ಆಗಸದಂತಿರೆ ಅಪ್ಪನಿಗೆ ತಾರೆಯಂತಹ ಮಗಳು;ನಿತ್ಯ ಹೊಳೆಯುವ ಬೆಳಕಿನರೂಪವಾಗಿ ಜೀವನದ ಸ್ವರೂಪವಾಗಿ


Team Udayavani, Feb 22, 2024, 12:37 PM IST

6-father

‘ಅಪ್ಪ’ ಎಂಬ ಪದವೇ ಒಂದು ಅದ್ಬುತ ಶಕ್ತಿ. ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ. ಅಪ್ಪ ಮಗಳ ಮೊದಲ ಹೀರೊ, ಮೊದಲ ಪ್ರೀತಿ, ಮೊದಲ ಕನಸಿನ ನನಸಿಗೆ ರೂವಾರಿ. ಈ ಜನುಮಕ್ಕೆ ಸಾಕಾಗುವಷ್ಟು ಪ್ರೀತಿ ಎಂಬ ಆಸ್ತಿ ಕೊಡುವ ತಂದೆ.

‘ಅಪ್ಪ’ ಎಂದರೆ ಬೆಳೆಯುವ ಬಳ್ಳಿಗೆ ಆಸರೆ, ಮಗಳನ್ನು ಗುರಿ ಮುಟ್ಟಿಸುವ ಹೊಣೆ, ಬದುಕಿನಲ್ಲಿ ಎಲ್ಲವೂ ಅಪ್ಪನೇ….. ಹೆಣ್ಣು ಮಕ್ಕಳಿಗೆ ತಾಯಿಗಿಂತ ತಂದೆಯನ್ನ ಹಚ್ಕೋಳ್ಳೋದೇ ಜಾಸ್ತಿ. ಮಗಳಿಗೆ ತಂದೆ ಭಾವನಾತ್ಮಕ ಶಕ್ತಿ ಇದ್ದಂತೆ. ಮಗಳ ನಿಸ್ವಾರ್ಥಿ ಜೀವಿಯೇ ಅಪ್ಪ, ಮಗಳು ಅಪ್ಪನ ಕೈ ಬೆರಳನ್ನು ಹಿಡಿದರೆ ಯಾರೊಬ್ಬರ ಕಾಲನ್ನು ಹಿಡಿಯುವ ಸಂದರ್ಭವೇ ಬರುವುದಿಲ್ಲ. ಅಪ್ಪ ಎನ್ನುವ ಹೆಸರು ಎರಡಕ್ಷರದಲ್ಲಿದೆ, ಆದರೆ ಆ ಎರಡಕ್ಷರದಲ್ಲಿ ಮಗಳ ಇಡೀ ಪ್ರಪಂಚವೇ ಇದೆ. ಅಪ್ಪನ ರಾಜಕುಮಾರಿ, ದೇವತೆ, ಗೆಳತಿ, ಮಗ ಎಲ್ಲವೂ ಮಗಳೇ.

ಅಪ್ಪನ ಮನಸ್ಸು ಆಕಾಶದಂತೆಯೇ ಅವನ ಪ್ರೀತಿಯು ಅಷ್ಟೇ ವಿಶಾಲವಾಗಿರುತ್ತದೆ. ಆತನಿಂದ ಮಗಳು ಅನೇಕ ವಿಷಯವನ್ನು ನಿರೀಕ್ಷಿಸುತ್ತಾಳೆ. ಅದನ್ನು ಅರಿತು ನೀಡಿದರೆ ಅವಳ ಬಾಳು ಹುಣ್ಣಿಮೆಯ ಬೆಳದಿಂಗಳ ಚಂದಿರನಂತೆ. ಅತ್ತೆ ಮನೆಗೆ ಹೊರಟು ನಿಂತ ಆ ಕ್ಷಣ ಅಪ್ಪ ಮಗುವಾಗುತ್ತಾನೆ. ಮಗಳ ಜನನವನ್ನು ಮೊದಲು ಸಂಭ್ರಮಿಸುವುದೇ ತಂದೆ. ಹಾಗೆಯೇ ಅತ್ತೆ ಮನೆಗೆ ಹೊರಟ ಮಗಳ ಆ ಕ್ಷಣದಲ್ಲಿ ಮೊದಲು ದುಃಖಿಸುವುದೇ ಅವಳ ಅಪ್ಪನಾಗಿರುತ್ತಾನೆ. ಅಪ್ಪನ ಪಾಲಿಗೆ ಮಗಳು ರಾಜಕುಮಾರಿ. ಅವರಿಬ್ಬರ ಸಂಬಂಧ ಕೇವಲ ಮಾತಿನಲ್ಲಿ ವರ್ಣಿಸಲಾಗದು.

ಹೆಣ್ಣು ಮಗುವನ್ನು ಪಡೆಯುವ ಅದೃಷ್ಟ ಎಲ್ಲಾ ಅಪ್ಪಂದಿರಿಗೆ ದೊರೆಯುವುದಿಲ್ಲ. ಜೀವನದಲ್ಲಿ ಒಂದಾದರು ಹೆಣ್ಣು ಮಗು ಬೇಕು ಎಂಬ ಹಂಬಲ ಪಡುವ ಅಪ್ಪಂದಿರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಗಂಡು ಮಕ್ಕಳು ತಮ್ಮ ಅಪ್ಪ-ಅಮ್ಮನನ್ನು ತುಂಬಾ ಪ್ರೀತಿ ಮಾಡಬಹುದು. ಆದರೆ ಹೆಣ್ಣು ಮಗು ಪ್ರೀತಿಸುವ ಪರಿಯೇ ಅದ್ಬುತ! ತಂದೆಗೆ ಕಷ್ಟ ಅಂತ ಬಂದ್ರೆ ಮಗ ಸಹಾಯಕ್ಕೆ ಬರುತ್ತಾನೋ ಇಲ್ಲವೋ ಆದರೆ ಮಗಳ ಸಾಂತ್ವನದ ಮಾತುಗಳೇ ತಂದೆಗೆ ಸಹಾಯ.

ಮಗಳ ಮದುವೆಯವರೆಗೆ ಅವಳ ಎಲ್ಲಾ ಜವಾಬ್ದಾರಿಯನ್ನು ತಂದೆ ಹೊತ್ತಿರುತ್ತಾನೆ. ಮಗಳು ವಯಸ್ಸಿನ ಗಡಿಯಲ್ಲಿ ನಿಂತಾಗ ಅವಳಿಗೆ ತಕ್ಕ ಹುಡುಗನನ್ನು ಹುಡುಕಿ ಅವಳ ಜೀವನವನ್ನೇ ಅವನ ಕೈಯೊಳಗೆ ಇರಿಸಿ ಮನದೊಳಗೆ ದುಃಖಿಸುತ್ತಾ ಮೌನ ಲೋಕವನ್ನೇ ಸೃಷ್ಟಿಸುತ್ತಾನೆ. ಮಗಳು ಗಂಡನ ಮನೆಗೆ ಹೊರಟು ಹೋದ ಗಳಿಗೆಯಿಂದ ಅವಳ ತವರು ಮನೆ ಸೂತಕದ ವಾತಾವರಣದಿಂದ ಕೂಡಿರುತ್ತದೆ. ಇದು ಅಪ್ಪನ ಪಾಲಿಗೆ ದೇವರಿಲ್ಲದ ಗುಡಿ ಇದ್ದಂತೆ.

ಅಪ್ಪ ಮಗಳ ಮನೆಗೆ ಹೋದ ಕ್ಷಣದಲ್ಲಿ ಅವಳ ಸಂತೋಷವನ್ನು ವರ್ಣಿಸಲು ಆಗುವುದೇ ಇಲ್ಲ. ಅವಳು ಎಷ್ಟೇ ದೊಡ್ಡವಳಾದರೂ ತಂದೆಗೆ ಅವಳು ಪುಟ್ಟ ಮುದ್ದಿನ ಮಗಳೇ. ಕೂಸುಮರಿ ಮಾಡಿ ಹೊತ್ತಾಡಿ ಕೈತುತ್ತು ತಿನ್ನಿಸಿ ತೊಟ್ಟಿಲ ತೂಗಿ ಜೋಗುಳ ಹಾಡುವ ಅಪ್ಪ, ಅವನ ಪ್ರೀತಿ, ಮಮತೆ, ಮಾತು, ಕಾಳಜಿ, ಅವನ ಕಾವಲು ಇವೆಲ್ಲವೂ ಸಿಗದ ಹೆಣ್ಣು ಮಕ್ಕಳು ಈ ಪ್ರಪಂಚದಲ್ಲಿ ತುಂಬಾ ಜನ ಇದ್ದರೆ. ಅವರಿಗೆ ಅಪ್ಪನಿಲ್ಲದ ಜೀವನ ಶೂನ್ಯವಾದಂತೆ.

ನನ್ನ ಜೀವನದ ಪಾಲಕದಾತನಿಗೆ ನಾನು ಎಂದಿಗೂ ಚಿರಋಣಿ… Love you paaa..

– ನಾಗಮಣಿ. ಈ

ಪ್ರಥಮ ಪತ್ರಿಕೋದ್ಯಮ

ಎಂಜಿಎಂ ಕಾಲೇಜು ಉಡುಪಿ

 

ಟಾಪ್ ನ್ಯೂಸ್

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.