ಪ್ರಿನ್ಸಿಪಾಲ್‌ ಆಗಿ ನೀವು ಕಸ ಗುಡಿಸ್ತೀರಾ?


Team Udayavani, Nov 18, 2020, 8:20 PM IST

avlu-tdy-2

ಅದೊಮ್ಮೆ, ನಮ್ಮಕಾಲೇಜಿನ ಗ್ರೂಪ್‌ “ಡಿ’ ನೌಕರಳಿಗೆ ಯಾವುದೋ ವಿಚಿತ್ರಕಾಯಿಲೆ ಬಂದು,ಒಂದು ವರ್ಷ ಕಾಲೇಜಿ ಗೆ ಬರದಂತಾಯಿತು. ನಮ್ಮ ವಿದ್ಯಾರ್ಥಿಗಳೇ ಕಾಲೇಜನ್ನು ಸ್ವಚ್ಛ ಮಾಡಿ, ಗಿಡಗಳಿಗೆ ನೀರು ಹಾಕುತ್ತಿದ್ದರು. ಅವರೊಂದಿಗೆ ನಾನೂ, ಉಪನ್ಯಾಸಕರೂ ಆಗಾಗಕೈ ಜೋಡಿಸುತ್ತಿದ್ದೆವು. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಪರೀಕ್ಷೆ ನಡೆಯುವಾಗ ಯಾರೂ ಇರಲಿಲ್ಲ. ಹಾಗಾಗಿ, ನಾನು ನನ್ನ ಚೇಂಬರ್‌ಕಸ ಗುಡಿಸಿ, ಗಿಡಕ್ಕೆ ನೀರು ಹಾಕಿ, ಆವರಣದಲ್ಲಿಕಸಕಡ್ಡಿಗಳು ಬಿದ್ದಿದ್ದರೆ ತೆಗೆದು ಹಾಕಿ, ಶೌಚಾಲಯಕ್ಕೆ ನೀರು ಹಾಕಿ,ಕೆಲಸ ಮಾಡಲು ಕುಳಿತುಕೊಳ್ಳುತ್ತಿದ್ದೆ.

ಒಂದು ದಿನ ಒಬ್ಬ ಹೆಂಗಸು ಮಗಳನ್ನು ಮೇ ತಿಂಗಳಲ್ಲಿ ದಾಖಲು ಮಾಡಿಸಲು ವಿವರಗಳನ್ನುಕೇಳಲು ಬಂದಿದ್ದಳು. “ಅವರಿಲ್ವಾ?’ ಎಂದಳು. “ಯಾರು?’ ಎಂದೆ. “ಅದೇ ಪ್ರಿನ್ಸಿಪಾಲರು’ ಅಂದಳು. ನನಗೆ ಅಚ್ಚರಿಯಾಯಿತು. “ನಾನೇಕಣಮ್ಮ ಪ್ರಿನ್ಸಿಪಾಲ್’ ಅಂದೆ. ನನ್ನನ್ನೇ ಒಮ್ಮೆ ವಿಚಿತ್ರವಾಗಿ ನೋಡಿ ಹೀಗೆ ಹೇಳಿದಳು. “ಅದೇ, ಮೂರು ದಿನದಿಂದ ಪ್ರಿನ್ಸಿಪಾಲ್‌ ಯಾಕೆ ಬಂದಿಲ್ಲ, ಇವತ್ತು ಕೇಳೇ ಬಿಡೋಣ ಅಂತ ಬಂದೆ. ಈ ಕಾಲೇಜಿನಲ್ಲಿ ಕಸ ಗುಡಿಸುವವರು ನೋಡೋದಕ್ಕೆ ಚೆನ್ನಾಗಿದ್ದಾರೆ, ಎಷ್ಟು ಚೆನ್ನಾಗಿ ಸೀರೆ ಉಟ್ಕೊಂಡಿರ್ತಾರೆ.ಕಸ ಗುಡಿಸುವವರೂ ಹೀಗಿದ್ದ ಮೇಲೆ ಕಾಲೇಜು ಚೆನ್ನಾಗಿರಬೇಕು ಅಂತ ಮಗಳಿಗೆ ಹೇಳ್ತಿದ್ದೆ. “ಅಯ್ಯೋ, ಪ್ರಿನ್ಸಿಪಾಲ್‌ ಆಗಿ ನೀವು ಕಸಗುಡಿಸ್ತೀರಾ? ಆ ಕೆಲಸದವಳು ಯಾಕೆಬಂದಿಲ್ಲ? ಅವಳಿಗೆ ಉಗಿದುಉಪ್ಪು ಹಾಕಬಾರದಾ? ಅವಮಾನ ಆಗಲ್ವಾ ನಿಮಗೆ?ನಾವು ಬಡವರು ಇರಬಹುದು, ಇಂಥ ದರಿದ್ರಕಾಲೇಜಿಗೆ ಮಾತ್ರ ಸೇರಿಸಲ್ಲ’ ಅಂತ ಮಗಳನ್ನು ವಾಪಸ್‌ ಕರೆದುಕೊಂಡುಹೋದಳು! ಸದಾ ಆಳಿಸಿಕೊಳ್ಳಲು ಇಷ್ಟಪಡುವ, ಜೀವನ ನಿರ್ವಹಣೆಗೆ ಮಾಡುವ ವೃತ್ತಿಗಳಲ್ಲಿ ಮೇಲು- ಕೀಳನ್ನು ಸೃಷ್ಟಿಸಿ ಅಗೌರವಿಸುವ ಜನರ ರೀತಿ ನನ್ನನ್ನು ದಂಗುಬಡಿಸಿತು.

 

– ಎಂ.ಆರ್‌. ಕಮಲ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.