ಆತಂಕ, ಗೊಂದಲಕ್ಕೆ ಕಾರಣವಾದ ಬಡ್ತಿ ಮೀಸಲು ತೀರ್ಪು


ಅರಕೆರೆ ಜಯರಾಮ್‌, May 15, 2019, 6:00 AM IST

35

ಎಸ್ಸಿ ಹಾಗೂ ಎಸ್ಟಿ ವರ್ಗದ ಸರಕಾರಿ ನೌಕರರ ಬಡ್ತಿ ಮೀಸಲಾತಿ ವಿಚಾರದಲ್ಲಿ ಕರ್ನಾಟಕ ಸರಕಾರ ರೂಪಿಸಿರುವ ಕಾಯ್ದೆಗೆ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಮಾನ್ಯತೆ ನೀಡಿ ತೀರ್ಪಿತ್ತಿರುವುದು ಈಗ ಸಾಕಷ್ಟು ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕ ಸರಕಾರ ಎಸ್ಸಿ- ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಕಾನೂನು ರೂಪಿಸಿರುವುದನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿರುವುದು ಎಸ್ಸಿ-ಎಸ್ಟಿಯೇತರ ಸಾವಿರಾರು ನೌಕರರಿಗೆ ಆಘಾತ ನೀಡಿದೆ. ಸುಪ್ರೀಂ ಕೋರ್ಟ್‌ನ ಈ ಹಿಂದಿನ ಆದೇಶದಂತೆ ತಾವು ಗಳಿಸಿರುವ ಮೀಸಲಾತಿ ಹೊಸ ಆದೇಶದ ಪರಿಣಾಮ ಉಳಿಯುವುದೋ ಇಲ್ಲವೋ ಎಂಬ ಆತಂಕ ಅವರನ್ನು ಕಾಡುತ್ತಿದೆ.

ಬಹುಚರ್ಚಿತ ಬಡ್ತಿ ಮೀಸಲಾತಿ ವಿಚಾರವಾಗಿ ಹಲವು ರಾಜ್ಯಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಇದುವರೆಗೆ ಅನೇಕ ಆದೇಶಗಳನ್ನು ನೀಡಿರುವುದರಿಂದ ‘ಈಗಿನ ಆದೇಶ’ ಎಂದು ಉದ್ದೇಶಪೂರ್ವಕವಾಗಿ ಹೇಳಲಾಗಿದೆ. ಈ ವಿಚಾರವಾಗಿ ಇದುವರೆಗೆ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ಗೆ ಅತೀ ಹೆಚ್ಚು ಕೆಲಸ ಕೊಟ್ಟಿದೆ. ಅದಕ್ಕೆ ಹೆಚ್ಚಿನ ಫ‌ಲವೂ ಸಿಕ್ಕಿದೆ.

ರಾಜ್ಯದ ಸರಕಾರಿ ಉದ್ಯೋಗಿಗಳಿಗೆ ಇದು 41 ವರ್ಷಗಳಷ್ಟು ಹಳೆಯ ವಿಚಾರ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸರಕಾರಿ ನೌಕರರಿಗೆ ಬಡ್ತಿ ಸಂದರ್ಭದಲ್ಲಿ ಮೀಸಲಾತಿಯ ಅನುಕೂಲ ಕಲ್ಪಿಸುವುದನ್ನು ದೇವರಾಜ ಅರಸು ಸರಕಾರ ಪರಿ ಚಯಿಸಿತು. ಆರಂಭದಲ್ಲಿ ಅದು ಎಂಜಿನಿಯರಿಂಗ್‌ ವಿಭಾಗಕ್ಕೆ ಸೀಮಿತವಾಗಿತ್ತು. ಮುಂದೆ ಅದನ್ನು ಎಲ್ಲ ವಿಭಾಗಗಳಿಗೂ ವಿಸ್ತರಿಸಲಾಯಿತು. ಅಲ್ಲಿಂದೀಚೆಗೆ ಅದು ನೌಕರರ ನಡುವೆ ಪರ ವಾಗಿ ಹಾಗೂ ವಿರೋಧವಾಗಿ ಸಾಕಷ್ಟು ಚರ್ಚೆಗೆ ಒಳಗಾಗಿದೆ.

ಮೇ 10ರಂದು ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌ ಹಾಗೂ ಡಿ.ವೈ. ಚಂದ್ರಚೂಡ್‌ ಅವರಿದ್ದ ಸುಪ್ರೀಂ ಕೋರ್ಟ್‌ ನ್ಯಾಯಪೀಠವು ಕರ್ನಾಟಕ ಸರಕಾರ ನಾಗರಿಕ ಸೇವಾ ವಿಭಾಗದ ನೌಕರರಿಗೆ ನೀಡಲಾಗುವ ಬಡ್ತಿ ಮೀಸಲಾತಿ ವಿಸ್ತರಣೆ ಕಾಯ್ದೆ 2018ನ್ನು ಎತ್ತಿ ಹಿಡಿದಿದೆ. ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳನ್ನೂ ತಿರಸ್ಕರಿಸಿದೆ. ಬೆಳಗಾವಿಯಲ್ಲಿ 2017ರ ಫೆಬ್ರವರಿಯಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸಿದ್ದರಾಮಯ್ಯ ಸರಕಾರ ಈ ಕಾಯ್ದೆ ಜಾರಿ ವಿಚಾರಕ್ಕೆ ಆದ್ಯತೆ ನೀಡಿತು. ರಾಜ್ಯಪಾಲ ವಜೂಭಾಯಿ ವಾಲಾ ಅವರು ಈ ಕಡತವನ್ನು ರಾಷ್ಟ್ರಪತಿಗಳ ವಿವೇಚನೆಗೆ ಬಿಟ್ಟರು. 2018ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು 2018ರಲ್ಲಿ ಕಾಯ್ದೆಗೆ ಸಮ್ಮತಿ ಸೂಚಿಸಿದರು.

ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ರಾಜ್ಯದ ನಾಗರಿಕ ಸೇವಾ ವಿಭಾಗದ ನೌಕರರ ನಡುವೆ ಮತ್ತೂಂದು ಸುತ್ತಿನ ಸಂಕ್ಷೋಭೆೆ ಸೃಷ್ಟಿಸುವ ಸಾಧ್ಯತೆಗಳಿವೆ. 2017ರ ಫೆಬ್ರವರಿ 8ರಂದು ಸುಪ್ರೀಂ ಕೋರ್ಟ್‌ ಆದೇಶ ಅಸಂಖ್ಯಾತ ಎಸ್ಸಿ-ಎಸ್ಟಿ ನೌಕರರ ಹಿಂಬಡ್ತಿಗೆ ಕಾರಣವಾಗಿ ಆಘಾತವನ್ನು ಉಂಟುಮಾಡಿತ್ತು. ಆಗ ಬಡ್ತಿ ಪಡೆದಿದ್ದ ನೌಕರರು ಈಗ ಹಿಂಬಡ್ತಿ ಆತಂಕದಲ್ಲಿದ್ದಾರೆ. ಬಿ.ಕೆ. ಪವಿತ್ರ ಪ್ರಕರಣ ಎಂದು ಕರೆಸಿಕೊಳ್ಳುವ ಈ ಪ್ರಕರಣದ ತೀರ್ಪಿನ ಬಳಿಕ ರಾಜ್ಯ ಸರಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತು. ಬಡ್ತಿಯಲ್ಲಿ ಮೀಸಲಾತಿ ಹಾಗೂ ಪರಿಣಾಮಕಾರಿ ಸೇವಾ ಹಿರಿತನದ ರಕ್ಷಣೆಯ ಫ‌ಲವಾಗಿ ಆಗುತ್ತಿರುವ ‘ಹಿನ್ನಡೆ, ಪರ್ಯಾಪ್ತವಿಲ್ಲದ ಪ್ರಾತಿನಿಧಿಕತೆ ಹಾಗೂ ಆಡಳಿತಾತ್ಮಕ ದಕ್ಷತೆ’ಯ ಅಂಶಗಳನ್ನಿಟ್ಟುಕೊಂಡು ಅಧ್ಯಯನ ನಡೆಸಲು ಸೂಚಿಸಲಾಗಿತ್ತು. ಇತ್ತೀಚಿನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ರತ್ನಪ್ರಭಾ ನೇತೃತ್ವದ ಸಮಿತಿ ರಚಿಸಿರುವ ರಾಜ್ಯ ಸರಕಾರದ ಕ್ರಮವನ್ನು ಶ್ಲಾಘಿಸಿತ್ತು.

ಉಲ್ಲೇಖೀಸಬೇಕಾದ ಅಂಶವೆಂದರೆ, ಸುಪ್ರೀಂ ಕೋರ್ಟ್‌ 2006ರಲ್ಲಿ ನೀಡಿದ ಆದೇಶವೊಂದರಲ್ಲಿ (ಕರ್ನಾಟಕದವರೇ ಆದ ಎಂ. ನಾಗರಾಜ್‌ ಪ್ರಕರಣ) ಸರಕಾರಿ ಸೇವೆಗಳಲ್ಲಿ ಎಸ್ಸಿ-ಎಸ್ಟಿಗಳ ಪ್ರಾತಿನಿಧಿತ್ವ ಸಾಕಷ್ಟಿದೆಯೇ ಹಾಗೂ ಬಡ್ತಿಯಲ್ಲಿ ಮೀಸಲಾತಿ ನೀಡಿದರೆ ಆಡಳಿತಾತ್ಮಕ ದಕ್ಷತೆಯ ಮೇಲೆ ಪರಿಣಾಮ ಆಗುವುದೇ ಎಂಬುದನ್ನು ಅಧ್ಯಯನ ಮಾಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಬಡ್ತಿಯಲ್ಲಿ ಮೀಸಲಾತಿ ರಕ್ಷಣೆ ಹಾಗೂ ಸೇವಾ ಹಿರಿತನದ ಪರಿಗಣನೆಯ ಅಂಶಗಳನ್ನು ಒಳಗೊಳಿಸಲು ಹಾಗೂ ತೀರ್ಪಿನಿಂದಾದ ಪ್ರತಿಕೂಲ ಪರಿಣಾಮಗಳನ್ನು ಸರಿಪಡಿಸುವ ಉದ್ದೇಶದಿಂದ ಸಂವಿಧಾನಕ್ಕೆ ತಂದಿರುವ 77 (1995), 81 (2000), 82 (2000) ಹಾಗೂ 85 (2001) ಈ ನಾಲ್ಕು ತಿದ್ದುಪಡಿಗಳನ್ನೂ ಎತ್ತಿ ಹಿಡಿದಿತ್ತು.

ಇನ್ನೂ ಒಂದು ಅಂಶವೆಂದರೆ, ಬಹುಚರ್ಚಿತ ಇಂದ್ರ ಸಾಹ್ನಿ ಪ್ರಕರಣದಲ್ಲಿ 1992ರಷ್ಟು ಹಿಂದೆಯೇ ಸುಪ್ರೀಂ ಕೋರ್ಟ್‌, ಬಡ್ತಿಯಲ್ಲಿ ಮೀಸಲಾತಿ ಅಸಾಂವಿಧಾನಿಕ ಎಂದು ಹೇಳಿ, ಐದು ವರ್ಷಗಳ ಅವಧಿಗೆ ಮಾತ್ರ ಅದನ್ನು ಮುಂದುವರಿಸುವಂತೆ ಸೂಚಿಸಿತ್ತು. ಆದರೆ, ಅಸಂಖ್ಯಾತ ಕಾನೂನಾತ್ಮಕ ತೊಡಕುಗಳಿಗೆ ಕಾರಣವಾದೀತು ಎಂಬ ಆತಂಕದಿಂದ ಕೇಂದ್ರ ಅಥವಾ ರಾಜ್ಯ ಸರಕಾರಗಳು ಈ ಆದೇಶವನ್ನು ಪಾಲಿಸಲು ನಿರಾಸಕ್ತಿ ತೋರಿದವು.

ಆಸಕ್ತಿಯ ವಿಚಾರವೆಂದರೆ, ಬಿ.ಕೆ. ಪವಿತ್ರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿಯೂ ಜಸ್ಟೀಸ್‌ ಯು.ಯು. ಲಲಿತ್‌ ಇದ್ದರು. ಈಗ ಹಿಂದಿನ ತೀರ್ಪಿಗೆ ವ್ಯತಿರಿಕ್ತವಾದ ಆದೇಶವನ್ನು ಅವರು ಬರೆಯಬೇಕಾಯಿತು. 1978ರಿಂದ ಈಚೆಗೆ ಎಸ್ಸಿ ಹಾಗೂ ಎಸ್ಟಿ ನೌಕರರಿಗೆ ನೀಡಲಾಗಿದ್ದ ಪರಿಣಾಮಕಾರಿ ಬಡ್ತಿಯನ್ನು ಕೋರ್ಟ್‌ ರದ್ದುಪಡಿಸಿತ್ತು. ಈ ನೌಕರರಿಗೆ ಹಿಂಬಡ್ತಿ ನೀಡಿ, ಹಲವು ವರ್ಷಗಳಿಂದ ಕೆಳ ಹಂತದ ಹುದ್ದೆಗಳಲ್ಲೇ ಬಾಕಿ ಉಳಿದು ಸೇವಾ ಹಿರಿತನದಿಂದ ವಂಚಿತರಾಗಿದ್ದ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ನೌಕರರಿಗೆ ಮುಂಬಡ್ತಿ ನೀಡಿ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಲು ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಹನ್ನೊಂದು ವರ್ಷಗಳ ಸೇವಾ ಹಿರಿತನವಿದ್ದರೂ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳನ್ನು ಕಡೆಗಣಿಸಿ ಎಸ್ಸಿ ಎಸ್ಟಿ ವರ್ಗದ ಎಂಜಿನಿಯರ್‌ಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರನ್ನಾಗಿ ಪದೋನ್ನತಿ ನೀಡಲಾಗಿತ್ತು. ಬಡ್ತಿ ಮೀಸಲಾತಿ ಹಾಗೂ ಪರಿಣಾಮಕಾರಿ ಬಡ್ತಿಗಳ ವಿಚಾರದಲ್ಲಿ ಗೊಂದಲ ಹಾಗೂ ಅನ್ಯಾಯಕ್ಕೆ ಒಳಗಾಗಿದ್ದ ಓರ್ವ ಸರಕಾರಿ ಎಂಜಿನಿಯರ್‌ (ಬಿ.ಕೆ. ಪವಿತ್ರ) ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ಆದೇಶ ಏನೇ ಇದ್ದರೂ, ಅದು ಬಡ್ತಿಯಲ್ಲಿ ಮೀಸಲಾತಿ ನೀತಿಯು ಈಗಾಗಲೇ ಸೇವೆಯಲ್ಲಿರುವವರಿಗೆ ಹಾಗೂ ಸರಕಾರಿ ಉದ್ಯೋಗದ ಆಕಾಂಕ್ಷಿಗಳ ಆಸಕ್ತಿಯನ್ನು ಕಸಿಯಬಲ್ಲದು ಎಂಬುದನ್ನು ವಿನಯದಿಂದಲೇ ಅರಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಈ ನೀತಿಗಳು ಭಾರತ ಸರಕಾರದ ಉನ್ನತ ಸೇವೆಗಳಾದ ಐಎಎಸ್‌, ಐಪಿಎಲ್ ಹಾಗೂ ಐಎಫ್ಎಸ್‌ಗಳಿಗೆ ಅನ್ವಯವಾಗುವುದಿಲ್ಲ. ತಮಗೆ ಅರ್ಹತೆ ಇದ್ದರೂ ಸಾವಿರಾರು ಎಸ್ಸಿ-ಎಸ್ಟಿಯೇತರ ನೌಕರರಿಗೆ ಬಡ್ತಿಯನ್ನು ನಿರಾಕರಿಸಲಾಗಿದೆ. ಈ ಹಿಂದೆ ತಮ್ಮ ಕೈಕೆಳಗೇ ಕೆಲಸ ಮಾಡುತ್ತಿದ್ದ ಎಸ್ಸಿ ಹಾಗೂ ಎಸ್ಟಿ ಪ್ರವರ್ಗಗಗಳ ನೌಕರರ ಆದೇಶಾನುಸಾರ ಈಗ ಕೆಲಸ ಮಾಡಬೇಕಾದ ಅನಿವಾರ್ಯತೆ ಅವರಿಗೆ ಸೃಷ್ಟಿಯಾಗಿದೆ.

ಅರ್ಹ ಸರಕಾರಿ ನೌಕರರಿಗೆ ಪದೋನ್ನತಿ ನಿರಾಕರಣೆ ಹಾಗೂ ತಮಗಿಂತ ಕಿರಿಯರು ಅಧಿಕಾರ ಸ್ಥಾನಕ್ಕೇರುವುದರಿಂದ ಆಗುವ ಪರಿಣಾಮಗಳನ್ನು ಈ ಇಬ್ಬರೂ ನ್ಯಾಯಮೂರ್ತಿಗಳು ಪರಿಗಣಿಸಬೇಕು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇಮಕದ ವಿಚಾರದಲ್ಲಿ ತಮ್ಮ ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳೇ ಪ್ರತಿಭಟನೆ ಮಾಡಿದ್ದಾರೆ. 1973ರ ಏಪ್ರಿಲ್ನಲ್ಲಿ ಇಂದಿರಾ ಗಾಂಧಿ ಸರಕಾರ ತಮಗಿಂತ ಕಿರಿಯರಾದ ಎ.ಎನ್‌. ರಾಯ್‌ ಅವರನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದಾಗ, ಮೂವರು ನ್ಯಾಯಮೂರ್ತಿಗಳಾದ ಜೆ.ಎಂ. ಶೇಲಟ್, ಕೆ.ಎಸ್‌. ಹೆಗ್ಡೆ ಹಾಗೂ ಎ.ಎನ್‌. ಗ್ರೋವರ್‌ ರಾಜೀನಾಮೆ ನೀಡಿರುವ ಪ್ರಕರಣವೇ ಇದೆಯಲ್ಲ! ಆ ಬಳಿಕ ಜನವರಿ 1977ರಲ್ಲಿ ಎಂ.ಎಚ್. ಬೇಗ್‌ ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿದ್ದನ್ನು ವಿರೋಧಿಸಿ ಜಸ್ಟೀಸ್‌ ಎಚ್.ಆರ್‌. ಖನ್ನಾ ಪದತ್ಯಾಗ ಮಾಡಿದರು. ಹೇಬಿಯಸ್‌ ಕಾರ್ಪಸ್‌ ಕೇಸ್‌ ವಿಚಾರದಲ್ಲಿ ನೀಡಿದ ತೀರ್ಪಿನ ಬಳಿಕ ಜಸ್ಟಿಸ್‌ ವೈ.ವಿ. ಚಂದ್ರಚೂಡ್‌ (ಈಗಿನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ತಂದೆ) ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಬಾರದು ಎಂಬ ಒತ್ತಡ ಮೊರಾರ್ಜಿ ದೇಸಾಯಿ ಅವರ ಸರಕಾರದ ಮೇಲಿತ್ತು. ಆದರೆ, ಅವರ ನೇಮಕವೂ ಆಯಿತು. ದಾಖಲೆಯ ಏಳುವರೆ ವರ್ಷಗಳಷ್ಟು ದೀರ್ಘಾವಧಿ ಅವರು ಆ ಹುದ್ದೆಯನ್ನು ನಿಭಾಯಿಸಿದರು.

ಈಗಲೂ ನರೇಂದ್ರ ಮೋದಿ ಸರಕಾರ ಜಾರ್ಖಂಡ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅನಿರುದ್ಧ ಬೋಸ್‌ ಹಾಗೂ ಆಸ್ಸಾಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸುವ ಕೊಲಿಜಿಯಂ ಪ್ರಸ್ತಾವನೆಯನ್ನು ವಾಪಸ್‌ ಕಳುಹಿಸಿದೆ. ಇವರಿಬ್ಬರಿಗಿಂತಲೂ ಹಿರಿಯರಾದ ಹೈಕೋರ್ಟ್‌ ನ್ಯಾಯಮೂರ್ತಿಗಳು ಇದ್ದಾರೆ ಹಾಗೂ ಸೂಚಿತ ಎರಡೂ ರಾಜ್ಯಗಳಿಗೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯ ನೀಡಲಾಗಿದೆ ಎಂಬುದು ಪ್ರಸ್ತಾವನೆ ತಿರಸ್ಕರಿಸಲು ಸರಕಾರ ನೀಡಿರುವ ಕಾರಣಗಳು.

ಪರೀಕ್ಷೆಯಲ್ಲಿ ಗಳಿಸಿದ ರ್‍ಯಾಂಕ್‌ ಸಹಿತ ಅರ್ಹತೆಯ ವಿಚಾರದಲ್ಲಿ ಜಸ್ಟೀಸ್‌ ಡಿ.ವೈ. ಚಂದ್ರಚೂಡ್‌ ಅವರ ಅಭಿಪ್ರಾಯಗಳನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ. ಬಡ್ತಿ ಮೇಲಿನ ಮಸೂದೆ ಕುರಿತು ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಹೇಳಿರುವುದೂ ಉಲ್ಲೇಖನೀಯ: ಎಸ್ಸಿ-ಎಸ್ಟಿಗಳಿಗೆ ಸಾಮಾಜಿಕ ನ್ಯಾಯವೂ ಸಿಗಬೇಕು, ಉಳಿದವರಿಗೆ ನೈಸರ್ಗಿಕ ನ್ಯಾಯವೂ ಅನ್ವಯವಾಗಬೇಕು. ಇವೆರಡರ ಮಧ್ಯೆ ಒಂದು ಸಮತೋಲನ ಸಾಧಿಸಬೇಕು.

ಟಾಪ್ ನ್ಯೂಸ್

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.