ಲಾಕ್‌ಡೌನ್ ಲೋಕ ; ಸ್ವಚ್ಛ ಶೆಲ್ಫ್ ಅಭಿಯಾನ


Team Udayavani, Jul 29, 2020, 4:04 PM IST

ಲಾಕ್‌ಡೌನ್ ಲೋಕ ; ಸ್ವಚ್ಛ ಶೆಲ್ಫ್ ಅಭಿಯಾನ

ಸಾಂದರ್ಭಿಕ ಚಿತ್ರ

ಲಾಕ್‌ಡೌನ್‌ನಿಂದ ಯಾರು ಏನೇನು ಮಾಡಿದರೋ, ತಿಳಿಯದು. ನಾವು ಮಾತ್ರ ಈ ಬಿಡುವಿನ ಸಮಯದಲ್ಲಿ ಬುಕ್‌ ಶೆಲ್ಫ್ ಗಳನ್ನು ಸ್ವತ್ಛ ಮಾಡಿ, ಅಷ್ಟೂ ಪುಸ್ತಕಕ್ಕೆ ಬೈಂಡ್‌ ಹಾಕಿದೆವು. ನಮ್ಮ ಮನೆಯಲ್ಲಿ ನಮ್ಮಿಬ್ಬರಿಗೂ ಓದುವ ಹುಚ್ಚು ಬಹಳವಿತ್ತು. ಆ ಪುಸ್ತಕ ಪ್ರೀತಿಯೇ ನಮ್ಮ ಪ್ರೇಮ ವಿವಾಹಕ್ಕೆ ಕಾರಣ ಅನ್ನಬಹುದು. ಪುಸ್ತಕ ಓದುವ ಗೀಳು ಮಕ್ಕಳಿಗೆ ಹಿಡಿಯಿತಾದರೂ, ಅವರು ಪುಸ್ತಕಗಳಿಗಿಂತ ಕಿಂಡಲ್‌ ಅನ್ನು ಮೆಚ್ಚಿಕೊಂಡರು. ಹಾಗಾಗಿ, ಮನೆಯ ಪುಟ್ಟ ಗ್ರಂಥಾಲಯದಲ್ಲಿ ನನ್ನ ಮತ್ತು ಯಜಮಾನರ ಆಯ್ಕೆಯ ಪುಸ್ತಕಗಳೇ ಹೆಚ್ಚಿರುವುದು.

ಇತ್ತೀಚಿನ ಕೆಲ ವರ್ಷಗಳಲ್ಲಿ ಓದುವುದು ಕಡಿಮೆಯಾಗಿತ್ತಾದರೂ, ಪುಸ್ತಕ ಕೊಳ್ಳುವುದು ನಿಂತಿರಲಿಲ್ಲ. ಹಳೆ-ಹೊಸ ಲೇಖಕರ ಪುಸ್ತಕಗಳನ್ನೆಲ್ಲ ತಂದು ಪೇರಿಸಿಟ್ಟಿದ್ದೇ ಬಂತು. ಓದಲು ಸಮಯದ ಅಭಾವದ ನೆಪ! ಆಗ ಬಂತು ನೋಡಿ ಲಾಕ್‌ಡೌನ್‌. ಮನೆ ಮಂದಿಯೆಲ್ಲ ಒಳಗೇ ಬಂಧಿಯಾಗಿಬಿಟ್ಟೆವು. ಆಗೊಂದು ದಿನ ಟಿವಿ ನೋಡುತ್ತ ಕುಳಿತಿದ್ದ ಮಗನಿಗೆ, ಮೂಷಿಕ ರಾಯನ ದರ್ಶನವಾಯ್ತು. ಇಲಿ ಎಲ್ಲಿಂದ ಬರುತ್ತಿದೆ ಅಂತ ನೋಡಿದಾಗ, ಪುಸ್ತಕದ ಕಪಾಟಿಗೆ ಒದಗಿರಬಹದಾದ ಗತಿ ಅಂದಾಜಾಯ್ತು.

“ಅವ್ವ, ಬುಕ್‌ ಶೆಲ್ಫ್ ನಿಂದ ಇಲಿ ಬರ್ತಿದೆ…’ ಅಂತ ಮಗ ಕೂಗಿಕೊಂಡ. ಓಡಿ ಬಂದು ಕಪಾಟು ತೆರೆದರೆ, ಐದಾರು ಮರಿಗಳನ್ನೊಳಗೊಂಡ ಇಲಿಯ ಕುಟುಂಬ ಅಲ್ಲಿ ಬೀಡು ಬಿಟ್ಟಿತ್ತು! ಬುಕ್‌ ಶೆಲ್ಫ್ ಕ್ಲೀನ್‌ ಮಾಡಲು ಇದಕ್ಕಿಂತ ಬಿಡುವಿನ ಸಮಯ ಬೇರಿಲ್ಲ ಅಂತ ನಿರ್ಧರಿಸಿ, ಸ್ವಚ್ಛತಾ ಅಭಿಯಾನಕ್ಕೆ ಸಜ್ಜಾದೆ. ಯಜಮಾನರೂ ಕೈ ಜೋಡಿಸಿದರು. ಮೊದಲು ಇಲಿಯ ಕುಟುಂಬವನ್ನು ಸ್ಥಳಾಂತರಿಸಿ, ಧೂಳು ಒರೆಸಿ, ಎಲ್ಲ ಪುಸ್ತಕಗಳಿಗೂ ಬೈಂಡ್‌ ಹಾಕಿದೆವು. ಆಮೇಲೆ, ಸಾಹಿತಿ, ಸಾಹಿತ್ಯ ಪ್ರಕಾರ, ಭಾಷೆಯ ಆಧಾರದ ಮೇಲೆ ಪುಸ್ತಕಗಳನ್ನು ವಿಂಗಡಿಸಿ ಜೋಡಿಸಿದೆವು. ಓದಿರುವ ಮತ್ತು ಓದಿಲ್ಲದ ಪುಸ್ತಕಗಳು ಬೇರೆ ಬೇರೆ ಆದವು. ಓದದೇ ಇರುವ ಆ ಪುಸ್ತಕ ರಾಶಿಯನ್ನು ನೋಡಿ, ಈಗ ದಿನಕ್ಕೆ ಅರ್ಧ ಗಂಟೆಯನ್ನಾದರೂ ಓದಿಗೆ ಮೀಸಲಿಡುವ ತೀರ್ಮಾನ ಮಾಡಿದ್ದೇವೆ. ಅದರಂತೆ, ಲಾಕ್‌ಡೌನ್‌ನ ಎರಡು ತಿಂಗಳಲ್ಲಿ ಒಂದಷ್ಟು ಪುಸ್ತಕ ಓದಲು ಸಾಧ್ಯವಾಗಿದೆ.

ಪಾರ್ವತಿ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.