ತಪ್ಪು ಗ್ರಹಿಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ : ವಾಟ್ಸಾಪ್
ಪಾರದರ್ಶಕತೆ ಮತ್ತು ಹೊಸ ಅಯ್ಕೆಗಳನ್ನು ಒದಗಿಸುವುದು ವಾಟ್ಸಾಪ್ ನ ಮುಖ್ಯ ಉದ್ದೇಶ
Team Udayavani, Jan 21, 2021, 12:01 PM IST
ನವದೆಹಲಿ : ಖಾಸಗಿತನಕ್ಕೆ ಸಂಬಂಧಿಸಿದ ಹೊಸ ನಿಯಮ ಜಾರಿಗೆ ತರಲು ವಾಟ್ಸಾಪ್ ಮುಂದಾಗಿದೆ. ಉದ್ಯಮಗಳು ಮತ್ತು ಗ್ರಾಹಕರಿಗೆ ಕಂಪೆನಿಯಿಂದ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮತ್ತು ಉತ್ತಮ ಸೇವೆ ನೀಡುವುದರೊಂದಿಗೆ ಅದರ ಉಪಯೋಗವನ್ನು ಬಳಸಿಕೊಳ್ಳಲು ಪಾರದರ್ಶಕತೆ ಮತ್ತು ಹೊಸ ಅಯ್ಕೆಗಳನ್ನು ಒದಗಿಸುವುದು ವಾಟ್ಸಾಪ್ ನ ಮುಖ್ಯ ಉದ್ದೇಶವಾಗಿದೆ ಎಂದು ವಾಟ್ಸಾಪ್ ನ ವಕ್ತಾರರೊಬ್ಬರು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಗೋವಾ ಚಿತ್ರೋತ್ಸವ: ಓಟಿಟಿ ಸಿನಿಮಾ ಮಂದಿರಗಳನ್ನು ಕೊಲ್ಲುತ್ತದೆಯೇ? ಒಂದು ಚರ್ಚೆ
ವಾಟ್ಸಾಪ್ ಮೂಲಕ ಗ್ರಾಹಕರು ತಮ್ಮ ಕಾಂಟ್ಯಾಕ್ಟ್ ನಲ್ಲಿರುವವರೊಂದಿಗೆ ನಡೆಸುವ ಖಾಸಗಿ ಸಂವಹನವನ್ನು ವಾಟ್ಸಾಪ್ ಅಥವಾ ಫೇಸ್ಬುಕ್ ನೋಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ವಾಟ್ಸಾಪ್ ನ ಖಾಸಗಿತನಕ್ಕೆ ಸಂಬಂಧಿಸಿದ ಪ್ರಸ್ತಾವಿತ ನಿಯಮಗಳನ್ನು ತರಬಾರದು ಎಂದು ಮಂಗಳವಾರ(ಜ.19) ವಾಟ್ಸಾಪ್ ಗೆ ಸೂಚನೆ ನೀಡಿ, ಹೊಸ ನಿಯಮದ ಬಗ್ಗೆ 14 ಪ್ರಶ್ನೆಗಳನ್ನಿರಿಸಿದ ಹಿನ್ನಲೆಯಲ್ಲಿ, ಖಾಸಗಿತನಕ್ಕೆ ಸಂಬಂಧಿಸಿದ ನೀತಿ ನಿಯಮಗಳಲ್ಲಿನ ಪ್ರಸ್ತಾವಿತ ಬದಲಾವಣೆಯು ಬಳಕೆದಾರರ ಮಾಹಿತಿಯನ್ನು ತನ್ನ ಸಹೋದರ ಸಂಸ್ಥೆ ಫೇಸ್ಬುಕ್ ನೊಂದಿಗೆ ಹಂಚಿಕೊಳ್ಳುವ ತನ್ನ ಸಾಮರ್ಥ್ಯವನ್ನು ಹೆಚ್ಚು ಮಾಡುವುದಿಲ್ಲ ಎಂದು ವಾಟ್ಸಾಪ್ ಹೇಳಿದೆ.
ಇದನ್ನೂ ಓದಿ : ಸಚಿವರ ಖಾತೆ ಬದಲಾವಣೆ: ಮುನಿಸಿಕೊಂಡ ಮಾಧುಸ್ವಾಮಿ, ಸಂಪುಟ ಅತೃಪ್ತರ ಸಭೆ, ರಾಜೀನಾಮೆ?
ವಾಟ್ಸಾಪ್ ನ ಪ್ರಸ್ತಾವಿತ ಹೊಸ ನಿಯಮಗಳ ಬಗ್ಗೆ ಈಚೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಈಗ, ಅದನ್ನು ದೂರ ಸರಿಸಲು ಗ್ರಾಹಕರಲ್ಲಿರುವ ತಪ್ಪು ಗ್ರಹಿಕೆಗಳ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುವುದಕ್ಕೆ ವಾಟ್ಸಾಪ್ ಸಿದ್ಧವಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಭಜರಂಗಿ-2, ಸಲಗ.. ಸ್ಟಾರ್ ಸಿನಿಮಾಗಳ ರಿಲೀಸ್ಗೆ ಕೊನೆಗೂ ಡೇಟ್ ಫಿಕ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ
Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ