ಯುರೇಕಾ ಅರೇಕಾ!!

ಅಡಕೆಯಿಂದ ಶಾಂಪೂ ಬಂತು ಡುಂ ಡುಂ...

Team Udayavani, Nov 9, 2020, 9:24 PM IST

ಯುರೇಕಾ ಅರೇಕಾ!!

‌ ಅಡಕೆಯಿಂದಲೇ ಗುಟ್ಕಾ ತರಾಗುವುದು. ಗುಟ್ಕಾ ಆರೋಗ್ಯಕ್ಕೆ ಹಾನಿಕರ. ಇದರಿಂದ ಕ್ಯಾನ್ಸರ್‌ ಬರುತ್ತದೆ- ಇದು ಅಡಕೆಗೆ ಅಂಟಿರುವ ಶಾಪದಂಥ ಮಾತು. ಆ ಹಣೆಪಟ್ಟಿಯನ್ನುಕಳಚಿಹಾಕಲು ತೀರ್ಥಹಳ್ಳಿಯ ಯುವಕ ನಿವೇದನ್‌ ನೆಂಪೆ ಮುಂದಾಗಿದ್ದಾನೆ. ಈ ಮೊದಲು ಅಡಕೆ ಟೀ, ಸ್ಯಾನಿಟೈಸರ್‌ ಆವಿಷ್ಕಾರ ಮಾಡಿದ್ದ ಆತ ಈಗ ಅಡಕೆಯಿಂದ ಶಾಂಪೂ ಉತ್ಪಾದನೆಗೆ ಮುಂದಾಗಿ, ಯಶ ಕಂಡಿದ್ದಾರೆ.

ಅಡಕೆಯಲ್ಲಿರುವ ಪ್ರೊಳೀನ್‌ ಎಂಬ ಅಮೈನೋ ಅಸಿಡ್‌ ಅನ್ನು ಬಳಸಿಕೊಂಡು ಶಾಂಪೂ ತಯಾರಿಸಲಾಗಿದೆ. ಈಗಾಗಲೆ ಶ್ಯಾಂಪೂ ಸಿದ್ಧವಾಗಿದ್ದು, ಲೈಸೆನ್ಸ್ ಕೂಡ ಲಭಿಸಿದೆ. ಅಡಕೆಯ ಬಣ್ಣವನ್ನೇ ಹೋಲುವ ಬಣ್ಣದ ಪ್ಯಾಕಿಂಗ್‌ ಮಾಡಲಾಗಿದೆ. ಸಾಮಾನ್ಯವಾಗಿ ಎಲ್ಲ ಶ್ಯಾಂಪುಗಳುಕೂದಲಿಗೆ ಸೀಮಿತ. ಆದರೆ ನಿವೇದನ್‌ ನೆಂಪೆ ಅವರ ಪ್ರೊ ಅರೆಕಾ ಶ್ಯಾಂಪೂವನ್ನು ಹೇರ್‌ ಅಂಡ್‌ ಬಾಡಿ ಎರಡಕ್ಕೂ ಬಳಸಬಹುದಾಗಿದೆ. ಡಿಸೆಂಬರ್‌ ಹೊತ್ತಿಗೆ ಅರೇಕಾ ಶ್ಯಾಂಪೂ ಅಂಗಡಿಗಳಲ್ಲಿ ಲಭ್ಯವಾಗಲಿದೆ. ಆರಂಭದಲ್ಲಿ ಸ್ಯಾಶೆ ರೂಪದಲ್ಲಿ ಶ್ಯಾಂಪೂ ಸಿಗಲಿದೆ.  ನಂತರದ ದಿನಗಳಲ್ಲಿ ಇತರೆ ಶ್ಯಾಂಪುಗಳ ಹಾಗೆ ದೊಡ್ಡ ಬಾಟಲ್‌ ಗಳಲ್ಲೂ ಲಭ್ಯವಾಗಲಿದೆ ಎನ್ನುತ್ತಾರೆ ನಿವೇದನ್‌.

ಹೊಳೆದಿದ್ದು ಹೀಗೆ? :  ಭಾರತದ ಮಾರುಕಟ್ಟೆಯಲ್ಲಿ ಚಿಲ್ಲರೆ ದರದಲ್ಲಿ ವಸ್ತುಗಳನ್ನು ಬಿಟ್ಟರೆ ಬೇಗ ಕ್ಲಿಕ್‌ ಆಗುತ್ತದೆ. ಅಡಕೆ ಟೀಗೆ ಕನಿಷ್ಠ75 ರೂ.ಕೊಡಬೇಕು. ಅಲ್ಲದೇ ಟೀಯನ್ನು ಸೀಮಿತ ವರ್ಗದ ಜನ ಮಾತ್ರ ಬಳಸುತ್ತಾರೆ. ಯಾವುದೇ ಉತ್ಪನ್ನಕ್ಕೆ10ರೂ.ಗಿಂತ ಹೆಚ್ಚು ದರವಿದ್ದಾಗ ಅದು ಹೆಚ್ಚು ಜನರ ಬಳಕೆಗೆ ಸಿಗುವುದಿಲ್ಲ. ಹೆಚ್ಚು ಜನ ಬಳಸುವ, ಕಡಿಮೆ ದರದಲ್ಲಿ ಲಭ್ಯವಾಗುವ ಪ್ರಾಡಕ್ಟ್ ಲಾಂಚ್‌ ಮಾಡಲು ತುಂಬಾ ಯೋಚನೆ ಮಾಡುತ್ತಿದ್ದೆ. ಆಗಲೇ ಶಾಂಪೂ ತಯಾರಿಕೆಯ ಐಡಿಯಾ ಬಂತು. ಈ ಶಾಂಪೂ ಖರೀದಿಸಿದವರು ಅದನ್ನು ತಲೆಗೆ ಹಚ್ಚದಿದ್ದರೂ ಪರವಾಗಿಲ್ಲ. ಬೈಕ್‌,ಕಾರು ತೊಳೆಯಲು ಬಳಸಿದರೂ ಸಾಕು, ರೈತರಿಗೆ ಅನುಕೂಲ ಮಾಡಿದಂತೆ ಎನ್ನುತ್ತಾರೆ ನಿವೇದನ್‌.

ಬೇಡಿಕೆ ಇರುತ್ತದೆ… :  ಗುಟ್ಕಾಕ್ಕೆ ನಿಷೇಧ ಹೇರಿದರೆ ಅದರ ಬೆನ್ನಿಗೇ ಅಡಕೆಯ ಬೆಲೆಯೂ ಕುಸಿಯಬಹುದು. ಆಗ ಅಡಕೆ ಬೆಳೆಗಾರರುಕಷ್ಟಕ್ಕೆ ಸಿಲುಕಬಹುದು. ಹಾಗೆ ಆಗದಂತೆ, ಪರ್ಯಾಯ ವಸ್ತುಗಳ ಉತ್ಪಾದನೆಗೆಮುಂದಾಗಬೇಕು ಎಂಬ ಯೋಚನೆ ನನಗಿತ್ತು. ಅದರ ಫ‌ಲವಾಗಿ ಅರೇಕಾ ಟೀ ಮೂಡಿಬಂತು. ನಂತರ, ಅಡಕೆಯಿಂದ ಸ್ಯಾನಿಟೈಸರ್‌ ತಯಾರಿಸಿದ್ದೂ ಆಯಿತು. ಈಗ ಶಾಂಪೂಕೂಡ ತಯಾರಾಗಿದೆ. ಮುಂದೊಮ್ಮೆ ಗುಟ್ಕಾಕ್ಕೆ ನಿಷೇಧ ಹೇರಿದರೂ ಇತರೆ ಉತ್ಪನ್ನಗಳ ತಯಾರಿಕೆಗಾಗಿ ಅಡಕೆಗೆ ಬೇಡಿಕೆ ಇದ್ದೇ ಇರುತ್ತದೆ ಅನ್ನುವುದು ನಿವೇದನ್‌ ಮಾತು.­

ಒಂದು ಪ್ಯಾಕ್‌ಗೆ 2 ರೂ. :  ಒಂದು ಶಾಂಪೂ ಪ್ಯಾಕ್‌ಗೆ 2 ರೂ. ಫಿಕ್ಸ್ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಬೇರೆ ಶಾಂಪೂಗಳ ಬೆಲೆ 2 ರೂ.ಗಿಂತ ಕಡಿಮೆ ಇಲ್ಲ. ಭಾರತದಲ್ಲೇ ತಯಾರಾಗುವ ಶಾಂಪೂಗಳು ಬೆರಳೆಣಿಕೆ ಪ್ರಮಾಣದಲ್ಲಿವೆ. ಅಡಕೆ ಬೆಳೆಗಾರರು ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಇದು ತನ್ನದೇ ಪ್ರಾಡಕ್ಟ್ ಎಂಬ ಭಾವನೆ ಜೊತೆಯಾದರೆ, ಈ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಸಾಧ್ಯವಾಗುತ್ತದೆ.

 

 

ಶರತ್‌ ಭದ್ರಾವತಿ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.