ಜಂಟಿ ಖಾತೆಯಿಂದ ಹೆಸರನ್ನು ಕೈಬಿಡುವ ಪರಿ ; ಜಾಯಿಂಟ್‌ ಪೇನ್‌


Team Udayavani, Aug 3, 2020, 3:06 PM IST

ಜಂಟಿ ಖಾತೆಯಿಂದ ಹೆಸರನ್ನು ಕೈಬಿಡುವ ಪರಿ ; ಜಾಯಿಂಟ್‌ ಪೇನ್‌

ಸಾಂದರ್ಭಿಕ ಚಿತ್ರ

ಜಾಯಿಂಟ್‌ ಅಕೌಂಟ್ಸ್, ಸಾಮಾನ್ಯ ಬ್ಯಾಂಕ್‌ ಅಕೌಂಟ್‌ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಒಂದು ಪ್ರಮುಖ ವ್ಯತ್ಯಾಸವೆಂದರೆ, ಜಾಯಿಂಟ್‌ ಅಕೌಂಟ್‌ ಇಬ್ಬರು ಅಥವಾ ಅದಕ್ಕೂ ಹೆಚ್ಚಿನ ಮಂದಿಯ ಹೆಸರಿನಲ್ಲಿರುತ್ತದೆ. ಜಂಟಿ ಖಾತೆ, ಹಣವನ್ನು ಒಂದೆಡೆ ಸೇರಿಸಲು ಮತ್ತು ಪರಿಣಾಮಕಾರಿಯಾಗಿ ಉಳಿತಾಯ ಮಾಡಲು ನೆರವಾಗುತ್ತದೆ. ಸಮಾನ ಆಸಕ್ತಿಯ ಮಂದಿ, ಕುಟುಂಬಸ್ಥರು, ಜಾಯಿಂಟ್‌ ಅಕೌಂಟ್‌ ಅನ್ನು ಹೊಂದಬಹುದು. ಜಂಟಿ ಖಾತೆಯಲ್ಲಿ ನಡೆಯುವ ಹಣಕಾಸು ವ್ಯವಹಾರಗಳು, ಇತರೆ ಖಾತೆದಾರರಿಗೂ ತಿಳಿಯುವುದರಿಂದ, ಯಾವೆಲ್ಲಾ ರೀತಿಯಲ್ಲಿ ಹಣ ಖರ್ಚಾಗುತ್ತಿದೆ ಎನ್ನುವುದನ್ನು ಟ್ರ್ಯಾಕ್‌ ಮಾಡುವುದು ಸಾಧ್ಯವಾಗುತ್ತದೆ. ಜಂಟಿ ಖಾತೆ ಪ್ರಯೋಜನಕಾರಿಯಾಗಿದ್ದರೂ, ಕೆಲ ಸಂದರ್ಭದಲ್ಲಿ ಕೆಲ ಸದಸ್ಯರ ಹೆಸರನ್ನು ಕೈಬಿಡಬೇಕಾದ ಅನಿವಾರ್ಯತೆ ಎದುರಾಗುವುದುಂಟು. ಪ್ರೈಮರಿ ಖಾತೆದಾರನ ಹೆಸರನ್ನು ತೆಗೆಯಲು ಆಗುವುದಿಲ್ಲ. ಜಂಟಿ ಖಾತೆಯ ಸದಸ್ಯನ ಹೆಸರನ್ನು ಕೈಬಿಡುವ ಪ್ರಕ್ರಿಯೆ ಹೀಗಿದೆ…

ಅರ್ಜಿ ಸಲ್ಲಿಕೆ: ಮೊದಲ ಹಂತದಲ್ಲಿ ಬ್ಯಾಂಕ್‌ ಅಥವಾ ಬ್ಯಾಂಕ್‌ ಜಾಲತಾಣದಿಂದ ಹೆಸರು ಕೈಬಿಡುವ ಅರ್ಜಿಯನ್ನು ಪಡೆದುಕೊಳ್ಳಬೇಕು, ಇಲ್ಲವೇ ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ಕೈಬಿಡಲಾಗುತ್ತಿರುವ ಹೆಸರಿನ ವ್ಯಕ್ತಿ ಸೇರಿದಂತೆ, ಜಂಟಿ ಖಾತೆಯಲ್ಲಿರುವ ಪ್ರತಿಯೊಬ್ಬ ಸದಸ್ಯನೂ ಅರ್ಜಿಯಲ್ಲಿ ಸಹಿ ಹಾಕಬೇಕು. ಮಾಹಿತಿ: ಹೆಸರನ್ನು ಕೈಬಿಡಲಾಗುತ್ತಿರುವ ವ್ಯಕ್ತಿಯ ಕುರಿತಾದ ಮಾಹಿತಿಯನ್ನು ನಮೂದಿಸಬೇಕು. ಒಂದು ವೇಳೆ ಆ ವ್ಯಕ್ತಿ ಮೈನರ್‌ ಆಗಿದ್ದರೆ, ಪೋಷಕರ (ಗಾರ್ಡಿಯನ್‌) ಹೆಸರನ್ನು ನಮೂದಿಸಬೇಕು.

ಕಾರ್ಯ ನಿರ್ವಹಣಾ ಶೈಲಿ ಬದಲಾವಣೆ: ಈ ಸಂದರ್ಭದಲ್ಲಿ ಜಂಟಿ ಖಾತೆಯ ಸದಸ್ಯರು ಖಾತೆಯ ಕಾರ್ಯ ನಿರ್ವಹಣಾ ಶೈಲಿಯನ್ನು ಬದಲಾಯಿಸಬಹುದು. ಸದಸ್ಯರು ಇಚ್ಛಿಸಿದಲ್ಲಿ ಜಂಟಿ ಖಾತೆಯನ್ನು ಪ್ರತ್ಯೇಕ ವೈಯಕ್ತಿಕ ಖಾತೆಗಳನ್ನಾಗಿ ಬದಲಾ ಯಿಸ ಬಹುದಾಗಿದೆ. ಅಥವಾ ಎಂದಿನಂತೆ ಜಂಟಿ ಖಾತೆಯಾ ಗಿಯೇ ಉಳಿಸಿ ಕೊಂಡು ಮುಂದು ವರಿಸಿಕೊಂಡು ಹೋಗಲೂಬಹುದು.

ಡೆಬಿಟ್‌ ಕಾರ್ಡ್‌: ಹೆಸರು ಕೈಬಿಡಲಾದ ವ್ಯಕ್ತಿ, ಬ್ಯಾಂಕ್‌ ನೀಡಲ್ಪಟ್ಟ ಎಟಿಎಂ ಕಾರ್ಡನ್ನು ಹಿಂದಿರುಗಿಸಬೇಕಾಗುತ್ತದೆ. ಇಲ್ಲವೇ ಜಂಟಿ ಖಾತೆಯ ಇತರೆ ಸದಸ್ಯರು ಒಟ್ಟಾಗಿ, ಎಟಿಎಂ ಕಾರ್ಡನ್ನು ನಾಶಪಡಿಸಿರುವುದಾಗಿ ಮುಚ್ಚಳಿಕೆ ಬರೆದುಕೊಡಬೇಕಾಗುತ್ತದೆ. ಹೊಸ ಚೆಕ್‌ಬುಕ್‌: ಹಳೆಯ ಚೆಕ್‌ ಬುಕ್ಕನ್ನು ಬ್ಯಾಂಕಿಗೆ ಹಿಂದಿರುಗಿಸಿ, ಹೊಸ ಚೆಕ್‌ ಬುಕ್ಕಿಗೆ ಜಂಟಿ ಖಾತೆಯ ಸದಸ್ಯರು ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ಅಪ್‌ಡೇಟ್‌ ಆದ ಸದಸ್ಯರ ಹೆಸರುಗಳನ್ನಷ್ಟೇ ನಮೂದಿಸಬೇಕು. ಇದರಿಂದ ಅರ್ಜಿಯಲ್ಲಿ ನಮೂದಿಸಲಾದ ಹೆಸರು ಗಳನ್ನಷ್ಟೇ ಒಳಗೊಂಡ ಹೊಸ ಚೆಕ್‌ಬುಕ್‌ ಅನ್ನು ನೀಡಲಾಗುತ್ತದೆ.

ಟಾಪ್ ನ್ಯೂಸ್

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.