ಎಚ್‌-1 ಬಿ ವೀಸಾ ನಿರ್ಧಾರ ರಾಜಕೀಯ ಪ್ರೇರಿತ


Team Udayavani, Jun 26, 2020, 6:09 AM IST

ಎಚ್‌-1 ಬಿ ವೀಸಾ ನಿರ್ಧಾರ ರಾಜಕೀಯ ಪ್ರೇರಿತ

ಟ್ರಂಪ್‌ ಸರಕಾರ, ಎಚ್‌-1 ಬಿ ಸೇರಿದಂತೆ ವಿವಿಧ ಉದ್ಯೋಗ ಸಂಬಂಧಿ ವೀಸಾಗಳನ್ನು ಈ ವರ್ಷಾಂತ್ಯದವರೆಗೆ ರದ್ದು ಮಾಡಿ ಘೋಷಣೆ ಹೊರಡಿಸಿದೆ.

ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವು ಹೊಸ ಆಯಾಮ ತಲುಪುತ್ತಿರುವ ವೇಳೆಯಲ್ಲೇ, ಟ್ರಂಪ್‌ ಸರಕಾರದ ಈ ನಿರ್ಧಾರ ಬೇಸರ ಹುಟ್ಟಿಸುವಂಥದ್ದು.

ಆದಾಗ್ಯೂ, ಯಾವುದೇ ದೇಶವಾದರೂ ತನ್ನ ನಾಗರಿಕರ ಹಿತದೃಷ್ಟಿಗೆ ಆದ್ಯತೆ ಕೊಡುವುದು ಸ್ವಾಭಾವಿಕವೇ ಆದರೂ, ಇತರೆ ರಾಷ್ಟ್ರಗಳ, ಅದರಲ್ಲೂ ಮುಖ್ಯವಾಗಿ ಪ್ರಮುಖ ಮಿತ್ರ ರಾಷ್ಟ್ರಗಳ ನಾಗರಿಕರ ಭವಿಷ್ಯದ ಮೇಲೆ ಪ್ರಭಾವ ಬೀರುವಂಥ ಇಂಥ ವಿಷಯಗಳಲ್ಲಿ ಹಿಂದೆ ಮುಂದೆ ಯೋಚಿಸದೇ ನಿರ್ಧಾರ ತೆಗೆದುಕೊಳ್ಳುವುದು ಖಂಡಿತ ತಪ್ಪು. ಈ ನಿರ್ಧಾರದಿಂದಾಗಿ ಅಮೆರಿಕಕ್ಕೆ ತೆರಳಲು ಸಜ್ಜಾಗಿದ್ದವರಷ್ಟೇ ಅಲ್ಲದೇ, ಎಚ್‌-1ಬಿ ವೀಸಾದ ನವೀಕರಣಕ್ಕಾಗಿ ಕಾಯುತ್ತಿದ್ದ ಕಂಪೆನಿಗಳಿಗೂ ಹೊಸ ಸಂಕಷ್ಟ ಎದುರಾಗಿದೆ.

ಈ ಕಾರಣಕ್ಕಾಗಿಯೇ, ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳ ಒಕ್ಕೂಟವು ಟ್ರಂಪ್‌ ಸರಕಾರದ ಈ ನಿರ್ಧಾರವನ್ನು ಬಲವಾಗಿ ಖಂಡಿಸಿದೆ. “”ಇದರಿಂದಾಗಿ ಪ್ರತಿಭಾನ್ವಿತರು ಅವಕಾಶ ವಂಚಿತರಾಗುವುದಷ್ಟೇ ಅಲ್ಲದೇ, ಇದು ಈಗಾಗಲೇ ಸಂಕಷ್ಟದಲ್ಲಿರುವ ಅಮೆರಿಕದ ಆರ್ಥಿಕತೆಯ ಮೇಲೂ ಮತ್ತಷ್ಟು ಋಣಾತ್ಮಕ ಪರಿಣಾಮ ಬೀರಲಿದೆ” ಎಂದು ಎಚ್ಚರಿಸಿದೆ. ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮ ಒಕ್ಕೂಟದ ಎಚ್ಚರಿಕೆಗೆ ಅಮೆರಿಕದ ಉದ್ಯಮ ಪರಿಣತರು ಹಾಗೂ ಅಲ್ಲಿನ ಉದ್ಯಮ ಒಕ್ಕೂಟಗಳೂ ಧ್ವನಿಗೂಡಿಸಿವೆ.

ಆದರೆ, ಇದೇ ವೇಳೆಯಲ್ಲೇ ಟ್ರಂಪ್‌ ಅವರ ನಿರ್ಧಾರದಿಂದಾಗಿ, ಈಗಾಗಲೇ ಎಚ್‌1-ಬಿ ವೀಸಾದಡಿಯಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಪ್ರಯೋಜನವಾಗಲೂಬಹುದು ಎಂದು ಕೆಲ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಹೊಸ ಆದೇಶದಿಂದಾಗಿ ಅಮೆರಿಕದಲ್ಲಿ ನುರಿತ ಕೆಲಸಗಾರರ ಕೊರತೆ ಎದುರಾಗಲಿದೆ.

ಹೀಗಾಗಿ, ಎಚ್‌1-ಬಿ ವೀಸಾದಡಿ ಕೆಲಸ ಮಾಡುತ್ತಿರುವ ವರ್ಗಕ್ಕೆ ಹೆಚ್ಚಿನ ಅವಕಾಶ ದೊರೆಯಬಹುದು ಹಾಗೂ ಹೆಚ್ಚಿನ ವೇತನ ಪಡೆಯುವ ಮೂಲಕ ಪ್ರಯೋಜನ ಪಡೆಯಬಹುದು ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ, ಅಮೆರಿಕಕ್ಕೆ ತೆರಳಲು ಸಜ್ಜಾಗಿರುವ ನುರಿತ ಉದ್ಯೋಗಿಗಳ ಸೇವೆಯನ್ನು ಭಾರತದಲ್ಲಿಯೇ ಬಳಸಿಕೊಳ್ಳಬಹುದು, ಇದರಿಂದ ದೇಶದ ಆರ್ಥಿಕತೆಗೂ ಪ್ರಯೋಜನವಾಗಲಿದೆ ಎಂಬ ಸಲಹೆ ಕೇಳಿಬರುತ್ತಿದೆ.

ಇದೇನೇ ಇದ್ದರೂ, ಟ್ರಂಪ್‌ ಸರಕಾರದ ಈ ನಿರ್ಧಾರದ ಹಿಂದೆ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಿಂತಲೂ ಸ್ವಹಿತಾಸಕ್ತಿಯೇ ಚಾಲನಾ ಶಕ್ತಿಯಾಗಿದೆ ಎನ್ನುವುದು ನಿರ್ವಿವಾದ. ಈ ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು ಟ್ರಂಪ್‌ ಅವರ ಜನಪ್ರಿಯತೆ ಬಹಳ ಕುಸಿದಿದೆ ಎನ್ನಲಾಗುತ್ತದೆ.

ಅದರಲ್ಲೂ ಕೋವಿಡ್ 19 ನಿರ್ವಹಣೆಯ ವಿಚಾರದಲ್ಲಿ ಟ್ರಂಪ್‌ ಆಡಳಿತದ ಆರಂಭಿಕ ತಪ್ಪುಗಳಿಂದಾಗಿ, ಇಂದು ಆ ಇಡೀ ದೇಶ ತತ್ತರಿಸಿಹೋಗಿದೆ. ಒಟ್ಟಲ್ಲಿ ಕೊರೊನಾದಿಂದಾಗಿ, ಅಮೆರಿಕದಲ್ಲಿ ಬೃಹತ್‌ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದ್ದು, ಇದರ ಬಿಸಿ ಡೊನಾಲ್ಡ್‌ ಟ್ರಂಪ್‌ ಅವರಿಗೆ ತಾಗಲಾರಂಭಿಸಿದೆ. ಹೀಗಾಗಿ, ಎಚ್‌-1 ಬಿ ವೀಸಾ ರದ್ದತಿಯ ವಿಚಾರ ಸಂಪೂರ್ಣವಾಗಿ ಚುನಾವಣಾ ದೃಷ್ಟಿಯಿಂದಲೇ ರೂಪಿತವಾಗಿದೆ ಎನ್ನುವುದು ನಿರ್ವಿವಾದ.

ಈ ನಿರ್ಧಾರವನ್ನು ತಾತ್ಕಾಲಿಕ ಅಡಚಣೆ ಎಂದೇ ನೋಡಬೇಕು ಎನ್ನುತ್ತಾರೆ ರಾಜಕೀಯ ಪರಿಣತರು. ಇದೇನೇ ಇದ್ದರೂ, ಎಚ್‌-1ಬಿ ವಿಚಾರದಲ್ಲಿ ಟ್ರಂಪ್‌ ತೆಗೆದುಕೊಂಡ ಈ ನಿರ್ಧಾರವು ಅವರಿಗೆ ರಾಜಕೀಯವಾಗಿ ಎಷ್ಟು ಅನುಕೂಲ ಮಾಡಿಕೊಡುತ್ತದೋ ತಿಳಿಯದಾದರೂ, ಭಾರತದೊಂದಿಗಿನ ಸ್ನೇಹಕ್ಕೆ ಅವರು ಅನಗತ್ಯ ಅಡ್ಡಿ ಸೃಷ್ಟಿಸುತ್ತಿರುವುದಂತೂ ಸತ್ಯ.

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.