ತಲಾಕ್‌ ನಿಷೇಧಕ್ಕೆ ಕಾನೂನು ಬಲ 


Team Udayavani, Dec 16, 2017, 12:34 PM IST

16-28.jpg

ಅತ್ತ ವಿದ್ಯೆಯೂ ಇಲ್ಲದೆ ಇತ್ತ ಆರ್ಥಿಕ ಆಸರೆಯೂ ಇಲ್ಲದೆ ತಲಾಕ್‌ ಸುಳಿಗೆ ಸಿಲುಕಿ ಅತಂತ್ರರಾಗುತ್ತಿದ್ದ ಸಾವಿರಾರು ಮಹಿಳೆಯರ ಪಾಲಿಗೆ ಈ ಶಾಸನ ಆಪತಾºಧವನಾಗಿ ಒದಗಿಬಂದರೆ ಸಾಕು.

ಮುಸ್ಲಿಂ ಸಮುದಾಯದಲ್ಲಿರುವ ಮೂರು ಸಲ ತಲಾಕ್‌ ಹೇಳಿ ವಿವಾಹ ಬಂಧನ ಮುರಿಯುವ ಅನಿಷ್ಟ ಪದ್ಧತಿಯನ್ನು ನಿಷೇಧಿಸುವ ಸಲುವಾಗಿ ರಚಿಸಿದ ಕರಡು ಮಸೂದೆಗೆ ಸಂಪುಟದ ಅನುಮೋದನೆ ದೊರಕಿದೆ. ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ಸಂರಕ್ಷಣಾ ಕಾಯಿದೆ ಎಂದು ಹೆಸರಿಸಲಾಗಿರುವ ಈ ಮಸೂದೆಯಿನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡನೆಯಾಗಿ ಮಂಜೂರಾದ ಬಳಿಕ ರಾಷ್ಟ್ರಪತಿ ಅಂಕಿತ ಬಿದ್ದು ಶಾಸನ ರೂಪದಲ್ಲಿ ಜಾರಿಗೆ ಬರಲಿದೆ. ಆಡಳಿತ ಪಕ್ಷ ಎರಡೂ ಸದನಗಳಲ್ಲಿ ಸಂಖ್ಯಾಬಲ ಹೊಂದಿರುವುದರಿಂದ ಮಸೂದೆ ಮಂಜೂರಾತಿ ಕಷ್ಟವಾಗಲಾರದು. ಕಳೆದ ಆಗಸ್ಟ್‌ 22ರಂದು ಸುಪ್ರೀಂ ಕೋರ್ಟಿನ ಪಂಚ ಸದಸ್ಯ ಪೀಠ ತ್ರಿವಳಿ ತಲಾಕ್‌ ನಿಷೇಧಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಶತಮಾನಗಳಿಂದ ಮುಸ್ಲಿಂ ಮಹಿಳೆಯರಿಗಾಗುತ್ತಿರುವ ಅನ್ಯಾಯ ಅಂದಿಗೆ ಕೊನೆಗೊಂಡಿತು ಎಂದು ಭಾವಿಸ ಲಾಗಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ತ್ರಿವಳಿ ತಲಾಕ್‌ ನಿರಂಕುಶ ಮತ್ತು ಸಂವಿಧಾನ ಬಾಹಿರ ಎಂದು ತೀರ್ಪು ನೀಡಿದ ಬಳಿಕವೂ ಹಲವು ತಲಾಕ್‌ ಪ್ರಕರಣಗಳು ಸಂಭವಿಸಿದ ಹಿನ್ನೆಲೆಯಲ್ಲಿ ಸರಕಾರ ಕಾನೂನು ರಚಿಸಲು ಮುಂದಾಗಬೇಕಾಯಿತು. ಈ ವರ್ಷವೊಂದರಲ್ಲೇ ಸುಪ್ರೀಂ ಕೋರ್ಟಿನ ತೀರ್ಪು ಹೊರಬೀಳುವ ಮೊದಲು 177 ತಲಾಕ್‌ ಪ್ರಕರಣಗಳು ವರದಿಯಾಗಿದ್ದವು. ಅನಂತರ ಸುಮಾರು 80 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಅತಿ ಹೆಚ್ಚು ತಲಾಕ್‌ ಪ್ರಕರಣಗಳಿರುವುದು ಉತ್ತರ ಪ್ರದೇಶದಲ್ಲಿ. ತೀರ್ಪಿನ ಮೊದಲು 9 ತಿಂಗಳಲ್ಲಿ ಆಗಿರುವ ತಲಾಕ್‌ಗಳ ಸಂಖ್ಯೆಗೆ ಹೋಲಿಸಿದರೆ ಅನಂತರದ ಎರಡು ತಿಂಗಳಲ್ಲಿ ಆಗಿರುವ ತಲಾಕ್‌ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ತುರ್ತಾಗಿ ಕಾನೂನು ರಚಿಸುವ ಅನಿವಾರ್ಯತೆ ಉಂಟಾಯಿತು. ಅಲ್ಲದೆ ಈ ತೀರ್ಪು ನೀಡಿದಾಗಲೇ ನ್ಯಾಯಾಲಯ ಕಾನೂನು ರಚಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. 

ಕರಡು ಮಸೂದೆಯಲ್ಲಿ ದಿಢೀರ್‌ ಎಂದು ಮೂರು ಬಾರಿ ತಲಾಕ್‌ ಹೇಳಿ ವಿಚ್ಛೇದನ ನೀಡುವ ಪದ್ಧತಿಯನ್ನು ನಿಷೇಧಿಸಲಾಗಿದೆ. ಮೌಖೀಕವಾಗಿ ಮತ್ತು ಲಿಖೀತವಾಗಿ ಮಾತ್ರವಲ್ಲದೆ ವಾಟ್ಸಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಮೆಸೇಜ್‌ ಈ ಮುಂತಾದ ಆಧುನಿಕ ಸಂವಹನ ಮಾಧ್ಯಗಳನ್ನು ಬಳಸಿಕೊಂಡು ಹೇಳುವ ತಲಾಕ್‌ಗಳು ಕಾನೂನಿನ ವ್ಯಾಪ್ತಿಗೆ ಬರುತ್ತದೆ. ಈ ರೀತಿಯ ತಲಾಕ್‌ ಸಂತ್ರಸ್ತ ಮಹಿಳೆಗೆ ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಲು ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟಿನಲ್ಲಿ ದಾವೆ ಹೂಡಿ ತನಗೆ ಮತ್ತು ಅಪ್ರಾಪ್ತ ಮಕ್ಕಳಿಗೆ ಜೀವನಾಂಶ ಪಡೆದುಕೊಳ್ಳುವ ಅಧಿಕಾರವನ್ನು ಕಾನೂನು ನೀಡಿದೆ. ಗಂಡನಿಗೆ ಗರಿಷ್ಠ ಮೂರು ವರ್ಷಗಳ ತನಕ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು. ದಿಢೀರ್‌ ಆಗಿ ಹೇಳುವ ತ್ರಿವಳಿ ತಲಾಕ್‌ ಶಿಕ್ಷಾರ್ಹ ಜಾಮೀನು ರಹಿತ ಅಪರಾಧ ಎಂದು ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿದೆ. ಮಸೂದೆಯಲ್ಲಿರುವ ಈ ಅಂಶಗಳು ಸಾಕಷ್ಟು ಕಠಿಣವಾಗಿವೆ. ಕನಿಷ್ಟ ಕಾನೂನಿಗೆ ಹೆದರಿಯಾದರೂ ತ್ರಿವಳಿ ತಲಾಕ್‌ ಹೇಳುವ ಪ್ರವೃತ್ತಿ ನಿಲ್ಲಬಹುದು ಎಂದು ನಿರೀಕ್ಷಿಸಲಾಗಿದೆ. 

ಈ ರೀತಿಯ ಒಂದು ಕಾನೂನು ರಚನೆಯಾಗಲು ಮುಸ್ಲಿಂ ಮಹಿಳೆಯರು ದಶಕಗಳ ಕಾಲ ಕಾನೂನು ಹೋರಾಟ ನಡೆಸಿದ್ದಾರೆ. ಕಳೆದ 70 ವರ್ಷಗಳಲ್ಲಿ ದೇಶವಾಳಿದ ಹಿಂದಿನ ಸರಕಾರಗಳಿಗೆ ಹಲವು ಸಲ ತಲಾಕ್‌ ನಿಷೇಧಿಸುವ ಅವಕಾಶ ಸಿಕ್ಕಿದ್ದರೂ ವೋಟ್‌ಬ್ಯಾಂಕ್‌ ರಾಜಕಾರಣವನ್ನು ಲೆಕ್ಕಹಾಕಿ ಅವುಗಳು ತಲಾಕ್‌ ನಿಷೇಧಿಸುವ ದಿಟ್ಟತನ ತೋರಿಸಿರಲಿಲ್ಲ. ಹೀಗಾಗಿ ಕುರಾನ್‌ನಲ್ಲಿ ಇಲ್ಲದ ಈ ಪದ್ಧತಿ ಧಾರ್ಮಿಕ ನಾಯಕರ ಮರ್ಜಿಗನುಸಾರವಾಗಿ ಅನೂಚಾನವಾಗಿ ಪಾಲನೆಯಾಗುತ್ತಿತ್ತು. ಗಂಡ ಸಿಟ್ಟಿನ ಭರದಲ್ಲೋ ಅಥವ ಬೇರೆ ಯಾವುದೋ ಕಾರಣದಿಂದ ಮೂರು ಸಲ ತಲಾಕ್‌ ಎಂದು ಉಸುರಿದರೆ ಅಲ್ಲಿಗೆ ದಾಂಪತ್ಯ ಮುಗಿದಂತೆ. ಹೆಂಡತಿ ಗಂಟುಮೂಟೆ ಕಟ್ಟಿಕೊಂಡು ಗಂಡನ ಮನೆಯಿಂದ ಹೊರ ನಡೆಯಬೇಕಿತ್ತು. ಅವಳಿಗೆ ಮಕ್ಕಳ ಮೇಲೂ ಅಧಿಕಾರವಿಲ್ಲ, ಆಸ್ತಿಯ ಮೇಲೂ ಅಧಿಕಾರವಿಲ್ಲ. ತವರು ಮನೆಯವರು ಒಳ ಸೇರಿಸಿದರೆ ಆಶ್ರಯ ಸಿಗುತಿತ್ತು. ಇಲ್ಲದಿದ್ದರೆ ಅಕ್ಷರಶಃ ಅನಾಥೆಯಂತೆ ಬಾಳಬೇಕಿತ್ತು. ಪುರುಷ ಪ್ರಧಾನ ವ್ಯವಸ್ಥೆಯ ಈ ಕರಾಳ ಪದ್ಧತಿಯಿಂದಾಗಿ ಎಷ್ಟೋ ಹೆಣ್ಣು ಮಕ್ಕಳು ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರು. ಮುಸ್ಲಿಂ ಸಮುದಾಯದ ಬಹುತೇಕ ಜನರು ಇನ್ನೂ ಬಡತನದಲ್ಲಿಯೇ ಇದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಇನ್ನೂ ಹಿಂದುಳಿದಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಸಾಕ್ಷರತೆಯ ಪ್ರಮಾಣ ತೀರಾ ಕಡಿಮೆಯಿದೆ. ಹೀಗೆ ಅತ್ತ ವಿದ್ಯೆಯೂ ಇಲ್ಲದೆ ಇತ್ತ ಆರ್ಥಿಕ ಆಸರೆಯೂ ಇಲ್ಲದೆ ತಲಾಕ್‌ ಸುಳಿಗೆ ಸಿಲುಕಿ ಅತಂತ್ರರಾಗುತ್ತಿದ್ದ ಸಾವಿರಾರು ಮಹಿಳೆಯರ ಪಾಲಿಗೆ ಈ ಶಾಸನ ಆಪತಾºಂಧವನಾಗಿ ಒದಗಿಬಂದರೆ ಸಾಕು.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.