‘ದೇಸಿ ಸ್ವರ’: ಅನಿವಾಸಿ ಕನ್ನಡಿಗರಿಗಾಗಿ ಉದಯವಾಣಿಯ ವಿಶ್ವ ವಿದ್ಯುನ್ಮಾನ ಆವೃತ್ತಿ


Team Udayavani, Nov 1, 2020, 10:13 AM IST

‘ದೇಸಿ ಸ್ವರ’: ಅನಿವಾಸಿ ಕನ್ನಡಿಗರಿಗಾಗಿ ಉದಯವಾಣಿಯ ವಿಶ್ವ ವಿದ್ಯುನ್ಮಾನ ಆವೃತ್ತಿ

ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು ಎನ್ನುವ ಕವಿವಾಣಿಯಂತೆ ಎಲ್ಲೇ ಇರಲಿ, ಹೇಗೆ ಇರಲಿ ಕನ್ನಡಿಗರಿಗೆ ಕನ್ನಡವೆಂದರೆ ನಿತ್ಯ ಪುಳಕ. ಪ್ರಪಂಚದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ, ಎಷ್ಟೇ ಭಾಷೆ ಅರಿತಿದ್ದರೂ ನಮಗೆ ಜೀವ ಭಾಷೆ ಕನ್ನಡವೇ.

ಜೀವನದ ಅಗತ್ಯಗಳಿಗಾಗಿ ದೂರದ ಊರಿನಲ್ಲಿ ನೆಲೆಸಿರುವ ನಮ್ಮ ಕನ್ನಡಾಂಬೆಯ ಮಕ್ಕಳಿಗಾಗಿ ಇಲ್ಲಿದೆ ಹೊಸ ಅವಕಾಶ. ದೂರ ತೀರದಲ್ಲಿದ್ದೂ ಕನ್ನಡದ ಪರಿಮಳ ಪಸರಿಸುತ್ತಿರುವ ಕನ್ನಡ ಕರ ಸೇವಕರಿಗೆ ಇದು ಉದಯವಾಣಿಯ ರಾಜ್ಯೋತ್ಸವದ ಕೊಡುಗೆ.

ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಕರ್ನಾಟಕದ ಜನಮನದ ಜೀವನಾಡಿ ಉದಯವಾಣಿ ಪ್ರಪಂಚದ ಮೂಲೆ ಮೂಲೆಯಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕನ್ನಡ ಪತ್ರಿಕೆಗಳಲ್ಲೇ ಮೊದಲೆಂಬಂತೆ ಅಂತರ್ಜಾಲ ತಾಣವನ್ನು ರೂಪಿಸಿತ್ತು. ಅದು ಈಗ ಹೆಮ್ಮರವಾಗಿ ಬೆಳೆದಿರುವ ಸಂತೋಷದೊಂದಿಗೆ ಮತ್ತೊಂದು ಹೊಸ ಪ್ರಯತ್ನ ಇಂದಿನಿಂದ ಆರಂಭವಾಗಿದೆ.

ಕೊಲ್ಲಿ ರಾಷ್ಟ್ರಗಳ ಕನ್ನಡಿಗರಿಗಾಗಿ ವಿಶೇವ ಪುಟವನ್ನು ರೂಪಿಸಿದ್ದ ಉದಯವಾಣಿ ಇದೀಗ ಮುಂದುವರಿದ ಭಾಗವಾಗಿ ‘ವಿಶ್ವ ವಿದ್ಯುನ್ಮಾನ ಆವೃತ್ತಿ’ಯನ್ನು ಪರಿಚಯಿಸುತ್ತಿದ್ದೇವೆ. ದೂರದೂರಿನಲ್ಲಿರುವ ಕನ್ನಡಿಗರಿಗಾಗಿ ‘ದೇಸಿ ಸ್ವರ’ ಇ ಪೇಪರ್ ಸಂಚಿಕೆಯನ್ನು ಹೊರತರುತ್ತಿದ್ದು, ಕನ್ನಡ ಪತ್ರಿಕೋದ್ಯಮದಲ್ಲಿ ಇದು ಮೊದಲ ಪ್ರಯತ್ನ ಎನ್ನುವುದು ನಮಗೆ ಹೆಮ್ಮೆ.

ನಿಮ್ಮ ಲೇಖನ, ಬರಹಗಳು, ನೀವು ತೆಗೆಯುವ ಛಾಯಾಚಿತ್ರಗಳು, ನಿಮ್ಮ ಪೇಂಟಿಂಗ್‌ಗಳು, ನಿಮ್ಮ ಊರಿನಲ್ಲಿ ನಡೆಸುವ ಕಾರ್ಯಕ್ರಮ ವರದಿಗಳಿಂದ ಹಿಡಿದು, ನಿಮ್ಮ ಮಕ್ಕಳ ಪ್ರತಿಭಾ ಪರಿಚಯ-ಎಲ್ಲದಕ್ಕೂ ಈ ದೇಸಿ ಸ್ವರ ವೇದಿಕೆಯಾಗಲಿದೆ.

ಇವೆಲ್ಲವನ್ನು ಕಳುಹಿಸಬಹುದು

∙ ನೀವಿರುವ ಊರಿನ ವಿಶೇಷತೆ, ವಿಶೇಷ ವ್ಯಕ್ತಿಗಳು

∙ ನಿಮ್ಮ ಸುತ್ತಮುತ್ತಲಿನ ಸಾಧಕರು, ಬಾಲಪ್ರತಿಭೆ

∙ ನಿಮಗೆ ಸಿಕ್ಕಿರುವ ಅಪರೂಪದ ಮಿತ್ರರು

∙ ಕನ್ನಡಪರ ಸಂಘಟನೆಗಳು, ವಿಶೇಷ ಕಾರ್ಯಕ್ರಮಗಳು

∙ ನಿಮ್ಮ ಮಕ್ಕಳ ಶೈಕ್ಷಣಿಕ ಸಾಧನೆ, ಅವರ ಇತರ ಹವ್ಯಾಸ (ಛಾಯಾಗ್ರಹಣ, ಪೇಂಟಿಂಗ್‌, ಕಾರ್ಟೂನ್ ಇತ್ಯಾದಿ)

∙ ನೀವು ನೆಲೆಸಿರುವಲ್ಲಿ ಕಂಡು ಬಂದ ಉತ್ತಮ ಅಂಶಗಳು

∙ ಹುಟ್ಟೂರಿನವರಿಗೆ ನೀವು ತಿಳಿಸಬೇಕಾದ ವಿಶೇಷ ಸಂಗತಿಗಳು

∙ ನೀವು ಆಚರಿಸುವ ಹಬ್ಬಗಳು.

ಇಲ್ಲಿಗೆ ಕಳುಹಿಸಿ

[email protected]

[email protected]

ವಾಟ್ಸಪ್ ಸಂಖ್ಯೆ: 7618774529

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.