ಗೆಲುವಿಗೆ ಬೀಗದೆ, ಸೋಲಿಗೆ ಜಗ್ಗದೆ ಮುನ್ನಡೆಯೋಣ


Team Udayavani, Mar 20, 2021, 6:50 AM IST

article about life journey

ಜೀವನದಲ್ಲಿ ಸುಖ-ದುಃಖ ಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯಾವುದೇ ಕೆಲಸ, ಪರಿಶ್ರಮ, ಸ್ಪರ್ಧೆ ಇರಲಿ. ಗೆಲುವು ನಮ್ಮದಾದರೆ ನಮ್ಮ ಮನಸ್ಸು ಸಂತಸ, ಸಂಭ್ರಮದಿಂದ ಬೀಗುತ್ತದೆ. ಸೋಲು ನಮ್ಮದಾಯಿತು ಎಂದುಕೊಳ್ಳಿ, ಅದೇ ಮನಸ್ಸು ಅದರ ದುಪ್ಪಟ್ಟು ಹತಾಶೆಗೆ ಒಳಗಾಗುತ್ತದೆ. ಇದು ಮಾನವ ಸಹಜ ಗುಣ. ಇದರಿಂದಾಗಿ ನಮ್ಮಲ್ಲಿ ಕೀಳರಿಮೆ ಸೃಷ್ಟಿಯಾಗಿ ನಾವು ಪ್ರತಿಯೊಂದೂ ವಿಷಯದಲ್ಲೂ ಮುಂದಡಿ ಇಡುವಾಗ ಒಂದಿಷ್ಟು ದ್ವಂದ್ವದಲ್ಲಿ ಸಿಲುಕುತ್ತೇವೆ. ನಾವು ಈ ಕಾರ್ಯದಲ್ಲಿ ಗೆಲ್ಲುತ್ತೇವೆಯೋ ಇಲ್ಲವೋ?, ಒಂದು ವೇಳೆ ಸೋತರೆ ಬೇರೆಯವರು ನಮ್ಮನ್ನು ಹೀಗಳೆದು ಅವ ಮಾನಿಸಿದರೆ.. ಹೀಗೆ ನಮ್ಮ ಯೋಚನಾ ಲಹರಿ ಮುಂದುವರಿಯುತ್ತದೆ. ಈ ರೀತಿಯಾದಾಗ ನಾವು ಆ ಕಾರ್ಯ ದಿಂದ ಹಿಂದೆ ಸರಿಯುವುದು ಶತಃಸಿದ್ಧ.

ಒಂದೂರಲ್ಲಿ ಒಬ್ಬ ರೈತನಿದ್ದ. ಅವನಿಗೆ ಒಂದು ಹೊಲವಿತ್ತು. ಆತ ತುಂಬಾ ಪರಿಶ್ರಮಿ. ಪ್ರತೀ ದಿನ ಆತ ತನ್ನ ಭುಜದ ಮೇಲೆ ಎರಡೂ ಬದಿಯಲ್ಲಿ ಮಣ್ಣಿನ ಮಡಿಕೆಯನ್ನು ಕಟ್ಟಿರುವ ಬಿದಿರನ್ನು ಹೊತ್ತು ಕೊಂಡು ಒಂದು ನೀರಿರುವ ಕೊಳದ ಹತ್ತಿರ ಹೋಗಿ ಆ ಎರಡೂ ಮಡಿಕೆಯಲ್ಲಿ ನೀರು ತುಂಬಿಕೊಂಡು ಬಂದು ತನ್ನ ಹೊಲಕ್ಕೆ ನೀರು ಹಾಯಿಸುತ್ತಿದ್ದ. ಆದರೆ ಬಲ ಬದಿಯಲ್ಲಿ ಕಟ್ಟಿದ ಮಡಿಕೆಗೆ ಒಂದು ಸಣ್ಣ ರಂಧ್ರವಿತ್ತು. ಆ ರೈತ ನೀರು ತುಂಬಿಸಿಕೊಂಡು ತನ್ನ ಹೊಲದತ್ತ ಬರುವಾಗ ಅರ್ಧದಷ್ಟು ನೀರು ಸೋರಿ ಹೋಗುತ್ತಿತ್ತು. ಇದನ್ನು ಗಮನಿಸಿದ ಎಡ ಬದಿಯ ಮಡಿಕೆ “ನೀನು ನಿಷ್ಪ್ರಯೋ ಜಕ’ ಎಂದು ಹೇಳಿ ಗೇಲಿ ಮಾಡಿ ನಗ ತೊಡಗಿತು. ಇದರಿಂದ ಹತಾಶೆಗೊಳಗಾದ ಬಲ ಬದಿಯ ಆ ಮಡಿಕೆ ಒಂದು ದಿನ ರೈತನಲ್ಲಿ ಕೇಳಿತು “ನಾನು ಕೆಲಸಕ್ಕೆ ಬಾರದ ಮಡಿಕೆ. ನೀನ್ಯಾಕೆ ನನ್ನನ್ನು ಮಾರಿ ಹೊಸ ಮಡಿಕೆ ತೆಗೆದುಕೊಳ್ಳಬಾರದು? ಎಂದು. ಮಡಿಕೆಯ ಮಾತಿನ ಮರ್ಮ, ಅದರ ನೋವು ರೈತನಿಗೆ ಅರಿವಾಯಿತು.

ಆದರೂ ಮರುದಿನವೂ ಎಂದಿನಂತೆ ಎರಡೂ ಮಡಿಕೆಗಳನ್ನು ಕಟ್ಟಿದ್ದ ಬಿದಿರನ್ನು ತನ್ನ ಭುಜದ ಮೇಲಿರಿಸಿ ಕೊಳದತ್ತ ತೆರಳಿದ. ಎರಡೂ ಮಡಿಕೆಗಳಲ್ಲಿ ನೀರು ತುಂಬಿಸಿಕೊಂಡು ಹೊಲದತ್ತ ಹೆಜ್ಜೆ ಹಾಕಿದ. ಆದರೆ ರಂಧ್ರವಿರುವ ಮಡಿಕೆಗೋ ತೀವ್ರ ಹತಾಶೆ, ನೋವು. ಈ ಕಾರಣದಿಂದಾಗಿಯೇ ರೈತ ದಾರಿ ಮಧ್ಯೆ ಆ ಮಡಿಕೆಯನ್ನು ಉದ್ದೇಶಿಸಿ ಹೇಳಿದ. “ಮಡಿಕೆಯೇ, ಸ್ವಲ್ಪ ಕೆಳಗೆ ಇರೋ ನೆಲ ನೋಡು. ನೀನು ಇಲ್ಲಿ ಬೆಳೆದಿರುವ ಹೂವಿನ ಗಿಡಗಳಿಗೆ ಪ್ರತಿದಿನ ನೀರುಣಿಸಿ, ಅವು ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸಲು ನೆರವಾಗಿರುವೆ. ಆ ಹೂಗಳನ್ನು ನಾನು ದೇವರ ನಿತ್ಯ ಪೂಜೆಗೆ ಅರ್ಪಿಸು ತ್ತಿದ್ದೇನೆ. ಹೀಗಿರುವಾಗ ನೀ ಹೇಗೆ ನಿಷ್ಪ್ರ ಯೋಜಕನಾಗಲು ಸಾಧ್ಯ?’. ರೈತನ ಈ ಮಾತುಗಳನ್ನು ಕೇಳಿ ರಂಧ್ರ ಇರೋ ಮಡಿಕೆಗೆ ಹೆಮ್ಮೆಯಾದರೆ ಗೇಲಿ ಮಾಡಿದ ಮಡಿಕೆಗೆ ಮುಖಭಂಗವಾಯಿತು.

ಮಾನವ ಜೀವನವೂ ಹೀಗೆಯೇ. ಕಷ್ಟ-ಸುಖ, ನೋವು-ನಲಿವು, ಸೋಲು-ಗೆಲುವು.. ಇವೆಲ್ಲವೂ ನಮ್ಮ ಜೀವನದ ಅವಿಭಾಜ್ಯ ಅಂಗಗಳೇ. ಇವೆಲ್ಲವುಗಳಿಗೆ ಹೆದರಿ ಹಿಂಜರಿದರೆ ಅಥವಾ ಬೀಗಿದರೆ ನಮ್ಮ ಜೀವನ ಎಂದಿಗೂ ಪರಿಪೂರ್ಣ ವಾಗದು. ಸೋಲು, ನೋವು, ಸಂಕಷ್ಟ ಗಳನ್ನು ಅನುಭವಿಸಿದಾಗ ಮಾತ್ರವೇ ಗೆಲುವು, ಸುಖ, ನೆಮ್ಮದಿಯ ನೈಜ ಅನುಭವವನ್ನು ನಾವು ಪಡೆಯಬಹುದು. ಹಾಗೆಯೇ ಗೆಲುವು, ಸುಖ, ನೆಮ್ಮದಿಯ ನೈಜ ಸಂಭ್ರಮ, ಸಡಗರ ಸೋಲು, ನೋವು, ಸಂಕಷ್ಟದ ಹಿಂದಿದೆ. ತೀರಾ ಹತಾಶರಾದಾಗ, ನಮ್ಮನ್ನ ನೋಡಿ ನಕ್ಕು ಗೇಲಿ ಮಾಡುವವರ ಮಾತಿಗೆ ಗಮನ ಕೊಡದೆ, ಕುಗ್ಗದೇ, ನಮ್ಮಿಂದಾದ ಒಳ್ಳೆಯ ಕೆಲಸವನ್ನ ನೆನೆದು ನಮ್ಮ ಮನಸ್ಸಿಗೆ ನಾವೇ ಸಾಂತ್ವನ ಹೇಳ್ಳೋಣ. ಒಳ್ಳೆಯ ದಿನಕ್ಕಾಗಿ, ಕ್ಷಣಕ್ಕಾಗಿ ಕಾಯೋಣ.

ಮಲ್ಲಿಕಾ ಕೆ.,  ಮಂಗಳೂರು

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.