ಮೆಗಾ ಯೋಜನೆ, ಬೃಹತ್ ಉದ್ಯೋಗ!
ಮೋದಿ ಸರಕಾರದಿಂದ ಉದ್ಯೋಗ ಸೃಷ್ಟಿಗೆ ಮಾಸ್ಟರ್ ಪ್ಲ್ಯಾನ್
Team Udayavani, Nov 6, 2020, 6:01 AM IST
ಹೊಸದಿಲ್ಲಿ: ಬೃಹತ್ ಯೋಜನೆ ಜತೆ ಜತೆಗೇ ಭಾರೀ ಉದ್ಯೋಗ ಸೃಷ್ಟಿಯ ಕ್ರಾಂತಿಕಾರಕ ಹೆಜ್ಜೆಯನ್ನಿಡಲು ಕೇಂದ್ರ ಸರಕಾರ ಮುಂದಾಗಿದೆ. ದೇಶಾದ್ಯಂತ 50 ಮೆಗಾ ಮೂಲ ಸೌಕರ್ಯ ಯೋಜನೆಗಳನ್ನು ಪಟ್ಟಿ ಮಾಡಲಾ ಗಿದ್ದು, ಈ ಮೂಲಕ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸಲು ಮೋದಿ ಸರಕಾರ ಮಾಸ್ಟರ್ಪ್ಲ್ರಾನ್ ಸಿದ್ಧಪಡಿಸಿದೆ.
ಹೌದು! ಸರಕಾರ ಈ ಯೋಜನೆಗಳಿಗೆ ಹೂಡಿಕೆ ವೆಚ್ಚ ಹೆಚ್ಚಿಸಿ, ಉದ್ಯೋಗ ಸೃಷ್ಟಿಸುವ ಸ್ಪಷ್ಟ ನೀಲನಕ್ಷೆ ಸಿದ್ಧಗೊಳಿಸಿದೆ. ದೇಶದ ವಿವಿಧೆಡೆ, ವಿವಿಧ ರಂಗಗಳಲ್ಲಿ ಮೆಗಾ ಯೋಜನೆಗಳು ಚಾಲನೆ ಗೊಳ್ಳಲಿವೆ. ರಸ್ತೆ ಕಾಮಗಾರಿ, ಸೇತುವೆ, ಮೆಟ್ರೋ ರೈಲು, ಏರ್ಪೋರ್ಟ್ ನಿರ್ಮಾಣ ಸೇರಿದಂತೆ ಬೃಹತ್ ಯೋಜನೆಗಳು ನಿರು ದ್ಯೋಗಿಗಳ ಕೈಹಿಡಿಯಲಿವೆ.
ಕೋವಿಡ್ ಬಿಕ್ಕಟ್ಟಿನ ಈ ಅವಧಿಯಲ್ಲಿ ಪ್ರತ್ಯೇಕ ನಗರ ಉದ್ಯೋಗ ಕಾರ್ಯಕ್ರಮ ಬದಲಾಗಿ ತನ್ನ ಅಲ್ಪ ಸಂಪನ್ಮೂಲ ಬಳಸಿಕೊಂಡು, ಮೂಲ ಸೌಕರ್ಯ ಹೆಚ್ಚಿಸುತ್ತಲೇ ಔದ್ಯೋಗಿಕ ವಾಗಿಯೂ ಆರ್ಥಿಕತೆ ಮೇಲೆತ್ತಲು ಮೆಗಾ ಯೋಜನೆಗಳು ನೆರವಾಗಲಿವೆ.
ಕೇಂದ್ರ ಸರಕಾರ ಮಾತ್ರವಲ್ಲದೆ, ವಿವಿಧ ರಾಜ್ಯ ಸರಕಾರಗಳು, ಖಾಸಗಿ ಹೂಡಿಕೆ ಸಂಸ್ಥೆಗಳು, ವರ್ಲ್ಡ್ ಬ್ಯಾಂಕ್ ಕೂಡ ಈ ಮೆಗಾ ಯೋಜನೆಗಳಿಗೆ ಹೂಡಿಕೆ ಮಾಡಿವೆ. “ಯೋಜನೆಗಳು ಇನ್ನೂ ಆರಂಭಿಕ ಹಂತದ ಲ್ಲಿದ್ದು, ಅಗಾಧ ಪ್ರಮಾಣದ ಉದ್ಯೋಗ ಸೃಷ್ಟಿಯ ಸಾಮರ್ಥ್ಯ ಹೊಂದಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಮುಖ ಯೋಜನೆಗಳಿವು….
ಜೆವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಗ್ರೇಟರ್ ನೋಯ್ಡಾ)
ನವೀ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಚಾರ್ಧಾಮ್ ಹೆದ್ದಾರಿ ಯೋಜನೆ
ಜೆಎನ್ಪಿಟಿ ಟರ್ಮಿನಲ್ 4
ವಡೋದರಾ- ಮುಂಬಯಿ
ಎಕ್ಸ್ ಪ್ರಸ್ ವೇ
ಅಹ್ಮದಾಬಾದ್ ಮೆಟ್ರೋ ರೈಲು
ಶ್ರೀಪೆರಂಬದೂರ್ ಏರ್ಪೋರ್ಟ್, ಚೆನ್ನೈ
ದಿಲ್ಲಿ- ಮೀರತ್ ಎಕ್ಸ್ಪ್ರೆಸ್ ವೇ
ಜಲಮಾರ್ಗ ವಿಕಾಸ ಯೋಜನೆ
ಢುಬ್ರಿ- ಫುಲ್ಬರಿ ಸೇತುವೆ (ಬ್ರಹ್ಮಪುತ್ರಾ)
ಮುಂಬಯಿ- ಅಹ್ಮದಾಬಾದ್ ಬುಲೆಟ್ ಟ್ರೈನ್
ದ್ವಾರಕಾ ಎಕ್ಸ್ಪ್ರೆಸ್ ವೇ
ದಿಲ್ಲಿ- ಗಾಝಿಯಾಬಾದ್- ಮೀರತ್ ರ್ಯಾಪಿಡ್ ರೈಲ್ವೇ ವ್ಯವಸ್ಥೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್ ವಿರುದ್ಧ ಮೋದಿ ವಾಗ್ದಾಳಿ
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ
Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್