಿ ಕರೆ ಮಾಡಿ, ತಾವು ಬೇರೆ ಊರಿನಲ್ಲಿ ಇರುವುದಾಗಿ ಹೇಳಿಕೊಂಡು ಪರೀಕ್ಷೆಯನ್ನು ಎಲ್ಲಿ ಬರೆ ಯಬೇಕು ಎಂದು ಕೇಳಿದರು. ಅವರ ಪ್ರಶ್ನೆ ಗಳಿಗೆ ಉತ್ತರಿಸಿ, ಎಸ್ಸೆಸ್ಸೆಲ್ಸಿ ಓದುತ್ತಿ ರುವ ವಲಸೆ ಕಾರ್ಮಿಕರ ಮಕ್ಕಳು, ಹಾಸ್ಟೆಲ್ನಲ್ಲಿದ್ದ ಮಕ್ಕ ಳಿಗೆ ಮಾತ್ರ ಇರುವ ಲ್ಲಿಂದಲೇ ಪರೀಕ್ಷೆಗೆ ಅವ ಕಾಶವಿದೆ.
ಇನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಗಳಿಗೆ ಮಾತ್ರ ಇರುವಲ್ಲಿಂದಲೇ ಪರೀಕ್ಷೆಗೆ ಅವ ಕಾಶವಿದೆ ಎಂದು ಸ್ಪಷ್ಟನೆ ನೀಡಿದರು. ಅಂಧ, ಕಿವುಡ ಹಾಗೂ ಮೂಗ ವಿದ್ಯಾರ್ಥಿಗಳು ಪರೀಕ್ಷೆ ಬರೆ ಯುವುದು ಹೇಗೆ ಎಂಬುದರ ಬಗ್ಗೆ ಮಾತನಾಡಿ, ಪ್ರತಿ ವರ್ಷ ಆ ವಿದ್ಯಾರ್ಥಿಗಳಿಗೆ ಹೇಗೆ ಪರೀಕ್ಷೆ ನಡೆಸಲಾಗುತ್ತಿತ್ತೋ ಈ ವರ್ಷವೂ ಹಾಗೇ ನಡೆಸಲಾಗುತ್ತದೆ ಡಿಡಿಪಿಐ ಡಾ. ಪಾಂಡುರಂಗ ಉಪಸ್ಥಿತರಿದ್ದರು.