ಭಾರತ ಬಂದ್ ಗೆ ಗಂಗಾವತಿ ನಗರದಲ್ಲಿ ಉತ್ತಮ ಪ್ರತಿಕ್ರಿಯೆ: ಅಂಗಡಿ ಮುಂಗಟ್ಟುಗಳು ಬಂದ್
Team Udayavani, Dec 8, 2020, 3:45 PM IST
ಗಂಗಾವತಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ಹಲವು ಸಂಘಟನೆಗಳು ಕರೆ ನೀಡಿದ್ದ ‘ಭಾರತ ಬಂದ್’ ಗೆ ಗಂಗಾವತಿ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗಿನಿಂದಲೇ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಹಾಗೂ ದಲಾಲಿ ಅಂಗಡಿಗಳನ್ನು ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು. ವಕೀಲರ ಸಂಘದ ಪದಾಧಿಕಾರಿಗಳು ಕಲಾಪ ಬಹಿಷ್ಕಾರ ಮಾಡಿ ಬಂದ್ ಗೆ ಬೆಂಬಲಿಸಿದರು.
ಸಿಐಟಿಯು, ಅಂಗನವಾಡಿ, ಬಿಸಿಯೂಟ ಯೋಜನೆ ನೌಕರರರು, ರೈತ ಸಂಘ, ಕನ್ನಡ ದಲಿತರ ಪರ ಸಂಘಟನೆ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಚನ್ನಬಸವಸ್ವಾಮಿ ವೃತ್ತದಲ್ಲಿ ಹಾಗೂ ಎಐಟಿಸಿಯು ನೇತೃತ್ವದಲ್ಲಿ ಹಮಾಲಿ, ಅಂಗನವಾಡಿ, ಉದ್ಯೋಗ ಖಾತ್ರಿ ಕೂಲಿಕಾರರು ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:ತಾರಾಲಯ ಕಾಮಗಾರಿಗೆ ಹಿಡಿದಿದೆ ಗ್ರಹಣ! ಅನೈತಿಕ ಚಟುವಟಿಕೆ ತಾಣವಾಗಿದೆ ಜ್ಞಾನಾರ್ಜನೆ ಕಟ್ಟಡ
ಮಾಜಿ ಸಂಸದ ಶಿವರಾಮಗೌಡ, ನಿರುಪಾದಿ ಬೆಣಕಲ್, ವಿರೇಶಪ್ಪ, ಶರಣೇಗೌಡ ಕೇಸರಟ್ಟಿ, ಬಸವರಾಜ ಸ್ವಾಮಿ ಮಳಿಮಠ, ವಿಶ್ವನಾಥ ಕೇಸರಟ್ಟಿ, ಶೈಲಜಾ ಹಿರೇಮಠ, ವಲಿಸಾಬ, ಅಮರೇಶ ಕಡಗದ, ಶ್ರೀನಿವಾಸ್, ಬವರಾಜ, ಲಕ್ಷ್ಮೀದೇವಿ ಸೋನಾರ್, ಗೋತಾಜೋಶಿ, ಹುಸೆನಪ್ಪ ಹಂಚಿನಾಳ, ಜಿಲಾನಿ ಪಾಷಾ, ಎ.ಎಲ್.ತಿಮ್ಮಣ್ಣ, ಎ.ಹುಲುಗಪ್ಪ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು
Koppala; ಇಂದಿನಿಂದ ಎರಡು ದಿನ ಮೇ ಸಾಹಿತ್ಯ ಮೇಳ
Koppala; ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆ
Politics: ಕಾಂಗ್ರೆಸ್ ಗ್ಯಾರಂಟಿಗಳಲ್ಲಿಯೇ ಕಾಲಹರಣ ಮಾಡುತ್ತಿದೆ: ಎನ್ ರವಿಕುಮಾರ್ ವಾಗ್ದಾಳಿ
Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ
MUST WATCH
ಹೊಸ ಸೇರ್ಪಡೆ
24 ವರ್ಷ 101 ಬಾರಿ ಬೈಗುಳ: ವಿಪಕ್ಷಗಳ ಕುರಿತು ಪಿಎಂ ಮೋದಿ ಹೇಳಿದ್ದೇನು?
Madhya Pradesh ಶಾಲೆಗಳಲ್ಲಿ 100 ಕೋಟಿ ರೂ. ಪುಸ್ತಕ ಹಗರಣ: 20 ಪ್ರಾಂಶುಪಾಲರ ಬಂಧನ
Pen Drive Case ಪ್ರಜ್ವಲ್ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್ಐಟಿ
Pakistan; ತಾಪ 52 ಡಿಗ್ರಿ: ಆರ್ಥಿಕ ಸಂಕಷ್ಟದ ನಡುವೆ ಏರಿದ ಬಿಸಿಲು
Everest ಪರ್ವತ ತಪ್ಪಲಲ್ಲಿ ಈಗ ಟ್ರಾಫಿಕ್ ಜಾಮ್