ಪರಿಸರ ಪ್ರಿಯ ಗಣಪತಿ ಎಲ್ಲರ ಕಾಳಜಿಯಾಗಿರಲಿ


Team Udayavani, Sep 10, 2021, 11:20 AM IST

ಪರಿಸರ ಪ್ರಿಯ ಗಣಪತಿ ಎಲ್ಲರ ಕಾಳಜಿಯಾಗಿರಲಿ

50 ವರ್ಷಗಳಿಂದ ಗಣಪತಿ ವಿಗ್ರಹ  ರಚಿಸುತ್ತಿರುವ ಶಿರೂರು ಮೇಸ್ತ ಕುಟುಂಬ :

ಬೈಂದೂರು: ಶಿರೂರಿನ ಮೇಸ್ತ ಕುಟುಂಬದವರು ಕಳೆದ 50 ವರ್ಷಗಳಿಂದ ಗಣಪತಿ ವಿಗ್ರಹ ರಚಿಸುತ್ತಿದ್ದಾರೆ.

ಪ್ರತೀ ವರ್ಷ ಸುಮಾರು 60 ಗಣಪತಿ ವಿಗ್ರಹ ನಿರ್ಮಿಸಲಾಗುತ್ತದೆ. ತಲೆತಲಾಂತರ ದಿಂದ ನಡೆಸಿಕೊಂಡು ಬರುತ್ತಿರುವ ಈ ಕಾಯಕವನ್ನು ಪ್ರಸ್ತುತ ನಾಗರಾಜ ಮೇಸ್ತ ಕಳೆದ 15 ವರ್ಷಗಳಿಂದ ಮುಂದುವರಿಸಿಕೊಂಡು ಬರು ತ್ತಿದ್ದಾರೆ. ಇಡಗುಂಜಿ ಗಣಪತಿ, ಗೌರಿ ಗಣೇಶ ಇವರ ವಿಶೇಷ ಮೂರ್ತಿಗಳಾಗಿವೆ. ಶಿರೂರು, ದೊಂಬೆ, ಅಳ್ವೆಗದ್ದೆ, ಆಲಂದೂರು, ಗೋರ್ಟೆ ಮುಂತಾದ ಊರುಗಳಿಗೆ ಇವರು ರಚಿಸಿದ ಗಣೇಶನನ್ನು ಕೊಂಡ್ಯೊಯ್ಯಲಾಗುತ್ತದೆ.

ಶಿರಸಿಯ ಆಮ್ನಹಳ್ಳಿಯಿಂದ ಜೇಡಿ ಮಣ್ಣನ್ನು ತರಲಾಗುತ್ತದೆ. ಎರಡು ತಿಂಗಳುಗಳಿಂದ ವಿಗ್ರಹ ರಚನೆ ಕಾರ್ಯ ದಲ್ಲಿ ತೊಡಗಿಸಿಕೊಳ್ಳುತ್ತೇವೆ.  ಸಹೋದರ ಆನಂದ ಮೇಸ್ತ ಸಹಕಾರ ನೀಡುತ್ತಿದ್ದಾರೆ. ಅತ್ಯಂತ ತಾಳ್ಮೆ ಮತ್ತು ಸಂಯಮ ಬೇಕಾಗುತ್ತದೆ ಎನ್ನುವುದು ನಾಗರಾಜ ಮೇಸ್ತ ಅವರ ಅಭಿಪ್ರಾಯವಾಗಿದೆ.

ಸಾಮಾನ್ಯವಾಗಿ ಹಿರಿಯ ತಲೆಮಾರುಗಳ ನಡುವೆ ಯುವ ಪೀಳಿಗೆ ಇದನ್ನು ಮೈಗೂಡಿಸಿ ಕೊಳ್ಳುವುದು ಕಡಿಮೆ. ಅಂತಹದರಲ್ಲಿ ಶಿರೂರಿನ ನಾಗರಾಜ ಮೇಸ್ತ ಅತ್ಯಂತ ಆಸಕ್ತಿಯಿಂದ ವಿಗ್ರಹ ರಚನೆ ಮಾಡುತ್ತಿರುವುದು ಯುವ ಸಮುದಾಯಕ್ಕೆ ಮಾದರಿಯಾಗಿದೆ.

ನೈಸರ್ಗಿಕ ವಸ್ತುಗಳಿಂದ ವಿಗ್ರಹ ರಚಿಸುವ  ಚಂದ್ರಶೇಖರ್‌ ನಾಯಕ್‌ :

ತೆಕ್ಕಟ್ಟೆ:  ಗ್ರಾಮೀಣ ಭಾಗದಲ್ಲಿ  ಕಳೆದ 25 ವರ್ಷಗಳಿಂದಲೂ ನೈಸರ್ಗಿಕವಾದ ವಸ್ತುಗಳನ್ನೇ ಬಳಸಿ ಗಣಪತಿ ವಿಗ್ರಹ ರಚನೆಯಲ್ಲಿ ಕುಂದಾಪುರ ತಾಲೂಕಿನ  ಹುಣ್ಸೆಮಕ್ಕಿ ಚಂದ್ರಶೇಖರ್‌ ನಾಯಕ್‌ ತೊಡಗಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ವಿಗ್ರಹ ರಚನೆಗೆ  ಆವೆ ಮಣ್ಣು, ರಾಸಾಯನಿಕ ಮುಕ್ತ ಬಣ್ಣಗಳ ಬಳಕೆಯೊಂದಿಗೆ ಈರುಳ್ಳಿ ಚೀಲಗಳಿಗೆ ಆವೆ ಮಣ್ಣು ಲೇಪಿಸಿ ಅತ್ಯಂತ ಹಗುರವಾದ ವಿಗ್ರಹ ರಚನೆ ವಿಗ್ರಹ ಸಿದ್ಧಗೊಂಡಿರು ವುದು ಕೂಡ ವಿಶೇಷ. ಸುಮಾರು ಎರಡುವರೆ ಕೆ.ಜಿ. ಭಾರ ಹೊಂದಿದ ವಿಗ್ರಹಗಳು ಅತ್ಯಂತ ಸುರಕ್ಷಿತವಾಗಿ ಕೊಂಡೊಯ್ಯಬಲ್ಲದ್ದಾಗಿದ್ದು, ಈ ವಿಗ್ರಹವನ್ನು ಕುಡಿಯುವ ನೀರಿನ ಬಾವಿಯಲ್ಲಿಯೂ ಕೂಡ ವಿಸರ್ಜನೆ ಮಾಡಬಹುದಾಗಿದೆ.

ಈ ಬಾರಿ ಆಚರಣೆಯ ಗೊಂದಲದಿಂದಾಗಿ ಗಣಪತಿ ಇರಿಸುವ ಮಂಚ ಬರಲು ವಿಳಂಬವಾದ ಪರಿಣಾಮ   ಹಗಲು ರಾತ್ರಿ ವಿಗ್ರಹ ರಚನೆಯಲ್ಲಿ ತೊಡಗಿಸಿ ಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಬಾರಿ 23 ಸಾರ್ವಜನಿಕ ಗಣೇಶೋತ್ಸವ ಸಮಿತಿ ವಿಗ್ರಹ ರಚನೆ ಸೇರಿದಂತೆ ಒಟ್ಟು 79 ವಿಗ್ರಹಗಳನ್ನು ರಚಿಸಲಾಗಿದ್ದು, ಮಂಗಳೂರು, ಉಡುಪಿ, ಕುಂದಾಪುರ, ಮೊದಲಾದೆಡೆಗೆ ವಿಗ್ರಹ ಕೊಂಡೊಯ್ಯುತ್ತಿದ್ದಾರೆ ಎಂದು ಚಂದ್ರಶೇಖರ್‌  ಹೇಳುತ್ತಾರೆ.

ಪರಿಸರ ಪ್ರೇಮಿ ಗಣಪತಿ  ತಯಾರಕ ಗಣೇಶ್‌ ನಾಯಕ್‌ :

ಅಜೆಕಾರು: ಕಳೆದ 41 ವರ್ಷಗಳಿಂದ ಪರಿಸರ ಪ್ರೇಮಿ ಗಣಪತಿ ತಯಾರಿಸುತ್ತಿರುವ ಎಣ್ಣೆಹೊಳೆ ಪ್ರೇಮಾನಂದ ನಾಯಕ್‌ ಅವರು ಜನರ ಬಾಯಲ್ಲಿ ಗಣೇಶ್‌ ನಾಯಕ್‌ ಎಂದು ಪ್ರಸಿದ್ಧಿ ಪಡೆದಿದ್ದಾರೆ.

ಕಾರ್ಕಳ, ಕುಂದಾಪುರ, ಬೆಳ್ತಂಗಡಿ ತಾಲೂಕಿನ ಹಲವಾರು ಗಣೇಶೋತ್ಸವಗಳಲ್ಲಿ ಇವರು ತಯಾರಿಸಿದ ಗಣಪತಿಯನ್ನೇ ಪೂಜಿಸಲಾಗುತ್ತಿದೆ.

ಕಳೆದ 41 ವರ್ಷಗಳಿಂದ ಪರಿಸರಸ್ನೇಹಿ ಗಣಪತಿ  ಪೂಜಿಸುವವರು  ಇವರನ್ನು ಪ್ರೀತಿಯಿಂದ ಗಣೇಶ್‌ ನಾಯಕ್‌ ಎಂದು ಕರೆಯಲಾಗುತ್ತದೆ.

ಪ್ರತೀ ವರ್ಷ ಸುಮಾರು 226  ಗಣಪತಿ ವಿಗ್ರಹ ತಯಾರಿಸುವ ಇವರು  ಇದರಲ್ಲಿ 62 ಸಾರ್ವಜನಿಕ ಗಣಪತಿಯನ್ನು ತಯಾರಿಸುತ್ತಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಗಣಪತಿ ವಿಗ್ರಹ ತಯಾರು ಮಾಡುವ ಹೆಗ್ಗಳಿಕೆ ಇವರದ್ದಾಗಿದೆ. ಪ್ರಸ್ತುತ ಎಣ್ಣೆಹೊಳೆ, ಕಾರ್ಕಳ ಎರಡು ಕಡೆ ಗಣಪತಿ ತಯಾರಿಸುತ್ತಾರೆ.

ಇವರ ಜತೆ ಸುದರ್ಶನ್‌ ಗುಡಿಗಾರ್‌, ಈರಣ್ಣ ಹಾಗೂ ಗಾಯತ್ರಿ ಅವರು ಸಹಕರಿಸುತ್ತಾರೆ. ಸಂಪೂರ್ಣ ಆವೆಮಣ್ಣಿನಿಂದ ತಯಾರಿಸಿ,  ನೀರಿನಲ್ಲಿ ಕರಗುವ ಬಣ್ಣವನ್ನಷ್ಟೆ ವಿಗ್ರಹಕ್ಕೆ ಹಾಕುವುದರಿಂದ ಇವರು ತಯಾರಿಸುವ ಗಣಪತಿ ವಿಗ್ರಹಕ್ಕೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗಿದೆ.

ಟಾಪ್ ನ್ಯೂಸ್

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.