ಸೂಕ್ತ ಸಿದ್ಧತೆ ಅಗತ್ಯ


Team Udayavani, Sep 26, 2019, 5:00 AM IST

e-10

ದೇಶಕ್ಕೊಂದೇ ಗುರುತಿನ ಕಾರ್ಡ್‌ ಪರಿಕಲ್ಪನೆಗೆ ಗೃಹ ಸಚಿವ ಅಮಿತ್‌ ಶಾ ಮರುಜೀವ ನೀಡಿದ್ದಾರೆ. ಸದ್ಯಕ್ಕೆ ಸರಕಾರದ ಮುಂದೆ ಈ ಗುರುತಿನ ಕಾರ್ಡ್‌ ಯೋಜನೆಯ ಪ್ರಸ್ತಾವ ಇಲ್ಲದಿದ್ದರೂ 2021ರಲ್ಲಿ ನಡೆಯಲಿರುವ ಜನಗಣತಿಯ ಮಾಹಿತಿಯನ್ನು ಆಧರಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಿಕೊಳ್ಳಬಹುದು ಎನ್ನುವುದು ಅವರ ಆಶಯ. ದೇಶದ ಎಲ್ಲ ಪ್ರಜೆಗಳಿಗೆ ಒಂದೇ ಮಾದರಿಯ ಗುರುತಿನ ಕಾರ್ಡ್‌ ಮತ್ತು ಅದರೊಳಗೆ ಎಲ್ಲ ಮಾಹಿತಿ ಎನ್ನುವುದು ಕೇಳಲೇನೊ ಹಿತವಾಗಿದೆ. ಆದರೆ ಅದರಲ್ಲಿ ಅಷ್ಟೇ ಅಪಾಯಗಳೂ ಇವೆ. ಈ ಕಾರಣಕ್ಕೆ ಈ ಕಾರ್ಡಿಗೆ ತೀವ್ರ ವಿರೋಧವೂ ಇದೆ.

ನಾಗರಿಕರ ಎಲ್ಲ ಮಾಹಿತಿಗಳನ್ನು ಅಂದರೆ ವೋಟಿಂಗ್‌ ಕಾರ್ಡ್‌, ಪಾಸ್‌ಪೋರ್ಟ್‌, ಆಧಾರ್‌, ಬ್ಯಾಂಕ್‌ ಕಾರ್ಡ್‌ ಇತ್ಯಾದಿ ಕಾರ್ಡ್‌ಗಳ ಮಾಹಿತಿಗಳನ್ನು ಸಂಯೋಜಿಸಿ ಒಂದೇ ಕಾರ್ಡಿನಲ್ಲಿ ತುಂಬಿಸಿಡುವುದೆ ದೇಶಕ್ಕೊಂದೇ ಗುರುತಿನ ಕಾರ್ಡಿನ ಪರಿಕಲ್ಪನೆ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದ್ದ 2001ರಲ್ಲಿ ಆಗಿನ ಗೃಹ ಸಚಿವ ಎಲ್‌. ಕೆ. ಆಡ್ವಾಣಿ ನೇತೃತ್ವದ ಸಚಿವರ ತಂಡ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ನೀಡಿದ ಸಲಹೆಯಲ್ಲಿ ಎಲ್ಲ ನಾಗರಿಕರಿಗೆ ಒಂದೇ ರೀತಿಯ ಗುರುತಿನ ಕಾರ್ಡ್‌ ನೀಡುವ ಪ್ರಸ್ತಾವ ಇತ್ತು ಹಾಗೂ ಆನಂತರವೂ ಆಡ್ವಾಣಿ ಇದರ ಅಗತ್ಯವನ್ನು ಪ್ರತಿಪಾದಿಸಿದ್ದರು. ಆಗ ಇದರ ಮುಖ್ಯ ಉದ್ದೇಶ ಅಕ್ರಮ ವಲಸಿಗರನ್ನು ಗುರುತಿಸುವುದಾಗಿತ್ತು. ಈ ಉದ್ದೇಶಕ್ಕಾಗಿ ಭಾರತೀಯ ಪ್ರಜೆಗಳಿಗೆ ಮತ್ತು ಅನಿವಾಸಿ ಪ್ರಜೆಗಳಿಗೆ ಬೇರೆ ಬೇರೆ ಬಣ್ಣದ ಕಾರ್ಡ್‌ಗಳನ್ನು ಕೊಡಬೇಕು. ಮೊದಲ ಹಂತದಲ್ಲಿ ಗಡಿಭಾಗದ ರಾಜ್ಯಗಳಲ್ಲಿ ಈ ಯೋಜನೆ ಅನುಷ್ಠಾನವಾಗಬೇಕೆಂದು ಸಚಿವರ ತಂಡ ಶಿಫಾರಸು ಮಾಡಿತ್ತು. ಅನಂತರ ಬಂದ ಸರಕಾರಗಳೂ ಈ ಬಗ್ಗೆ ಚಿಂತನೆ ನಡೆಸಿದ್ದರೂ ಕಾರ್ಯಗತಗೊಂಡಿರಲಿಲ್ಲ. ಆದರೆ ಇದೀಗ ಅಮಿತ್‌ ಶಾ ಅದನ್ನು ಕಾರ್ಯರೂಪಕ್ಕೆ ತರುವ ಸಂಕಲ್ಪ ಹೊಂದಿರುವಂತೆ ಕಾಣಿಸುತ್ತಿದೆ. ಆದರೆ ಇದು ರಾಷ್ಟ್ರೀಯ ಭದ್ರತೆಯಲ್ಲದೆ ಬೇರೆ ಉದ್ದೇಶವನ್ನು ಹೊಂದಿದೆಯೇ ಎನ್ನುವ ವಿಚಾರವೂ ಸ್ಪಷ್ಟವಾಗಬೇಕು. ಈಗಾಗಲೆ ಅಕ್ರಮ ವಲಸಿಗರನ್ನು ಗುರುತಿಸುವ ಎನ್‌ಆರ್‌ಸಿಯನ್ನು ಸರಕಾರ ಬಹಳ ಉತ್ಸಾಹದಿಂದ ಜಾರಿಗೊಳಿಸುತ್ತಿದ್ದು, ರಾಷ್ಟ್ರೀಯ ಗುರುತಿನ ಕಾರ್ಡ್‌ ಇದರ ಒಂದು ಅಂಗವಾಗಿರಲೂಬಹುದು ಎನ್ನುವ ಅನುಮಾನ ಕೆಲವರದ್ದು.

ಈಗ ನಾಗರಿಕರು ಹಲವು ರೀತಿಯ ಕಾರ್ಡ್‌ಗಳನ್ನು ಹೊಂದಿರಬೇಕಾಗುತ್ತದೆ. ಈ ಎಲ್ಲ ಕಾರ್ಡ್‌ಗಳನ್ನು ಒಯ್ಯುವುದು ಮತ್ತು ನಿಭಾಯಿಸುವುದು ಕಿರಿಕಿರಿಯ ಕೆಲಸ ಎನ್ನುವುದು ನಿಜ. ಹೀಗಾಗಿ ಎಲ್ಲ ಮಾಹಿತಿಗಳನ್ನು ಇರುವ ಒಂದೇ ಕಾರ್ಡ್‌ ಇದ್ದರೆ ಸುಲಭ ಎನ್ನುವುದು ನಿಜ. ಆದರೆ ಹೀಗೆ ಸರ್ವ ಮಾಹಿತಿಯೂ ಇರುವ ಕಾರ್ಡಿನ ದತ್ತಾಂಶಗಳು ಸೋರಿಕೆಯಾಗುವುದಿಲ್ಲ ಅಥವಾ ದುರುಪಯೋಗವಾಗುವುದಿಲ್ಲ ಎನ್ನುವುದಕ್ಕೆ ಯಾವ ಖಾತರಿಯಿದೆ. ಸಂವಿಧಾನದತ್ತವಾಗಿರುವ ಮತ್ತು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿರುವ ಖಾಸಗಿತನದ ಹಕ್ಕಿನ ಉಲ್ಲಂಘನೆಗೆ ಈ ಕಾರ್ಡ್‌ ಎಡೆಮಾಡಿಕೊಟ್ಟರೆ ಬಹಳ ಗಂಭೀರವಾದ ಪ್ರಮಾದವಾಗಬಹುದು. ಹೀಗಾಗಿ ಈ ಪರಿಕಲ್ಪನೆ ಅಪಾಯಕಾರಿ ಎನ್ನುತ್ತಿರುವುದು. ಅಲ್ಲದೆ ಆಧಾರ್‌ ಗೊಂದಲವೇ ಇನ್ನೂ ಮುಗಿದಿಲ್ಲ. ಹೀಗಿರುವಾಗ ಇದೇ ಮಾದರಿಯ ಇನ್ನೊಂದು ಸಮಸ್ಯೆಯನ್ನು ಜನರ ಮುಂದಿಡುವ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಸಮಂಜಸ.

ಹಾಗೆಂದು ರಾಷ್ಟ್ರೀಯ ಗುರುತಿನ ಕಾರ್ಡಿನಿಂದ ಅಪಾಯ ಮಾತ್ರ ಯಾವ ಒಳಿತೂ ಇಲ್ಲ ಎಂದು ಹೇಳಲಾಗದು. ಆದರೆ ಇದೊಂದು ಜಟಿಲ ವಿಷಯವಾಗಿದ್ದು, ಸಮರ್ಪಕವಾಗಿ ಅನುಷ್ಠಾನಿಸಿದರೆ ಮಾತ್ರ ಜನೋಪಯೋಗಿ ಎಂದೆನಿಸಿಕೊಳ್ಳಬಹುದು. ಸಂಸತ್ತಿನಲ್ಲಿ ಮಂಜೂರಾಗಿ ಕಾನೂನಿನ ಅಡೆತಡೆಗಳನ್ನು ದಾಟಿ ಗೊಂದಲಗಳು ಉಂಟಾಗದಂತೆ ಜಾರಿಗೊಳಿಸಲು ಭಾರೀ ದೊಡ್ಡ ಮಟ್ಟದ ಸಿದ್ಧತೆಯ ಅಗತ್ಯವಿದೆ. ಈ ಸಿದ್ಧತೆ ಮಾಡಿಕೊಳ್ಳದೆ ಅವಸರದಲ್ಲಿ ಜಾರಿಮಾಡಲು ಹೊರಟರೆ ಇದು ಇನ್ನೊಂದು ಆಧಾರ್‌ ಆದೀತು.

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.