ಹಾಂಕಾಂಗ್‌ನಲ್ಲಿ ಚೀನಿ ದರ್ಪ ಜಾಗತಿಕ ಒಗ್ಗಟ್ಟು ಮುಖ್ಯ


Team Udayavani, Jul 9, 2020, 5:50 AM IST

ಹಾಂಕಾಂಗ್‌ನಲ್ಲಿ ಚೀನಿ ದರ್ಪ ಜಾಗತಿಕ ಒಗ್ಗಟ್ಟು ಮುಖ್ಯ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹಾಂಕಾಂಗ್‌ ಜನರ ಧ್ವನಿಯನ್ನು ಹತ್ತಿಕ್ಕಲು, ಜಿನ್‌ಪಿಂಗ್‌ ಸರಕಾರ ತಂದಿರುವ ರಾಷ್ಟ್ರೀಯ ಭದ್ರತೆ ಕಾನೂನಿಗೆ ಈಗ ಜಗತ್ತಿನಾದ್ಯಂತ ವಿರೋಧ ವ್ಯಕ್ತವಾಗಲಾರಂಭಿಸಿದೆ.

ಆದಾಗ್ಯೂ, ಈ ವಿಚಾರದಲ್ಲಿ ಚೀನವನ್ನು ನೇರಾನೇರ ಎದುರು ಹಾಕಿಕೊಳ್ಳುವುದಕ್ಕೆ ಇತರ ರಾಷ್ಟ್ರಗಳು ಹಿಂಜರಿಯುತ್ತಿವೆಯಾದರೂ ಡ್ರ್ಯಾಗನ್‌ನ ದರ್ಪವನ್ನು ತಮ್ಮದೇ ಆದ ರೀತಿಯಲ್ಲಿ ಪ್ರಶ್ನಿಸುವ ಮೂಲಕ ಅದಕ್ಕೆ ಸೂಕ್ತ ಸಂದೇಶವನ್ನು ಕಳುಹಿಸಲಾರಂಭಿಸಿರುವುದು ಸ್ವಾಗತಾರ್ಹ.

ಈಗ ಆಸ್ಟ್ರೇಲಿಯಾ ಸರಕಾರವು ತನ್ನಲ್ಲಿರುವ ಹಾಂಕಾಂಗ್‌  ಜನರ ತಾತ್ಕಾಲಿಕ ವೀಸಾಗಳನ್ನು ವಿಸ್ತರಿಸಿರುವುದಷ್ಟೇ ಅಲ್ಲದೇ, ಈ ಹಿಂದೆ ಹಾಂಕಾಂಗ್‌  ಮತ್ತು ತನ್ನ ನಡುವೆ ಆಗಿದ್ದ ಹಸ್ತಾಂತರ ಒಪ್ಪಂದವನ್ನು ರದ್ದುಗೊಳಿಸಿದೆ.

ಅದಕ್ಕಿಂತ ಮುಖ್ಯವಾಗಿ ಆಸ್ಟ್ರೇಲಿಯಾ, ತನ್ನ ದೇಶಕ್ಕೆ ಬರುವ ಹಾಂಕಾಂಗ್‌ ಜನರಿಗೆ ಆಶ್ರಯ ಕೊಡುವ ನಿರ್ಧಾರ ಕೈಗೊಂಡಿರುವುದೂ ಸಹ ಬೀಜಿಂಗ್‌ನ ಆಕ್ರೋಶವನ್ನು ಹೆಚ್ಚಿಸಿದೆ. “ಆಸ್ಟ್ರೇಲಿಯಾದ ನಡೆಯು ಅಂತಾರಾಷ್ಟ್ರೀಯ ಸಂಬಂಧಗಳ ಮೂಲ ತತ್ವಗಳನ್ನು ಉಲ್ಲಂಘಿಸುತ್ತಿದೆ’ ಎಂದು ಚೀನಿ ಸರಕಾರ ಹೇಳಿದೆ. ಚೀನದ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದ. ಏಕೆಂದರೆ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಮೌಲ್ಯಕೊಡದ ಏಕೈಕ ರಾಷ್ಟ್ರವೆಂದರೆ ಖುದ್ದು ಚೀನ ಮಾತ್ರ. ಒಟ್ಟಲ್ಲಿ ಚೀನದ ಮಾತಿಗೂ ನಡೆಗೂ ತಾಳಮೇಳವೇ ಇರುವುದಿಲ್ಲ.

ಹಾಂಕಾಂಗ್‌  ಜನರ ಪ್ರಜಾಪ್ರಭುತ್ವ ಪರ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿಯೇ ಚೀನ ಸರಕಾರ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ಒಂದು ವೇಳೆ ಯಾರಾದರೂ ಚೀನ ವಿರುದ್ಧ ಮಾತನಾಡಿದರೆ ಅವರನ್ನು ರಾಷ್ಟ್ರದ್ರೋಹದಡಿಯಲ್ಲಿ ಶಿಕ್ಷಿಸುವ ನಿಯಮಗಳು ಈ ಕಾನೂನಿನಲ್ಲಿ ಇವೆ. ಒಟ್ಟಲ್ಲಿ ಹಾಂಕಾಂಗ್‌ ಅನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಚೀನ ಪ್ರಯತ್ನಿಸುತ್ತಲೇ ಸಾಗಿದೆ.

ಚೀನದ ಈ ನಡೆಗೆ ಆಸ್ಟ್ರೇಲಿಯಾ ಎಂದಷ್ಟೇ ಅಲ್ಲ, ಅತ್ತ ಕೆನಡಾ ಕೂಡ ಅಸಮಾಧಾನ ವ್ಯಕ್ತಪಡಿಸುತ್ತಾ ಹಸ್ತಾಂತರ ಕಾನೂನನ್ನು ರದ್ದುಗೊಳಿಸಿದ್ದರೆ ಇನ್ನೊಂದೆಡೆ ಬ್ರಿಟನ್‌ ಸರಕಾರವೂ ಹಾಂಕಾಂಗ್‌  ಜನರಿಗೆ ತನ್ನ ದೇಶಕ್ಕೆ ಬಂದು ನೆಲೆಸಲು ಆಹ್ವಾನ ನೀಡುವ ಮೂಲಕ ಚೀನದ ಕಣ್ಣು ಕೆಂಪಾಗಿಸಿದೆ.

ಇನ್ನು ಅಮೆರಿಕ ಸಹ ಚೀನದ ದುರ್ವರ್ತನೆಯನ್ನು ಖಂಡಿಸುತ್ತಿದ್ದು, ಇತ್ತ ಭಾರತವೂ ವಿಶ್ವಸಂಸ್ಥೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದೆ. ಚೀನದ ವಿಸ್ತರಣಾವಾದಿ ದಾಹವನ್ನು ಇಂದು ಜಗತ್ತು ಖಂಡಿಸುತ್ತಿರುವುದಕ್ಕೆ “ಹಾಂಕಾಂಗ್‌’ನ ವಿಚಾರವೊಂದೇ ಕಾರಣವಲ್ಲ ಎನ್ನುವುದನ್ನು ಗಮನಿಸಬೇಕು.

ಆಸ್ಟ್ರೇಲಿಯಾದ ವಿಚಾರಕ್ಕೇ ಬರುವುದಾದರೆ, ಚೀನ ಈಗ ಆಸ್ಟ್ರೇಲಿಯಾದ ಅತಿದೊಡ್ಡ ವ್ಯಾಪಾರ ಮಿತ್ರರಾಷ್ಟ್ರ. ಆದರೆ ಕೆಲವು ಸಮಯದಿಂದ ಚೀನ ಇದೇ ನೆಪದಲ್ಲಿ ಆಸ್ಟ್ರೇಲಿಯಾವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಕೋವಿಡ್‌-19ನ ಈ ಸಮಯದಲ್ಲಿ ದುರ್ಬಲಗೊಂಡ ಆಸ್ಟ್ರೇಲಿಯನ್‌ ಕಂಪೆನಿಗಳಲ್ಲಿ ಚೀನ ಹೂಡಿಕೆಯನ್ನು ಹೆಚ್ಚು ಮಾಡಿಕೊಂಡಿದೆ ಅಥವಾ ಸ್ವಾಧೀನಕ್ಕೆ ತೆಗೆದುಕೊಂಡಿದೆ.

ಈ ಕಾರಣಕ್ಕಾಗಿಯೇ ಚೀನದ ವಿರುದ್ಧ ಆಸ್ಟ್ರೇಲಿಯನ್ನರಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಧ್ವನಿಯೆತ್ತಲೇಬೇಕಾದ ಅನಿವಾರ್ಯತೆ ಆಸ್ಟ್ರೇಲಿಯಾದ ಆಡಳಿತಕ್ಕೆ ಸೃಷ್ಟಿಯಾಗಿದೆ. ನಿಸ್ಸಂಶಯವಾಗಿಯೂ ತನ್ನ ವಿರುದ್ಧ ಹೆಜ್ಜೆ ಹಾಕುತ್ತಿರುವ ರಾಷ್ಟ್ರಗಳಿಗೆ ಚೀನ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡಲಿದೆಯಾದರೂ, ಸುಮ್ಮನಿದ್ದರೆ ಚೀನ ತಮ್ಮನ್ನು ಇನ್ನಷ್ಟು ಹೈರಾಣಾಗಿಸುತ್ತದೆ ಎನ್ನುವುದನ್ನು ಈಗ ಜಗತ್ತು ಅರ್ಥಮಾಡಿಕೊಳ್ಳಲಾರಂಭಿಸಿದೆ.

ಇವೆಲ್ಲದರ ನಡುವೆ ಚೀನ ಹಾಂಕಾಂಗ್‌ನಲ್ಲಿ ಜಾರಿ ಮಾಡಿರುವ ಕ್ರೂರ ಕಾನೂನಿಗೆ ಹೆದರದೇ ಅಲ್ಲಿನ ಜನರು ಪ್ರತಿಭಟನೆಗಳಲ್ಲಿ ನಿರತರಾಗಿದ್ದಾರೆ. ಅವರೆಲ್ಲರಿಗೂ ನ್ಯಾಯ ದೊರಕಿಸುವ ದಿಕ್ಕಿನಲ್ಲಿ ಜಗತ್ತು ಒಗ್ಗಟ್ಟು ಪ್ರದರ್ಶಿಸಬೇಕಿದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.