ಮನಸು ಮುರಿಯುವ ಮುನ್ನ

ಅಲ್ಲಿಂದಲೂ ಉತ್ತರ ಬರೋದಿಲ್ಲ. ಆಗ ನಿಮ್ಮ ವರ್ತನೆ ಹೇಗಿರುತ್ತದೆ?

Team Udayavani, Jun 26, 2021, 8:35 AM IST

ಮನಸು ಮುರಿಯುವ ಮುನ್ನ

ಪ್ರತಿಯೊಂದು ಜೀವಿಯೂ ಡೀಪೆಂಡಬಲ್‌ ಅನ್ನೋದು ಎಷ್ಟು ಸತ್ಯವೋ ಪ್ರತಿ ಜೀವಿ ನಾನು ಡೀಪೆಂಡಬಲ್‌ ಅಲ್ಲ ಅನ್ನೋದನ್ನು ಫ್ರೂವ್‌ ಮಾಡೋಕೆ ತಯಾರಾಗಿ ಇರುತ್ತಾರೆ ಎಂಬುದು ಅಷ್ಟೇ ಸತ್ಯ. ಹಾಗಿದ್ದಾಗ ನಾವು ಹಿಂದಿನ ವರ್ಷದಿಂದ ಅನುಭವಿಸುತ್ತಿರುವ ಒಂದು ವೈರಸ್‌ ಗೆ ಎಷ್ಟೋ ಸಲ ಧನ್ಯವಾದ ಹೇಳಲೇಬೇಕು.

ಯಾಕೆಂದರೆ ಎಷ್ಟೋ ಕುಟುಂಬ ಒಟ್ಟಾಗಿದೆ, ಮನೆ ಅಂಗಳದಲ್ಲಿ ಹೂವು ಅರಳಿದೆ, ಅಪ್ಪನಿಗೆ ಮಗನೇ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾನೆ. ಮಗಳು ಅಮ್ಮನಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತಾಳೆ. ಅಂಗಳದಲ್ಲಿರುವ ಗಿಡಗಳು ಮಾನವನ ಸಹಜ ಆಕರ್ಷಣೆಗೆ ಒಳಗಾಗಿ ಆನಂದದಿಂದ ಓಲಾಡುತ್ತಿವೆ. ಅದೇ ಸಮಯದಲ್ಲಿ ಹಲವಾರು ಒತ್ತಡಗಳು, ಮನೆ ಮಂದಿಯ ಅನಾರೋಗ್ಯ, ಸಾವು ನೋವುಗಳು, ಮನೆಯಲ್ಲೇ ಕೆಲಸ ಮಾಡುವ ಸಮಯದಲ್ಲಿ ಆಗುವ ಹಲವಾರು ತೊಂದರೆಗಳು ನಮ್ಮನ್ನು ಅಷ್ಟೇ ಹೈರಾಣ ಮಾಡಿರುವುದು ಸುಳ್ಳಲ್ಲ. ಹಾಗಾದರೆ, ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ ? ಕಾಲಾಯಾ ತಸ್ಮೆಃ ನಮಃ ಎಂಬ ಹಳೆ ವಾಕ್ಯ ನೆನಪಿಗೆ ತಂದುಕೊಂಡು, ಹೊಸ ಸೂರ್ಯೋದಯ ನಮ್ಮ ಪಾಲಿಗೆ ಇದೆಯೆಂಬ ಕನಸು ಪುನಃ ಕಟ್ಟಿಕೊಂಡು ಬದುಕುವುದು ಅನಿವಾರ್ಯ ಕರ್ಮ ನಮಗೆ.

ಒಳಿತು ಮಾಡು ಮನುಜ ನೀ ಇರೋದು ಮೂರು ದಿವಸ… ನೆನಪಿಗೆ ಬರಲಾರದು ಇದೊಂಥರಾ ಫಿಲಾಸಫಿ. ಇವತ್ತಿನ ಸಮಸ್ಯೆಗೆ ಹೆದರಿ ಮುಂದಿನ ದಿನಗಳನ್ನು ಕಳೆದುಕೊಳ್ಳುವುದಕ್ಕಿಂತ ನಮ್ಮದೇ ಕುಟುಂಬ ಒಂದು ಕಾಲದಲ್ಲಿ ಹೇಗಿತ್ತು, ಎಷ್ಟು ಕಷ್ಟವಿತ್ತು, ನಮ್ಮದೇ ಅಜ್ಜ, ಅಜ್ಜಿ, ನಮ್ಮ ಪಾಲಕರು ಹೇಗೆ ನಮ್ಮನ್ನು ರಕ್ಷಣೆ ಮಾಡಿದ್ದರು. ಅವರೇ ಇಲ್ಲ ಎಂದಿದ್ದರೆ ನಾವು ಇರುತ್ತಿದ್ದೇವೆಯೇ ? ಹೀಗೆ ಹಲವಾರು ಪ್ರಶ್ನೆಗಳನ್ನು ನಿಮ್ಮ ನಿಮ್ಮ ಹಿರಿಯರೊಂದಿಗೆ ಸಂವಹನ ನಡೆಸಿ ನೈತಿಕ ಧೈರ್ಯ ನೀವು ಪಡೆದು, ಹೇಳಿಕೊಂಡ ಸಮಾಧಾನ ಅವರಿಗೆ ಕೊಟ್ಟರೆ ಅದಕ್ಕಿಂತ ಹೆಚ್ಚಿನ ನಿಮ್ಮ ಕುಟುಂಬದ ರಕ್ಷಣೆ ಸಾಧ್ಯವಿಲ್ಲ.

Family is a place where those who cannot live in heaven on earth deserve nothing else ಇದೇ ಒಂದು ಸಿರಿಯಲ್‌ ತರಹ ಮಾಡಿದರೆ ನಿಮಗೆ ನಿಮ್ಮ ಕುಟುಂಬದ ಒಳಹೊರಗು, ಒಳಜಗಳಗಳು ಎಲ್ಲವೂ ತಿಳಿಯಬಹುದು. ಆದರೆ, ಇದಕ್ಕಿಂತ ಒಳ್ಳೆಯ ಜಾಗ ಬೇರೆಲ್ಲೂ ಸಹ ಇಲ್ಲ ಅನ್ನೊದನ್ನು ಒಪ್ಪಲೇಬೇಕಾಗುತ್ತದೆ. ನಿಮ್ಮದೇ ಹಲವಾರು ವೈಯಕ್ತಿಕ ಸಮಸ್ಯೆ ಈಗೀಗ ಜಾಸ್ತಿ ಆಗಿರಬಹುದು.

ಮಾನಸಿಕ, ದೈಹಿಕವಾಗಿ ನೀವು ಸಿದ್ಧರಿಲ್ಲದೆ ಎಷ್ಟೋ ಜನ ಕೆಲಸ ಕಳೆದುಕೊಂಡಿರಬಹುದು, ದಿನದ ಇಪ್ಪತ್ತು ಗಂಟೆ ಕೆಲಸ ಮಾಡುವವರು ಇರಬಹುದು, ಸಮಯ ಅನ್ನೊದು ಡಾಲರ್‌ ಲೆಕ್ಕದಲ್ಲಿ ಸಾಲ ಸಿಗಬಹುದೇ ಎನ್ನುವ ಆಸೆಗೆ ಮನ ವಾಲುತ್ತಿರಬಹುದು. ಇದೇ ಪರಿಸ್ಥಿತಿ ನಿಮ್ಮ ಅಜ್ಜಂದಿರ ಕಾಲದಲ್ಲಿತ್ತು. ಅವರು ನಿಮ್ಮ ಹಾಗೆ ಜರ್ಜರಿತವಾಗಿದ್ದರೆ ನೀವೇ ಇರುತ್ತಿರಲಿಲ್ಲ ಎಂಬ ಸತ್ಯ ನಿಮ್ಮ ಕಣ್ಣೆದರು ಬಂದಾಗ ಕೊರೊನಾ ಎಂಬ ಮಾಹಾಮಾರಿ ಹೊಸದಾದ ಅಥವಾ ಆಕಾಶದ ಮೇಲಿಂದ ಉದುರಿದ ಸಮಸ್ಯೆ ಅಲ್ಲ.ಪ್ರೀತಿ ಶತಮಾನಕ್ಕೆ ಇಂತಹ ಒಂದೊಂದು ರೋಗಗಳು ಬಂದಿರುವ ಇತಿಹಾಸ ಇದೆ.

ನಾವೆಲ್ಲರೂ ಕುಟುಂಬದ ಹಿರಿಯರು ಸೇರಿ ಕೊರೊನಾ ಒಪ್ಪಿಕೊಂಡರೇ ಅರ್ಧದಷ್ಟು ಸಮಸ್ಯೆ ಪರಿಹಾರ ಆಗುತ್ತದೆ. ಸಣ್ಣ ಉದಾಹರಣೆ ನೀವು ನಿಮ್ಮ ಗೆಳೆಯ/ತಿಗೆ ಮೆಸೇಜ್‌ ಮಾಡುತ್ತೀರಿ, ಉತ್ತರ ಬರೋದಿಲ್ಲ. ಅವನು/ಳು ಬ್ಯುಸಿ ಇರಬೇಕು ಅಂದುಕೊಳ್ಳುತ್ತೀರಿ. ಅದೇ ಮೆಸೇಜ್‌ ನಿಮ್ಮ ಕುಟುಂಬದ ಸದಸ್ಯರಿಗೆ ಹೇಳುತ್ತೀರಿ. ಅಲ್ಲಿಂದಲೂ ಉತ್ತರ ಬರೋದಿಲ್ಲ. ಆಗ ನಿಮ್ಮ ವರ್ತನೆ ಹೇಗಿರುತ್ತದೆ? ಮನೆಯವರೇ ಹೀಗೆ ಮಾಡಿದರೆ ಎಂಬ ಭಾವನೆ ಬಂದು ನಿಮ್ಮಲ್ಲಿ ನೆಗೆಟಿವ್‌ ಆಲೋಚನೆ ಬಂದಾಗ ನಿಮ್ಮನ್ನು ನೀವು ಅವಲೋಕನ ಮಾಡಿಕೊಂಡಾಗ ನೀವು ಯಾರಿಗೆ ಹೆಚ್ಚು ಒತ್ತು ಕೊಡಬೇಕು ಎಂಬುದು ಗೊತ್ತಾಗುತ್ತದೆ.

ಹಾಗಂತ ಗೆಳೆಯ/ತಿ ಬೇಡ ಅಂತಲ್ಲ. ಆದರೆ, ಅವರಿಗೂ ಕುಟುಂಬ ಇದೆ, ಅವರಲ್ಲಿ ಶೇ. 85ರಷ್ಟು ಜನ ಅವರವರ ಕುಟುಂಬದಲ್ಲಿ ದೊಡ್ಡ ಜವಾಬ್ದಾರಿ ಹೊತ್ತುಕೊಂಡಿರುತ್ತಾರೆ. ಮುಂಬಯಿ ಅಲ್ಲಿರುವ ಬಹುತೇಕ ಜನರು ಅಂದರೆ ಮಹಾರಾಷ್ಟ್ರೀಯರಲ್ಲದವರು ತಮ್ಮ ಗೆಳೆಯ/ಗೆಳತಿಯರು ಮಹಾರಾಷ್ಟ್ರದವರೇ ಇರುತ್ತಾರೆ. ನೀವು ಅವರಿಗೆ ಅನಿವಾಸಿ, ನಿಮ್ಮ ಕುಟುಂಬ ಬೇರೆಲ್ಲೋ ಇರುತ್ತದೆ, ಹೊಟ್ಟೆಪಾಡಿಗೆ, ಕೆಲಸಕ್ಕೆ, ಅನುಭವಕ್ಕೆ, ವಿದ್ಯಾಭ್ಯಾಸಕ್ಕೆ ಹೋದವರು ನೀವು. ಅವರು ಅವರ ಕುಟುಂಬ ಬಿಟ್ಟು ನಿಮ್ಮ ಜತೆ ಪಾರ್ಟಿಗೆ, ಎಂಜಾಯ್‌ಮೆಂಟ್‌ಗೆ ಬರಬಹುದು. ಆದರೆ, ನೀವು ?

*ಶಾರದಾ ಭಟ್‌

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.