Chess tournament ಚದುರಂಗ ವೀರ ಗುಕೇಶ್‌: ಗುರುವನ್ನೇ ಮೀರಿಸಿದ ಶಿಷ್ಯ!


Team Udayavani, Aug 9, 2023, 6:15 AM IST

Chess tournament ಚದುರಂಗ ವೀರ ಗುಕೇಶ್‌: ಗುರುವನ್ನೇ ಮೀರಿಸಿದ ಶಿಷ್ಯ!

ಅದು 2018. ಅಂಡರ್‌ 13 ಮಟ್ಟದ ಚೆಸ್‌ ಪಂದ್ಯಾವಳಿ. ಅಲ್ಲೊಬ್ಬ 11 ವರ್ಷದ ಬಾಲಕನೊಬ್ಬ ಪ್ರಶಸ್ತಿ ಜಯಿಸಿದ್ದ. ಅಂದು ಈ ಬಾಲಕನಿಗೆ ಪ್ರಶಸ್ತಿ ಕೊಟ್ಟವರು ಐದು ಬಾರಿಯ ಚೆಸ್‌ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌. ಪ್ರಶಸ್ತಿ ಪಡೆದ ಬಾಲಕನ ಹೆಸರು ಡಿ.ಗುಕೇಶ್‌!

ಈಗ ಅದೇ ಬಾಲಕ 17ರ ಹರೆಯಕ್ಕೆ ಬಂದಿದ್ದಾನೆ. 1991ರಿಂದ ಜಗತ್ತಿನ ಟಾಪ್‌ 10 ಆಟಗಾರರಲ್ಲಿ ಒಬ್ಬರು ಮತ್ತು ಭಾರತದ ನಂ.1 ಚೆಸ್‌ ಆಟಗಾರರಾಗಿದ್ದ ಅದೇ ವಿಶ್ವನಾಥನ್‌ ಆನಂದ್‌ ಅವರನ್ನು ಹಿಂದಿಕ್ಕಿ ನಂ.1 ಆಗಿದ್ದಾನೆ. ಆ.3ರಂದು, ಲೈವ್‌ ರೇಟಿಂಗ್‌ನಲ್ಲಿ ವಿಶ್ವನಾಥನ್‌ ಆನಂದ್‌ ಅವರನ್ನು ಹಿಂದಿಕ್ಕಿ ಜಾಗತಿಕ ಟಾಪ್‌ ರ್‍ಯಾಂಕಿಂಗ್‌ನಲ್ಲೂ ಮೇಲೇರಿದ್ದಾನೆ. ಅಷ್ಟೇ ಅಲ್ಲ, ಸ್ವತಃ ವಿಶ್ವನಾಥನ್‌ ಆನಂದ್‌ ಅವರಿಂದಲೇ ಶಹಬ್ಟಾಸ್‌ಗಿರಿ ಗಿಟ್ಟಿಸಿಕೊಂಡಿದ್ದಾನೆ.

ಹೌದು ಭಾರತವೀಗ ಚೆಸ್‌ ಚಾಂಪಿಯನ್‌ಗಳ ತಾಣವಾಗುತ್ತಿದೆ. ಆರ್‌. ಪ್ರಗ್ಯಾನಂದ, ಬಿ.ಅಭಿರಾಂ, ರೌನಕ್‌ ಸಾಧ್ವಿನಿ, ನಿಹಾಲ್‌ ಸರಿನ್‌ ಕೂಡ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇವರೆಲ್ಲರೂ ಈಗಷ್ಟೇ ಹರೆಯಕ್ಕೆ ಬಂದವರು. ಇವರ ಕೋಚ್‌ ಆರ್‌.ಬಿ. ರಮೇಶ್‌ ಅವರ ಮಾರ್ಗದರ್ಶನದಲ್ಲಿ ಇವರೆಲ್ಲೂ ಜಗತ್ತಿನಾದ್ಯಂತ ಉತ್ತಮವಾದ ಸಾಧನೆಯನ್ನೇ ಮಾಡುತ್ತಿದ್ದಾರೆ.

ಅಂದ ಹಾಗೆ ಡಿ.ಗುಕೇಶ್‌ ಚೆನ್ನೈ ಮೂಲದವರು. 17 ವರ್ಷದ ಇವರು ಈಗ ಗ್ರಾಂಡ್‌ ಮಾಸ್ಟರ್‌. ಇತ್ತೀಚೆಗಷ್ಟೇ ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ  ಚೆಸ್‌ ವಿಶ್ವಕಪ್‌ 2022ರಲ್ಲಿ ಅತಿಥೇಯ ದೇಶದ ಮಿಸ್ಟರ್ಡಿನ್‌ ಇಸ್ಕಾಂಡರೋವ್‌ ವಿರುದ್ಧ ಗೆದ್ದು ಪಾಯಿಂಟ್‌ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವನಾಥನ್‌ ಆನಂದ್‌ ಅವರನ್ನು ಶ್ರೇಯಾಂಕದಲ್ಲಿ ಹಿಂದಿಕ್ಕಿದ್ದಾರೆ.

ಗುಕೇಶ್‌ ಅವರ ಚೆಸ್‌ ಜರ್ನಿ ಆರಂಭವಾಗಿದ್ದು ಅವರ ಶಾಲೆ ಆಯೋಜನೆ ಮಾಡಿದ್ದ ಬೇಸಗೆ ಶಿಬಿರದಲ್ಲಿ. ಆರು ವರ್ಷ ಚಿಕ್ಕವನಿರುವಾಗಲೇ ಚೆಸ್‌ ಬಗ್ಗೆ ಆಸಕ್ತಿ  ಬೆಳೆಸಿಕೊಂಡಿದ್ದರು. ಈತನ ಆಸಕ್ತಿ ನೋಡಿ ತಂದೆ ರಜನಿಕಾಂತ್‌ ಮತ್ತು ತಾಯಿ ಪದ್ಮಾ ಚೆಸ್‌ ತರಬೇತಿಗೂ ಕಳುಹಿಸಲು ಶುರು ಮಾಡಿದರು. ಅನಂತರದ್ದೆಲ್ಲವೂ ಇತಿಹಾಸ. 11ನೇ ವರ್ಷಕ್ಕೇ ಇಂಟರ್‌ನ್ಯಾಶನಲ್‌ ಮಾಸ್ಟರ್‌ ಆದ ಗುಕೇಶ್‌, 9 ವರ್ಷದೊಳಗಿನವರ ಏಷ್ಯಾ ಸ್ಕೂಲ್‌ ಚೆಸ್‌ ಚಾಂಪಿಯನ್‌ ಶಿಪ್‌ ಅನ್ನೂ ಗೆದ್ದರು. ಗ್ರಾಂಡ್‌ ಮಾಸ್ಟರ್‌ ಆಗುವ ಮುನ್ನವೇ ಇಂಟರ್‌ನ್ಯಾಶನಲ್‌ ಮಾಸ್ಟರ್‌ ಆಗಿದ್ದುದು ಗುಕೇಶ್‌ ವಿಶೇಷತೆ.  ಏಷ್ಯಾ ಯೂತ್‌ ಚೆಸ್‌ ಚಾಂಪಿಯನ್‌ ಶಿಪ್‌ನಲ್ಲಿ 5 ಬಂಗಾರದ ಪದಕ, ಅಂಡರ್‌ 12 ವಿಶ್ವ ಯೂತ್‌ ಚೆಸ್‌  ಚಾಂಪಿಯನ್‌ಶಿಪ್‌ನಲ್ಲಿ ಗೆದ್ದು ಅಮೋಘ ಸಾಧನೆಯನ್ನೂ ಮಾಡಿದರು. ಜತೆಗೆ 12ನೇ ವಯಸ್ಸಿಗೇ ಗ್ರಾಂಡ್‌ ಮಾಸ್ಟರ್‌ ಆಗಿ ಭಾರತದಲ್ಲಿ  ದಾಖಲೆಯನ್ನೇ ನಿರ್ಮಿಸಿದರು. 16 ವರ್ಷದವನಾಗಿದ್ದಾಗ   ಗುಕೇಶ್‌  ವಿಶ್ವದ ನಂ. 1 ಆಟಗಾರ ಮ್ಯಾಗ್ನಸ್‌ ಕಾರ್ಲಸನ್‌ ಅವರನ್ನು ಮಣಿಸಿದ್ದರು.

ಈಗ ಗುಕೇಶ್‌ ಅವರು ಲೈವ್‌ ರೇಟಿಂಗ್‌ನಲ್ಲಿ 2755.9 ಅಂಕ ಗಳಿಸಿ ಭಾರತದಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ವಿಶ್ವನಾಥನ್‌ ಆನಂದ್‌ 2754.0 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ.

ಟಾಪ್ ನ್ಯೂಸ್

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

prahlad-joshi

Congress ಪಕ್ಷದಿಂದ ಅಂಬೇಡ್ಕರ್‌ಗೆ ಅಗೌರವ: ಸಚಿವ ಜೋಶಿ ಆರೋಪ

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Sunil Chhetri

Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ

ರಘುಪತಿ ಭಟ್‌

ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್‌!: ಟಿಕೆಟ್‌ ವಂಚಿತ ರಘುಪತಿ ಭಟ್‌ ಬಿರುನುಡಿ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

1-wewqeqwe

Karachi ಭಾರತೀಯ ಮಹಿಳೆಯ ವಡಾಪಾವ್‌, ಪಾವ್‌ಭಾಜಿ ಕಮಾಲ್‌!

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

ec-aa

Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.