ಅಂತರಂಗದ ಕನ್ನಡಿ ನಾವಾಡುವ ನುಡಿ


Team Udayavani, May 26, 2019, 6:00 AM IST

Shiva

ಸಂಸಾರದಲ್ಲಿನ ಸಕಲ ಜೀವಿಗಳ ಸಮೂಹದಲ್ಲಿ ಮುನ್ನೆಲೆಯಲ್ಲಿರುವ ಮನುಷ್ಯನಿಗೆ ಭಗವಂತ ದಯಪಾಲಿಸಿದ ಪ್ರಧಾನವಾದ ವರ ಎಂದರೆ ಮಾತನಾಡುವ ಮಹಾಬಲ. ವಿಜೇತರ ಅಥವಾ ವಿಜಯಿಶಾಲಿಗಳ ಮತ್ತೂಂದು ಲಕ್ಷಣ ಅವರಾಡುವ ವಾಣಿ. ಮಾತು ನಮ್ಮೆಲ್ಲರ ಬಾಳಿನ ಒಂದು ಅವಿಭಾಜ್ಯ ಕ್ರಿಯೆ. ಹಿತಮಿತವಾಗಿ ಮಾತನಾಡುವುದೊಂದು ಉತ್ತಮ ಕಲೆ. ನಮ್ಮ ಅಂತರಂಗದ ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು, ಅಭಿಮತಗಳನ್ನು ಅನ್ಯರಿಗೆ ಬಿಂಬಿಸುವ ಉಪಕರಣ ಮಾತು. ಸುಂದರ ಉಕ್ತಿಗಳಿಂದ ತ್ರಿಲೋಕವನ್ನು ಗೆಲ್ಲಬಹುದು ಎಂಬುದು ಅಕ್ಷರಶಃ ಸತ್ಯನುಡಿ. ಸುಮಧುರವಾದ ಮಾತುಗಳು ಸರ್ವಜನರ ಮನವನ್ನು ಆಕರ್ಷಿಸುತ್ತವೆ.

ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಒಂದೆಡೆ ಬಸವಣ್ಣನವರು ಸಾರಿದರೆ, ಇನ್ನೊಂದು ಕಡೆ ಮಾತಿನ ಬೆಲೆ ತಿಳಿದವರು ಮಾತುಗಳನ್ನು ಮನಸ್ಸು ಹಾಗೂ ಹೃದಯವೆಂಬ ತಕ್ಕಡಿಯಲ್ಲಿ ತೂಗಿ ಬಾಯಿಯಿಂದ ಹೊರಚೆಲ್ಲುವರು ಅಂದರು ಕಬೀರ್‌ದಾಸರು. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಹಾಗೂ ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಸರ್ವಕಾಲಕ್ಕೂ ಅನ್ವಯವಾಗುವಂತಹ ನಿತ್ಯನೂತನ ಗಾದೆ ನುಡಿಗಳು. ಒಳ್ಳೆಯ ಮಾತು, ಹಿತನುಡಿಗಳಿಂದ ಪ್ರಾಣಿಗಳೂ ಆಕರ್ಷಿತ ವಾಗುತ್ತವೆ. ಆದ್ದರಿಂದ ಸದಾ ಒಳಿತು ನುಡಿಯುವುದು ಶ್ರೇಯಸ್ಕರ ಎಂದು ತಿರುವಳ್ಳುವರ್‌ ಹೇಳಿದರೆ, ಇನ್ನೊಂದೆಡೆ ಬಿಲ್ಲಿನಿಂದ ಹೊರಟ ಬಾಣ, ಬಾಯಿಯಿಂದ ಹೊರಟ ಮಾತು ಎಂದಿಗೂ ಹಿಂದಿರುಗುವುದಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.

ಸುಸಂಸ್ಕೃತವಾದ ನುಡಿಗಳಿಂದ ಸರ್ವಸ್ವವನ್ನೂ ಲೋಕದಲ್ಲಿ ಪಡೆದುಕೊಳ್ಳಬಹುದು. ಸರಳ ಸ್ವಭಾವಿ ಧರ್ಮಗುರುಗಳ ಮಾತುಗಳು ಮನಸ್ಸಿಗೆ ಮುದ ನೀಡುತ್ತವೆ. ಮನೋಹರವಾದ ಧ್ವನಿಯಲ್ಲಿ ಹೊರಬರುವ ಚೆಲುವಾದ ತರುಣಿಯರ ಮಾತುಗಳು ಯುವ ಹುಡುಗರ ಹೃದಯಕ್ಕೆ ಲಗ್ಗೆ ಹಾಕುತ್ತವೆ. ನಿರಂತರ ಅಧ್ಯಯನದಿಂದ ಜ್ಞಾನ ಸಂಗ್ರಹಿಸಿದ ಅಧ್ಯಾಪಕರ ಮಾತುಗಳು ವಿದ್ಯಾರ್ಥಿಗಳಿಗೆ ದಾರಿದೀಪವಾಗುತ್ತವೆ. ಆದರೆ ವಿಚಾರ ಮಾಡದೆ ಆಡುವ ನುಡಿಗಳು ಅನೇಕ ಎಡರು-ತೊಡರುಗಳನ್ನು ತಂದೊಡ್ಡುತ್ತವೆ. ಅಗಸನ ಅಡ್ಡಮಾತಿಗೆ ಭೂಮಿಸುತೆ ವನ ಸೇರಿದಳು. ಬಾಯಿತಪ್ಪಿ ಧರ್ಮಪತ್ನಿಗೆ ಕೊಟ್ಟ ವಚನ ದಶರಥನಿಗೆ ಪುತ್ರಶೋಕದ ಅನುಭವ ನೀಡಿತು. ತಾನಾಡಿದ ಸಿದ್ಧಾಂತಗಳ ಪರಿಪಾಲನೆಗೋಸ್ಕರ ನಗೆಗಳೊಂದಿಗೆ ಜೀವಿಸುತ್ತಿದ್ದ ಹರಿಶ್ಚಂದ್ರ ಹೊಗೆ ಗಳೊಂದಿಗೆ ಜೀವಿಸಿದನು. ಅಂದಾಗ ಅರಿತು ಆಡಿದ ಮಾತು ಮುತ್ತು, ಮರೆತು ಆಡಿದ ಮಾತು ಮೃತ್ಯು ಎಂಬುದು ಸರ್ವಕಾಲಿಕ ಸತ್ಯಸಂಗತಿ.

ಮಾತು ಕಲ್ಲಾಗಿರದೆ ಕಲ್ಲು ಸಕ್ಕರೆಯಂತಿರಲಿ
ನಮ್ಮ ಮಾತೇ ನಮ್ಮ ಮನಸ್ಸಿಗೆ ಹಿಡಿದ ದರ್ಪಣ. ಮನುಷ್ಯ ಎಂಥವನೆಂಬುದು ಅವನ ಆದರದಿಂದ ಅರ್ಥವಾಗುತ್ತದೆ. ಮಾನವನ ಸೌಂದರ್ಯವೂ ಅವನ ನಾಲಿಗೆಯಲ್ಲಿದೆ. ಆದ್ದರಿಂದ ನಾವಾಡುವ ಮಾತುಗಳು ಸುಜನತೆಗಳಿಂದ, ಸಭ್ಯತೆಗಳಿಂದ ತುಂಬಿರಬೇಕು. ನಮ್ಮ ನುಡಿಗಳು ಕಲ್ಲಾಗಿರದೆ ಕಲ್ಲುಸಕ್ಕರೆಯಂತಿರಬೇಕು. ಅರ್ಥಗರ್ಭಿತ ಮಾತುಗಳು ಬದುಕಿನಲ್ಲಿ ಸೊಬಗನ್ನು, ಸೊಗಸನ್ನು ತರುತ್ತವೆ. ಅಂತಹ ನುಡಿಗಳು ಸಂತೋಷದಾಯಕವಾಗಿ, ಸುರಕ್ಷಿತವಾಗಿ ಆಡಿದ ಹೋಳಿ ಆಟದ ಅನುಭವ ್ನ ಕೊಡುತ್ತವೆ.

ಕರ್ಣಕಠೊರವಾಗಿ, ಒರಟಾಗಿ ಮಾತಾಡುವುದರಿಂದ ಉಳಿದವರ ಮೆಲೆ ತಮ್ಮ ಪ್ರಭಾವವನ್ನು ವೃದ್ಧಿಸಿಕೊಳ್ಳಬಹುದು ಎಂಬ ತಪ್ಪು ತಿಳುವಳಿಕೆ ಅನೇಕರಲ್ಲಿದೆ. ಬಿರುನುಡಿಯ ಬಸಿರಿನಲ್ಲಿ ಘೋರಾಂಧಕಾರವಿದೆ ಎಂಬುದನ್ನು ಅರಿಯದ ಮೂರ್ಖರು ಅಂಥವರು. ಕಟುವಾಗಿ ಮಾತಾಡು ವವರು ಬೆಲ್ಲವನ್ನೂ ಕೂಡ ಮಾರಲಾರರು ಎಂಬ ವಾಸ್ತವಿಕತೆಯನ್ನು ತಿಳಿಯದ ಜನಾಂಗ ಅದು. ಇಂತಹವರಿಗೆ ಅಯ್ನಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂಬ ಸತ್ಯದ ಅರಿಕೆ ಇಲ್ಲ. ಅಂಥವರ ಸಂಗ-ಸಹವಾಸ ಸರ್ವಥಾ ಬೇಡ. ಯಾವುದೇ ಸನ್ನಿವೇಶಗಳಲ್ಲಿ ಅಥವಾ ವಿಷಯಗಳಲ್ಲಿ ಮತ್ತೂಬ್ಬರ ಅನಿಸಿಕೆಗಳಿಗೆ ವಿಮುಖವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಕಟುವಾದ ಅಬ್ಬರದ ಮಾತುಗಳ ಸಹಾಯದ ಅಗತ್ಯವಿಲ್ಲ. ನಮ್ರವಾದ ನುಡಿಗಳಿಂದ ಭಿನ್ನಮತವನ್ನು ಸಾರಬಹುದು. ಅನ್ಯರ ವಿಚಾರಧಾರೆಗಳನ್ನು ತಿರಸ್ಕರಿಸುವಲ್ಲಿ ಹಾಗೂ ಪುರಸ್ಕರಿಸುವಲ್ಲಿ ನಮ್ಮ ಮಾತುಗಳು ಸೇತುವೆಯ ಪಾತ್ರವನ್ನು ವಹಿಸಬೇಕೇ ಹೊರತು ಗೋಡೆಯ ಪಾತ್ರವನ್ನಲ್ಲ. ನಮ್ಮ ನುಡಿ ಮೃದುವಾಗಿದ್ದರೆ ಪ್ರತಿಧ್ವನಿಯೂ ಮೃದುವಾಗಿರುತ್ತದೆ. ನಮ್ಮ ಮಾತುಗಳು ಅಪ್ರಸ್ತುತ ವಾಗಿರಬಾರದು, ಅಸಂಬದ್ಧವಾಗಿರಬಾರದು, ಅತಿಯಾಗಿರಬಾರದು, ಅನಾವಶ್ಯಕ ವಾಗಿರಬಾರದು. ನಾವಾಡುವ ಶಬ್ದಗಳಲ್ಲಿ ಉದಾತ್ತ ಭಾವನೆಗಳು ಸುಪ್ತವಾಗಿರಬೇಕು. ಅಂತಹ ಶಬ್ದಗಳು ಕೇಳುಗರಿಗೆ ಕರ್ಣಾನಂದವನ್ನು, ಮಹದಾನಂದ ನೀಡುತ್ತವೆ. ಇದು ನಮ್ಮ ವ್ಯಕ್ತಿತ್ವಕ್ಕೊಂದು ಮೆರಗು ನೀಡಿ ಸಾಧನೆಯ ಶಿಖರ ಏರುವ ಕೈಂಕರ್ಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಮಾತು ಸಂಸ್ಕೃತಿಯ ಸಂಕೇತ
ನಮ್ಮ ನುಡಿಗಳು ಮಾಣಿಕ್ಯದಂತೆ, ಸ್ಫಟಿಕದ ಶಲಾಕೆಯಂತೆ ಬೆಳಕು ಸೂಸುವಂತಿರಬೇಕು. ಮಾತಿನ ಮಹತ್ವವನ್ನು ಜೀರ್ಣಿಸಿಕೊಂಡವನು ತಾನು ತುಂಬಾ ತಿಳಿದವನು ಎಂಬುದನ್ನು ತೋರಿಸುವ ಕಾರ್ಯದಲ್ಲಿ ತನ್ನ ಅರೆಜ್ಞಾನವನ್ನು ಪ್ರಕಟಿಸಿ ಹಾಸ್ಯಕ್ಕೆ ಬಲಿಯಾಗುವುದಿಲ್ಲ. ತನ್ನ ಮಾತುಗಳೂ ತನ್ನ ವ್ಯಕ್ತಿತ್ವವನ್ನು, ಆದರ್ಶವನ್ನು ಅಳೆಯುವ ಅಳತೆಗೋಲು ಎಂಬ ನಿಜವನ್ನರಿತು ಹೆಜ್ಜೆ ಇಡುತ್ತಾನೆ. ಬೇಕಾದಲ್ಲಿ ಮಾತ್ರ, ತನ್ನ ತಿಳುವಳಿಕೆಯನ್ನು ವ್ಯಕ್ತಪಡಿಸಬೇಕಾದ ಸಂದರ್ಭ ಉದ್ಭವಿಸಿದಾಗ ಮಾತ್ರ ನಾಲಿಗೆಗೆ ಕೆಲಸ ಕೊಡುತ್ತಾನೆ. ಯಕ್ಷಗಾನ ಪ್ರಪಂಚದಲ್ಲಿ ತಮ್ಮ ವಾಕ್‌ ಸಾಮರ್ಥ್ಯದಿಂದ, ವಾಕ್‌ ಪ್ರೌಢಿಮೆಯಿಂದ, ವಾಕ್‌ ಚಾತುರ್ಯದಿಂದ ಸಭಿಕರನ್ನು ಮಂತ್ರ ಮುಗ್ಧರ ನ್ನಾಗಿಸುತ್ತಿದ್ದ ಅನೇಕ ಕಲ್ಪದ ಕಲಾವಿದರು ಇದಕ್ಕೆ ಜ್ವಲಂತ ಉದಾಹರಣೆ. ಅಂದಾಗ ಪ್ರಸಂಗಗಳನ್ನು ಅರ್ಥ ಮಾಡಿಕೊಳ್ಳದೆ, ದೊರೆತ ಅವಕಾಶವನ್ನು ತನ್ನ ಮಾನಸಿಕ ಸ್ಥಿತಿ, ಸ್ವಂತ ನಿಲುವು ಅಥವಾ ಸ್ವಹಿತಾಸಕ್ತಿಯನ್ನು ಮಾತ್ರ ಲಕ್ಷ್ಯದಲ್ಲಿರಿಸಿಕೊಂಡು ಬೊಗಳೆ ನುಡಿಗಳನ್ನಾಡುವ ಅಧಿಕ ಪ್ರಸಂಗಿಗಳನ್ನು ಯಾರೂ ಗೌರವಿಸುವುದಿಲ್ಲ.

ಸಿಟ್ಟಿನ, ಅಸೂಯೆಯ, ಅಹಂಕಾರದ ಛಾಯೆ ನಮ್ಮ ಧ್ವನಿಯನ್ನು ಜೋರಾಗಿಸಿ ಅನೇಕಾನೇಕ ಹೃದಯಗಳು ನಮ್ಮಿಂದ ದೂರವಾಗುವಂತೆ ಮಾಡುತ್ತದೆ. ಆದ್ದರಿಂದ ನಾವು ಮಾತುಗಳನ್ನು ಮೆದುವಾಗಿ, ಮೃದುವಾಗಿ, ಹಿತವಾಗಿ, ಮಿತವಾಗಿ ಆಡುವುದನ್ನು ರೂಢಿಸಿಕೊಂಡರೆ ಸರ್ವರಿಗೂ ಶ್ರೇಯಸ್ಕರ. ಆದ ಕಾರಣ, ನಾವಾಡುವ ನುಡಿಗಳು ನಮ್ಮ ಸಂಸ್ಕಾರವನ್ನು, ಸಂಸ್ಕೃತಿಯನ್ನು ಪ್ರಕಟಪಡಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ.

ಒಟ್ಟಿನಲ್ಲಿ ಅನುದ್ವೇಗಕರವಾಗಿ ನುಡಿಯದೆ ಶಾಂತ ರೀತಿಯಿಂದ ಮಾತಾಡುವುದು ಅತಿ ಉತ್ತಮ ಎಂಬುದನ್ನು ತಿಳಿಯೋಣ. ದುಡುಕದೆ, ಸಿಡುಕದೆ ಆಲೋಚಿಸಿ ಮಾತನಾಡುವ ಆರೋಗ್ಯಕರ ಹಾಗೂ ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಂಡು ಉಳಿಸಿಕೊಳ್ಳೋಣ. ಅಖೀಲಾಂಡಕೋಟಿ ಬ್ರಹ್ಮಾಂಡನಾಯಕ ಭಗವಗ್ದೀತೆಯಲ್ಲಿ ವಾಕುÏದ್ಧಿಯ ಬಗ್ಗೆ ಸಾರಿದ ಸಂದೇಶ ಇದೇ ತಾನೆ? ಅಂದಾಗ ಮಾತಾಡಿದ ಮೇಲೆ ಪಶ್ಚಾತ್ತಾಪಪಡುವ ಪಾಮರ ರಾಗದೆ, ಯಾರೊಂದಿಗೆ ಮಾತಾಡಬೇಕು, ಯಾವಾಗ ಮಾತಾಡಬೇಕು, ಏನು ಮಾತಾಡಬೇಕು, ಏಕೆ ಮಾತಾಡಬೇಕು, ಎಷ್ಟು ಮಾತಾಡಬೇಕು, ಹೇಗೆ ಮಾತಾಡಬೇಕು ಎಂಬುದನ್ನು ಮನದಟ್ಟುಮಾಡಿಕೊಂಡ‌ ಪಂಡಿತರಂತೆ ಬದುಕೋಣ.

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.